“ಅಂಡರ್ ಪಾಸ್” ನಲ್ಲಿ ಸಿಲುಕಿದವರನ್ನು ರಕ್ಷಿಸಿದ “ಪಬ್ಲಿಕ್ ಟಿವಿ” ಡ್ರೈವರ್ “ವಿಜಯ್”-“ನ್ಯೂಸ್ ಫಸ್ಟ್” ಕ್ಯಾಮೆರಾಮನ್ “ಅವಿರಾಜ್”-ಹೇಗಿತ್ತು ಗೊತ್ತಾ ಆ 1ವರೆ ಗಂಟೆಯ ಸಿನಿಮೀಯ ರೀತಿಯ ರೋಚಕ ಕಾರ್ಯಾಚರಣೆ  .?!

ಬೆಂಗಳೂರು:ತೆರೆಯ ಹಿಂದೆ ಕೆಲಸ ಮಾಡೋರ ಬೆವರು-ಪರಿಶ್ರಮ ಗೊತ್ತಾಗೋದೇ ಇಲ್ಲ.ಮಾದ್ಯಮ ಕೂಡ ಇದಕ್ಕೆ ಹೊರತಲ್ಲ..ಟಿವಿ ಮಾದ್ಯಮ ಎಂದ್ರೆ ಕ್ಯಾಮೆರಾದ ಮುಂದೆ ನಿಂತು ಮಾತನಾಡುವ ರಿಪೋರ್ಟರ್..ಪ್ರಶ್ನೆ ಕೇಳುವ ಆಂಕರ್ ಅಷ್ಟೇ ಎನ್ನುವಂತಾಗಿದೆ.ಆದರೆ ಅದು ಶುದ್ಧ ಸುಳ್ಳ..ಹಾಗೆ ಭಾವಿಸೋದು ಕೂಡ ತಪ್ಪು..ಇವರಿಬ್ಬರ ಶ್ರಮಕ್ಕಿಂತ ಹೆಚ್ಚು ಬೆವರು ಹರಿಸಿರುತ್ತಾರೆ ತೆರೆ ಹಿಂದೆ ಕೆಲಸ ಮಾಡೋರು.ಆದ್ರೆ ಇದೇ ಶ್ರಮಿಕ ವರ್ಗ ಕೆಲವೊಂದು ಸನ್ನಿವೇಶಗಳಲ್ಲಿ ಯಾರು ಮಾಡದ ಸಾಹಸ-ಸಾಧನೆ ಮೂಲಕ ಗಮನ ಸೆಳದುಬಿಡ್ತದೆ.ಹೀರೋಗಳಾಗಿ ವಿಜ್ರಂಭಿಸ್ತಾರೆ.

ಹೀಗೆ ಹೇಳೊಕ್ಕೆ ಕಾರಣವೂ ಇದೆ..ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಮೃತ್ಯುಸ್ವರೂಪಿ ಮಳೆಗೆ ಸಿಲುಕಿ ಸಾವಿನ ದವಡೆಯಲ್ಲಿದ್ದ ಕುಟುಂಬಕ್ಕೆ ನಮ್ಮ ಮಾದ್ಯಮ ಕ್ಷೇತ್ರದ ಇಬ್ಬರು ಆಪದ್ಬಾಂಧವರಾಗಿದ್ದಾರೆ.ಕಾವೇರಿ ಅಂಡರ್ ಪಾಸ್ ನಲ್ಲಿ ಮಳೆಗೆ ಸಿಲುಕಿ ಮುಳುಗಿ ಹೋಗ್ತಿದ್ದ ಕಾರಿನಲ್ಲಿದ್ದ ಕುಟುಂಬವನ್ನು ಜೀವವನ್ನು ಪಣಕ್ಕಿಟ್ಟು ರಕ್ಷಿಸಿ ನಿಜವಾದ ಹೀರೋಗಳೆನಿಸಿಕೊಂಡಿದ್ದಾರೆ.ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ ಬಗ್ಗೆ ಬೇಸರವಿದ್ದು,ಆಕೆಯನ್ನು ಉಳಿಸಲಾಗಲಿಲ್ಲ ಎನ್ನುವ ಬೇಸರವೂ  ಈ ಹೀರೋಗಳದ್ದು.

