advertise here

Search

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.

pU ಬೋರ್ಡ್‌ ನೂತನ ನಿರ್ದೇಶಕ ಭರತ್‌ ಎದುರು ದಂಡಿ ದಂಡಿ ಸವಾಲುಗಳು..!

ಹಾಳೆದ್ದು ಹೋಗಿರುವ ಪಿಯು ಬೋರ್ಡ್ ಗೆ  ಕಾಯಕಲ್ಪ-ಲಂಗುಲಗಾಮಿಲ್ಲದಂತಾಗಿರುವ ಇಲಾಖೆಯ ಕೆಲವು ಭ್ರಷ್ಟರ ಅಂದಾದರ್ಬಾರ್-ಅಟ್ಟಹಾಸಕ್ಕೆ  ಕಡಿವಾಣ ಹಾಕುವರಾ..? ಪಿಯು ಬೋರ್ಡ್‌ ಗೆ ನೂತನ ನಿರ್ದೇಶಕರಾಗಿ ಕಿರಿಯ ಐಎಎಸ್‌ ಅಧಿಕಾರಿ ಭರತ್‌ ನಿಯೋಜನೆಗೊಂಡಿದ್ದಾರೆ. ಅನೇಕ ಇಲಾಖೆಗಳಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡಿರುವ ಯುವ ಹಾಗೂ ಉತ್ಸಾಹಿ ಐಎಎಸ್‌ ಅಧಿಕಾರಿ ಭರತ್‌ ಅವರನ್ನು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಹೃತ್ಪೂರ್ವಕವಾಗಿ ಅಭಿನಂದಿಸಿ,ಸ್ವಾಗತಿಸುವುದಲ್ಲದೇ ಹೇಳೋರ್..ಕೇಳೋರ್‌ ಇಲ್ಲದೆ ತಬ್ಬಲಿಭಾವದಿಂದ ಬಳಲುತ್ತಿರುವ ಇಲಾಖೆಯ ಬಗ್ಗೆ ಕಾಳಜಿ ವಹಿಸಿ ಅಗಾಧ ಪ್ರಮಾಣದ ಸುಧಾರಣೆಗೆ ಶ್ರಮಿಸುವಂತೆ ಮನವಿ ಮಾಡುತ್ತದೆ. ಸರ್ಕಾರದಿಂದ … Read more

“ಮಾಧ್ಯಮ”ಗಳ ತಾಕತ್ತಿಗೆ ಸಾಣೆ ಹಿಡಿದ “ಸುಜಾತಾಭಟ್‌ ಪ್ರಹಸನ”

ಕನ್ನಡ ಪತ್ರಿಕೋದ್ಯಮದಲ್ಲಿ ಸತ್ತೇ ಹೋಗಿದ್ದ ತನಿಖಾ ಪತ್ರಿಕೋದ್ಯಮದ ಜೀವಂತಿಕೆಗೆ ಸಾಕ್ಷಿಯಾದ ಮೀಡಿಯಾ ಟ್ರಯಲ್‌ –ಆಸಕ್ತ ಪತ್ರಕರ್ತರ ಅಧ್ಯಯನಕ್ಕೆ ಉತ್ತಮ ನಿದರ್ಶನವಾಗಬಲ್ಲ ಮೀಡಿಯಾ ಕೇಸ್‌ ಸ್ಟಡಿ.. ಇದು ಮಾಧ್ಯಮ ತಾಕತ್ತು..ಹಾಗೆಯೇ ಗೆಲುವು ಕೂಡ.. ಮಾಧ್ಯಮಗಳು ಮನಸು ಮಾಡಿದ್ರೆ ತಮ್ಮ ಹೊಣೆಗಾರಿಕೆಯನ್ನು ದಿಟ್ಟವಾಗಿ ಪ್ರದರ್ಶಿಸಿದ್ರೆ,ಸತ್ಯ  ಎಷ್ಟೇ ಆಳದಲ್ಲಿ ನಿಗೂಢವಾಗಿ ಹೂತೋಗಿರಲಿ,ಅದನ್ನು ಪಾತಾಳಗರಡಿ ಹಾಕಿ ಹೆಕ್ಕಿ ತೆಗೆಯಬಲ್ಲವು…ಜಗತ್ತಿಗೆ ಮಾಧ್ಯಮಗಳ ತಾಕತ್ತು ಅನೇಕ ಸನ್ನಿವೇಶಗಳಲ್ಲಿ ಸಾಬೀತಾಗಿದೆ. ಮತ್ತೊಂದು ಸನ್ನಿವೇಶದಲ್ಲಿ .ಪ್ರಪಂಚಕ್ಕೆ ಸತ್ಯದರ್ಶನವಾಗಿದೆ. ಇದಕ್ಕೆ ಧರ್ಮಸ್ಥಳನ ಸುಜಾತಾ ಭಟ್ ಅವರ ಕಾಲ್ಪನಿಕ ಮಗಳ ಕಟ್ಟುಕಥೆಯೇ  … Read more

