advertise here

Search

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

***ಆ “ಸುನಾಮಿ- ಸುಂಟರಗಾಳಿ” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ ಸಕ್ಸೆಸ್   ಪಕ್ಕಾ  ಅಂತೆ..!?*** ***ಮುನಿಸು ಮರೆತು, ಸ್ವಪ್ರತಿಷ್ಟೆ ಬದಿಗಿಟ್ಟು ಅನಂತ ಸುಬ್ಬರಾವ್- ಚಂದ್ರಶೇಖರ್ ಒಂದಾದ್ರೆ ಗೆಲುವು ಗ್ಯಾರಂಟಿ ಅಂತೆ..!***  ***ಮುಷ್ಕರದ  ಯಶಸ್ಸು-ವೈಫಲ್ಯ ಅವಲಂಭಿಸಿರೋದೇ ಸಾರಿಗೆ “ಕೂಟ-ಜಂಟಿಕ್ರಿಯಾಸಮಿತಿ” ಮೇಲೆ ಒಂದಾದ್ರಂತೆ..!***   ಬೆಂಗಳೂರು:ತಮ್ಮ ನ್ಯಾಯಯುತ ಬೇಡಿಕೆ ಹಾಗೂ ಹಕ್ಕೊತ್ತಾಯಕ್ಕಾಗಿ ಆಗಸ್ಟ್ 5 ರಿಂದ ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಅನಿವಾರ್ಯವಾಗಿ ಬಾಧಿತಗೊಳಿ ಸುವಂತ ನಿರ್ದಾರಕ್ಕೆ ಬಂದಿದ್ದಾರೆ ಸಾರಿಗೆ ಸಿಬ್ಬಂದಿ.ಇದರ ಝಲಕ್ ಎನ್ನುವಂತೆ ನಿನ್ನೆ ಅಂದರೆ ಬುಧವಾರ( 30-07-2025) … Read more

ವಿಕ್ಟೋರಿಯಾ ಆಸ್ಪತ್ರೆ (VICTORIA HOSPITAL CAMPUS) ಕ್ಯಾಂಪಸ್ ನಲ್ಲಿ “ಮೊಬೈಲ್”  ನಾಟ್ ರೀಚಬಲ್(MOBILE NETWORK PROBLEM)..?!

ಮೊಬೈಲ್ ನೆಟ್ವರ್ಕ್ ಗೆ ಪರದಾಡುತ್ತಿರುವ ರೋಗಿ ಸಂಬಂಧಿಗಳು-ಇಷ್ಟು ದೊಡ್ಡ ಆಸ್ಪತ್ರೆ ಕ್ಯಾಂಪಸ್ ನಲ್ಲಿ ಮೊಬೈಲ್ ಟವರ್ ಇಲ್ಲ ಎನ್ನಲಾಗುತ್ತಿರುವುದೇ ದುರಾದೃಷ್ಟಕರ. ಬೆಂಗಳೂರು: ಹೇಳಿಕೊಳ್ಳೊಕ್ಕೆ ದೊಡ್ಡ ಹಾಗೂ ಪ್ರತಿಷ್ಟಿತ ಸರ್ಕಾರಿ ಆಸ್ಪತ್ರೆ..ಆದರೆ ರೋಗಿಗಳಿಗೆ ಏನಾದ್ರೂ ಆರೋಗ್ಯ ಸಮಸ್ಯೆಯಾದಲ್ಲಿ,ಏರುಪೇರುಗಳಾದ್ದಲ್ಲಿ ಅದನ್ನು ಸಂಬಂಧಿಗಳಿಗೆ ಸಂವಹನಿಸಲು ಪರದಾಡುವಂತ ಸ್ತಿತಿ ಇದೆ ಎಂದ್ರೆ ಅದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ..ಇದನ್ನು ಕೇಳಿದ್ರೆ ನಿಮ್ಗೆ ಆಶ್ವರ್ಯ ಆಗಬಹುದು..ಹಾಗೆಯೇ ಹೌದಾ..! ಎಂದು ಉಬ್ಬೇರಿಸಿ ಕೇಳಬಹುದು..ಆದ್ರೆ ಇದು ಸತ್ಯ… ಸತ್ಯ..ವಿಕ್ಟೋರಿಯಾ ಕ್ಯಾಂಪಸ್ ನಲ್ಲಿರುವ ಆರೋಗ್ಯ ಕೇಂದ್ರಗಳ ಒಳಗೆ ಮೊಬೈಲ್ ನೆಟ್ವರ್ಕ್ ಗೆ … Read more