ನಿನ್ನೆ ನಡು ಮದ್ಯಾಹ್ನದಿಂದ ಬೆಂಗಳೂರಿನಲ್ಲಿ ಆರಂಭವಾದ ಮಳೆ ಅಬ್ಬರಿಸಲು ಆರಂಭಿಸಿದಾಗ ರಾಜಕಾಲುವೆ ಮತ್ತು ಅಂಡರ್ ಪಾಸ್ ಗಳು ತುಂಬಿ ಅಪಾಯದ ಮಟ್ಟ ತಲುಪಿದ್ದು ಎಲ್ಲರಿಗೂ ಗೊತ್ತು.ಈ ವೇಳೆ ಕೆ.ಆರ್ ಸರ್ಕಲ್ ಬಳಿ ಇರುವ ಅಂಡರ್ ಪಾಸ್ ಕೂಡ ಫುಲ್ ಆಗಿದ್ದರಿಂದ ಬಹುತೇಕ ವಾಹನ ಸವಾರರು ಆ ಮೂಲಕ ತೆರಳೋದನ್ನು ನಿಲ್ಲಿಸಿದ್ದರು.ಆದರೆ ಆ ಒಂದು ಫ್ಯಾಮಿಲಿಗೆ ಏನಾಗಿತ್ತೋ ಗೊತ್ತಿಲ್ಲ.ಸಾವು ಅಲ್ಲೇ ಕಾದು ಕೂತಿತ್ತೇನೊ ಎನ್ನುವಂತೆ ಅಂಡರ್ ಪಾಸ್ ನಲ್ಲಿ ನಿಂತ ನೀರಿನ ಮೂಲಕವೇ ಚಲಿಸಿದೆ.ಅಂಡರ್ ಪಾಸ್ ಮದ್ಯೆ ನೀರಿನ ಸೆಳೆವು ಹೆಚ್ಚಾಗಿದ್ದರಿಂದ ಕಾರು ನೀರಿನ ಮದ್ಯೆ ಸಿಲುಕಿದೆ.

ಗಾಬರಿಗೊಂಡರೆಲ್ಲಾ ಕಾರಿನ ಗಾಜು ಓಪನ್ ಮಾಡುತ್ತಿದ್ದಂತೆ ನೀರು ಕಾರಿನ ಒಳಗೆ ನುಗ್ಗಿದೆ.5 ಜನರ ಪೈಕಿ 22 ವರ್ಷದ ಭಾನು ಅದಾಗಲೇ ಉಸಿರುಗಟ್ಟಿ ಅರೆಜೀವವಾಗಿದ್ದಳು.ಈ ಪೈಕಿ ಕೆಲವರು ಜೀವ ಉಳಿಸಿಕೊಳ್ಳಲು ಕಾರಿನ ಮೇಲೆ ನಿಲ್ಲೊಕ್ಕೆ ಯತ್ನಿಸಿದರು.ಅಂಡರ್ ಪಾಸ್ ತುಂಬಿ ಅಪಾಯ ಸೃಷ್ಟಿಯಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಮಾದ್ಯಮಗಳೆಲ್ಲಾ ಅಂಡರ್ ಪಾಸ್ ಬಳಿ ಧಾವಿಸಿದ್ದಾರೆ.ಕಣ್ಣೆದುರೇ ಕಾರು ಮುಳುಗಿ ಜನ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೂ ಅವರನ್ನು ಉಳಿಸ್ಲಿಕ್ಕೆ ಆಗದ ಸ್ಥಿತಿ ನಿರ್ಮಾಣವಾಗಿತ್ತು.ಅಲ್ಲೇ ಕವರೇಜ್ ನಲ್ಲಿದ್ದ ನ್ಯೂಸ್-18 ಕನ್ನಡದ ಕ್ರೈಮ್ ವರದಿಗಾರ ಮಂಜುನಾಥ್ ಆರ್ಯ,ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನೆಲ್ಲಾ ನಿಲ್ಲಿಸಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು.

