advertise here

Search

“ನ್ಯೂಸ್‌ 18” ಕನ್ನಡದ ಹೊಡೆತಕ್ಕೆ “ಪತರು”ಗುಟ್ಟಿದ “ಟಿವಿ-9” ಕನ್ನಡ..

–ಟಿವಿ-9 ಕನ್ನಡಕ್ಕೆ ಮುಖಭಂಗ-ಮರ್ಮಾಘಾತ-ಅಪಮಾನ; ಅಹಂ-ಅತಿಯಾದ ಆತ್ಮವಿಶ್ವಾಸ-ನಿರ್ಲಕ್ಷ್ಯ-ಸ್ವಯಂಕೃತಾಪರಾಧಕ್ಕೆ ಬೆಲೆ ತೆತ್ತಿತಾ..! –ಇದು ಟಿವಿ-9 ಕನ್ನಡದ ಅಧಃಪತನದ ಮುನ್ಸೂಚನೆಯೇ..? ಎಚ್ಚರಿಕೆಯ ಕರೆಗಂಟೆಯೇ..? –ಕೆಲವು “ಬ್ರಹಸ್ಪತಿ”ಗಳ “ಕಪಿಮು‍ಷ್ಠಿ”ಗೆ ಸಿಲುಕಿ ನಲುಗುತ್ತಿದೆಯೇ ಟಿವಿ9 ಕನ್ನಡ ಸಾಮ್ರಾಜ್ಯ..!?   –ಟಿವಿ 9 ಕನ್ನಡದ ಸೃಷ್ಟಿಕರ್ತ ಮಹೇಂದ್ರ ಮಿಶ್ರಾ ಇದ್ದಿದ್ದರೆ ಹೀಗಾಗುತ್ತಿತ್ತೇ..? ಇದು ಒಂದು ಚಾನೆಲ್‌ ಗೆ ಸಂಭ್ರಮವಾದ್ರೆ..ಇನ್ನೊಂದು ಚಾನೆಲ್‌ ಗೆ ಎಚ್ಚರಿಕೆಯ ಕರೆಗಂಟೆ ಎನ್ನಬಹುದೇನೋ..?ತನ್ನ ಮನೆ ಕೋಳಿ ಕೂಗಿ ದರೇನೆ ಬೆಳಗಾಗುವುದು ಎನ್ನುವ ಗಾಧೆ ಮಾತಿನಂತೆ ತಾನ್‌ ಏನ್‌ ಸುದ್ದಿ ಕೊಟ್ರೂ ಜನ ನೋಡ್ತಾರೆ..ನಂಬ್ತಾರೆ..ಎಂಬ … Read more

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

ಸುವರ್ಣ ನ್ಯೂಸ್(SUVARNA KANNADA NEWS CHANNEL), ಕನ್ನಡದ ಪ್ರತಿಷ್ಟಿತ ನ್ಯೂಸ್ ಚಾನೆಲ್( KANNADA NEWS CHANNELS) ಗಳಲ್ಲೊಂದು.ಆದರೆ ಎಷ್ಟೇ ಶ್ರಮ ಪಟ್ಟರೂ,ಏನೆಲ್ಲಾ ಸಾಹಸ ಮಾಡಿದ್ರೂ,..ಸುದ್ದಿ ಕ್ಷೇತ್ರದಲ್ಲಿ ಘಟಾನುಘಟಿಗಳೆನಿಸಿಕೊಳ್ಳುವ ಪತ್ರಕರ್ತರಿದ್ದರೂ ನಂಬರ್ ಒನ್ ಸ್ಥಾನ ಇಂದಿಗೂ ಅದಕ್ಕೆ  ಗಗನಕುಸುಮ. ಮಾದ್ಯಮ ಲೋಕದ ದಿಗ್ಗಜ ರಾಜೀವ್ ಚಂದ್ರಶೇಖರ್( RAJIV CHANDRASHEKAR) ಮಾಲೀಕತ್ವದ  ಏಷ್ಯಾ ನೆಟ್ (ASIANET NETWORK) ನೆಟ್ವರ್ಕ್ ಚಾನೆಲ್ ಸುಧಾರಣೆ, ಬೆಳವಣಿಗೆಗೆ ಕೋಟಿಗಳನ್ನು ಸುರಿದ್ರೂ ಟಿಆರ್ ಪಿ ( TRP-TELE RATING POINT)ವಿಷಯದಲ್ಲಿ ಟಿವಿ-9(TV9 KANNADA), ಪಬ್ಲಿಕ್ ಟಿವಿ( … Read more

