” pOPಬ್ಯಾನ್” ಎನ್ನೋದೇ “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”
ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.
ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.
ಹಾಳೆದ್ದು ಹೋಗಿರುವ ಪಿಯು ಬೋರ್ಡ್ ಗೆ ಕಾಯಕಲ್ಪ-ಲಂಗುಲಗಾಮಿಲ್ಲದಂತಾಗಿರುವ ಇಲಾಖೆಯ ಕೆಲವು ಭ್ರಷ್ಟರ ಅಂದಾದರ್ಬಾರ್-ಅಟ್ಟಹಾಸಕ್ಕೆ ಕಡಿವಾಣ ಹಾಕುವರಾ..? ಪಿಯು ಬೋರ್ಡ್ ಗೆ ನೂತನ ನಿರ್ದೇಶಕರಾಗಿ ಕಿರಿಯ ಐಎಎಸ್ ಅಧಿಕಾರಿ ಭರತ್ ನಿಯೋಜನೆಗೊಂಡಿದ್ದಾರೆ. ಅನೇಕ ಇಲಾಖೆಗಳಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡಿರುವ ಯುವ ಹಾಗೂ ಉತ್ಸಾಹಿ ಐಎಎಸ್ ಅಧಿಕಾರಿ ಭರತ್ ಅವರನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಹೃತ್ಪೂರ್ವಕವಾಗಿ ಅಭಿನಂದಿಸಿ,ಸ್ವಾಗತಿಸುವುದಲ್ಲದೇ ಹೇಳೋರ್..ಕೇಳೋರ್ ಇಲ್ಲದೆ ತಬ್ಬಲಿಭಾವದಿಂದ ಬಳಲುತ್ತಿರುವ ಇಲಾಖೆಯ ಬಗ್ಗೆ ಕಾಳಜಿ ವಹಿಸಿ ಅಗಾಧ ಪ್ರಮಾಣದ ಸುಧಾರಣೆಗೆ ಶ್ರಮಿಸುವಂತೆ ಮನವಿ ಮಾಡುತ್ತದೆ. ಸರ್ಕಾರದಿಂದ … Read more
ಮೊನ್ನೆ ಮೊನ್ನೆವರೆಗು ಆರ್ಥಿಕವಾಗಿ ಚೆನ್ನಾಗಿಯೇ ಇದ್ದಂತಿದ್ದ ಚಾನೆಲ್, ಸಧ್ಯ ಸುಸ್ಥಿತಿಯಲ್ಲಿಲ್ಲವೋ..? ಅಥವಾ ಸಿಬ್ಬಂದಿಗೆ ಕೊಡುವಷ್ಟು ಆದಾಯ ಬರುತ್ತಿಲ್ಲವೋ..?ಆರ್ಥಿಕವಾಗಿ ಚೆನ್ನಾಗಿದೆ ಎನ್ನುವುದೇ ಸತ್ಯವಾದ್ರೆ,.. ಹಾಗಿದ್ರೆ ಚಾನೆಲ್ ನ ಆದಾಯ ಎಲ್ಲೋಗ್ತಿದೆ..!? ಬೆಂಗಳೂರು: ಕನ್ನಡದ ಪ್ರಮುಖ ಹಾಗೂ ಪ್ರತಿಷ್ಟಿತ ಸುದ್ದಿವಾಹಿನಿಯೊಂದರ ಬಗ್ಗೆ ಬರೆಯಲೇಬೇಕಿದೆ ನೋಡಿ… ಬರೆಯಬೇಕೆನ್ನುವ ಯಾವುದೇ ಇರಾದೆ ಇಲ್ಲದಿದ್ದರೂ, ಅಲ್ಲಿನ ಬಹುಸಂಖ್ಯಾತ ಮಾದ್ಯಮಮಿತ್ರರಿಗೆ ಆಗುತ್ತಿದೆ ಎನ್ನಲಾಗಿರುವ ನೋವು-ಅನ್ಯಾಯದ ಕಾರಣಕ್ಕೆ ಬರೆಯಲೇಬೇಕಿದೆ. ಏಕೆಂದರೆ ಕನ್ನಡ ಫ್ಲ್ಯಾಶ್ ನ್ಯೂಸ್ ಸದಾ ನೋವುಂಡ-ಅನ್ಯಾಯಕ್ಕೊಳಗಾದ ಮಾದ್ಯಮಿತ್ರರ ಬೆನ್ನಿಗೆ ಇದ್ದೇ ಕೆಲಸ ಮಾಡುತ್ತಿದೆ..ಆ ವಿಷಯದಲ್ಲಿ … Read more
*ನನ್ನ ಅಮ್ಮನೇ ಹೋದ್ಮೇಲೆ ನಿಮ್ಮ ಸ್ಯಾಲರಿ ತಗಂಡ್ ಏನ್ ಮಾಡೋಣ ಬಿಡಿ ಸಾರ್..* *ಅನ್ಯಾಯವಾಗಿ ನನ್ನ ಅಮ್ಮನನ್ನು ಕೊಂದ್ ಬಿಟ್ರಲ್ಲಾ ಸಾರ್..!?* *ನ್ಯಾಯಯುತ ದ್ವನಿಯಲ್ಲಿ ಹಕ್ಕಿನ ವೇತನ ಕೇಳಿದ್ದಕ್ಕೆ ಗೇಟ್ ಪಾಸ್… ಸಂಬಳ ಕೊಡದೆ ಸತಾವಣೆ..* ಬೆಂಗಳೂರು: ಈ ಸುದ್ದಿ ನಿಜಕ್ಕೂ ಎಂಥಾ ಕಲ್ಲು ಮನಸನ್ನು ಕರೆಗಿಸುತ್ತದೆ…ಸುದ್ದಿ ಮನೆಗಳಲ್ಲಿ ಕೆಲಸ ಮಾಡುವವರನ್ನು ಇಷ್ಟೊಂದು ತಾತ್ಸಾರದಿಂದ ನಡೆಸಿಕೊಳ್ಳಲಾಗುತ್ತಾ..? ತಮಗೆ ಬರಬೇಕಿರೋ ಸಂಬಳಕ್ಕೆ ದ್ವನಿ ಎತ್ತಿದ್ರೆ ಸಂಸ್ಥೆಯಿಂದಲೇ ಗೇಟ್ ಪಾಸ್ ಕೊಡಲಾಗುತ್ತಾ..? ಕೊನೆಗೆ ಅವರ ಕುಟುಂಬದವರ ಸಾವಿಗೂ ನೈತಿಕವಾಗಿ ಕಾರಣವಾಗುವಂತ … Read more
ಬೆಂಗಳೂರು: ಬಿಎಂಟಿಸಿ(bengaluru metropolitan transport corporation) ಎಂಡಿ ಆಗಿರುವ ರಾಮಚಂದ್ರನ್ ( managing director ramachandran) ಅವರಿಗೆ ಅವರ ಇಲಾಖೆ ಮೇಲೆ ಹಿಡಿತವಿಲ್ಲವೋ..? ಅಥವಾ ಇಲಾಖೆ ಬಗ್ಗೆನೇ ನಿರ್ಲಕ್ಷ್ಯ ಧೋರಣೆಯೋ, ತಾತ್ಸಾರ ಮನೋಭಾವನೋ ಗೊತ್ತಾಗ್ತಿಲ್ಲ..ಹೀಗೆ ಪ್ರಶ್ನೆ ಮಾಡ್ತಿರೋದು ಬೇರೆ ಯಾರು ಅಲ್ಲ..ಅವರದೇ ಇಲಾಖೆಯಲ್ಲಿ ಕೆಲಸ ಮಾಡ್ತಿರುವ ಸಾರಿಗೆ ಸಿಬ್ಬಂದಿ. ನಿಗಮದ ಕಚೇರಿಗಳನ್ನು ಬಿಟ್ಟುಬಿಡಿ ಅವರದೇ ಕಚೇರಿ ಇರುವ ಶಾಂತಿನಗರದ ಕೇಂದ್ರಕಚೇರಿ ಕಟ್ಟಡ ಭದ್ರತೆ-ಸುರಕ್ಷತೆಯ ಕೊರತೆ ಎದುರಿಸುತ್ತಿವೆ..ಇದಕ್ಕೆ ಸಾಕ್ಷ್ಯ ಏನು ಎನ್ನುವುದನ್ನು ಕೇಳುವುದಾದ್ರೆ ಕನ್ನಡ ಫ್ಲ್ಯಾಶ್ ನ್ಯೂಸ್ ಇದಕ್ಕೆ … Read more