ಪಬ್ಲಿಕ್ ಟಿವಿ ಕ್ರೈಮ್ ವರದಿಗಾರ ನಾಗೇಶ ನಾಯ್ಕ್
ಪಬ್ಲಿಕ್ ಟಿವಿ ಕ್ರೈಮ್ ವರದಿಗಾರ ನಾಗೇಶ ನಾಯ್ಕ್

ಯಾವುದೋ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ನ್ಯೂಸ್ ಫಸ್ಟ್ ಕಾರನ್ನು ತಕ್ಷಣಕ್ಕೆ ಮಂಜು ನಿಲ್ಲಿಸಿ ಸಹಾಯ ಕೇಳಿದ್ದಾರೆ. ಈಜುಬರುತ್ತಿದ್ದ ಕ್ಯಾಮೆರಾಮನ್ ಅವಿರಾಜ್ ತಕ್ಷಣಕ್ಕೆ ಕಾರಿನಿಂದ ಇಳಿದು ಅಂಡರ್ ಪಾಸ್ ನಲ್ಲಿ ಜಿಗಿದಿದ್ದಾರೆ.ಅದೇ ವೇಳೆ ಪಬ್ಲಿಕ್ ಟಿವಿ ಡ್ರೈವರ್ ವಿಜಯ್ ಕೂಡ ಅಂಡರ್ ಪಾಸ್ ಗೆ ಇಳಿದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ರು.ಈ ವೇಳೆ ಸಾರ್ವಜನಿಕರು ತಮ್ಮದೇ ಆದ ರೀತಿಯಲ್ಲಿ ನೆರವು ನೀಡಲು ಮುಂದಾದದ್ದು ಮಾನವೀಯತೆ ನಮ್ಮ ನಡುವೆ ಇನ್ನೂ ಬದುಕಿದೆ ಎನ್ನುವುದಕ್ಕೆ ಸಾಕ್ಷಿಯಂತಿತ್ತು.ಏಕೆಂದರೆ ರಕ್ಷಣಾ ಕಾರ್ಯಕ್ಕೆ ಧುಮುಕಿದ ಕ್ಯಾಮೆರಾಮನ್ ಅವಿರಾಜ್ ಮತ್ತು ಡ್ರೈವರ್ ವಿಜಯ್ ಗೆ ಜನ ಬೇಕಾದ ರೀತಿಯಲ್ಲಿ ಸಹಾಯ ಮಾಡುವ ಯತ್ನ ನಡೆಸುತ್ತಿದ್ದರು.

ಕನ್ನಡ ಫ್ಲ್ಯಾಶ್ ನ್ಯೂಸ್ ಮೀಡಿಯಾ ಹೀರೋಗಳ ಪೈಕಿ ಒಬ್ಬರಾದ ಕ್ಯಾಮೆರಾಮನ್ ಅವಿರಾಜ್ ಅವರನ್ನು ಮಾತನಾಡಿಸಿದಾಗ ಕಾರ್ಯಾಚರಣೆಯ ಸಂಪೂರ್ಣ ಸ್ವರೂಪವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.ಆ ಒಂದೂವರೆ ಘಂಟೆಗಳ ಕಾರ್ಯಾಚರಣೆ ಕೇಳಿದಾದ ಮೈಜುಮ್ಮೆಂದಿತು.ಒಂದ್ ಮೂಮೆಂಟ್ ನಲ್ಲಿ ನಾವೇ ನೀರಿನಲ್ಲಿ ಮುಳುಗಿ ಸಾಯಬೇಕಿತ್ತು ಸಾರ್..ಅಷ್ಟೊಂದು ನೀರು ಸ್ಟೋರ್ ಆಗಿತ್ತು.ಈಜು ಬರುತ್ತಿದ್ದ ಕಾರಣದಿಂದ ಹೇಗೋ ಬಚಾವಾದೆವು.ಕಾರಿನಲ್ಲಿದದ 5 ಜನರ ಪೈಕಿ ನಾಲ್ವರನ್ನು ರಕ್ಷಿಸಿದೆವು.ಆದ್ರೆ ಯುವತಿಯ ಜೀವ ಅದಾಗಲೇ ಹೊರಟೋಗಿತ್ತು.ಬಾಯಿಂದ ನೊರೆ ಬರುತ್ತಿತ್ತು.ಯುವತಿಯ ದೇಹವನ್ನು ಎತ್ತುವಾಗ ಕಣ್ಣಿನಲ್ಲಿ ನೀರು ಬಂದ್ ಬಿಡ್ತು.ಎಲ್ಲಾ ನಾಲ್ಕು ಜನರನ್ನು ಉಳಿಸಿದ ನಮಗೆ ಆಕೆಯನ್ನು ಉಳಿಸಲಾಗಲಿಲ್ಲವಲ್ಲ ಎಂಬ ದುಃಖವಾಯ್ತು.ಆದರೂ ನಾಲ್ಕು ಪ್ರಾಣಗಳನ್ನು ಉಳಿಸಿದ ಹೆಮ್ಮೆ ನನಗಿದೆ ಎಂದು ವಿವರಿಸಿದರು.