“ನ್ಯೂಸ್ ಫಸ್ಟ್” ಚಾನೆಲ್ ಗೆ ನಿಜಕ್ಕೂ “ಆರ್ಥಿಕ ಸಂಕಷ್ಟ”ನಾ..? ಬಹುತೇಕ ಸಿಬ್ಬಂದಿಗೆ ತಿಂಗಳುಗಳಿಂದಲೂ “ಸಂಬಳವೇ” ಕೊಟ್ಟಿಲ್ವಂತೆ ಸತ್ಯನಾ..?!

ಮೊನ್ನೆ ಮೊನ್ನೆವರೆಗು ಆರ್ಥಿಕವಾಗಿ ಚೆನ್ನಾಗಿಯೇ ಇದ್ದಂತಿದ್ದ  ಚಾನೆಲ್, ಸಧ್ಯ  ಸುಸ್ಥಿತಿಯಲ್ಲಿಲ್ಲವೋ..? ಅಥವಾ ಸಿಬ್ಬಂದಿಗೆ ಕೊಡುವಷ್ಟು ಆದಾಯ ಬರುತ್ತಿಲ್ಲವೋ..?ಆರ್ಥಿಕವಾಗಿ ಚೆನ್ನಾಗಿದೆ ಎನ್ನುವುದೇ ಸತ್ಯವಾದ್ರೆ,.. ಹಾಗಿದ್ರೆ ಚಾನೆಲ್ ನ ಆದಾಯ ಎಲ್ಲೋಗ್ತಿದೆ..!?    ಬೆಂಗಳೂರು: ಕನ್ನಡದ ಪ್ರಮುಖ ಹಾಗೂ ಪ್ರತಿಷ್ಟಿತ ಸುದ್ದಿವಾಹಿನಿಯೊಂದರ ಬಗ್ಗೆ  ಬರೆಯಲೇಬೇಕಿದೆ ನೋಡಿ… ಬರೆಯಬೇಕೆನ್ನುವ ಯಾವುದೇ ಇರಾದೆ ಇಲ್ಲದಿದ್ದರೂ,  ಅಲ್ಲಿನ ಬಹುಸಂಖ್ಯಾತ ಮಾದ್ಯಮಮಿತ್ರರಿಗೆ ಆಗುತ್ತಿದೆ ಎನ್ನಲಾಗಿರುವ ನೋವು-ಅನ್ಯಾಯದ ಕಾರಣಕ್ಕೆ ಬರೆಯಲೇಬೇಕಿದೆ. ಏಕೆಂದರೆ ಕನ್ನಡ ಫ್ಲ್ಯಾಶ್ ನ್ಯೂಸ್  ಸದಾ  ನೋವುಂಡ-ಅನ್ಯಾಯಕ್ಕೊಳಗಾದ ಮಾದ್ಯಮಿತ್ರರ ಬೆನ್ನಿಗೆ ಇದ್ದೇ ಕೆಲಸ ಮಾಡುತ್ತಿದೆ..ಆ ವಿಷಯದಲ್ಲಿ … Read more

ಮಹಿಳಾ ಉದ್ಯೋಗಿಯ ಅಮ್ಮನನ್ನೇ ಬಲಿ ತೆಗೆದುಕೊಂಡುಬಿಡ್ತಾ ಆ ನ್ಯೂಸ್‌ ಚಾನೆಲ್..?!

