advertise here

Search

PG ಮಾಲೀಕನಿಂದಲೇ ಕಾಲೇಜ್ ಸ್ಟೂಡೆಂಟ್ ರೇ*ಪ್


ಬೆಂಗಳೂರು:ಓದಿಕೊಳ್ಳಲಿಕ್ಕೆಂದು ದೂರ ದೂರಿಂದ ಬೆಂಗಳೂರಿಗೆ ಬಂದು ಪಿಜಿ-ಹಾಸ್ಟೆಲ್ ಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿನಿಯರಿಗೆ ಪಿಜಿ-ಹಾಸ್ಟೆಲ್ ಗಳು ಸೇಫಲ್ವಾ..? ಇಂತದ್ದೊಂದು ಅನುಮಾನ ಕಾಡ್ಲಿಕ್ಕೆ ಕಾರಣವಾಗಿರೋದು ರಾಜಧಾನಿ ಹೊರವಲಯದಲ್ಲಿ ನಡೆದಿರುವ ಕಾಲೇಜ್ ಸ್ಟೂಡೆಂಟ್ ಒಬ್ಬಳ ರೇ *ಪ್.. ತನ್ನ ಪಿಜಿಯಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿನಿ ಮೇಲೆ ಕಣ್ಣಾಕಿದ್ದ ಕಾಮಾಂಧ ಆಕೆಯನ್ನು ಪುಸಲಾಯಿಸಿ,ಒಪ್ಪದಿದ್ದಕ್ಕೆ ಕಿಡ್ನ್ಯಾಪ್ ರೀತಿ ಎತ್ತಾಕಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ಅಂದ್ಹಾಗೆ ಈ ಘಟನೆ ನಡೆದಿರುವುದು ಸೋಲದೆವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಪ್ರತಿಷಿತ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜ್ ಗೆ ಹೊಂದಿಕೊಂಡಂತೆ ಇರುವ ಪಿಜಿ ಒಂದರಲ್ಲಿ ಬಾಡಿಗೆಯಲ್ಲಿದ್ದಳು.ಆಕೆಯ ಮೇಲೆ ಮೊದಲಿಂದಲೂ ಕಣ್ಣಾಕಿದ್ದ ಪಿಜಿ ಮಾಲೀಕ ಅಶ್ರಫ್ ,ಆಕೆಯನ್ನು ಮನವೊಲಿಸಿಕೊಳ್ಳಲು ಯತ್ನಿಸಿದ್ದನಂತೆ.ಆಕೆ ಅದಕ್ಕೆ ಸೊಪ್ಪಾಕದೆ ತಾನಾಯ್ತು ,ತನ್ನ ಓದಾಯ್ತು ಎಂದುಕೊಂಡಿದ್ದಳು.ಇದೇ ಆತನನ್ನು ವ್ಯಗ್ರಗೊಳಿಸಿತ್ತು.ಒಪ್ಪದಿದ್ರೆ ಅಪಹರಿಸಿಕೊಂಡಾದ್ರೂ ಹೋಗಿ ಆಕೆಯನ್ನು ಅನುಭವಿಸಬೇಕೆನ್ನುವ ದುರಾಲೋಚನೆಗೆ ಬಿದ್ದಿದ್ದಾನೆ.

ALSO READ :  ನೇಪಾಳ:  'ಜೆನ್ ಜಿ' ಪ್ರತಿಭಟನೆ ಹತ್ತಿಕ್ಕಿದ್ದ ಮಾಜಿ ಪ್ರಧಾನಿ ಓಲಿ ಸೆರೆ

ಅದಕ್ಕೊಂದು ಪ್ಲ್ಯಾನ್ ಮಾಡಿ,ಕಾಲೇಜ್ ಮುಗಿಸಿಕೊಂಡು ಪಿಜಿಗೆ ಬಂದಿದ್ದ ಆಕೆಯ ರೂಮಿಗೆ ನುಗ್ಗಿದ್ದಾನಂತೆ.ಆಕೆ ಗಾಬರಿಗೊಂಡಿದ್ದಾಳೆ.ಕಿರುಚದಂತೆ ಆಕೆಯನ್ನು ಬೆದರಿಸಿ ಆಕೆಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ರೇಪ್ ಮಾಡಿದ್ದಾನೆ.ತನ್ನ ಮೇಲೆ ಮಾಲೀಕ ನಡೆಸಿದ ಪೈಶಾಚಿಕ ಕೃತ್ಯದ ಹಿನ್ನಲೆಯಲ್ಲಿ ಮಾನಸಿಕವಾಗಿ ಘಾಸಿಗೊಂಡ ಯುವತಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಆಕೆಯ ದೂರಿನ ಅನ್ವಯ ಪೊಲೀಸರು ಕೇಸ್ ದಾಖಲಿಸಿಕೊಂಡು ರೇಪಿಸ್ಟ್ ಅಶ್ರಫ್ ನನ್ನು ಅರೆಸ್ಟ್ ಮಾಡಿದ್ದಾರೆ,ಮಾನಸಿಕವಾಗಿ ಅಘಾತಗೊಂಡ ಯುವತಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಸಮಾಲೋಚನೆ ನೀಡಲಾಗಿದೆ.ಯುವತಿಯ ಮೇಲಾದ ಪೈಶಾಚಿಕ ಕೃತ್ಯದಿಂದ ಪಿಜಿಯಲ್ಲಿರುವ ಯುವತಿಯರು ಆತಂಕಕ್ಕೆ ಒಳಗಾಗಿದ್ದಾರೆ.ನಾವು ಎಷ್ಟರ ಮಟ್ಟಿಗೆ ಸೇಫ್ ಎಂದು ಮಾತನಾಡಿಕೊಳ್ಳುತ್ತಿದ್ದಾರಂತೆ.


Political News

ra.chinthan v/s mumtas nelyadka talkwar ರ.ಚಿಂತನ್‌ v/s ಮುಮ್ತಾಸ್ ನೆಲ್ಯಡ್ಕ “ಟಾಕ್‌ ವಾರ್‌”: ಯಾರು ಸರಿ..ಯಾರು ತಪ್ಪು..!?

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

Scroll to Top