ಪಬ್ಲಿಕ್ ಟಿವಿ ಕ್ರೈಮ್ ವರದಿಗಾರ ನಾಗೇಶ ನಾಯ್ಕ್

ಆ ಮಾರ್ಗವಾಗಿ ಮಳೆಯ ವರದಿ ಮಾಡಿಕೊಂಡು ಬರುತ್ತಿದ್ದ ಪಬ್ಲಿಕ್ ಟಿವಿ ಕ್ರೈಮ್ ವರದಿಗಾರ ನಾಗೇಶ ನಾಯ್ಕ್ ಅಂಡ್ ಟೀಮ್ ಅಂಡರ್ ಪಾಸ್ ನಲ್ಲಿ ಕೇಳಿಬರುತ್ತಿದ್ದ ಅರಚಾಟ ನೋಡಿ ಕಾರು ನಿಲ್ಲಿಸಿದ್ದಾರೆ.ಡ್ರೈವರ್ ವಿಜಯ್ ಗೆ ಈಜು ಬರುತ್ತಿದ್ದುದ್ದರಿಂದ ತಕ್ಷಣವೇ ಆತನನ್ನು ಅಂಡರ್ ಪಾಸ್ ಗೆ ಇಳಿಯೊಕ್ಕೆ ತಿಳಿಸಿದ್ದಾರೆ.ತನ್ನ ಬಳಿ ಲೈವ್ ಪ್ಯಾಕ್ ಇದ್ದುದ್ದರಿಂದ ಆಳಕ್ಕೆ ಇಳಿಯಲಾಗಲಿಲ್ಲ.ಆದರೂ ರೆಸ್ಕ್ಯೂನಲ್ಲಿ ಜನರನ್ನು ಸೇರಿಸಿ ಕಾರ್ಯಾಚರಣೆ ಯಶಸ್ವಿಯಾಗೊಕ್ಕೆ ಕಾರಣವಾಗಿದ್ದು ಇದೇ ನಾಗೇಶ್.ಅಪಾಯಕ್ಕೆ ಸಿಲುಕಿದ್ದ ಒಂದಿಡೀ ಕುಟುಂಬವನ್ನು ಡ್ರೈವರ್ ವಿಜಯ್ ತಮ್ಮ ಪ್ರಾಣದ ಹಂದು ತೊರೆದು ರಕ್ಷಿಸಿದ್ದು ಮಾತ್ರ ಪ್ರಶಂಸನೀಯ.

