ಮನುಷ್ಯತ್ವ..ಮಾನವ ಸಂಬಂಧ ಸಾವನ್ನೂ ಮೀರಿದ್ದು.. ಅದೇ ಸತ್ಯ..ಅದೇ ಅಂತಿಮ.

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮರ ಸಾವಿನಲ್ಲಿ ಪತ್ರಕರ್ತನಿಗೆ ಗೋಚರಿಸಿದ ಕಟು ಸತ್ಯ..! ಮನುಷ್ಯ ಹುಟ್ಟತ್ತಲೇ ಮಾನವತವಾದಿ. ಮನುಷ್ಯನಿಗೆ ಮನುಷ್ಯತ್ವ ಕಲಿಯಲು ಯಾವುದೇ ಧರ್ಮ ಗ್ರಂಥಗಳು ಬೇಕಿಲ್ಲ. ಅದು ಹುಟ್ಟತ್ತಲೇ ಸಿಗುವ ಮೂಲಗುಣ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಮನುಷ್ಯ ತನ್ನ ಸ್ವಾರ್ಥ ಗುಣಕ್ಕಾಗಿ ಮರಕ್ಕೆ ಬಳ್ಳಿಗಳು ಬೆಳದಂತೆ ಅಡ್ಡಾದಿಡ್ಡಿಯಾಗಿ ಯೋಚಿಸಲು ಆರಂಭವಿಸುವಲ್ಲಿ ನಾವು ಇವತ್ತು ಕೇಳುವ, ಓದುವ, ನೋಡುವ ವಾದಗಳು ಹುಟ್ಟಿಕೊಂಡಿದೆ. ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಅಟ್ರಾಸಿಟಿ ನಡೆದರೂ ಇನ್ನೆಲ್ಲೋ ಕೂತು ಅದಕ್ಕೆ ಮರುಕಪಡಬಹುದು. ಹಾಗೊಂದು ತೀವ್ರವಾದ … Read more

EXCLUSIVE: ಸರ್ಕಾರಕ್ಕೆ ಬೇಡವಾದ್ರಾ ಖಡಕ್‌ IPS ಶಿವಪ್ರಕಾಶ್‌ ದೇವರಾಜ್‌.! ದಕ್ಷರಾಗಿದ್ದೇ ತಪ್ಪಾ..?

ಬೆಂಗಳೂರು: ಅಪ್ರಮಾಣಿಕತೆಯನ್ನೇ ಸಹಿಸೊಲ್ಲ..ಭ್ರಷ್ಟಾಚಾರವನ್ನು ಪ್ರೋತ್ಸಾಹಿಸೊಲ್ಲ ..ಇದು ಈ ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಹೇಳಿದ್ದ ಮಾತು.ಆದರೆ ಈಗ ನಾವು ಅವರನ್ನು ಪ್ರಶ್ನಿಸ ಬೇಕಾಗಿರೋದು ಏನಂದ್ರೆ, ನೀವು ಅಧಿಕಾರ ಸಿಕ್ಕ ಉತ್ಸಾಹದಲ್ಲಿ ಹೀಗೆಂದು ಹೇಳಿಕೆ ಕೊಟ್ಟಿದ್ರೋ ಅಥವಾ ಬಾಯ್ತಪ್ಪಿನಿಂದ ಅಂದ್ರೆ ಸ್ಲಿಪ್‌ ಆಫ್‌ ಟಂಗೋ ಗೊತ್ತಾಗ್ತಿಲ್ಲ..ಏಕಂದ್ರೆ ವಾಸ್ತವದಲ್ಲಿ ನೀವಂದ ಮಾತು ಈಡೇರಲೂ ಸಾ‍ಧ್ಯವಿಲ್ಲ ಎನ್ನುವ ಸತ್ಯ ನಿಮಗೇ ಗೊತ್ತು..ಅದಕ್ಕೆ ಅವಕಾಶವನ್ನು ಅಧಿಕಾರದಲ್ಲಿರೋರೇ ಮಾಡಿಕೊಡಲ್ಲ ಎನ್ನುವ ಸತ್ಯವೂ ನಿಮ್ಗೆ ತಿಳಿದಿದೆ.ಹೀಗಿರುವಾಗ ನೀವು ಹೇಳಿದ ಮಾತು … Read more

ಟಿವಿ9 ಕನ್ನಡದಲ್ಲಿ ಕೆಲ ಸುದ್ದಿಮಿತ್ರರಿಗೆ “ಗೇಟ್ ಪಾಸ್”..! ಪ್ರಾಮಾಣಿಕ ಸಿಬ್ಬಂದಿ “ಕೇರ್ ಆಫ್ ಪುಟ್ಪಾತ್..!”

