ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುವುದು ಖಾತ್ರಿಯಾಗುತ್ತಿದ್ದಂತೆ ಸಚಿವ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ.ಎಲ್ಲಾ ಸಚಿವ ಸ್ಥಾನಗಳ ಪೈಕಿ  ಬೆಂಗಳೂರು ಉಸ್ತುವಾರಿ ಸಾಕಷ್ಟು ಕುತೂಹಲ ಮೂಡಿಸಿದೆ.ಬೆಂಗಳೂರು ಉಸ್ತುವಾರಿ ಯಾರಿಗೆ ಕೊಡಬೇಕೆನ್ನುವುದರ ಬಗ್ಗೆ ಬಿಸಿಯೇರಿದ ಚರ್ಚೆಗಳ ಜತೆಗೆ ಪೈಪೋಟಿ ಕೂಡ ಶುರುವಾಗಿದೆ. ರಾಮಲಿಂಗಾರೆಡ್ಡಿ ಮತ್ತು ಕೆಜೆ ಜಾರ್ಜ್‌ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ ಎಂದು ತಿಳಿದುಬಂದಿದ್ದು ಅಂತಿಮವಾಗಿ ಬೆಂಗಳೂರಿಗೆ ಯಾರಾಗುತ್ತಾರೆ ಬಾಸ್‌ ಎನ್ನುವ ಪ್ರಶ್ನೆ ಕುತೂಹಲ ಮೂಡಿಸಿದೆ.

ಯಾವ್ದೇ ಪಕ್ಷಗಳ ಸರ್ಕಾರ ಬಂದ್ರೂ ಎಲ್ಲಾ ಸಚಿವ ಸ್ಥಾನಗಳಿಗಿಂತ  ಬೆಂಗಳೂರು ಉಸ್ತುವಾರಿ ಸದಾ ಚರ್ಚೆಯಲ್ಲಿರುತ್ತೆ ಹಾಗೆಯೇ ಅದಕ್ಕೆ ಪೈಪೋಟಿ ಕೂಡ ಸೃಷ್ಟಿಯಾಗುತ್ತಲೇ ಬಂದಿದೆ.ಈ ಬಾರಿಯೂ ಅದೇ ಸ್ಥಿತಿಯಿದೆ.ಬೆಂಗಳೂರು ನಗರದ ಉಸ್ತುವಾರಿ ಅಂತಿಮವಾಗಿ ಯಾರಿಗೆ ದಕ್ಕುತ್ತೆ ಎನ್ನುವುದು ಕುತೂಹಲ ಮೂಡಿಸಿದ್ದು ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ಕೆ.ಜೆ ಜಾರ್ಜ್‌ ನಡುವೆ ಬಿರುಸಿನ ಪೈಪೋಟಿ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

ಡಿಕೆಶಿ ಮತ್ತು ಸಿದ್ದು ಬಣ ಎನ್ನುವ ಎರಡು ಗುಂಪುಗಳು ಈ ಬಾರಿ ಸೃಷ್ಟಿಯಾಗಿರುವುದರಿಂದ ಯಾರ ಬಣಕ್ಕೆ ಅಂತಿಮವಾಗಿ ಈ ಪಟ್ಟ ಒಲಿಯಲಿದೆ ಎನ್ನುವ ಕುತೂಹಲವಿದೆ.ಕೆ.ಜೆ ಜಾರ್ಜ್‌ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡಿರುವುದರಿಂದ ಸಹಜವಾಗಿಯೇ ಸಿದ್ದು ಬೆಂಗಳೂರು ತನ್ನ ಅತ್ಯಾಪ್ತನಿಗೇ ಸಿಗಬೇಕೆನ್ನುವ ಇರಾದೆಯಲ್ಲಿರುತ್ತಾರೆ.ಆದರೆ ಬೆಂಗಳೂರು ಉಸ್ತುವಾರಿಯನ್ನು ನಾನೇಕ ಬಿಟ್ಟುಕೊಡಲಿ ನನ್ನ ಬೆಂಬಲಿಗರಿಗೇನೆ ಅದು ಸಿಗಬೇಕೆನ್ನುವ ಉಮೇದಿನಲ್ಲಿ ಬಹುಷಃ ಡಿಕೆಶಿ ಅದಕ್ಕೆ ಕೊಕ್ಕೆ ಹಾಕುವ ಸಾಧ್ಯತೆಗಳಿವೆ.

