ಮನುಷ್ಯತ್ವ..ಮಾನವ ಸಂಬಂಧ ಸಾವನ್ನೂ ಮೀರಿದ್ದು.. ಅದೇ ಸತ್ಯ..ಅದೇ ಅಂತಿಮ.

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮರ ಸಾವಿನಲ್ಲಿ ಪತ್ರಕರ್ತನಿಗೆ ಗೋಚರಿಸಿದ ಕಟು ಸತ್ಯ..! ಮನುಷ್ಯ ಹುಟ್ಟತ್ತಲೇ ಮಾನವತವಾದಿ. ಮನುಷ್ಯನಿಗೆ ಮನುಷ್ಯತ್ವ ಕಲಿಯಲು ಯಾವುದೇ ಧರ್ಮ ಗ್ರಂಥಗಳು ಬೇಕಿಲ್ಲ. ಅದು ಹುಟ್ಟತ್ತಲೇ ಸಿಗುವ ಮೂಲಗುಣ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಮನುಷ್ಯ ತನ್ನ ಸ್ವಾರ್ಥ ಗುಣಕ್ಕಾಗಿ ಮರಕ್ಕೆ ಬಳ್ಳಿಗಳು ಬೆಳದಂತೆ ಅಡ್ಡಾದಿಡ್ಡಿಯಾಗಿ ಯೋಚಿಸಲು ಆರಂಭವಿಸುವಲ್ಲಿ ನಾವು ಇವತ್ತು ಕೇಳುವ, ಓದುವ, ನೋಡುವ ವಾದಗಳು ಹುಟ್ಟಿಕೊಂಡಿದೆ. ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಅಟ್ರಾಸಿಟಿ ನಡೆದರೂ ಇನ್ನೆಲ್ಲೋ ಕೂತು ಅದಕ್ಕೆ ಮರುಕಪಡಬಹುದು. ಹಾಗೊಂದು ತೀವ್ರವಾದ … Read more

EXCLUSIVE: ಸರ್ಕಾರಕ್ಕೆ ಬೇಡವಾದ್ರಾ ಖಡಕ್‌ IPS ಶಿವಪ್ರಕಾಶ್‌ ದೇವರಾಜ್‌.! ದಕ್ಷರಾಗಿದ್ದೇ ತಪ್ಪಾ..?

ಬೆಂಗಳೂರು: ಅಪ್ರಮಾಣಿಕತೆಯನ್ನೇ ಸಹಿಸೊಲ್ಲ..ಭ್ರಷ್ಟಾಚಾರವನ್ನು ಪ್ರೋತ್ಸಾಹಿಸೊಲ್ಲ ..ಇದು ಈ ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಹೇಳಿದ್ದ ಮಾತು.ಆದರೆ ಈಗ ನಾವು ಅವರನ್ನು ಪ್ರಶ್ನಿಸ ಬೇಕಾಗಿರೋದು ಏನಂದ್ರೆ, ನೀವು ಅಧಿಕಾರ ಸಿಕ್ಕ ಉತ್ಸಾಹದಲ್ಲಿ ಹೀಗೆಂದು ಹೇಳಿಕೆ ಕೊಟ್ಟಿದ್ರೋ ಅಥವಾ ಬಾಯ್ತಪ್ಪಿನಿಂದ ಅಂದ್ರೆ ಸ್ಲಿಪ್‌ ಆಫ್‌ ಟಂಗೋ ಗೊತ್ತಾಗ್ತಿಲ್ಲ..ಏಕಂದ್ರೆ ವಾಸ್ತವದಲ್ಲಿ ನೀವಂದ ಮಾತು ಈಡೇರಲೂ ಸಾ‍ಧ್ಯವಿಲ್ಲ ಎನ್ನುವ ಸತ್ಯ ನಿಮಗೇ ಗೊತ್ತು..ಅದಕ್ಕೆ ಅವಕಾಶವನ್ನು ಅಧಿಕಾರದಲ್ಲಿರೋರೇ ಮಾಡಿಕೊಡಲ್ಲ ಎನ್ನುವ ಸತ್ಯವೂ ನಿಮ್ಗೆ ತಿಳಿದಿದೆ.ಹೀಗಿರುವಾಗ ನೀವು ಹೇಳಿದ ಮಾತು … Read more