ಟಿವಿ9 ಕೇಂದ್ರ ಮ್ಯಾನೇಜ್ಮೆಂಟ್‌ ನಿಗಧಿಪಡಿಸಿದ ಮಾನದಂಡವೇ ನಿರ್ಲಕ್ಷ್ಯ:..! ಬೆಂಗಳೂರು ಕಚೇರಿಯಲ್ಲಿ ದರ್ಬಾರ್‌ ನಡೆಸ್ತಿರುವವರಿಂದ ನಿಜಕ್ಕೂ ಅರ್ಹರಿಗೆ ಆಗೋಯ್ತಾ ಅನ್ಯಾಯ..? ಬೆಂಗಳೂರು:ಟಿವಿ9  ಕನ್ನಡ(TV9 KANNADA)ದ ಕಚೇರಿಯ ಇತಿಹಾಸದಲ್ಲೇ ಇಷ್ಟೊಂದು ಭೀತಿ-ಆತಂಕದ ವಾತಾವರಣ  ಹಿಂದೆಂದೂ ನಿರ್ಮಾಣವೇ ಆಗಿರಲಿಕ್ಕಿಲ್ಲವೇನೋ..? ಫಾರ್‌ ದಿ ಫಸ್ಟ್‌ ಟೈಮ್‌ ಚಾನೆಲ್‌ ನ ಕಚೇರಿಯಲ್ಲಿ ಭಯದ ದೊಡ್ಡ  ಸುನಾಮಿನೇ ಎದ್ದಿದೆ.ಯೆಸ್..ಈ ಸುನಾಮಿ ಸಾಕಷ್ಟು ಉದ್ಯೋಗಿಗಳ “ತುತ್ತ”ನ್ನೇ ಕಸಿದುಕೊಂಡಿದೆ.ಇದಕ್ಕೆಲ್ಲಾ ಕಾರಣ ಅನಗತ್ಯ ಅಥವಾ ಹೆಚ್ಚು”ವರಿ”ವೆಚ್ಚಗಳ ಕಡಿತ ಎನ್ನಲಾಗಿದೆ.ಈ ಪೈಕಿ ಕೆಲಸ ಕಳೆದುಕೊಂಡಿರುವವರಲ್ಲಿ ಹೆಚ್ಚಿನವರು ಬೆಂಗಳೂರು ಕೇಂದ್ರ ಕಚೇರಿ ಮತ್ತು … Read more

ಟಿವಿ 9 ಸಮೂಹಕ್ಕೆ “ಆರ್ಥಿಕ” ಹಿಂಜರಿಕೆಯೇ..!? ಅನಗತ್ಯ “ವೆಚ್ಚ”ಕ್ಕೂ ಬ್ರೇಕ್‌..! ಸಧ್ಯಕ್ಕೆ ಸಿಬ್ಬಂದಿಗಿಲ್ಲವಂತೆ “ಅಭದ್ರತೆ”ಯ ಆತಂಕ…!

