ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಯಾವ ಮಹಾನ್ ವ್ಯಕ್ತಿತ್ವ-ಮೇರು ಪ್ರತಿಭೆಯನ್ನು ಗುರುತಿಸಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ರೋ ಅಂಥವರನ್ನು ಬದುಕಿದ್ದಾಗ ಲಂತೂ ಅಲ್ಲ, ಅಟ್ಲೀಸ್ಟ್ ಸತ್ತ ಮೇಲಾದ್ರೂ ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಕನಿಷ್ಟ ಸೌಜನ್ಯಕ್ಕಾದ್ರೂ ಸರ್ಕಾರದಿಂದ ಸೂಕ್ತ ಗೌರವ-ವಿದಾಯ ಸಲ್ಲಿಸಬಹುದಿತ್ತೇನೋ..? ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬೇರೆಯದೇ ರಾಜಕೀಯ ವಿಚಾರಗಳಲ್ಲಿ ಮುಳುಗೋಗಿಬಿಟ್ಟಿತ್ತು..ಇದು, ಇಸ್ರೋದ ದೀರ್ಘಕಾಲದ ಅಧ್ಯಕ್ಷರು,ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಭಾರತದ ಹೆಮ್ಮೆಯ ಸಾಕ್ಷಿಪ್ರಜ್ನೆ, ಹಲವು ಪ್ರಥಮಗಳ ರೂವಾರಿ… ಗರಿಷ್ಠ ಸಾಧನೆಗಳ ಪ್ರವರ್ತಕ ಡಾ.ಕಸ್ತೂರಿ ರಂಗನ್ ಅವರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಅಮಾನವೀಯ ನಡೆ ಎಂದರೂ ತಪ್ಪಾಗದು..ಬೇರೆ ಯಾವ ವಿಷಯಗಳು ಬೇಡ, ಅವರು ನಿಧನರಾದ ಸುದ್ದಿಯನ್ನು ಸರಿಯಾದ ಸಮಯಕ್ಕೆ ಪ್ರಕಟಿಸುವ ಸೌಜನ್ಯವೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವಾಯದೇ ಹೋಯ್ತಲ್ಲ ಎನ್ನುವುದೇ ದೌರ್ಭಾಗ್ಯಪೂರ್ಣ.


ಹೌದು..ಇಸ್ರೋದ ಮಾಜಿ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ, ಜ್ನಾನ ಆಯೋಗದ ಮಾಜಿ ಅಧ್ಯಕ್ಷ, ಹಲವು ಸಾಧನೆಗಳ ಸೃಷ್ಟಿಕರ್ತ ಡಾ.ಕಸ್ತೂರಿ ರಂಗನ್ ಅವರ ಸಾವಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತುಂಬಾ ಅಪಮಾನಕರವಾದ ರೀತಿಯಲ್ಲಿ ನಡೆದುಕೊಂಡಿದೆ. ಅವರು ನಿನ್ನೆ ಬೆಳಗ್ಗೆ ನಿಧನರಾದ ಸುದ್ದಿಯನ್ನು ಸಂಜೆಯಾದರೂ ದೃಢಿಕರಿಸುವಷ್ಟು ಕನಿಷ್ಟ ಸೌಜನ್ಯವನ್ನೂ ಸರ್ಕಾರ ಪ್ರದರ್ಶಿಸಲಿಲ್ಲ ಎನ್ನುವ ಮಾತು ಕೇಳಿಬಂದಿದೆ. ಇಂಥಾ ಮಹಾನ್ ವಿಜ್ನಾನ ದೈವಾಧೀನರಾದರೂ ಅವರ ಅಂತ್ಯಸಂಸ್ಕಾರ ಹಾಗೂ ಅದಕ್ಕೆ ಮುನ್ನ ನಡೆಯುವ ಯಾವುದೇ ವಿಧಿವಿಧಾನಗಳು, ಕಾರ್ಯಕ್ರಮಗಳ ಸಮಪರ್ಕ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ ಎಂದರೆ ಸಾಧಕರ ವಿಚಾರದಲ್ಲಿ ಸರ್ಕಾರದ ತಾತ್ಸಾರ ಭಾವನೆ ಎಂತದ್ದೆನ್ನುವುದು ಗೊತ್ತಾಗುತ್ತೆ.
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಕಸ್ತೂರಿ ರಂಗನ್ ತಮ್ಮ 84ನೇ ವಯಸ್ಸಿನಲ್ಲಿ ಕೊನೆಯುಸಿರೆಳೆಯುತ್ತಾರೆ. ಭಾರತದ ಹೆಮ್ಮೆಯ ಸುಪುತ್ರನ ಸಾವು ದೊಡ್ಡಮಟ್ಟದ ಸುದ್ದಿಯಾಗಲೇಬೇಕಿತ್ತು.ಆದರೆ ಒಂದಷ್ಟು ಮಾದ್ಯಮ,ಸೋಶಿಯಲ್ ಮೀಡಿಯಾಗಳಲ್ಲಿ ಬಿಟ್ಟರೆ ಬೇರೆಲ್ಲೂ ಸುದ್ದಿಯಾಗಲೇ ಇಲ್ಲ.ಸರ್ಕಾರದ ದುರಂತ ನೋಡಿ ಬೆಳಗ್ಗೆ 10:30ಕ್ಕೆ ಅವರು ತೀರಿಕೊಂಡರೂ ಸರ್ಕಾರದಿಂದ ಅದು ಡಿಕ್ಲೇರ್ ಆಗಿ ಸಂತಾಪದ ಪ್ರಕಟಣೆ ಹೊರಬಿದ್ದಿದ್ದು ಸಂಜೆಗೆ. ಕಸ್ತೂರಿ ರಂಗನ್ ಅವರು ಅಸುನೀಗುತ್ತಿದ್ದಂತೆ ಸರ್ಕಾರದಿಂದ ಯಾರಾದರೂ ಸ್ಥಳಕ್ಕೆ ಭೇಟಿ ಕೊಟ್ಟು ನಮನ ಸಲ್ಲಿಸಿ ಮುಂದಾಗಬೇಕಾದ ಕೆಲಸಗಳಿಗೆ ಚಾಲನೆ ಕೊಡಬಹುದಿತ್ತು.ಆದರೆ ಮುಖ್ಯಮಂತ್ರಿಯಾಗಲಿ, ಉಪಮುಖ್ಯಮಂತ್ರಿಯಾಗಲಿ ಅಥವಾ ಸರ್ಕಾರದ ಯಾವುದೇ ಸಚಿವರು ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ತಮ್ಮ ನಮನ ಸಲ್ಲಿಸಲೇ ಇಲ್ಲ ಎಂದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಯಾ..?

ಮೂಲತಃ ಪಾಲಕ್ಕಾಡ್ ನವರಾದರೂ ತಮ್ಮ ಜೀವಮಾನದ ಅತೀ ಹೆಚ್ಚು ಸಮಯ ಕಳೆದಿದ್ದು ಬೆಂಗಳೂರಿನಲ್ಲೇ. ತಮ್ಮ ಜೀವಿತವನ್ನು ಬಾಹ್ಯಾಕಾಶ ಕ್ಷೇತ್ರದ ಸಾದನೆಗಳಿಗೆಂದೆ ಮೀಸಲಿಟ್ಟವರು ಕಸ್ತೂರಿ ರಂಗನ್. ಇವರ ಅವಧಿಯಲ್ಲಿ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳು ಅದ್ವಿತೀಯ. ನಿರಂತರ 9 ವರ್ಷಗಳ ಕಾಲ ಇಸ್ರೋವನ್ನು ಅಧ್ಯಕ್ಷರಾಗಿ ಮುನ್ನಡೆಸಿದವರು ಅವರು.ಬಹುಷಃ ಇವರಷ್ಟು ದೀರ್ಘ ಅವಧಿಗೆ ಇಸ್ರೋವನ್ನು ಮುನ್ನಡೆಸಿದವರು ಬಹುಷಃ ಇನ್ನೊಬ್ಬರಿಲ್ಲ ಎನ್ನಿಸುತ್ತದೆ.
ಕಸ್ತೂರಿ ರಂಗನ್ ಅವರ ಅವಧಿಯಲ್ಲೇ ಅತಿ ಹೆಚ್ಚು ಉಪಗ್ರಹಗಳ ಉಡಾವಣೆ ಆಗಿದ್ದು ಮತ್ತೊಂದು ಸಾಧನೆ.ಆರ್ಯಭಟದಿಂದ ಹಿಡಿದು ಇನ್ಸಾಟ್ ವರೆಗೂ ಅವರು ಒಂದರ ಹಿಂದೆ ಮತ್ತೊಂದರಂತೆ ಉಪಗ್ರಹಗಳನ್ನು ಉಡಾಯಿಸಿ ಭಾರತೀಯ ಬಾಹ್ಯಾಕಾಶ ಕೇಂದ್ರದ ಪತಾಕೆಯನ್ನು ಮೇಲಕ್ಕೇರಿಸಿದವರು.ಇಂಥಾ ಮಹಾನ್ ಸಾಧಕನನ್ನು ಕಾಂಗ್ರೆಸ್ ಸರ್ಕಾರ ಹೀಗೆ ನಡೆಸಿಕೊಂಡಿದ್ದು ಸರಿನಾ..?

