advertise here

Search

ಬದಲಾಯ್ತಾ “ಪ್ರಜಾ ಟಿವಿ” ಕನ್ನಡ ಆಡಳಿತ..!? ಮಾದ್ಯಮ ಉದ್ಯಮಿ “ವಿಜಯತಾತಾ” ತೆಕ್ಕೆಗೆ ಜಾರಿತಾ..?

ಬೆಂಗಳೂರು:ಇದು ಕನ್ನಡ ಮಾದ್ಯಮ ಲೋಕದಲ್ಲಿ ನಡೆದಿರುವ ಮತ್ತೊಂದು ಬೆಳವಣಿಗೆ.ಕನ್ನಡ ಸುದ್ದಿ ವಾಹಿನಿಗಳ ಪೈಕಿ ಅನೇಕ ವರ್ಷಗಳಿಂದ  ಮುಂಚೂಣಿಯಲ್ಲಿದ್ದ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಒಂದಾದ ಪ್ರಜಾ ಟಿವಿ ಕನ್ನಡದ ಮಾಲಿಕತ್ವ ಬದಲಾಗಿರುವ ಸುದ್ದಿ ಹೊರಬಿದ್ದಿದೆ.ಪ್ರಸ್ತುತ ಮಾಲೀಕತ್ವದಿಂದ ಬೇರೊಬ್ಬರ ತೆಕ್ಕೆಗೆ ಮಗ್ಗಲು ಬದಲಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹೊಸ ಮಾಲೀಕತ್ವದಲ್ಲಿ ಪ್ರಜಾ ಟಿವಿ ಹೊಸ ರೂಪ-ಹೊಸ ವಿನ್ಯಾಸದಲ್ಲಿ ಹೊರಹೊಮ್ಮಲಿದೆ ಎನ್ನುವ ಮಾತು ಸಿಕ್ಕಾಪಟ್ಡೆ ಸುದ್ದಿ ಮಾಡುತ್ತಿದೆ. ಸರಿಸುಮಾರು ಒಂದು ದಶಕಕ್ಕಿಂತಲೂ ಹೆಚ್ಚಿನ  ಸಮಯದಿಂದಲೂ ಸುದ್ದಿ ಪ್ರಸಾರದಲ್ಲಿ ಮಂಚೂಣಿಯಲ್ಲಿತ್ತು ಪ್ರಜಾ ಟಿವಿ.ಸುದ್ದಿ … Read more

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಶುರುವಾಯ್ತಾ ನಿರಂಜನ್ ದರ್ಬಾರ್..!

ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಧ್ಯಕ್ಷರಾಗುತ್ತಿದ್ದಂತೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದವರಂತೆ ತಮ್ಮ ಅತ್ಯಾಪ್ತ ನಿವೃತ್ತಿ ಅಧಿಕಾರಿಗೆ ಆಯಕಟ್ಟಿನ ಹುದ್ದೆ ದಯಪಾಲಿಸಿದ ಅಧ್ಯಕ್ಷ ನರೇಂದ್ರಸ್ವಾಮಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವುದು ತಿಳಿದೇ ಇದೆ.ಯಾವ ರೀತಿ ನಿಯಮಗಳನ್ನು ಅಧ್ಯಕ್ಷರು ಗಾಳಿಗೆ ತೂರಿದ್ದಾರೆ ಎನ್ನುವುದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು ಕೂಡ. ಮಾಡಿರೋ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರಾ ಎಂದು ಕಾದರೂ ಯಾವುದು ಬದಲಾದಂಗೆ ಕಾಣುತ್ತಿಲ್ಲ.ಅಧ್ಯಕ್ಷರ ತಾಂತ್ರಿಕ ಸಲಹೆಗಾರ ಡಾ.ನಿರಂಜನ್ ಅವರು ಮಂಡಳಿಯಲ್ಲಿ ಅಂದಾದರ್ಬಾರ್ ಶುರುಮಾಡಿದ್ದಾರೆನ್ನುವ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ … Read more

ಕಾನೂನು ವಿವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರು ಅರೆಸ್ಟ್..

