-“ಪಕ್ಷ”ದ ಕಳಪೆ ಪ್ರದರ್ಶನಕ್ಕೆ ಚಾನೆಲ್” ಮುಚ್ಚೋದು ಸರಿನಾ..?
-“ಬೀದಿ”ಗೆ ಬಿದ್ರೆ ಆ 100 ಕ್ಕೂ ಹೆಚ್ಚು “ಉದ್ಯೋಗಿ”ಗಳ ಬದುಕಿನ ಪಾಡೇನು..?!
-“ಮುಚ್ಚುವ” ನಿರ್ಧಾರದ ಪುನರ್ “ಪರಿಶೀಲನೆ”ಗೆ ಅವಕಾಶವೇ ಇಲ್ವಾ..?!
ಸೀಮಿತವಾಗಿರುವ ಉದ್ಯೋಗವಕಾಶಕ್ಕೆ ಸಂಘರ್ಷಕ್ಕಿಳಿಯುವುದು ಎಂದರ್ಥ. ಕೆಲಸಕ್ಕಾಗಿ ಸಂಸ್ಥೆಗಳಿಗೆ ತಡಕಾಡುವ,ಅನಿವಾರ್ಯವಾದ ಜೀವನ ನಿರ್ವಹಣೆಗೆ ಕಡಿಮೆ ಸಂಬಳಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಸಹಾಯಕತೆ ಯನ್ನು ಸೃಷ್ಟಿಸುವುದು ಎಂದರ್ಥ..ಎಲ್ಲಕ್ಕಿಂತ ಅ ಸಂಸ್ಥೆ ತನ್ನ ಉದ್ಯೋಗಿಗಳಷ್ಟೇ ಅಲ್ಲ ಅವರ ಅವಲಂಭಿತರನ್ನು ಬೀದಿಗೆ ತಂದು ನಿಲ್ಲಿಸುವ ಕ್ರೌರ್ಯ ಎಂದರ್ಥ. ಮಾಲಿಕರೆನಿಸಿಕೊಂಡವರಿಗೆ ಉದ್ಯೋಗಿಗಳು ಅನುಭವಿಸಬೇಕಾಗಿ ಬರುವ ಸಂಕಷ್ಟ ಹೇಗೆ ಅರ್ಥವಾದೀತು ಹೇಳಿ..
ಪಕ್ಷದ ಕಳಪೆ ಪ್ರದರ್ಶನಕ್ಕೆ ಚಾನೆಲ್ ಮಚ್ಚೋದೆಷ್ಟು ಸೂಕ್ತ..? “ಮಾದ್ಯಮ ಲೋಕದಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುವ ಕಸ್ತೂರಿ ಕಾರ್ಯ ಸ್ಥಗಿತದ ಬಗ್ಗೆ ಮಾದ್ಯಮ ದಿಗ್ಗಜರು ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯ ಮಂತ್ರಿಯಾಗಿ ಅನೇಕ ತಿಂಗಳು ರಾಜ್ಯವನ್ನುಆಳಿರುವ ಕುಮಾರಸ್ವಾಮಿ ಕುಟುಂಬಕ್ಕೆ 110 ಉದ್ಯೋಗಿಗಳಿರುವ ಸಂಸ್ಥೆ ನಿಭಾವಣೆ ಮಾಡೋದು ಅಷ್ಟೊಂ ದು ಕಷ್ಟವಾಗುತ್ತಿದೆಯಾ..? ನಂಬೊಕ್ಕೆ ಆಗುತ್ತಿಲ್ಲ. ಅಷ್ಟೊಂದು ವರ್ಷ ನಡೆಸಿ ಕೊಂಡು ಬಂದ ಚಾನೆಲ್ ನ್ನು ದಿಢೀರ್ ಒಂದು ಕಾರಣವೊಡ್ಡಿ ಸ್ಥಗಿತ ಮಾಡು ವುದು ನಿಜಕ್ಕೂ ಸೂಕ್ತವೇ..? ಸಂಸ್ಥೆಯ ನಿಭಾವಣೆ ಮಾಡೋ ಹೊಣೆಯನ್ನು ಬೇರೆಯವರಿಗೆ ವಹಿಸಿ ಚಾನೆಲ್ ನ್ನು ಉಳಿಸಬಹುದಲ್ವಾ..? ಚಾನೆಲ್ ನ್ನು ಮುಚ್ಚುವುದರಿಂದ ಉದ್ಯೋಗಿಗಳನ್ನು ಬೀದಿಗೆ ತಂದ ಕಳಂಕ ಕುಮಾರಸ್ವಾಮಿ ಅವರಿಗೆ ತಟ್ಟುವುದಿಲ್ಲವೇ..?