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

ಬೆಂಗಳೂರು: ಇದು ಕನ್ನಡ ಫ್ಲ್ಯಾಶ್ ನ್ಯೂಸ್ ವರದಿಯ ಫಲಶ್ರತಿ.. ಕೆಎಸ್ ಆರ್ ಟಿಸಿಯ ನಿಕಟಪೂರ್ವ ಎಂಡಿ ಅನ್ಬುಕುಮಾರ್ ಅವರ ಸಹಿಯನ್ನು ನಕಲು ಮಾಡಿ ಸಾರಿಗೆ ಸಿಬ್ಬಂದಿಯೋರ್ವರಿಗೆ 1,35,000 ರೂ ವಂಚಿಸಿದ್ದ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯ ಸಿಬ್ಬಂದಿ ರಿಚರ್ಡ್ ಎಂಬಾತನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇಲಾಖೆಯಿಂದ ಕೆಲಸ ಕಳೆದುಕೊಂಡು 7 ವರ್ಷ ವಾಗಿದ್ದ ಶಿವಮೊಗ್ಗ ವಿಭಾಗದ ಸಾಗರ ಡಿಪೋದ ನಾಗರಾಜ್ ಕುಗ್ವೆ ಎನ್ನುವವರಿಗೆ ಮರುನಿಯೋಜನೆ ಮಾಡಿಸಿಕೊಡುತ್ತೇನೆ.ಎಂಡಿ ಅನ್ಬುಕುಮಾರ್ ನನಗೆ ತುಂಬಾ ಕ್ಲೋಸ್..ಅವರಿಂದ ಹೇಳಿಸಿ ಕೆಲಸ ಮಾಡಿಸಿಕೊಡುತ್ತೇನೆ … Read more

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

ಬೆಂಗಳೂರು:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ವಲ್ಪ ಎಚ್ಚರತಪ್ಪಿದ್ರೂ ಬಹುಷಃ ಅವರನ್ನೇ ಯಾಮಾರಿಸಬಹುದು ಎನ್ನಿಸುತ್ತೆ ಅವರು ಪ್ರತಿನಿಧಿಸುವ ಸಾರಿಗೆ ಇಲಾಖೆಯ ಕೆಲ ಖದೀಮ-ಕಳ್ಳರು.ಈ ಮಾತನ್ನು ಹೇಳೊಕ್ಕೆ ಕಾರಣವೂ ಇದೆ.. ಬಿಎಂಟಿಸಿ ಎಂಡಿ ಆಗಿದ್ದ ಸತ್ಯವತಿ ಅವರ ವಿಷಯದಲ್ಲಿ ಯಾವ ಯಡವಟ್ಟು ನಡೆದಿತ್ತೋ ಅದೇ ಯಟವಟ್ಟು ಮೊನ್ನೆ ಮೊನ್ನೆಯವರೆಗೂ ಕೆಎಸ್ ಆರ್ ಟಿಸಿಯಲ್ಲಿ ಎಂಡಿ ಆಗಿ ಹಾಲಿ ಚುನಾವಣಾ ಆಯೋಗದಲ್ಲಿ ಆಯುಕ್ತರಾಗಿರುವ ಅನ್ಬುಕುಮಾರ್ ಅವರ ವಿಚಾರದಲ್ಲಿಯು ನಡೆದೋಗಿದೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ.ಇದರ ಇನ್ ಡೀಟೈಲ್ ಸ್ಟೊರಿಯನ್ನು ದಾಖಲೆ ಸಮೇತ ಹೊತ್ತು ತಂದಿದೆ … Read more

