ಬೆಂಗಳೂರು:ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅಂತಿಮವಾಗಿ ರ್ಯಾಂಕ್ ಪಡೆದ 761 ಅಭ್ಯರ್ಥಿಗಳಲ್ಲಿ ಕರ್ನಾಟಕದ 15 ಸಾಧಕರು ಸೇರಿದ್ದಾರೆ.
ಈ ಪೈಕಿ ಅಕ್ಷಯ್ ಸಿಂಹ 77ನೇ ರ್ಯಾಂಕ್ ಪಡೆಯುವ ಮೂಲಕ ಮೊದಲ 100 ರ್ಯಾಂಕ್ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ನಿಶ್ಚಯ್ ಪ್ರಸಾದ್ ಎಂ – 130 ಅನಿರುದ್ದ್ ಆರ್ ಗಂಗಾವರಂ – 252,ಸೂರಜ್ ಡಿ – 255,ನೇತ್ರಾ ಮೇಟಿ– -326,ಬಿಂದು ಮಣಿ ಆರ್. ಎನ್ – 468,ಪ್ರಮೋದ್ ಆರಾಧ್ಯ ಎಚ್. ಆರ್ -601 ,ಸೌರಬ್ ಕೆ– 725 ನೇ ರ್ಯಾಂಕ್ ಸಿರಿವೆನ್ನಲಾ-204, ಮೇಘ ಜೈನ್-354, ಪ್ರಜ್ವಲ್ 367, ಸಾಗರ್ ಎ ವಾಡಿ-385, ನಾಗರಾಜೇ ಶುಭಂ ಬಾವೂಸಾಬ್-453,ಶಕೀರ್ ಅಹಮದ್-583,ವೈಶಾಖ ಭಾಗಿ-744, ಸಂತೋಷ್ ಎಚ್-751 ರ್ಯಾಂಕ್ ಪಡೆದಿದ್ದಾರೆ. ಕರ್ನಾಟಕದ ಸಾಧಕರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರುಶುಭ ಹಾರೈಸಿದ್ದಾರೆ.