*ನನ್ನ ಅಮ್ಮನೇ ಹೋದ್ಮೇಲೆ ನಿಮ್ಮ ಸ್ಯಾಲರಿ ತಗಂಡ್‌ ಏನ್‌ ಮಾಡೋಣ ಬಿಡಿ ಸಾರ್..‌* *ಅನ್ಯಾಯವಾಗಿ ನನ್ನ ಅಮ್ಮನನ್ನು  ಕೊಂದ್‌ ಬಿಟ್ರಲ್ಲಾ ಸಾರ್..!?* *ನ್ಯಾಯಯುತ ದ್ವನಿಯಲ್ಲಿ ಹಕ್ಕಿನ ವೇತನ ಕೇಳಿದ್ದಕ್ಕೆ ಗೇಟ್‌ ಪಾಸ್… ಸಂಬಳ ಕೊಡದೆ ಸತಾವಣೆ..* ಬೆಂಗಳೂರು: ಈ ಸುದ್ದಿ ನಿಜಕ್ಕೂ ಎಂಥಾ ಕಲ್ಲು ಮನಸನ್ನು ಕರೆಗಿಸುತ್ತದೆ…ಸುದ್ದಿ ಮನೆಗಳಲ್ಲಿ ಕೆಲಸ ಮಾಡುವವರನ್ನು ಇಷ್ಟೊಂದು ತಾತ್ಸಾರದಿಂದ ನಡೆಸಿಕೊಳ್ಳಲಾಗುತ್ತಾ..? ತಮಗೆ ಬರಬೇಕಿರೋ ಸಂಬಳಕ್ಕೆ ದ್ವನಿ ಎತ್ತಿದ್ರೆ ಸಂಸ್ಥೆಯಿಂದಲೇ ಗೇಟ್‌ ಪಾಸ್‌ ಕೊಡಲಾಗುತ್ತಾ..? ಕೊನೆಗೆ ಅವರ ಕುಟುಂಬದವರ ಸಾವಿಗೂ  ನೈತಿಕವಾಗಿ ಕಾರಣವಾಗುವಂತ … Read more

1 ವರೆ ವರ್ಷದಲ್ಲಿ 3 ಬಲಿ..! :”ಸೂಸೈಡ್ ಸ್ಪಾಟ್” ಆಗಿಬಿಡ್ತಾ bMTC ಕೇಂದ್ರ ಕಚೇರಿ ಕಟ್ಟಡ..!

ಬೆಂಗಳೂರು: ಬಿಎಂಟಿಸಿ(bengaluru metropolitan transport corporation) ಎಂಡಿ ಆಗಿರುವ ರಾಮಚಂದ್ರನ್ ( managing director ramachandran) ಅವರಿಗೆ ಅವರ ಇಲಾಖೆ ಮೇಲೆ ಹಿಡಿತವಿಲ್ಲವೋ..? ಅಥವಾ ಇಲಾಖೆ ಬಗ್ಗೆನೇ ನಿರ್ಲಕ್ಷ್ಯ ಧೋರಣೆಯೋ, ತಾತ್ಸಾರ ಮನೋಭಾವನೋ ಗೊತ್ತಾಗ್ತಿಲ್ಲ..ಹೀಗೆ ಪ್ರಶ್ನೆ ಮಾಡ್ತಿರೋದು ಬೇರೆ ಯಾರು ಅಲ್ಲ..ಅವರದೇ ಇಲಾಖೆಯಲ್ಲಿ ಕೆಲಸ ಮಾಡ್ತಿರುವ ಸಾರಿಗೆ ಸಿಬ್ಬಂದಿ. ನಿಗಮದ ಕಚೇರಿಗಳನ್ನು ಬಿಟ್ಟುಬಿಡಿ ಅವರದೇ ಕಚೇರಿ ಇರುವ ಶಾಂತಿನಗರದ ಕೇಂದ್ರಕಚೇರಿ ಕಟ್ಟಡ ಭದ್ರತೆ-ಸುರಕ್ಷತೆಯ ಕೊರತೆ ಎದುರಿಸುತ್ತಿವೆ..ಇದಕ್ಕೆ ಸಾಕ್ಷ್ಯ ಏನು ಎನ್ನುವುದನ್ನು ಕೇಳುವುದಾದ್ರೆ ಕನ್ನಡ ಫ್ಲ್ಯಾಶ್ ನ್ಯೂಸ್ ಇದಕ್ಕೆ … Read more