ಬಾಹ್ಯಾಕಾಶ ಕ್ಚೇತ್ರದಲ್ಲಿ ಭಾರತ ಬಹು ಎತ್ತರದ ಸಾಧನೆ ಮಾಡಲು ಕಾರಣಕರ್ತರಾದ ಕಸ್ತೂರಿ ರಂಗನ್ ಅವರನ್ನು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2003 ರಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತೆ.2003 ರಿಂದ 2009 ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಕಸ್ತೂರಿ ರಂಗನ್ ಸಂಸತ್ತಿನಲ್ಲಿಯೂ ಬಾಹ್ಯಾಕಾಶದ ಬಗ್ಗೆ ಸಾಕಷ್ಟು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿ ಗಮನ ಸೆಳೆದಿದ್ದರು.ರಾಜ್ಯದಲ್ಲಿ ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಇದೇ ಕಸ್ತೂರಿ ರಂಗನ್ ಅವರನ್ನು ಜ್ನಾನ ಆಯೋಗದ ಅಧ್ಯಕ್ಷರನ್ನಾಗಿ ಮಾಡಿತ್ತು.ಇಷ್ಟೆಲ್ಲಾ ಮಾಡಿದ್ದ ಕಾಂಗ್ರೆಸ್ ಸರ್ಕಾರವೇ ಕಸ್ತೂರಿ ರಂಗನ್ ಅವರ ಸಾವು ಹಾಗೂ ಆನಂತರದ ಸನ್ನಿವೇಶಗಳಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದು ಸರಿನಾ ಎಂದು ಇಡೀ ಕರ್ನಾಟಕ ಮಾತನಾಡಿಕೊಳ್ಳುತ್ತಿದೆ.

ಪಶ್ಚಿಮ ಘಟ್ಡದ ಸೂಕ್ಷ್ಮ ಅರಣ್ಯ ಪ್ರದೇಶದ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಹಾಗೂ ಸೂಕ್ಷ್ಮ ಪ್ರದೇಶದ ಗಡಿಯನ್ನು ಗುರುತಿಸುವ ವಿಚಾರದಲ್ಲಿ ಇದರ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಯಾರು ಸೂಕ್ತ ಎನ್ನುವ ಪ್ತಶ್ನೆ ಬಂದಾಗಲೂ ರಾಜ್ಯ ಸರ್ಕಾರಕ್ಕೆ ಮೊದಲು ನೆನಪಾಗಿದ್ದೇ ಕಸ್ತೂರಿ ರಂಗನ್ ಅವರು.ಅವರ ದಕ್ಷ ಮುಂದಾಳತ್ವದಲ್ಲಿ ತಂಡ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು.ಇವತ್ತಿಗೂ ಪಶ್ಚಿಮ ಘಟ್ಟಗಳ ಸೂಕ್ಷ್ಮ ಅರಣ್ಯದ ಪ್ರಸ್ತಾಪವಾದ್ರೆ ನೆನಪಾಗುವ ಕಸ್ತೂರಿ ರಂಗನ್ ಬೇರ್ಯಾರು ಅಲ್ಲ..ಇದೇ ಮಹಾತ್ಮ-ಪುಣ್ಯಾತ್ಮ.

ಹೀಗೆ…ಇಷ್ಟೆಲ್ಲಾ ಸಾಧನೆ ಮಾಡಿದ ಕಸ್ತೂರಿ ರಂಗನ್ ಅವರ ಸಾವಿನ ವಿಚಾರದಲ್ಲಿ ಸರ್ಕಾರ ಇಷ್ಟೊಂದು ಸಂವೇದನಾರಹಿತವಾಗಿ ನಡೆದುಕೊಂಡಿದ್ದು ನಿಜಕ್ಕೂ ಸರಿಯಲ್ಲ.ಕಸ್ತೂರಿ ರಂಗನ್ ಅವರ ಅಂತ್ಯಸಂಸ್ಕಾರದ ಮಾಹಿತಿಗಳನ್ನೇ ಇನ್ನೂ ಸಾರ್ವಜನಿಕಗೊಳಿಸಿಲ್ಲ.ಇದು ಕಾಂಗ್ರೆಸ್ ಸರ್ಕಾರದ ಹೊಣೆಗೇಡಿತನ ಪ್ರದರ್ಶಿಸುತ್ತದಲ್ವೇ…?