ಇದನ್ನು ಅಘಾತಕಾರಿ ಎನ್ನಬೇಕೋ.. ಆತಂಕಕಾರಿ ಎನ್ನಬೇಕೋ..ಅಥವಾ ನಿರೀಕ್ಷಿತ ಎನ್ನಬೇಕೋ ಗೊತ್ತಾಗ್ತಿಲ್ಲ.ಕನ್ನಡದ ನಂಬರ್‌ 1 ಚಾನೆಲ್‌ ಟಿವಿ9 ನ  ಮಾತೃ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಸಾಕಷ್ಟು ಚಾನೆಲ್‌ ಗಳು ಆರ್ಥಿಕ ನಷ್ಟದಲ್ಲಿವೆ ಎನ್ನುವ ಸುದ್ದಿ ಮಾರುಕಟ್ಟೆಯಲ್ಲಿ ಪಸರ್‌ ಆಗ್ತಿದೆ. ಟಿವಿ9 ಟ್ಯಾಗ್‌ ನ ಅಡಿಯಲ್ಲಿ ನಡೆಯುತ್ತಿರುವ ಚಾನೆಲ್‌ ಗಳ ಪೈಕಿ ಲಾಭದಲ್ಲಿರುವುದು ಕೇವಲ ಟಿವಿ9 ಕನ್ನಡ ಎನ್ನಲಾಗ್ತಿದೆ.ಉಳಿದ ಪ್ರಾದೇಶಿಕ ಭಾಷೆಯ ನ್ಯೂಸ್‌ ಚಾನೆಲ್‌ ಗಳ ಆರ್ಥಿಕತೆ ಕುಸಿದುಬಿದ್ದಿದೆಯಂತೆ.ಇದನ್ನು ಸರಿದೂಗಿಸುವ ಕಾರಣಕ್ಕೆ ಮ್ಯಾನೇಜ್ಮೆಂಟ್‌ ಮೊದಲ ಹಂತದಲ್ಲಿ ಕೈ ಹಾಕಿರುವುದು ಅನಗತ್ಯ … Read more

ಕಿದ್ವಾಯಿ ಆಡಳಿತಕ್ಕೇ ಕ್ಯಾನ್ಸರ್..!? ಕಿದ್ವಾಯಿಯಲ್ಲಿ ಕೆಎಎಸ್ ಗಳಿಗೇಕೆ ಅಲ್ಪಾಯುಷ್ಯ..!

ಅಧಿಕಾರ ನೀಡೋದು ಸರ್ಕಾರನೇ..ಮೊಟಕುಗೊಳಿಸಿರೋದು ಸರ್ಕಾರನೇ.? ಬೆಂಗಳೂರು: ಸರ್ಕಾರದ ಪ್ರತಿಷ್ಟಿತ ಆರೋಗ್ಯ ಸಂಸ್ಥೆಗಳಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಕೂಡ ಒಂದು.ಕ್ಯಾನ್ಸರ್‌ ವಿಷಯಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದಿರುವ ಕ್ಯಾನ್ಸರ್‌ ಪೀಡಿತರಿಗೆ ಚಿಕಿತ್ಸೆ-ಉಪಚಾರಕ್ಕೆ ಇರೋ ಏಕೈಕ ಆಸರೆ ಹಾಗೂ ಆಶಾಕಿರಣ ಎಂದರೆ ಅದು ಕಿದ್ವಾಯಿ ಮಾತ್ರ. ಆದರೆ ಇಲ್ಲಿನ ವ್ಯವಸ್ಥೆ ಸರಿಯಾಗಿದೆಯಾ..? ಸರ್ಕಾರ ಯಾವ ಉದ್ದೇಶಕ್ಕಾಗಿ ಈ ಆಸ್ಪತ್ರೆಯನ್ನು ಪ್ರಾರಂಭಿಸಿತೋ ಆ ಉದ್ದೇಶ ಈಡೇರುತ್ತಿದೆಯಾ.? ಸರ್ಕಾರದ ಸೌಲಭ್ಯಗಳು ಕ್ಯಾನ್ಸರ್‌ ಪೀಡಿತರಿಗೆ ಸಿಗುತ್ತಿದೆಯಾ ಎಂದುನೋಡಿದ್ರೆ ಸಿಗೋ ಉತ್ತರ ಶೂನ್ಯ ಅಂತೆ..ಯಾಕಂದ್ರೆ ಒಳ್ಳೆಯ ಕಾರಣಕ್ಕೆ … Read more

ನ್ಯೂಸ್‌ ಚಾನೆಲ್‌ ಗಳ ಸಾಲಿಗೆ ಮಹಿಳಾ ಸಾರಥ್ಯದ “”ಸಂಪೂರ್ಣನ್ಯೂಸ್‌”” ಸೇರ್ಪಡೆ.