ಕಿದ್ವಾಯಿ ಆಡಳಿತಕ್ಕೇ ಕ್ಯಾನ್ಸರ್..!? ಕಿದ್ವಾಯಿಯಲ್ಲಿ ಕೆಎಎಸ್ ಗಳಿಗೇಕೆ ಅಲ್ಪಾಯುಷ್ಯ..!

ಅಧಿಕಾರ ನೀಡೋದು ಸರ್ಕಾರನೇ..ಮೊಟಕುಗೊಳಿಸಿರೋದು ಸರ್ಕಾರನೇ.? ಬೆಂಗಳೂರು: ಸರ್ಕಾರದ ಪ್ರತಿಷ್ಟಿತ ಆರೋಗ್ಯ ಸಂಸ್ಥೆಗಳಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಕೂಡ ಒಂದು.ಕ್ಯಾನ್ಸರ್‌ ವಿಷಯಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದಿರುವ ಕ್ಯಾನ್ಸರ್‌ ಪೀಡಿತರಿಗೆ ಚಿಕಿತ್ಸೆ-ಉಪಚಾರಕ್ಕೆ ಇರೋ ಏಕೈಕ ಆಸರೆ ಹಾಗೂ ಆಶಾಕಿರಣ ಎಂದರೆ ಅದು ಕಿದ್ವಾಯಿ ಮಾತ್ರ. ಆದರೆ ಇಲ್ಲಿನ ವ್ಯವಸ್ಥೆ ಸರಿಯಾಗಿದೆಯಾ..? ಸರ್ಕಾರ ಯಾವ ಉದ್ದೇಶಕ್ಕಾಗಿ ಈ ಆಸ್ಪತ್ರೆಯನ್ನು ಪ್ರಾರಂಭಿಸಿತೋ ಆ ಉದ್ದೇಶ ಈಡೇರುತ್ತಿದೆಯಾ.? ಸರ್ಕಾರದ ಸೌಲಭ್ಯಗಳು ಕ್ಯಾನ್ಸರ್‌ ಪೀಡಿತರಿಗೆ ಸಿಗುತ್ತಿದೆಯಾ ಎಂದುನೋಡಿದ್ರೆ ಸಿಗೋ ಉತ್ತರ ಶೂನ್ಯ ಅಂತೆ..ಯಾಕಂದ್ರೆ ಒಳ್ಳೆಯ ಕಾರಣಕ್ಕೆ … Read more

EXCLUSIVE..”ಸೈಲೆಂಟ್” ಸುನೀಲ,”ರವಿಶಂಕರ್” ಗುರೂಜಿ ಭೇಟಿ ಮಾಡಿದ್ದೇಕೆ…ಆಶೀರ್ವಾದ ಪಡೆದಿದ್ದೇಕೆ…ಇಲ್ಲಿದೆ ಆ ಸೀಕ್ರೇಟ್..