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಬೆಂಗಳೂರು: ಸುವರ್ಣ ನ್ಯೂಸ್ ಚಾನೆಲ್ ನ ಸುದ್ದಿ ಸಂಪಾದಕ/ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ದ ಎಫ್ ಐ ಆರ್ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸುವರ್ಣ ಸುದ್ದಿವಾಹಿನಿಯ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರ ಹಾಗೂ ಕ್ಯಾಮೆರಾಮನ್ ಮೇಲೆ ಸೌಜನ್ಯಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ತಂಡ ಹಲ್ಲೆ ಮಾಡಿದೆ ಎಂದು ಸುವರ್ಣ ನ್ಯೂಸ್ ನಲ್ಲಿ ತಪ್ಪು ವರದಿ ನೀಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ  ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ  ಗಣೇಶ್ ಶೆಟ್ಟಿ ಎನ್ನುವವರು ದೂರು … Read more

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

ಮಟ್ಕಾ ಮಾಫಿಯಾಕ್ಕೆ ಸಾಗರ ಎಮ್ಮೆಲ್ಲೆ ಬೇಳೂರು ಕೃಪಕಟಾಕ್ಷವಿದೆಯಾ..? ಅವರ ಬೆಂಬಲಿಗರೇ ದಂಧೆಯ ಕಿಂಗ್ ಪಿನ್ನಾ..? ಅಥವಾ ಎಮ್ಮೆಲ್ಲೆ ಹೆಸ್ರು ಮಿಸ್ಯೂಸ್ ಮಾಡಿಕೊಳ್ಳಲಾಗುತ್ತಿದೆಯೇ..?! ದಂಧೆಕೋರರ ಹೆಡೆಮುರಿ ಕಟ್ಟಬೇಕಾದ ಪೊಲೀಸರೇ ಕೈ ಕೆಸರು ಮಾಡಿಕೊಂಡಿದ್ದಾರಾ..? ಅಪರಾಧಮುಕ್ತ ಜಿಲ್ಲೆ ಮಾಡ್ಬೇಕೆಂದಿರುವ ಎಸ್ಪಿ ಮಿಥುನ್ ಕುಮಾರ್ ಅವರಿಗೆ ಅವರ ಇಲಾಖೆ ಅಧಿಕಾರಿಗಳೇ ವಿಲನ್ನಾ..?!    ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರೇ ಏನ್ ಮಾಡ್ತಿದಿರಾ..? ನಿಮ್ಮ ಇಲಾಖೆಯ ಅಧಿಕಾರಿಗಳ ಕೃಪಕಟಾಕ್ಷ-ಶ್ರೀರಕ್ಷೆಯಲ್ಲೇ ಮಟ್ಕಾ ದಂಧೆ ನಡೆಯುತ್ತಿದೆ…!ಅದಕ್ಕಾಗಿ ಸಾಲ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ..!? … Read more

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಹುತೇಕ ಮಾದ್ಯಮಗಳು ಎಡವಿದ್ದೆಲ್ಲಿ?! ಪೂರ್ವಾಗ್ರಹಕ್ಕೆ ಒಳಗಾಗಿದ್ದೆಲ್ಲಿ!? ಕೋರ್ಟ್‌ ಗಳಾಗಿದ್ದೆಲ್ಲಿ.?!