ಕನ್ನಡ ಸುದ್ದಿ ಮಾದ್ಯಮ ಕ್ಷೇತ್ರ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು.ಸುದ್ದಿ ಪ್ರಸಾರದಲ್ಲಿ ಪ್ರಖರತೆ-ತೀಕ್ಷ್ಣತೆ-ಸ್ಪರ್ದಾತ್ಮಕತೆ ಬೆಳೆಯಲು ಸಾಧ್ಯ.ಇದೆಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗವಕಾಶಗಳು ಸೃಷ್ಟಿಯಾಗಲು ಸಾ‍ಧ್ಯ. ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಅದೇ ಸಂಪೂರ್ಣ ನ್ಯೂಸ್..ಸಂಪೂರ್ಣ ಗೌಡ ಅವರ ಮಾಲೀಕತ್ವದಲ್ಲಿ ಇಷ್ಟು ದಿನ ಡಿಜಿಟಲ್‌ ಫ್ಲಾಟ್‌ ಫಾರ್ಮ್‌ ನಲ್ಲಿ ಮೂಡಿಬರುತ್ತಿದ್ದ ಸಂಪೂರ್ಣ ನ್ಯೂಸ್‌ ಈಗ‌ ಪೂರ್ಣ ಪ್ರಮಾಣದಲ್ಲಿ ನ್ಯೂಸ್‌ ಚಾನೆಲ್‌ ಆಗಿ ತನ್ನ ಸುದ್ದಿ ಪ್ರಸಾರ ಶುರುಮಾಡಿದೆ.ಅದಕ್ಕೆ ಮೊದಲು ಸಂಪೂರ್ಣ ಗೌಡ ಹಾಗೂ ಅವರ ತಂಡಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ತಂಡ  ಶುಭಾಷಯಗಳನ್ನು … Read more

ಎಕ್ಸೆಲ್‌ ಪಿಯು ಕಾಲೇಜ್‌ ಕ್ಲೋಸ್..!‌ ಸಾಲು ಸಾಲು ಶೈಕ್ಷಣಿಕ ನಿಯಮ ಉಲ್ಲಂಘನೆ..ವಿದ್ಯಾರ್ಥಿಗಳ ಕಥೆ ಏನು.? ಪೋಷಕರ ಅಳಲು ಕೇಳೋರು ಯಾರು..!?

ಬೆಳ್ತಂಗಡಿ/ಬೆಂಗಳೂರು: ರಾಜ್ಯದ ಪ್ರತಿಷ್ಟಿತ ಕಾಲೇಜೊಂದರ ಬಗ್ಗೆ ಕೆಟ್ಟ ಸುದ್ದಿ ಹೊರಬಿದ್ದಿದೆ. ಶೈಕ್ಷಣಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಕಾಲೇಜ್‌ ಮಾನ್ಯತೆಯನ್ನೇ ರದ್ದು ಮಾಡಿ ೩೦ ದಿನಗಳೊಳಗೆ ಇಡೀ ಕಾರ್ಯಾಚರಣೆ ‍ಸ್ಥಗಿತಗೊಳಿಸಬೇಕೆನ್ನುವುದು ಆ ಸುದ್ದಿ.ಲಕ್ಷಾಂತರ ಹಣ ಕೊಟ್ಟು ಮಕ್ಕಳನ್ನು  ಕಾಲೇಜಿಗೆ ಸೇರಿಸಿರುವ ಪೋಷಕರು ಇದೀಗ ಬಾಯಿಬಾಯಿ ಬಡಿದುಕೊಳ್ಳುತ್ತಿದ್ದಾರೆ.ಆದರೆ ಹಾಗೇನು ನಡೆದೇ ಇಲ್ಲ ಎನ್ನುವಂತೆ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡ್ತಿದೆ.ಯಾರ್‌ ಮಾತು ನಂಬಬೇಕು.. ಯಾರದ್ದು ಬಿಡಬೇಕೆನ್ನುವ ಗೊಂದಲ ಪೋಷಕರಲ್ಲಿದೆ.ಈ ನಡುವೆ ಇದ್ಯಾವುದರ ಮಾಹಿತಿಯೇ ಇಲ್ಲದ ಮಕ್ಕಳು ಕಾಲೇಜಿನ ಕಟ್ಟಡದಲ್ಲಿ ಎಂದಿನಂತೆ … Read more

EXCLUSIVE..”ಸೈಲೆಂಟ್” ಸುನೀಲ,”ರವಿಶಂಕರ್” ಗುರೂಜಿ ಭೇಟಿ ಮಾಡಿದ್ದೇಕೆ…ಆಶೀರ್ವಾದ ಪಡೆದಿದ್ದೇಕೆ…ಇಲ್ಲಿದೆ ಆ ಸೀಕ್ರೇಟ್..