ಆರಂಭದಿಂದಲೂ ಒಂದಲ್ಲ ಒಂದು ವಿಘ್ನ..!? : ಕಸ್ತೂರಬಾ ರಸ್ತೆಯಲ್ಲಿ ಕಾರ್ಯಾರಂಭ ಮಾಡಿ ನಂತರ ಕಾರಣಾಂತರಗಳಿಂದ ನಷ್ಟಕ್ಕೆ ಸಿಲುಕಿ, ಇನ್ನೇನು ಮುಚ್ಚೇ ಬಿಡ್ತು ಎನ್ನುವ ಸನ್ನಿವೇಶದಲ್ಲಿ ಶಾಂತಿನಗರ ದ ಟಿಟಿಎಂಸಿಗೆ ಕಚೇರಿ ಸ್ಥಳಾಂತರವಾದದ್ದು ಈಗ ಇತಿಹಾಸ.ಕೋಟ್ಯಾಂತರ ಖರ್ಚು ಮಾಡಿ ಹೊಸ ವಿನ್ಯಾಸ-ಆಯಾಮದಲ್ಲಿ ಕೆಲಸ ಶುರುವಾಯಿತಾದರೂ ಚಾನೆಲ್ ಜನಮಾನಸದಲ್ಲಿ ನಿಲ್ಲೊಕ್ಕೆ ತಿಣುಕಾಡಬೇಕಾಯ್ತು ಎನ್ನುವ ಮಾತುಗಳಿವೆ.ಉದ್ಯೋಗಿಗಳೆಲ್ಲಾ ಚಾನೆಲ್ ಬಿಟ್ಟು ಹೋಗಲಾರಂಭಿಸಿದಾಗ ವೃತ್ತಿಪರತೆಯ ಕೊರತೆ ಕಾಡಲಾರಂಭಿಸಿತಂತೆ.ಬಂಡವಾಳ ಹಾಕಿ ಹಾಕಿ ಸುಸ್ತಾದ ಎಚ್ಡಿಕೆ ಕುಟುಂಬ ಆಗಾಗ ನಮ್ಮಿಂದಾಗು ತ್ತಿಲ್ಲ..ಮುಚ್ಚಬೇಕಾಗುತ್ತದೇನೋ ಎಂಬ ಆತಂಕದ ಡೋಸನ್ನು ಆಗಾಗ ಕೊಡುತ್ತಿತ್ತಂತೆ.ಅದು ತುಂಬಾ ಗಂಭೀರ ಸ್ವರೂಪ ಪಡೆದಿದ್ದು ಈ ಬಾರಿಯ ಚುನಾವಣೆ ವೇಳೆ.