ಏಕೆಂದರೆ ಮೊದಲೇ ಹೈಕಮಾಂಡ್‌ ಮುಂದೆ  ತಾನು ಹೇಳಿದವರಿಗೇನೆ 10-15 ಖಾತೆ ನೀಡಬೇಕೆನ್ನುವ  ಬೇಡಿಕೆ ಇಟ್ಟಿರುವ ಡಿಕೆಶಿಯ ಒತ್ತಾಯಗಳಲ್ಲಿ ಬೆಂಗಳೂರು ಉಸ್ತುವಾರಿ ತಾನು ಹೇಳಿದವರಿಗೇನೆ ದಕ್ಕಬೇಕೆನ್ನುವುದು ಕೂಡ ಇರಬಹುದೇನೋ..? ಒಂದ್ವೇಳೆ ಡಿಕೆಶಿ ಕಡೆಯವರಿಗೇನೆ ಬೆಂಗಳೂರು ಉಸ್ತುವಾರಿ ಸಿಗುತ್ತದೆ ಎನ್ನುವುದಾದ್ರೆ ಮೊದಲ ಹೆಸರಿರುವುದು ಅವರ ಪರಮಾಪ್ತ ರಾಮಲಿಂಗಾರೆಡ್ಡಿ ಅವರಿಗೆ.

ಕೆಜೆ ಜಾರ್ಜ್‌ ಮತ್ತು ರಾಮಲಿಂಗಾರೆಡ್ಡಿ ಇಬ್ಬರೂ ಹಿರಿಯರೇ ಇಬ್ಬರೂ ಬೆಂಗಳೂರು ಉಸ್ತುವಾರಿ ಹೊಣೆ ಹೊತ್ತ ವರೇ..ಆದರೆ ಇಬ್ಬರ ಅವಧಿಯಲ್ಲಿ ಅಭಿವೃದ್ದಿ ಯಾರ ಅವಧಿಯಲ್ಲಿ ಹೆಚ್ಚಾಯಿತು ಎನ್ನುವ ಪ್ರಶ್ನೆ ಸೃಷ್ಟಿಯಾದರೆ ಅದಕ್ಕೆ ಉತ್ತರವಾಗುವುದು ರಾಮಲಿಂಗಾರೆಡ್ಡಿ.ಗನ್‌ ಮ್ಯಾನ್‌ ಇಲ್ಲದೆ ಕಾಲ ಕಳೆದ ನಿರುಪದ್ರವಿ ಎಂದೇ ಕರೆಯಿಸಿಕೊಂಡ ರಾಮಲಿಂಗಾರೆಡ್ಡಿ ಕಾಮನ್‌ ಮ್ಯಾನ್‌ ಆಗಿ ಎಲ್ಲರೊಂದಿಗೆ ಬೆರೆತಿದ್ದಾರೆ.ಆದರೆ ವೈಟ್‌ ಕಾಲರ್‌ ರಾಜಕಾರಣಿಯಾಗೇ ಗುರುತಿಸಿಕೊಂಡಿರುವ ಜಾರ್ಜ್‌ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸಿಲ್ಲ ಎನ್ನುವ ಆಪಾದನೆಗೂ ತುತ್ತಾದವರು..ಇಂಥ ಹಿನ್ನಲೆ ಇರುವ ಜಾರ್ಜ್‌ ಗೆ ಬೆಂಗಳೂರು ಉಸ್ತುವಾರಿ ಸಿಗುತ್ತಾ..? ಒಂದ್ವೇಳೆ ಸಿಕ್ಕಿದ್ದೇ ಆದಲ್ಲಿ ಅದರಿಂದೆ ಸಿದ್ದರಾಮಯ್ಯ ಒತ್ತಡ-ಒತ್ತಾಯ ಕೆಲಸ ಮಾಡಿರುತ್ತೆ ಎನ್ನುವುದು ನೋ ಡೌಟ್..

ಇದೆಲ್ಲದರ ನಡುವೆ ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಹೆಸರು ಕೂಡ ಕೇಳಿಬರುತ್ತಿದೆ.ಅವರಿಬ್ಬರಿಗೆ ಪೈಪೋ ಟಿ ನೀಡಿ ದಿನೇಶ್ ಗುಂಡೂರಾವ್‌ ಕೂಡ ಬೆಂಗಳೂರು ಉಸ್ತುವಾರಿ ಪಡೆದರೂ ಆಶ್ಚರ್ಯಪಡಬೇಕಿ ಲ್ಲವೇನೋ..?ಇದೆಲ್ಲವನ್ನೂ ಮೀರಿ ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿಗೇನೆ ಇಟ್ಟು ಕೊಂಡರೂ ಆಶ್ಚರ್ಯವಿಲ್ಲ..ಹಾಗಾಗಿ ಬೆಂಗಳೂರು ಉಸ್ತುವಾರಿ ಅಂತಿಮವಾಗಿ ಯಾರಿಗೆ ದಕ್ಕುತ್ತದೆ ಎನ್ನುವುದು ಕುತೂಹಲದ ಪ್ರಶ್ನೆಯಾಗಿ ಕಾಡುತ್ತಿದೆ.

Spread the love

Leave a Reply

Your email address will not be published. Required fields are marked *

You missed

Flash News