“ಗಗನಯಾನಿ”ಯಾಗೋದು ಕಷ್ಟ,ಆದರೆ ಅಸಾಧ್ಯವಲ್ಲ

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಲ್ಲಿ, ನೀವು ನನ್ನ ರೀತಿ ಗಗನಯಾನಿ ಆಗಬಹುದು. ಜವಾಹರಲಾಲ್ ನೆಹರು ತಾರಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಕ್ಸಿಯಂ ಸ್ಪೇಸ್-4 ಮಿಷನ್ ರುವಾರಿ ಶುಭಾಂಶು ಶುಕ್ಲಾ ಹೇಳಿದ ಮಾತಿದು. ವಿದ್ಯಾರ್ಥಿಗಳ ಜತೆ ನಡೆಸಿದ ಸಂವಾದದಲ್ಲಿ ಅವರು ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. `ನೀವು ಸಹ ನನ್ನಂತೆಯೇ ಗಗನಯಾನಿ ಆಗಬಹುದು. ಆದರೆ, ಇದೊಂದೇ ಆಗಬೇಕೆಂದು ಕನಸು ಕಾಣಬೇಡಿ. ಏಕೆಂದರೆ, ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾನು ಹೀರೋ ರೀತಿ ನಿಮಗೆ ಕಾಣಬಹುದು. … Read more

ಫೋಕ್ಸೋ ಪ್ರಕರಣದಲ್ಲಿ ಮುರುಘಶ್ರೀ ನಿರ್ದೋಷಿ.. ಬಿಗ್‌ ರಿಲೀಫ್‌

murugashrees innocence

ಮುರುಘಾ ಮಠದ ಹೆಣ್ಣುಮಕ್ಕಳ ಹಾಸ್ಟೆಲ್ ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೆನ್ನುವ ಆರೋಪದಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀ ನಿರ್ದೋಷಿ.

“ನ್ಯೂಸ್‌” ಓದುವಾಗಲೇ “ಸುದ್ದಿಮನೆ”ಯಿಂದ ಆ “ಆಂಕರ್‌” ಹೊರನಡೆದಿದ್ದೇಕೆ ..!?

ಇದು ಸುದ್ದಿಮನೆಯೊಂದರಲ್ಲಿ ಇತ್ತೀಚೆಗೆ ನಡೆದಿರಬಹುದಾದ ವಿಚಿತ್ರ ಹಾಗೂ ಅಪರೂಪದ ಘಟನೆ.. ನ್ಯೂಸ್ ಬುಲೆಟಿನ್ ಮಾಡುವಾಗಲೇ ಆಂಕರ್ ವೊಬ್ಬ ಹೊರನಡೆದಿದ್ದಾನೆ.ಆತ ಕೆಲಸ ಮಾಡುತ್ತಿರುವ ಚಾನೆಲ್ ಹೆಚ್ಚೇನೂ ಪ್ರಚಲಿತದಲ್ಲಿಲ್ಲದ ಕಾರಣಕ್ಕೇನೋ ಅದು ದೊಡ್ಡಮಟ್ಟದ ಸುದ್ದಿಯಾಗಿಲ್ಲ.. ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ನಡೆದಿದ್ದೇನು ಎನ್ನುವುದನ್ನು ವಿವರಿಸಿದ್ದಾನೆ. ಹಾಗೆಯೇ ತನ್ನ ನಿಲುವು- ನಿರ್ದಾರವನ್ನು ಗಟ್ಟಿದ್ವನಿಯಲ್ಲಿ ಸಮರ್ಥಿಸಿಕೊಂಡಿದ್ದಾನೆ. ಸುದ್ದಿಮನೆಗಳಲ್ಲಿ ನಡೆವ ಒಳ್ಳೆಯ ಮತ್ತು ಕೆಟ್ಟ ಬೆಳವಣಿಗೆ ಎರಡರ ಮೇಲೂ ಬೆಳಕು ಚೆಲ್ಲುವಂತ ಜವಾಬ್ದಾರಿಯುತ ಕೆಲಸ ಮಾಡುತ್ತಾ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ … Read more

“ಸಂಕಷ್ಟ”ದಲ್ಲಿದ್ದ “ನ್ಯೂಸ್ ಫಸ್ಟ್” ಗೆ  ಸಿಕ್ಕೇಬಿಟ್ರಂತೆ “ಹೂಡಿಕೆ”ದಾರರು…! ಇನ್ನಾದ್ರು ನೀಗುತ್ತದಾ “ಮಾದ್ಯಮಮಿತ್ರ”ರ ಬವಣೆ..!

ಬೆಂಗಳೂರು: ಮತ್ತೊಮ್ಮೆ ನ್ಯೂಸ್ ಫಸ್ಟ್ ಬಗ್ಗೆ ಬರೆಯಬೇಕಾಗ್ತಿದೆ…ಅಲ್ಲಿ ಕೆಲಸ ಮಾಡ್ತಿರುವ ಮಾದ್ಯಮ ಸ್ನೇಹಿತರ ದೃಷ್ಟಿಯಲ್ಲಿ ಇದು ಒಂದ್ರೀತಿ ಪಾಸಿಟಿವ್ ಆದಂಥ ಸುದ್ದಿನೇ.(.ಅದನ್ನು ಬೇರೆ ರೀತಿ ಅರ್ಥೈಸುವಂತವರಿಗೆ ನಾವೇನು ಮಾಡ್ಲಿಕ್ಕಾಗೊಲ್ಲ ಬಿಡಿ). ಸಂಬಳ ಸಿಗದೆ ಕಷ್ಟದಲ್ಲಿರುವ ಸ್ನೇಹಿತರ ಪಾಲಿಗೆ ಇದೊಂದು ರೀತಿ ಚೇತೋಹಾರಿಯಾದ ವಿಚಾರ.ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಸಂಕಷ್ಟದಲ್ಲಿದೆ ಎಂದೇ ಬಿಂಬಿಸಲಾಗ್ತಿದ್ದ ಮ್ಯಾನೇಜ್ಮೆಂಟ್ ನ ಬವಣೆಯೂ ಈ ಮೂಲಕ ದೂರವಾಗಿದೆ ಎನ್ನುವುದು ಕೂಡ ಸಮಾಧಾನದ  ವಿಚಾರ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಚಾನೆಲ್ ನ ಕೆಲವು ವಿಶ್ವಸನೀಯ ಮೂಲಗಳಿಂದ ಕನ್ನಡ ಫ್ಲ್ಯಾಶ್ ನ್ಯೂಸ್ … Read more