ಬೆಂಗಳೂರು/ಹುಬ್ಬಳ್ಳಿ: ಪರೀಕ್ಷೆಗೂ ಮೊದಲೇ ಕಾನೂನು ವಿವಿಯ ಪ್ರಶ್ನೆ‌ಪತ್ರಿಕೆ ಸೋರಿಕೆ ಕೇಸ್ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಜನವರಿ 23 ರಂದು ನಡೆದ ಕರ್ನಾಟಕ‌ ರಾಜ್ಯ ಕಾನೂನು‌ ವಿಶ್ವವಿದ್ಯಾಲಯದ ಪ್ರಶ್ನೆ‌ಪತ್ರಿಕೆ ಸೋರಿಕೆ ಮಾಡಲಾಗಿದ್ದ ಪ್ರಕರಣ ಸಂಬಂಧ ಜಗದೀಶ್, ವರುಣ್ ಕುಮಾರ್ ಹಾಗು ಡಾ.ನಾಗರಾಜ್ ಎನ್ನುವವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಆನೇಕಲ್ , ಚಿಂತಾಮಣಿ ಮತ್ತು ಕೋಲಾರ ಮೂಲದವರು ಎನ್ನಲಾಗಿದೆ… ಪರೀಕ್ಷೆಗೂ ಮೊದಲೇ ವಾಟ್ಸಾಫ್ ನಲ್ಲಿ ಪ್ರಶ್ನೆ‌ಪತ್ರಿಕೆ ಹರಿದಾಡಿತ್ತೆನ್ನಲಾಗಿದ್ದು ಟೆಲಿಗ್ರಾಂ ಗ್ರೂಪ್ … Read more

“ಡಾಲಿ” ಧನಂಜಯ್ ಮದುವೆಯಲ್ಲಿ ಅಂಡರ್ ವರ್ಲ್ಡ್ ಡಾನ್ “ಸೈಲೆಂಟ್ ಸುನೀಲ” ಪ್ರತ್ಯಕ್ಷ

ಬೆಂಗಳೂರು: ಸೈಲೆಂಟ್ ಆಗಿದ್ದ ಸುನೀಲ ಮತ್ತೆ ಪ್ರತ್ಯಕ್ಷನಾಗಿದ್ದಾನೆ.. ನೇಪಥ್ಯಕ್ಕೆ ಸರಿದೇ ಹೋದನೆಂದುಕೊಂಡಿದ್ದ ಆತ ಮುನ್ನಲೆಗೆ ಬಂದಿದ್ದೇನೆ. ಅಂದ್ಹಾಗೆ ಆತ ದಿಢೀರ್ ಪ್ರತ್ಯಕ್ಷನಾಗಿ ಅಚ್ಚರಿ ಮೂಡಿಸಿದ್ದು, ಜತೆಗೆ ಗಾಬರಿ ಸೃಷ್ಟಿಗೂ ಕಾರಣವಾಗಿದ್ದು ಕನ್ನಡದ ಸಿನೆಮಾ ಸ್ಟಾರ್ ಡಾಲಿ ಧನಂಜಯ್ ಅವರ ಮದುವೆಯಲ್ಲಿ.. ಯಾರೂ ಎಕ್ಸ್ ಪೆಕ್ಟ್ ಮಾಡದ ಹೊತ್ತಲ್ಲಿ ಮದುವೆ ಮನೆಯಲ್ಲಿ ಪ್ರತ್ತಕ್ಷನಾದ ಸುನೀಲ ಎಲ್ಲರನ್ನೂ ತಬ್ಬಿಬ್ಬುಗೊಳಿಸಿಬಿಟ್ಟಿದ್ದು ಮಾತ್ರ ಸುಳ್ಳಲ್ಲ. ಭೂಗತ ಪಾತಕಿ, ಬೆಂಗಳೂರು ಅಂಡರ್ ವರ್ಲ್ಡ್ ನ ಡಾನ್ ಸೈಲೆಂಟ್ ಸುನೀಲ ಸುಮ್ಮನಿದ್ರು ಸುದ್ದಿನೇ..ಸ್ವಲ್ಪ ಕೊಸರಾಡಿದ್ರೂ ಸುದ್ದಿನೇ..ಕಳೆದ … Read more

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ತಾಂತ್ರಿಕ ಸಲಹೆಗಾರರ ನೇಮಕವೇ ನಿಯಮಬಾಹಿರನಾ..?!