ಚಾನೆಲ್ ಗೆ ಯಾವುದೇ ಲಾಭ ಬರುತ್ತಿಲ್ಲ. ಚಾನೆಲ್ ಮುಚ್ಚಬೇಕಾಗುತ್ತದೆ ಎಂದು ಆಗಾಗ ನೀಡುತ್ತಿದ್ದರೆನ್ನಲಾದ ಎಚ್ಚರಿಕೆಯನ್ನು ಚಾನೆಲ್ ನಲ್ಲಿರುವ “ದೊಡ್ಡವರು” ಎಚ್ಚರಿಕೆ ಕರೆಗಂಟೆಯಾಗಿ ಪರಿಗಣಿಸಬೇಕಿತ್ತೇನೋ.? .ಮಾರ್ಕೆಟಿಂಗ್ ವಿಭಾಗವನ್ನು ಆದಾಯ ತರುವ ಮಟ್ಟದಲ್ಲಿ ಸಜ್ಜುಗೊಳಿಸಬೇಕಿತ್ತೇನೋ..? .ಅದನ್ನು ಮಾಡುತ್ತಿ ಲ್ಲ ಎನ್ನುವುದನ್ನು ಖಾತ್ರಿ ಮಾಡಿಕೊಂಡ ಮೇಲೆಯೇ ಬಹುಷಃ ಮ್ಯಾನೇಜ್ಮೆಂಟ್ ಚಾನೆಲ್ ಇಟ್ಕೊಂಡು ಪ್ರಯೋ ಜನವಿಲ್ಲ ಎನ್ನುವ ನಿರ್ದಾರಕ್ಕೆ ಬಂತು ಎನಿಸುತ್ತೆ.(ಏಕೆಂದರೆ ಲಾಭವಿಲ್ಲದೆ ಕೇವಲ ಹೂಡಿಕೆ ಮಾಡುತ್ತಲೇ ಇರಲು ಸಹಜವಾಗೇ ಯಾವುದೇ ಮಾಲೀಕ-ಮ್ಯಾನೇಜ್ಮೆಂಟ್ ಒಪ್ಪೋದು ಕಷ್ಟ).
ಚಾನೆಲ್ ಮುಚ್ಚಿದ್ರೆ ನಾವೆಲ್ಲಾ ಬೀದಿಗೆ ಬೀಳ್ತೇವೆ ಸಾರ್…
“ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್, ಕಸ್ತೂರಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾ ಡುವ ಒಂದಷ್ಟು ಉದ್ಯೋಗಿಗಳನ್ನು ಮಾತನಾಡಿಸಿತು. ಚುನಾವಣೆ ಮುನ್ನವೇ ನಮಗೆಲ್ಲಾ ಚಾನೆಲ್ ಮುಚ್ಚುವ ಸಾಧ್ಯತೆಗಳಿರುವ ಬಗ್ಗೆ ಹೇಳಲಾಗಿತ್ತು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.ಆದರೆ ಚುನಾವಣೆ ಮುಗಿದ ಮೇಲೆ ಅದರ ಬಗ್ಗೆ ಗಂಭೀರ ಪ್ರಯತ್ನಗಳಾಗುತ್ತಿವೆ ಎನ್ನಿಸುತ್ತೆ.ಪರಿಸ್ತಿತಿ ವಿಷಮ ವಾಗೋ ಲಕ್ಷಣ ಗೋಚರಿಸುತ್ತಿದೆ.ಕೆಲವರು ಈ ತಿಂಗಳೇ ಚಾನೆಲ್ ಕೊನೆಯಾ ಗಬಹುದು ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ.ಇದರ ನಡುವೆಯೇ ಚಾನೆಲ್ ನ್ನು ಬೇರೆಯವರಿಗೆ ವಹಿಸಿಕೊಟ್ಟರೆ ಹೇಗೆ ಎನ್ನುವ ರೀತಿಯಲ್ಲಿಯೂ ಚರ್ಚೆಗಳಾಗುತ್ತಿವೆ.ಚಾನೆಲ್ ಮುಚ್ಚದೆ ಬೇರೆಯವ ರಿಗೆ ವಹಿಸಿಕೊಟ್ಟರೆ 110 ಉದ್ಯೋಗಿಗಳ ಬದುಕು ಉಳಿಯುತ್ತದೆ.ಇಲ್ಲವಾದಲ್ಲಿ ನಾವೆಲ್ಲಾ ಬೀದಿಗೆ ಬಂದ್ ಬಿಡ್ತೇವೆ ಸಾರ್ ಎಂದು ಅಳಲು ತೋಡಿಕೊಂಡ್ರು.