ಮಾಲಿನ್ಯ ನಿಯಂತ್ರಣ ಮಂಡಳಿ(PCB) ಯಿಂದ “ಲಿಂಗರಾಜ್” ಔಟ್- ವಿವಾದಿತ IFS “ಗೋಕುಲ್” ಇನ್..

ಕೆಲವೇ ಕ್ಷಣಗಳ ಮುನ್ನ ಹೊರಬಿದ್ದ ಆದೇಶದಲ್ಲಿ ವಿವಾದಿತ ಐಎಫ್ ಎಸ್ ಅಧಿಕಾರಿ ಗೋಕುಲ್ ಅವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.ಇಷ್ಟು ದಿನ ಸದಸ್ಯ ಕಾರ್ಯದರ್ಶಿ ಯಾಗಿದ್ದ ಐಎಫ್ ಎಸ್ ಲಿಂಗರಾಜ್ ಅವರಿಗೆ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿದೆ. ಅಕ್ರಮ-ಹಗರಣ-ಭ್ರಷ್ಟಾಚಾರಗಳ ಗೂಡಾಗಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯಲ್ಲಿ ಲಿಂಗರಾಜ್ ವರ್ಗಾವಣೆ ಬಗ್ಗೆ ಹಲವಾರು ರೀತಿಯ ವಿಶ್ಲೇಷಣೆ-ವ್ಯಾಖ್ಯಾನ ನೀಡಲಾಗುತ್ತಿದೆ.ಅಧ್ಯಕ್ಷ ನರೇಂದ್ರಸ್ವಾಮಿ ಅವರ ಜತೆ ಅಂಡರ್ ಸ್ಟ್ಯಾಂಡಿಂಗ್ ಸರಿಯಿರಲಿಲ್ಲ ಎನ್ನುವುದು … Read more

ಬಿಎಂಟಿಸಿ ಸಿಬ್ಬಂದಿ ಯೂನಿಫಾರ್ಮ್ ಗೆ ಪುಡಿಗಾಸು..!

ಊಟಕ್ಕಿಲ್ಲದ ಉಪ್ಪಿನಕಾಯಿ,… ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ..ಆನೆ ಬಾಯಿಗೆ ಹಪ್ಪಳ..ಎನ್ನುವ ಗಾಧೆಗಳನ್ನು ನೆನಪಿಸುವಂತಿದೆ ಬಿಎಂಟಿಸಿ ಆಡಳಿತದ ಧೋರಣೆ.ಕಾರ್ಮಿಕ ಸಿಬ್ಬಂಧಿಯ ಕಲ್ಯಾಣಕ್ಕಾಗಿ ಜಾರಿಗೊಳಿಸುತ್ತಿರುವ ಕಾರ್ಯಕ್ರಮ ಹಾಗೂ ಯೋಜನೆಗಳು ಅವರ ಪ್ರಯೋಜನಕ್ಕೆ ಬಾರದಂತಾಗ್ತಿದೆ..ಇದಕ್ಕೆ ಸಾಕ್ಷಿಯಾಗುತ್ತಾ ಬಂದಿರುವುದು ಸಮವಸ್ತ್ರದ ಯೋಜನೆ.ದುರಂತ ಎಂದ್ರೆ ಈ ಬಾರಿಯೂ ಆ ಅಮಾನವೀಯ ಪರಂಪರೆ ಮುಂದುವರೆದಿದೆ. ಜಗತ್ತಿಗೆ ಜಗತ್ತೇ ಬದಲಾಗುತ್ತಿದೆ.ನಮ್ಮ ಜೀವನಶೈಲಿಗಳು ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿವೆ.ಹಾಗೆಯೇ ನಾವು ಬಳಸುತ್ತಿದ್ದ ಎಲ್ಲಾ ವಸ್ತುಗಳ ದರವೂ ದುಬಾರಿಯಾಗುತ್ತಿದೆ.ಆದರೆ ಎಲ್ಲಾ ಬದಲಾದರೂ ಬಿಎಂಟಿಸಿಯ ಆಡಳಿತದ ಮನಸ್ಥಿತಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ … Read more