**ಡಾ.ಪಿ ನಿರಂಜನ್ ಅವರ ನೇಮಿಸಿಕೊಳ್ಳಲಿಕ್ಕೆ ಅಧ್ಯಕ್ಷ ನರೇಂದ್ರಸ್ವಾಮಿ  ನಿಯಮಗಳನ್ನೆಲ್ಲಾ ಗಾಳಿಗೆ ತೂರಿದ್ದೇಕೆ..?! **ಮಂಡಳಿಯಲ್ಲೇ ಅರ್ಹರಿರುವಾಗ ನಿವೃತ್ತರನ್ನೇ ನೇಮಿಸಿಕೊಳ್ಳುವ ಅಗತ್ಯವೇನಿದೆ..?! **ಮಂಡಳಿ ಸಭೆಯೇ ನಡೆದಿಲ್ಲ,ಅದ್ಹೇಗೆ ಡಾ.ಪಿ ನಿರಂಜನ್ ಅವರ ನೇಮಕಕ್ಕೆ ಅಂಕಿತ ಸಿಕ್ತು..!? **ಸರ್ಕಾರದ ಗಮನಕ್ಕೆ ತಾರದೆ ನೇಮಕ ನಡೆದಿದ್ದೇಗೆ..? ಸದಸ್ಯ ಕಾರ್ಯದರ್ಶಿ ಲಿಂಗರಾಜ್ ಸುಳ್ಳು ಹೇಳುತ್ತಿದ್ದಾರಾ..?! ಬೆಂಗಳೂರು:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KARNATAKA POLLUTION CONTROLE BOARD) ಗೆ ನೂತನ ಸಾರಥಿಯಾಗಿರುವ ಮಳವಳ್ಳಿ ಶಾಸಕ ಎಂ.ನರೇಂದ್ರ ಸ್ವಾಮಿ(CHAIRMAN NARENDRASWAMY) ಅವಸರವಸರವಾಗಿ ತೆಗೆದುಕೊಳ್ಳುತ್ತಿರುವ ನಿರ್ದಾರಗಳು ಅವರಿಗೇನೆ ಮುಳುವಾಗುವ ಸಾಧ್ಯತೆಗಳಿವೆ ಎನ್ನಿಸುತ್ತೆ.ಈಗಾಗಲೇ … Read more

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಹೈಕಮಾಂಡ್ ಗೆ  ಪಕ್ಷದ ಇತಿಹಾಸದಲ್ಲೇ ಹಿಂದೆಂದು ಇಷ್ಟೊಂದು ಕಷ್ಟಕರವಾಗಿರಲಿಲ್ಲವೇನೋ ಅನ್ನಿಸುತ್ತೆ.ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿಕೊಂಡಿದೆ.ಯತ್ನಾಳ್ ಬಣದ ಬೇಡಿಕೆಯಂತೆ ಬಸವರಾಜ್ ಬೊಮ್ಮಾಯಿ ಅವರನ್ನು ನೇಮಿಸಬೇಕೋ, ಬಿವೈ ವಿಜಯೇಂದ್ರ ಅವರನ್ನೇ ಮುಂದುವರೆಸಬೇಕೋ ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಲಾರಂಭಿಸಿದೆ.ಇದೆಲ್ಲದರ ನಡುವೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಎಲ್ಲವನ್ನು ಸರಿದೂಗಿಸಬಲ್ಲ ಕೆಪಾಸಿಟಿ ಇರುವ ಲೀಡರ್ಸ್ ಗಳು ಯಾರೆನ್ನುವ ಪ್ರಶ್ನೆಗೆ ಹೈಕಮಾಂಡ್ ಬಳಿ ಇರುವ ಕೆಲವೇ ಕೆಲವು ಹೆಸರುಗಳಲ್ಲಿ ಸಿ.ಟಿ ರವಿ,ಅರವಿಂದ ಬೆಲ್ಲದ್ ಮುಂಚೂಣಿಯಲ್ಲಿವೆ … Read more

