advertise here

Search

ಕಗ್ಗಲೀಪುರದಲ್ಲಿ ವಿಕೃತಿಯ ಪರಮಾವಧಿ – ಬರ್ತಡೆ ಪಾರ್ಟಿಗೆ ಬಂದವನ ಮೇಲೆ ಮೃಗೀಯ ಹಲ್ಲೆ!

kaggalipura thattaguppe youth assault

ರಾಮನಗರ: ಸ್ನೇಹಿತರ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋದ ಯುವಕನ ಮೇಲೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮೃಗೀಯವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಟ್ಟಗುಪ್ಪೆ ಗ್ರಾಮದ ಕೆರೆ ಬಳಿ ನಡೆದ ಈ ಭೀಕರ ಕೃತ್ಯವು ಮನುಷ್ಯತ್ವವೇ ನಾಚುವಂತಿದೆ.

ಪುನೀತ್ ಎಂಬ ಯುವಕನು ತನ್ನ ಪರಿಚಯಸ್ಥರ ಬರ್ತಡೆ ಪಾರ್ಟಿಗೆಂದು ತಟ್ಟಗುಪ್ಪೆ ಕೆರೆ ಬಳಿ ಬಂದಿದ್ದನು. ಈ ವೇಳೆ ಅಲ್ಲಿಗೆ ಬಂದ ಕ್ರಿಮಿನಲ್ ಹಿನ್ನೆಲೆಯುಳ್ಳ ಗಜೇಂದ್ರ ಹಾಗೂ ಸುಮಂತ್ ಎಂಬುವವರು ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಪುನೀತ್ ಮೇಲೆರಗಿದ್ದಾರೆ. ಹಲ್ಲೆಗೊಳಗಾದ ಪುನೀತ್ ಪ್ರಾಣ ಉಳಿಸಿಕೊಳ್ಳಲು ಕೈ ಮುಗಿದು ಬೇಡಿಕೊಂಡರೂ, ಕಾಲು ಹಿಡಿದು ಕ್ಷಮೆಯಾಚಿಸಿದರೂ ಈ ಕಿರಾತಕರು ಮಾತ್ರ ಬಿಡಲಿಲ್ಲ.

ವಿಕೃತಿಯ ಪರಮಾವಧಿ:

ಆರೋಪಿಗಳಾದ ಗಜೇಂದ್ರ ಮತ್ತು ಸುಮಂತ್ ಅವರು ಪುನೀತ್‌ನನ್ನು ಕಾಲಿನಿಂದ ಒದ್ದು, ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಈ ವಿಕೃತ ಮನಸ್ಸಿನವರು, ಹೊಡೆತದಿಂದ ರಕ್ತ ಸುರಿಯುತ್ತಿದ್ದರೂ ಪುನೀತ್ ತಲೆಯ ಮೇಲೆ ಮದ್ಯ ಸುರಿದು ವಿಕೃತವಾಗಿ ಸಂಭ್ರಮಿಸಿದ್ದಾರೆ. ಈ ಮೃಗೀಯ ವರ್ತನೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ALSO READ :  pU ಬೋರ್ಡ್‌ ನೂತನ ನಿರ್ದೇಶಕ ಭರತ್‌ ಎದುರು ದಂಡಿ ದಂಡಿ ಸವಾಲುಗಳು..!

ದಾಖಲಾದ ಕೊಲೆ ಯತ್ನ ಪ್ರಕರಣ:

ಈ ಹಿಂದೆ ಸುಮಂತ್ ಮೇಲೆ ಪುನೀತ್ ಹಲ್ಲೆ ಮಾಡಿದ್ದನು ಎಂಬ ಕಾರಣಕ್ಕೆ, ಅದೇ ಸೇಡನ್ನು ತೀರಿಸಿಕೊಳ್ಳಲು ಗಜೇಂದ್ರನನ್ನು ಕರೆಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಕಗ್ಗಲೀಪುರ ಪೊಲೀಸರು, ಗಜೇಂದ್ರ ಹಾಗೂ ಸುಮಂತ್ ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | ಧರ್ಮಸ್ಥಳ ಪ್ರಕರಣ: ಮರುತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ನಾಗರಿಕ ಸಮಾಜದಲ್ಲಿ ಇಂತಹ ವಿಕೃತ ಘಟನೆಗಳು ನಡೆಯುತ್ತಿರುವುದು ಆತಂಕಕಾರಿಯಾಗಿದ್ದು, ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Political News

ಮಾರ್ಚ್ ಅಂತ್ಯಕ್ಕೆ ಕರ್ನಾಟಕದ ಗದ್ದುಗೆ ಬದಲಾವಣೆ ಪಕ್ಕಾ?! ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಸಜ್ಜಾದ ಹೈಕಮಾಂಡ್!

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಐತಿಹಾಸಿಕ ಪಯಣಕ್ಕೆ ಸಿಎಂ ಅಭಿನಂದನೆ

ಸಂವಿಧಾನ ರಕ್ಷಣೆಗೆ ಸ್ಪೀಕರ್ ಪೀಠಕ್ಕೆ ಸವಾಲು: ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ

ವಾಣಿಜ್ಯ ಎಲ್‌ಪಿಜಿ ಕೊರತೆ: ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಹೊಸ ನಾಯಕನ ಆಯ್ಕೆಯ ಬೆನ್ನಲ್ಲೇ ತೀವ್ರಗೊಂಡ ಯುದ್ಧ: ಆಪರೇಶನ್ ಎಪಿಕ್ ಫ್ಯೂರಿಗೆ 10ನೇ ದಿನ

‘ಹೈಕಮಾಂಡ್ ನಿರ್ಧಾರವೇ ಅಂತಿಮ’: ನಾಯಕತ್ವದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಫುಲ್ ಸ್ಟಾಪ್!

‘ಖಾಲಿ ಚೊಂಬು’ ಕೊಟ್ಟ ಕಾಂಗ್ರೆಸ್: ಬಜೆಟ್ ದಿನದಂದು ಬಿಜೆಪಿ ನಾಯಕರ ಪ್ರತಿಭಟನೆ

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ!

Scroll to Top