ಮಾದ್ಯಮಗಳ ಮೇಲೆ ಮೊದಲಿಂದಲೂ ಒಂದು ಅಪವಾದವಿದೆ.ದುರಂತ ನಡುದ್ರೆ ಅದರ ವೀಡಿಯೋ ತೆಗೆಯೋದ್ರಲ್ಲಿ ಬ್ಯುಸಿ ಇರ್ತಾರೆಯೇ ಹೊರತು,ಅವರನ್ನು ರಕ್ಷಿಸುವ ಉಸಾಬರಿಗೇ ಹೋಗುವುದಿಲ್ಲ.ಅವರಿಗೆ ಕೇವಲ ಸುದ್ದಿ-ಕವರೇಜ್ ಮಾತ್ರ ಬೇಕು.ಯಾರ್ ಸಾಯ್ಲಿ ಬಿಡ್ಲಿ ಎನ್ನುವುದು ಅವರಿಗೆ ನೆಗ್ಲೆಕ್ಟ್ ಸಬ್ಜೆಕ್ಟ್ ಎಂದು ಜನ ಮಾತನಾಡಿಕೊಳ್ಳುತ್ತಾರೆ.ಆದರೆ ಸುದ್ದಿ ಜತೆಗೆ ಮಾನವೀಯತೆಯೂ ನಮ್ಮಲ್ಲಿದೆ ಎನ್ನುವುದನ್ನು ಈ ಘಟನೆ ಸಾಬೀತುಮಾಡಿದೆ.ನಾವು ಕೇವಲ ಸುದ್ದಿ ಕವರೇಜ್ ಮಾಡುವವರಲ್ಲ ಸಂದರ್ಭ ಬಂದ್ರೆ ಪ್ರಾಣ ಲೆಕ್ಕಿಸದೆ ಇನ್ನುಳಿದವರ ಪ್ರಾಣವನ್ನೂ ಉಳಿಸುತ್ತೇವೆ ಎನ್ನುವ ಸಂದೇಶವನ್ನು ತಮ್ಮ ಕೆಲಸದ ಮೂಲಕ ಮಾಡಿ ತೋರಿಸಿದ್ದಾರೆ ಕ್ಯಾಮರ್ ಮನ್ ಅವಿರಾಜ್ ಮತ್ತು ಡ್ರೈವರ್ ವಿಜಯ್.

ಇವರಿಬ್ಬರ ಕಾರ್ಯಸಾಧನೆ ಇಡೀ ಮಾದ್ಯಮ ಲೋಕದ ಹೆಮ್ಮೆ.ಕೇವಲ ಹಾಡಿ ಹೊಗಳುವುದಕ್ಕಷ್ಟೆ ಇವರ ಕಾರ್ಯಸಾಧನೆ ಸೀಮಿತಗೊಳಿಸದೆ ಅದನ್ನು ಗೌರವಿಸುವ ಕೆಲಸ ಮಾಡಬೇಕಿದೆ.ಸಮಾಜ ಗುರುತಿಸಿ ಗೌರವಿಸುವಂತೆ ಮಾಡಬೇಕಿದೆ. ಶೌರ್ಯ ಪ್ರಶಸ್ತಿಗೆ ಇವರಿಬ್ಬರ ಹೆಸರನ್ನು ನಮ್ಮ ಮಾದ್ಯಮಗಳು ಶಿಫಾರಸ್ಸು ಮಾಡಬೇಕಿದೆ.ಈಗಾಗಲೇ ಮಾದ್ಯಮ ಸ್ನೇಹಿತರು ಇವರಿಬ್ಬರಿಗೆ ಬೆಂಗಳೂರಿನ ಹೆಮ್ಮೆಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಪರಿಗಣಿಸಬೇಕೆಂದು ಬಿಬಿಎಂಪಿ ಆಯುಕ್ತ ತುಷಾರಗಿರಿನಾಥ್ ಅವರಿಗೆ ಮನವಿ ಕೂಡ ಮಾಡಿದೆ.

ಅನೇಕ ಕಾರಣಗಳಿಂದ ಮಾದ್ಯಮಗಳ ಬಗ್ಗೆ ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನೆಯಾಗುತ್ತಿರುವ ಇವತ್ತಿನ ಸನ್ನಿವೇಶದಲ್ಲಿ ವಿಜಯ್ ಹಾಗೂ ಅವಿರಾಜ್ ಅವರ ಮಾನವೀಯ ಕಳಕಳಿಯ ಕಾರ್ಯ ಮಾದ್ಯಮದ ಘನತೆ ಹಾಗೂ ಗೌರವವನ್ನು ಎತ್ತಿ ಹಿಡಿದಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.. ಇವರಿಬ್ಬರಿಗೆ ನಮ್ಮ ಮಾದ್ಯಮ ಹ್ಯಾಟ್ಸ್ ಆಫ್ ಹೇಳಲೇಬೇಕು.

Spread the love

Leave a Reply

Your email address will not be published. Required fields are marked *

You missed

Flash News