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

ಬೆಂಗಳೂರು: ಇದು ಎಷ್ಟರ ಮಟ್ಟಿಗೆ ಸತ್ಯವೋ..ಸುಳ್ಳೋ ಗೊತ್ತಿಲ್ಲ.ಆದರೆ ರಾಜಕೀಯ ಪಡ ಸಾಲೆಯಲ್ಲಿ ಇಂತದ್ದೊಂದು ಮಾತು ತುಂಬಾ ಗಂಭೀರವಾಗಿ ಕೇಳಿಬರುತ್ತಿದೆ. ಬಣಜಗಳ ದಿಂದ ದಿಕ್ಕೆಟ್ಟು ಹೋಗಿರುವ ಬಿಜೆಪಿ ಪಕ್ಷವನ್ನು ಹಳಿಗೆ ತರೊಕ್ಕೆ ಪಕ್ಷದಲ್ಲಿ ಸಮರ್ಥ ನಾಯಕರೇ ಇಲ್ಲ ಎನ್ನುವ ಪರಿಸ್ತಿತಿ ನಿಜಕ್ಕೂ ಇದೆಯೇ..? ಆ ಪತ್ರಿಕಾ ದಿಗ್ಗಜರನ್ನೇ ಕರೆತಂದು ಸರಿ ಮಾಡ ಬೇಕೆನಿಸುವ ವಿಚಾರ ಏಕೆ ಬಂದಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಲಾರಂಭಿಸಿವೆ. ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಎನ್ನುವುದಕ್ಕಿಂತ ಏನೂ ಸರಿಯಿಲ್ಲ ಎನ್ನುವಂಥ ಪರಿಸ್ತಿತಿಯಿದೆ.ಬಣ ಜಗಳ ಸರಿ … Read more

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

*****ಆಯಕಟ್ಟಿನ ಹುದ್ದೆ  ಭರವಸೆ ಈಡೇರಿಸುವ ಭರಾಟೆಯಲ್ಲಿ  ನಿಯಮ ಗಾಳಿಗೆ ತೂರಿತಾ ಸಿದ್ದರಾಮಯ್ಯ ಸರ್ಕಾರ.. *****ಅಧ್ಯಕ್ಷರಾಗಲು ಬೇಕಿರುವುದು ಬಿಇ( ಪರಿಸರ ವಿಜ್ನಾನ)-ನರೇಂದ್ರಸ್ವಾಮಿ ಓದಿರುವುದು ಬಿ.ಇ( ಸಿವಿಲ್) ಅಂತೆ.. ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಾದಿಯ ವಾಸ್ತುವೇ ಸರಿ ಇಲ್ಲ ಎನಿಸುತ್ತದೆ.ಯಾರೇ ಹೊಸದಾಗಿ ಅಧ್ಯಕ್ಷರಾಗಿ ಬಂದರೂ ಅವರ ಸುತ್ತ ವಿವಾದ ಸುತ್ತಿಕೊಳ್ಳುತ್ತಲೇ ಇರುತ್ತದೆ.ಹೊಸ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ಶಾಸಕ ಎಂ.ನರೇಂದ್ರಸ್ವಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಎದುರಾಗಿರುವ ಗೊಂದದ  ಹಿನ್ನಲೆಯಲ್ಲಿ ಇಂತದ್ದೊಂದು ಪ್ರಶ್ನೆ ಕಾಡುವುದು ಸಹಜ..ಆದರೆ ಇದು … Read more