ಎಷ್ಟೇ ತಿಣುಕಾಡಿದ್ರೂ ಲಾಭ ಕಾಣದ ಚಾನೆಲ್ ಬಗ್ಗೆ ಅಸಮಾಧಾನ ಹೊಂದಿದ್ದ ಮ್ಯಾನೇಜ್ಮೆಂಟ್ ,ಈ ವಿಚಾರ ವನ್ನು ಚುನಾವಣೆ ವೇಳೆ ಮತ್ತೆ ಮುನ್ನಲೆಗೆ ತಂದಿರಬಹುದೇನೋ..? ಹಾಗಾಗಿ, ಮ್ಯಾನೇಜ್ಮೆಂಟ್ ಮುಖ್ಯಸ್ಥರೇ , ಚಾನೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರನ್ನು ಕರೆದು,ಈ ಚುನಾವಣೆ ಪಕ್ಷದ ಅಸ್ಥಿತ್ವಕ್ಕೆ ಅಷ್ಟೇ ಅಲ್ಲ, ಚಾನೆಲ್ ಉಳಿವು-ಅಳಿವಿನ ಕಾರಣದಿಂದಲೂ “ಮಾಡು ಇಲ್ಲವೇ ಮಡಿ” ಸಿಚುವೇಷನ್.ಪಕ್ಷ ಒಳ್ಳೆಯ ಫರ್ಫಾಮೆನ್ಸ್ ಮಾಡಿದ್ರೆ ನಾವೂ ಉಳಿತೀವಿ,ನೀವೂ ಉಳಿತಿರಿ.. ಎಂದು ಸೂಚ್ಯವಾಗಿ ಭವಿಷ್ಯ ನುಡಿದಿದ್ದರೆನ್ನಲಾಗುತ್ತಿದೆ. ಆದರೆ ಚುನಾವಣೆ “ಫಲಿತಾಂಶ” ಏನಾಯ್ತು ಎಂದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ನ ಹೀನಾಯ ಪ್ರದರ್ಶನದಿಂದ ಕಂಗಾಲಾದ ವರಿಷ್ಟರು ಅಂತಿಮವಾಗಿ ನಖಶಿಖಾಂತ ಉರಿದು ಆ ಅವಸರದಲ್ಲಿ ತೆಗೆದುಕೊಂಡರೆನ್ನಲಾದ ನಿರ್ದಾರವೇ ಕಸ್ತೂರಿ ನ್ಯೂಸ್ ಚಾನೆಲ್ ಕಾರ್ಯಸ್ಥಗಿತನಾ..? ಇರಬಹುದೇನೋ..?
ಬುಧವಾರ ಅಥವಾ ಈ ವಾರದಲ್ಲಿ ಈ ಬಗ್ಗೆ ನಿರ್ಣಾಯಕ ಸಭೆ ಇದೆ ಎಂದು ಹೇಳಿದ್ದಾರೆ.ಅವತ್ತು ಚಾನೆಲ್ ನ ಭವಿಷ್ಯ ನಿರ್ದಾರವಾಗಬಹುದು.ದೊಡ್ಡವರೆಲ್ಲಾ ಚಾನೆಲ್ ಮುಚ್ಚುವುದ ರಿಂದ ಆಗುವಂಥ ಎಲ್ಲಾ ನಷ್ಟ-ತೊಂದ ರೆ ಗಳನ್ನು ಮ್ಯಾನೇಜ್ಮೆಂಟ್ ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.ಅವರಿಂದಲೂ ಸಕಾರಾತ್ಮಕವಾದ ಸ್ಪಂದನೆ ಸಿಕ್ಕಿದೆ ಎಂದಿದ್ದಾರೆ.ಚಾನೆಲ್ ಮುಚ್ಚದೆ ಬೇರೆಯವರಿಗೆ ವಹಿಸಿಕೊಟ್ಟರೆ ಹೇಗೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲಕ್ಕೂ ಬುಧವಾರದವರೆಗೂ ಕಾದು ನೋಡ ಬೇಕಿದೆ ಸರ್..ಚಾನೆಲ್ ಉಳಿಬೇಕು..ಎಂದು ಹೇಳುವಾಗ ನಿಜಕ್ಕೂ ಬೇಸರವಾಯ್ತು.ಆಡಳಿತ ಮಂಡಳಿಗೇಕೆ ಚಾನೆಲ್ ಮುಚ್ಚುವ ಆಲೋಚನೆ ಬಂತೋ ಎಂಬ ಪ್ರಶ್ನೆ ಮೂಡಿತು.
ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯವೂ ಅದೇ..: ಕೇವಲ ಕಸ್ತೂರಿ ನ್ಯೂಸ್ ಚಾನೆಲ್ ಅಲ್ಲ.ಯಾವುದೇ ಸುದ್ದಿ ಸಂಸ್ಥೆಗಳು ಬಾಗಿಲು ಹಾಕಿಕೊಳ್ಳಬಾರದು. ಅದನ್ನೇ ನಂಬಿ ಬದುಕು ಕಟ್ಟಿಕೊಂಡಿ ರುವ ಉದ್ಯೋಗಿಗಳು ಕೆಲಸ ಕಳೆದುಕೊಂಡು ಬೀದಿಗೆ ಬೀಳಬಾರದು..ಯಾಕಂದ್ರೆ ಅತಂತ್ರಗೊಂಡು ಪಡಬಾರದ ಕಷ್ಟ ಪಡೋರು ನಮ್ಮ ವೃತ್ತಿಬಾಂಧವರಲ್ವೇ.. ಅವರು ಸುರಿಸೋ ಕಣ್ಣೀರು..ಅನುಭವಿಸುವ ನರಕಯಾತನೆ..ಬೀದಿ ಪಾಲು ಮಾಡಿದವರಿಗೆ ಹಾಕೋ ಹಿಡಿಶಾಪದ ಸನ್ನಿವೇಶ ಎಷ್ಟು ಹೃದಯಹಿಂಡುವಂತದ್ದು ಎನ್ನುವುದನ್ನು ಕಲ್ಪಿಸಿಕೊಳ್ಳಬಲ್ಲೆವು.ಅಷ್ಟೇ ಅಲ್ಲ, ಸಂಸ್ಥೆಯ ಬೆಳವಣಿಗೆ ಮತ್ತು ಅದರ ಉನ್ನತಿಗಾಗಿ ಬೆವರನ್ನು ಸುರಿಸಿದವರು ಅದೇ ಸಂಸ್ಥೆಗೆ ಹಿಡಿಶಾಪ ಹಾಕುವುದು ಕೂಡ ಶ್ರೇಯಸ್ಸುಕರವಲ್ಲ…
ಅಂದ್ಹಾಗೆ ಚಾನೆಲ್ ನ ಮಾಲೀಕರಾದ ಕುಮಾರಸ್ವಾಮಿ ಮನಸು ಮಾಡಿದ್ರೆ ಚಾನೆಲ್ ಉಳಿಸಿ ಬೆಳೆಸಿಕೊಂಡು ಹೋಗುವುದು ಕಷ್ಟದ ವಿಷಯವೇ ಅಲ್ಲ.. ಅಂತ ದ್ದೊಂದು ಮನಸು ಮಾಡಬೇಕಿದೆ ಅಷ್ಟೇ..ಏಕಂದ್ರೆ ಕಸ್ತೂರಿ ಚಾನೆಲ್ ಮುಚ್ಚುವುದೆಂದರೆ ಅದು ಕೇವಲ ಸಂಸ್ಥೆಯನ್ನು ಸ್ಥಗಿತಗೊಳಿಸಿ ಅಲ್ಲಿರುವ ಉದ್ಯೋಗಿಗಳನ್ನು ಬೀದಿ ಪಾಲು ಮಾಡುವುದು ಎನ್ನುವುದಕ್ಕಿಂತ ಕನ್ನಡಿಗರ ಸ್ವಾಭಿಮಾನ-ಅಸ್ಮಿತೆ, ಈ ನೆಲದ ಸೊಗಡು,ಭಾಷೆಯ ಸ್ವಂತಿಕೆಯನ್ನು ಶಾಶ್ವತವಾಗಿ ಸ್ಮಶಾಣ ಮಾಡಿದಂತೆ..ಇದನ್ನು ಮ್ಯಾನೇಜ್ಮೆಂಟ್ ಅರ್ಥ ಮಾಡಿಕೊಳ್ಳಬೇಕು..