“ಸೆಂಚುರಿ ಕ್ಲಬ್ ಇನ್ಮುಂದೆ ಸಾರ್ವಜನಿಕ ಪ್ರಾಧಿಕಾರ” ಹೈ ಕೋರ್ಟ್ ಘೋಷಣೆ

ಬೆಂಗಳೂರು: ಬೆಂಗಳೂರಿನ ಕಬ್ಬನ್ ಪಾರ್ಕ್ ಉದ್ಯಾನದೊಳಗೆ ಇರುವ ಶತಮಾನೋತ್ಸವ ಕ್ಲಬ್ ಅಥವಾ century clu ಅನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿದೆ.ಕ್ಲಬ್ ನೊಳಗೆ ನಡೆಯುತ್ತಿದ್ದ ವ್ಯವಹಾರ-ಆರ್ಥಿಕ ವಹಿವಾಟು ಸೇರಿದಂತೆ ಆಡಳಿತ ಮಂಡಳಿಯೊಳಗೇ ಇತ್ಯರ್ಥವಾಗುತ್ತಿದ್ದ ಸಾಕಷ್ಟು ಗೌಪ್ಯ ಮಾಹಿತಿಗಳು ಇನ್ಮುಂದೆ ಸಾರ್ವಜನಿಕವಾಗಿ ಲಭ್ಯವಾಗಲಿವೆ.ಕ್ಲಬ್ ಆಡಳಿತ ಮಂಡಳಿ ಕೂಡ ಯಾವುದೇ ಮಾಹಿತಿಯನ್ನು ನಿರಾಕರಿಸುವಂತಿಲ್ಲ. ಸೆಂಚುರಿ ಕ್ಲಬ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಜುಲೈ 8 ರಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅಧ್ಯಕ್ಷತೆಯ ಪೀಠವು,ತನ್ನ ಮಹತ್ವದ ತೀರ್ಪಿನಲ್ಲಿ, ಕರ್ನಾಟಕ ಮಾಹಿತಿ ಆಯೋಗದ … Read more

“ಅಧಿಕಾರಿ”ಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ “ಇವ್ರು” ಬಸ್ ಓಡಿಸೊಲ್ಲವಂತೆ!

****ಸಾರಿಗೆ ಮುಷ್ಕರದ ನಿರ್ದಾರಕ್ಕೆ ಹೊಸ ಟ್ವಿಸ್ಟ್: ಅಧಿಕಾರಿಗಳಿಗೆ ಸವಾಲೆಸೆದ ಸಾರಿಗೆ ಸಿಬ್ಬಂದಿ ****ಸಾರಿಗೆ ಸಿಬ್ಬಂದಿ ಜತೆ ಅಧಿಕಾರಿ ವರ್ಗ ಕೈ ಜೋಡಿಸಿದ್ರೆ ಇತಿಹಾಸ ನಿರ್ಮಾಣ ಪಕ್ಕಾ ****ಪ್ರತಿ ಮುಷ್ಕರಕ್ಕು ಪ್ರಚೋದನೆ ಕೊಟ್ಟು, ಒಳಗೆ ಕುಳಿತುಕೊಳ್ಳುವ ಅಧಿಕಾರಿ ವರ್ಗಕ್ಕೆ ಸಿಬ್ಬಂದಿ ಠಕ್ಕರ್ ****ಒಳ್ಳೇದಾದ್ರೆ ಇಬ್ಬರಿಗೂ ಆಗಲಿ..ಕೆಟ್ಟದಾದ್ರೂ ಇಬ್ಬರಿಗೂ ಆಗಲಿ..ಪ್ರತಿಫಲ ನಿಮ್ಗೆ-ಶಿಕ್ಷೆ ಭಾಗ್ಯ ನಮಗೆ ಮಾತ್ರ ಏಕೆ..? ಬೆಂಗಳೂರು:ಪ್ರತಿ ಬಾರಿ  ಮುಷ್ಕರ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಳ್ಳೋದು ನಾವು..ಸೇಫ್ ಆಗೋದು ಅಧಿಕಾರಿಗಳಾ..? ಇದ್ಯಾವ ಸೀಮೆಯ ನ್ಯಾಯ.ಇನ್ಮುಂದೆ ಹಾಗೆ ನಡೆಯೊಕ್ಕೆ ನಾವು ಬಿಡೊಲ್ಲ..ನಮಗೆ … Read more

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!