ಶೀಘ್ರವೇ ರಾಜಕೀಯಕ್ಕೆ ಅಧೀಕೃತ ಎಂಟ್ರಿ…..ಜಿಬಿಎ ಎಲೆಕ್ಷನ್‌ ನಲ್ಲಿ ಸ್ಪರ್ದೆ ಖಚಿತ…..ಅಡಚಣೆ ಎದುರಾಗದಿರುವಂತೆ ಹರಿಸಿ ಆಶೀರ್ವದಿಸಿ ಎಂದು ಮನವಿ.. ಸೈಲೆಂಟ್‌ ಸುನೀಲ ಮತ್ತೆ ಸುದ್ದಿಯಲ್ಲಿದ್ದಾನೆ. ಬೆಂಗಳೂರು ಪಾತಕ ಜಗತ್ತು ಕಂಡ ಅತ್ಯಂತ ನಟೋರಿಯಸ್ ಹೆಸರು ಸುನೀಲನದು.ಯಾವ ವ್ಯಕ್ತಿಯ ಹೆಸರು ಕೇಳಿದ್ರೆ ಒಂದು ಕ್ಷಣ ಅಲರ್ಟ್‌ ಆಗ್ತಿತ್ತೋ ಅದೇ ಹೆಸರು ಇವತ್ತು ಮತ್ತೊಂದು ಮಗ್ಗಲು ಬದಲಿಸಲಿಕ್ಕೆ ಯತ್ನಿಸುತ್ತಿದೆ. ಈ ಕಾರಣಕ್ಕೆ ಸೈಲೆಂಟ್‌ ಸುನೀಲ ಮತ್ತೆ ಸುದ್ದಿಯಲ್ಲಿದ್ದಾನೆ. ಒಂದಷ್ಟು ಅವಧಿಯಿಂದ ಯಾವುದೇ ಆಕ್ಟಿವಿಟಿಸ್‌ ಇಲ್ಲದೆ  ಸೈಲೆಂಟ್‌ ಆಗಿದ್ದ ಸುನೀಲ ಸುದ್ದಿಯಾಗೊಕ್ಕೆ ಕಾರಣವೇ … Read more

VITM Recruitment 2026: ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಭರ್ಜರಿ ಉದ್ಯೋಗಾವಕಾಶ

VITM Recruitment 2026: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಕೆಲಸ ಖಾಲಿಯಿದೆ. 15-06-2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕೋಲಾರ: ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನೇರ ನೇಮಕಾತಿ -ಒಳ್ಳೆಯ ಸಂಬಳ, ಉಚಿತ ಊಟ, ವಸತಿ

kolar-narsapura-assembly-line-operator-jobs-2000-vacancy

Narasapura Employment: ಭಾರೀ ಉದ್ಯೋಗಾವಕಾಶಗಳು! ಕೋಲಾರ ಜಿಲ್ಲೆಯ ನರಸಾಪುರದಲ್ಲಿ 2000 ಅಸೆಂಬ್ಲಿ ಲೈನ್ ಆಪರೇಟರ್ ಹುದ್ದೆಗಳಿಗೆ ನೇರ ನೇಮಕಾತಿ. ಸಂಬಳ ₹19,715 CTC, ESI, PF, ಬೋನಸ್. ವಿದ್ಯಾರ್ಹತೆ: SSLC, PUC, ITI, ಡಿಪ್ಲೊಮಾ, ಡಿಗ್ರಿ. ವಯಸ್ಸು 18-27. ಪುರುಷ-ಮಹಿಳೆಯರಿಗೆ ಅವಕಾಶ. ಉಚಿತ ಊಟ ಮತ್ತು ವಸತಿ ಸೌಲಭ್ಯ. ಈಗಲೇ ಅರ್ಜಿ ಸಲ್ಲಿಸಿ!