ಶೀಘ್ರವೇ ರಾಜಕೀಯಕ್ಕೆ ಅಧೀಕೃತ ಎಂಟ್ರಿ…..ಜಿಬಿಎ ಎಲೆಕ್ಷನ್‌ ನಲ್ಲಿ ಸ್ಪರ್ದೆ ಖಚಿತ…..ಅಡಚಣೆ ಎದುರಾಗದಿರುವಂತೆ ಹರಿಸಿ ಆಶೀರ್ವದಿಸಿ ಎಂದು ಮನವಿ.. ಸೈಲೆಂಟ್‌ ಸುನೀಲ ಮತ್ತೆ ಸುದ್ದಿಯಲ್ಲಿದ್ದಾನೆ. ಬೆಂಗಳೂರು ಪಾತಕ ಜಗತ್ತು ಕಂಡ ಅತ್ಯಂತ ನಟೋರಿಯಸ್ ಹೆಸರು ಸುನೀಲನದು.ಯಾವ ವ್ಯಕ್ತಿಯ ಹೆಸರು ಕೇಳಿದ್ರೆ ಒಂದು ಕ್ಷಣ ಅಲರ್ಟ್‌ ಆಗ್ತಿತ್ತೋ ಅದೇ ಹೆಸರು ಇವತ್ತು ಮತ್ತೊಂದು ಮಗ್ಗಲು ಬದಲಿಸಲಿಕ್ಕೆ ಯತ್ನಿಸುತ್ತಿದೆ. ಈ ಕಾರಣಕ್ಕೆ ಸೈಲೆಂಟ್‌ ಸುನೀಲ ಮತ್ತೆ ಸುದ್ದಿಯಲ್ಲಿದ್ದಾನೆ. ಒಂದಷ್ಟು ಅವಧಿಯಿಂದ ಯಾವುದೇ ಆಕ್ಟಿವಿಟಿಸ್‌ ಇಲ್ಲದೆ  ಸೈಲೆಂಟ್‌ ಆಗಿದ್ದ ಸುನೀಲ ಸುದ್ದಿಯಾಗೊಕ್ಕೆ ಕಾರಣವೇ … Read more

Vat Guarantee: ಡೀಸೆಲ್ ಬೆಲೆ ಏರಿಕೆ ರಾಜ್ಯಕ್ಕೆ ಜಾಕ್‌ಪಾಟ್ ಆಗಿದ್ದರೂ, ಬಸ್ ಪ್ರಯಾಣ ದರ ಏರಿಕೆ ಗ್ಯಾರಂಟಿ! ಇಲ್ಲಿದೆ ಕಾರಣಗಳು

Due to Diesel Price Hike bus fare increase is imminent its a vat guarantee by karnataka government

Fuel price surge windfall for Karnataka Government: ಇಂಧನ ಬೆಲೆ ಏರಿಕೆ – ಇದು ರಾಜ್ಯ ಸರ್ಕಾರಕ್ಕೆ ಜಾಕ್‌ಪಾಟ್ ಆದರೆ ಬಸ್ ಪ್ರಯಾಣಿಕರಿಗೆ ದರ ಏರಿಕೆ ಶಾಕ್! ಡೀಸೆಲ್ ಬೆಲೆ 7, 8 ರೂ ಏರಿಕೆಯಿಂದ ರಾಜ್ಯಕ್ಕೆ 4,000 ಕೋಟಿ ರೂ VAT ಆದಾಯ. ಆದರೆ KSRTC, BMTC ಮೇಲೆ 480 ಕೋಟಿ ರೂ ಹೊರೆ. ಬಸ್ ದರ ಏರಿಕೆ ಯಾಕೆ ಗ್ಯಾರಂಟಿ? ಇಲ್ಲಿದೆ 5 ಕಾರಣಗಳು.

ಎಲ್ಲಿಯ “ವಿಜಯ್”…! ಎಲ್ಲಿಯ “ಉಪೇಂದ್ರ”..! ಇಬ್ಬರ  ಹೋಲಿಕೆ ಸರಿನಾ..?