ಮಿನಿಸ್ಟರ್ಸ್ ಪ್ರಿಯಾಂಕ್ ಖರ್ಗೆ-ಮಧು ಬಂಗಾರಪ್ಪ ಹೆಸ್ರಲ್ಲೇ “ಅಬೇಧ್ಯ ಕೋಟೆ” ನಿರ್ಮಿಸಿಕೊಂಡಿದ್ದಾರಾ.. ಮನೋಹರ್ ಕೊಳ್ಳಾ..!? ಬೆಂಗಳೂರು: ಮಾತೆತ್ತಿದ್ರೆ ನನಗೆ ಅವ್ರು ಗೊತ್ತು..ಇವ್ರು ಗೊತ್ತು… ಪ್ರಿಯಾಂಕ ಖರ್ಗೆ ನನ್ನ ಗಾಡ್ ಫಾದರ್..ಮಿನಿಸ್ಟರ್ ಮಧು ಬಂಗಾರಪ್ಪ ನನ್ ಜೇಬಲ್ಲಿದ್ದಾರೆ.,ಎಂದೆಲ್ಲಾ ಬಿಲ್ಡಪ್ ಕೊಟ್ಟಿಕೊಂಡು ಅಡ್ಡಾಡುತ್ತಿರುವ ಆಪಾದನೆ ಪದವಿಪೂರ್ವ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಮನೋಹರ್ ಕೊಳ್ಳಾ ಅವರ ಮೇಲಿದೆ.ತಾನು ಹೇಳಿದ ಕೆಲಸವನ್ನು ಮಾಡುವ, ಝೀ ಹುಜೂರ್ ಎಂದ್ಹೇಳುವ ಬಕೆಟ್ ಗಿರಾಕಿಗಳನ್ನಷ್ಟೇ ಅಕ್ಕಪಕ್ಕ ಇಟ್ಟುಕೊಂಡಿರುವ ಬಗ್ಗೆ ಇಲಾಖೆ ತುಂಬಾ ಮಾತಿದೆ.ಇಂಥಾ ಮನೋಹರ್ ಕೊಳ್ಳಾ … Read more

“ಬಿಕ್ಲ ಶಿವು” ಮರ್ಡರ್‌-MLA ಭೈರತಿ ಬಸವರಾಜ್‌ ರಾಜಕೀಯ ಭವಿಷ್ಯ ಅತಂತ್ರ.!?

ದಿನಾಂಕ: 15-07-2025 ಸ್ಥಳ:ಕೆ.ಆರ್‌ ಪುರಂ ಸಮಯ: ರಾತ್ರಿ 08:10 ರಾಜಧಾನಿ ಬೆಂಗಳೂರಿನ ಕೆ.ಆರ್‌ ಪುರಂ ಕ್ಷೇತ್ರದ  ವ್ಯಾಪ್ತಿಯಲ್ಲಿ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲ ಶಿವು  ಎನ್ನುವ ರೌಡಿ ಶೀಟರ್‌ ಹೆಣ ಬಿದ್ದಿತ್ತು. ಸಹಜವಾಗಿ ರೌಡಿಗಳ ಹೆಣ ಬಿದ್ರೆ ಗೊತ್ತಲ್ಲ, ಹಳೇ  ರೈವಲ್ರಿ ಯಿಂದಲೇ ಅಂತದ್ದೊಂದು ಪ್ರತೀಕಾರದ ಕೊಲೆ ಆಗಿರಬಹುದೆಂದು ಮಾತನಾಡಿ ಸುಮ್ಮನಾಗ್ತೇವೆ. ಆರಂಭದಲ್ಲಿ ನಿನ್ನೆ ರಾತ್ರಿಯ ಕೇಸ್‌ ಕೂಡ ಹಾಗೆಯೇ ಎನ್ನಿಸಿತ್ತು.ಆದರೆ ಆನಂತರದಲ್ಲಿ ಹೆಣವಾದವನ ತಾಯಿ ಕೊಟ್ಟ ಕಂಪ್ಲೆಂಟ್‌ ಇದೆಯೆಲ್ಲಾ ಅದು ಇಡೀ ಪ್ರಕರಣಕ್ಕೊಂದು ಬಿಗ್‌ ಟ್ವಿಸ್ಟ್.‌ ಇಂಪಾರ್ಟೆನ್ಸ್‌ … Read more

ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಥಾನಕ್ಕೆ ಕುತ್ತು..!

ರಾಜ್ಯಪಾಲರಿಗೆ ಸಾಕ್ಷ್ಯ ಸಮೇತ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರು/ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮ(malal mahadeshwara wildlife sanctury) ದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಪ್ರದೇಶದಲ್ಲಿ ಸಂಭವಿಸಿದ್ದ ತಾಯಿ ಹುಲಿ ಮತ್ತು ಮರಿಗಳ ಅಸಹಜ ಸಾವಿನ ( mother tiger and its cubs un natural death)ಪ್ರಕರಣದ ಅದ್ಹೇಕೋ ಅರಣ್ಯ ಸಚಿವ ಈಶ್ವರ ಖಂಡ್ರೆ ( forest minister eshwar khandre)ಅವರ ಕೊರಳು ಸುತ್ತಿಕೊಳ್ಳುವ ಲಕ್ಷಣ ಗೋಚರಿಸುತ್ತಿದೆ. ದುರಂತಕ್ಕೆ … Read more

ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕ್ಯಾನ್ಸರ್..!?

ಸಾಮಾಜಿಕ ಜಾಲತಾಣಗಳಲ್ಲಿ ಸೂಲಿಬೆಲೆ ಆರೋಗ್ಯದ ಬಗ್ಗೆ ಊಹಾಪೋಹ-ಸ್ಪಷ್ಟನೆ ನೀಡದ ಸೂಲಿಬೆಲೆ ಬೆಂಗಳೂರು: ತಾತ್ವಿಕ ಭಿನ್ನಾಭಿಪ್ರಾಯ, ಸೈದ್ದಾಂತಿಕ ವೈರುದ್ಧ್ಯಗಳಾಚೆಗೆ ಕರ್ನಾಟಕ ಕಂಡ ಒಬ್ಬ  ಉತ್ತಮ ವಾಗ್ಮಿ ,ಚಿಂತಕ, ರಾಷ್ಟ್ರವಾದಿ ಹೋರಾಟಗಾರ ಎಂದೇ ಬಿಂಬಿಸಿಕೊಂಡಿರುವ  ಚಕ್ರವರ್ತಿ ಸೂಲಿಬೆಲೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ದೊಡ್ಡ ಶಾಕಿಂಗ್ ಎನ್ನುವಂತ ಸುದ್ದಿಯೊಂದು ಹರಿದಾಡುತ್ತಿದೆ. ಚಕ್ರವರ್ತಿ ಸೂಲಿಬೆಲೆ ಆರೋಗ್ಯವನ್ನು ಮಾರಕವಾದ ಮಾರಿ ಆವರಿಸಿಕೊಂಡಿದೆ ಎನ್ನಲಾಗ್ತಿದೆ.ಈ ಮಹಾಮಾರಿಯನ್ನು ಗಂಟಲು ಕ್ಯಾನ್ಸರ್ ಎನ್ನಲಾಗ್ತಿದೆ.ಸಾಮಾಜಿಕ ಕಾರ್ಯಕರ್ತ ಹಾಗೂ ಕನ್ನಡಪರ ಹೋರಾಟಗಾರರಾದ ಭೈರಪ್ಪ ಹರೀಶ್ ಕುಮಾರ್ ಎನ್ನುವವರು ಇದನ್ನು ತಮ್ಮ ಫೇಸ್ ಬುಕ್ … Read more