ವೈಯುಕ್ತಿಕ ಅಭಿಪ್ರಾಯಗಳನ್ನೇ ವೀಕ್ಷಕರ ಮೇಲೆ ಬಲವಂತವಾಗಿ ಹೇರುವ ದುಸ್ಸಾಹಸ..!-ಸತ್ಯದ ಅನ್ವೇಷಕರಾಗದೆ ಕೋರ್ಟ್-ಜಡ್ಜ್‌ ಗಳಾಂತಾದ ನಿರೂಪಕರು..? ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಪಾತ್ರದಲ್ಲಿನ ಅಸಹಜ ಸಾವುಗಳು,ತಲೆ ಬುರುಡೆ ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆಯನ್ನೇನೋ ನಡೆಸುತ್ತಿವೆ.ಆದರೆ ಈ ವಿಷಯದಲ್ಲಿ ಮಾದ್ಯಮಗಳ ಧೋರಣೆ-ನಿಲುವು ಮಾತ್ರ ರಾಜ್ಯದ ಜನರಲ್ಲಿ ಗೊಂದಲವನ್ನಷ್ಟೆ ಅಲ್ಲ, ಹೇಸಿಗೆ ತರಿಸುವ ಜತೆಗೆ ವಾಕರಿಕೆಯನ್ನು ಮೂಡಿಸುತ್ತಿವೆ.ಪ್ರ ಕರಣದಲ್ಲಿ ಹೀಗೆಯೇ ಆಗಿದೆ ಎನ್ನೋದನ್ನು ತುಂಬಾ ರೋಚಕವಾಗಿ ಬಿಂಬಿಸುವ ಆತುರದಲ್ಲಿ ಪತ್ರಿಕೋದ್ಯಮದ ನೈತಿಕತೆ ಹಾಗು ಸೈದ್ಧಾಂತಿಕತೆಯನ್ನೇ ಗಾಳಿಗೆ ತೂರುತ್ತಿದ್ದಾರೆ.ಸತ್ಯದ ಅನ್ವೇಷಕರಾಗದೆ ತಮ್ಮದೇ ಅಭಿಪ್ರಾಯವನ್ನು … Read more

ಸಾರಿಗೆ ಮುಷ್ಕರ ಎಫೆಕ್ಟ್-ನೂರಾರು ಸಿಬ್ಬಂದಿಗೆ ಶಿಸ್ತುಕ್ರಮದ ನೊಟೀಸ್‌ ಜಾರಿ-ಅಮಾನತ್ತು ಪಕ್ಕಾ..!

ಬೆಂಗಳೂರು: ಏನ್‌ ಆಗಬಾರದು ಎಂದುಕೊಂಡಿದ್ವೋ..ಏನ್‌ ಆಗುತ್ತೆ ಎಂದು ಅಂದಾಜಿಸಲಾಗಿತ್ತೋ ಅದೇ ಆಗೋಗಿದೆ.ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತುಕ್ರಮ ಜಾರಿಯಾಗಬಹುದು ಎನ್ನುವ ಅಂದಾಜನ್ನೇನು ಮಾಡಲಾಗಿತ್ತೋ ಅದರ ಪ್ರಕಾರವೇ ಆಗೋಗಿದೆ.ಕಳೆದ ಬಾರಿ ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ದ ಏನೆಲ್ಲಾ ಶಿಸ್ತುಕ್ರಮ ಜಾರಿ ಮಾಡಲಾಗಿತ್ತೋ ಅದೇ ಮಾದರಿಯಲ್ಲಿ ಸರ್ಕಾರ ಮುಷ್ಕರದಲ್ಲಿ ಭಾಗಿಯಾದ ಎಲ್ಲರಿಗೂ ಶಿಸ್ತುಕ್ರಮದ ನೊಟೀಸ್‌ ಜಾರಿ ಮಾಡಿದೆ.ಇದರ ಮುಂದುವರೆದ ಭಾಗವಾಗಿ ಮುಷ್ಕರದಲ್ಲಿ ಭಾಗಿಯಾದ ಎಲ್ಲರೂ ಅಮಾನತ್ತು ಆಗುವುದು ಪಕ್ಕಾ ಎನ್ನುವಂತಾಗಿದೆ. ಸಾರಿಗೆ ಮುಷ್ಕರ ನಡೆಸದಂತೆ ಹೈ ಕೋರ್ಟ್‌ ಮುಷ್ಕರಕ್ಕೆ ನಿರ್ದರಿಸಿದ ದಿನದಂದೇ … Read more