ಪಕ್ಷ ಕಟ್ಟಿದ ದಿನದಿಂದಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದ ವಿಜಯ್‌ ಜತೆ, ಮನೆಯಲ್ಲೇ ಕೂತು ಬದಲಾವಣೆ ಬಗ್ಗೆ ಕಂಠಶೋಷಣೆ ಮಾಡಿಕೊಳ್ಳುವ  ಉಪೇಂದ್ರ ಹೋಲಿಕೆ ಸರಿನಾ..! ತಮಿಳ್ನಾಡು(tamilnadu) ರಾಜಕೀಯದಲ್ಲಿ ಬಹುದೊಡ್ಡ ಕ್ರಾಂತಿ ನಡೆದು ಸಿನೆಮಾ ನಟ(cinema star) ವಿಜಯ್‌ (vijay)  ಸಿಎಂ ಆಗುತ್ತಿದ್ದಂತೆ ನಮ್ಮ ಕರ್ನಾಟಕದಲ್ಲಿ  ಮಾದ್ಯಮಗಳಿಗೆ (karnataka medais)ಅದ್ಹೇಕೆ, ರಿಯಲ್‌ ಸ್ಟಾರ್‌ ಹಾಗೂ ಬುದ್ದಿವಂತ ನಟ ಉಪೇಂದ್ರ (real star upendra) ಅವರ ಬೆನ್ನು ಹತ್ತಿ ಕಾಡುವ ಕೆಟ್ಟ ಛಟ-ಚಾಳಿ ಮೈ ಗಂಟಿದೆಯೋ ಗೊತ್ತಾಗ್ತಿಲ್ಲ … Read more

ಯುವ ಕಾಂಗ್ರೆಸ್ ಮುಖಂಡೆ “ದೀಪಿಕಾ ರೆಡ್ಡಿ” ವಿರುದ್ಧದ “ಮಂಜುನಾಥ ಗೌಡ” ಅವರ ಶಿಸ್ತು ಕ್ರಮ ರಾಜಕೀಯ ಕಾರಣವೋ? ವೈಯುಕ್ತಿಕ ಹಿತಾಸಕ್ತಿನೋ..?1

ಬೆಂಗಳೂರು:ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಭಿನ್ನಮತ-ಗುಂಪುಗಾರಿಕೆ ಹೈಕಮಾಂಡ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವ ಸನ್ನಿವೇಶದಲ್ಲಿ ಯುವ ಕಾಂಗ್ರೆಸ್ ನಲ್ಲಿನ ಕಚ್ಚಾಟ ಬೀದಿಗೆ ಬಿದ್ದಿದೆ.ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಕೆ ಶಿವಕುಮಾರ್ ಬಲಗೈ ಭಂಟ ಎಂದೇ ಕರೆಯಿಸಿಕೊಳ್ಳುವ ಎಚ್.ಎಸ್ ಮಂಜುನಾಥ್ ಗೌಡ ಪಕ್ಷ ತನಗೆ ಕೊಟ್ಟಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಪಾದನೆಗೆ ಗುರಿಯಾಗಿದ್ದಾರೆ.ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದ ಮಟ್ಟದಲ್ಲಿ ಲಕ್ಷಾಂತರ ಮತ ಪಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಒಬ್ಬರಾದ ದೀಪಿಕಾ ರೆಡ್ಡಿ ವಿರುದ್ಧ ಹರಿಹಾಯ್ದು ಇಕ್ಕಟ್ಟಿಗೆ ಸಿಲುಕುವ ಪರಿಸ್ತಿತಿ … Read more

TVK ವಿಜಯ್‌ರ ಗೆಲುವಿನ ಸೂತ್ರ: ತಮಿಳುನಾಡಿನಲ್ಲಿ ಜನಮೆಚ್ಚುಗೆ ಪಡೆದ ಮೆಗಾ ಭರವಸೆಗಳು!

TVK ವಿಜಯ್‌ರ ಗೆಲುವಿನ ಸೂತ್ರ: ತಮಿಳುನಾಡಿನಲ್ಲಿ ಜನಮೆಚ್ಚುಗೆ ಪಡೆದ ಮೆಗಾ ಭರವಸೆಗಳು!

2026ರ ತಮಿಳುನಾಡು ಅಸೆಂಬ್ಲಿ ಚುನಾವಣೆಗಳ ಕುರಿತು ಈಗಲೇ ಒಂದು ದೊಡ್ಡ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ‘ಇಳಯ ದಳಪತಿ’ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ. ಇವರು ಘೋಷಿಸಿದ ಕೆಲವು ಮೆಗಾ ಪ್ರಾಮಿಸಸ್‌ಗಳು ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ಸಾಮಾನ್ಯ ಜನರಲ್ಲೂ ಕುತೂಹಲ ಮೂಡಿಸಿವೆ. ಟಿವಿ ರಾಜಕೀಯ ಭರವಸೆಗಳಿಗಿಂತ ಹೆಚ್ಚಾಗಿ, ಸಮಾಜದ ವಿವಿಧ ಸ್ತರಗಳಿಗೆ ಪ್ರಯೋಜನವಾಗುವ ಯೋಜನೆಗಳನ್ನು ರೂಪಿಸಿದ್ದಾರೆ. ಹಾಗಾದರೆ, ವಿಜಯ್ ಅವರ ಈ ಪ್ರಾಮಿಸಸ್‌ಗಳು ಯಾವುವು, ಮತ್ತು ಅವುಗಳು ಹೇಗೆ ಜನಮನ ಗೆಲ್ಲುತ್ತಿವೆ … Read more

ನಾಳೆ ಪತ್ರಕರ್ತ ಪುಟ್ಟಪ್ಪ ಸಾರಥ್ಯದ “ಪೊಲಿಟಿಕಲ್-360” ಲಾಂಚ್

ಮೈಸೂರಿನ ಪತ್ರಕರ್ತ ಮಿತ್ರ ಪುಟ್ಟಪ್ಪ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.ಮೊದಲು ಆತನಿಗೊಂದು ಆಲ್ ದಿ ಬೆಸ್ಟ್…ಅಂದ್ಹಾಗೆ ಪೊಲಿಟಿಕಲ್ 360 ಎನ್ನುವ ಡಿಜಿಟಲ್ ಫ್ಲಾಟ್ ಫಾರ್ಮ್ ನ್ನೇ ಚಾನೆಲ್ ಮಾಡ್ಲಿಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ವಿರೋಧ-ವಿವಾದ ಎಲ್ಲವನ್ನು ಮೈಮೇಲೆ ಎಳೆದುಕೊಂಡು, ಬೈಗುಳ-ಹಿಡಿಶಾಪ ಪಡೆದುಕೊಂಡು ಕೆಲಕಾಲ ಅಜ್ನಾತವಾಸಕ್ಕೆ ತೆರಳಿದ್ದ ಪುಟ್ಟಪ್ಪ ಅದು ಕಲಿಸಿಕೊಟ್ಟ ಜೀವನಾನುಭವದಿಂದ ಸಾಕಷ್ಟು ಮಾಗಿ ಇದೀಗ ಮೈ ಕೊಡವಿ ಎದ್ದುನಿಂತಿದ್ದಾನೆ.ಈ ಬಾರಿ ಗೆಲ್ಲಲೇಬೇಕೆನ್ನುವ ಮಹತ್ವಾಕಾಂಕ್ಷೆ-ಛಲ-ಆತ್ಮವಿಶ್ವಾಸ-ಉಮೇದು-ಇರಾದೆ-ಕನಸು ಎಲ್ಲವನ್ನು ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.ಅದು ನಾಳೆಯೇ( 08-05-2026) ಉಡ್ಡಯನಗೊಳ್ಳಲಿದೆ..ಅಂದ್ಹಾಗೆ ಆತನ … Read more

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

karnataka government financial crisis

ರಾಜ್ಯದ 32 ಇಲಾಖೆಗಳ 420 ಕಟ್ಟಡಗಳು ಅನುದಾನವಿಲ್ಲದೆ ಅರ್ಧಕ್ಕೆ ನಿಂತಿವೆ. ಗ್ಯಾರಂಟಿ ಹೊರೆಯಿಂದ ಅಭಿವೃದ್ಧಿ ಕಾಮಗಾರಿಗಳು ಶೂನ್ಯವಾಗುತ್ತಿವೆಯೇ? ಇಲ್ಲಿದೆ ಸಂಪೂರ್ಣ ವಿವರ.