ಬೆಂಗಳೂರು: ಏನ್ ಆಗಬಾರದು ಎಂದುಕೊಂಡಿದ್ವೋ..ಏನ್ ಆಗುತ್ತೆ ಎಂದು ಅಂದಾಜಿಸಲಾಗಿತ್ತೋ ಅದೇ ಆಗೋಗಿದೆ.ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತುಕ್ರಮ ಜಾರಿಯಾಗಬಹುದು ಎನ್ನುವ ಅಂದಾಜನ್ನೇನು ಮಾಡಲಾಗಿತ್ತೋ ಅದರ ಪ್ರಕಾರವೇ ಆಗೋಗಿದೆ.ಕಳೆದ ಬಾರಿ ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ದ ಏನೆಲ್ಲಾ ಶಿಸ್ತುಕ್ರಮ ಜಾರಿ ಮಾಡಲಾಗಿತ್ತೋ ಅದೇ ಮಾದರಿಯಲ್ಲಿ ಸರ್ಕಾರ ಮುಷ್ಕರದಲ್ಲಿ ಭಾಗಿಯಾದ ಎಲ್ಲರಿಗೂ ಶಿಸ್ತುಕ್ರಮದ ನೊಟೀಸ್ ಜಾರಿ ಮಾಡಿದೆ.ಇದರ ಮುಂದುವರೆದ ಭಾಗವಾಗಿ ಮುಷ್ಕರದಲ್ಲಿ ಭಾಗಿಯಾದ ಎಲ್ಲರೂ ಅಮಾನತ್ತು ಆಗುವುದು ಪಕ್ಕಾ ಎನ್ನುವಂತಾಗಿದೆ. ಸಾರಿಗೆ ಮುಷ್ಕರ ನಡೆಸದಂತೆ ಹೈ ಕೋರ್ಟ್ ಮುಷ್ಕರಕ್ಕೆ ನಿರ್ದರಿಸಿದ ದಿನದಂದೇ … Read more
ಸಾರಿಗೆ ಹೋರಾಟಗಳ ಇತಿಹಾಸದಲ್ಲಿ ಕರಾಳ ಅಧ್ಯಾಯ- ವೇತನ ಪರಿಷ್ಕರಣೆಯೂ ಇಲ್ಲ:ಬೇಡಿಕೆ ಡಿಕೆಗಳ ಈಡೇರಿಕೆನೂ ಇಲ್ಲ..ಪರಸ್ಪರರ ಮೇಲೆ ದೂರು-ಸಂಘಟನೆಗಳಲ್ಲಿನ ಒಡಕಿಗೆ ಸಿಎಂ ಅಚ್ಚರಿ..ಮಾತುಕತೆ ವೈಫಲ್ಯಕ್ಕೆ ಸಂಘಟನೆಗಳ ನಡುವಿನ ಬಿರುಕು-ಭಿನ್ನಾಭಿಪ್ರಾಯ-ಸಂಘರ್ಷವೇ ಕಾರಣವಾಗಿದ್ದು ದುರಂತ-ದೌರ್ಭಾಗ್ಯಪೂರ್ಣ. ಬೆಂಗಳೂರು: ಸಾರಿಗೆ ಮುಷ್ಕರ ನಡೆಯೋದಾಗ್ಲಿ, ನಡೆದರೂ ಹೆಚ್ಚಿನ ಸಂಖ್ಯೆಯ ಸಾರಿಗೆ ಸಿಬ್ಬಂದಿ ಅದರಲ್ಲಿ ಪಾಲ್ಗೊಳ್ಳುವುದಾಗಲಿ ಬಹುತೇಕ ಡೌಟ್ ಎನಿಸ್ತದೆ.ಮುರಿದುಬಿದ್ದ ಮಾತುಕತೆ, ಹೈಕೋರ್ಟ್ ನ ಕಟ್ಟಪ್ಪಣೆ ಕೂಡ ಇದಕ್ಕೆ ಪ್ರಮುಖ.ಅದೆಲ್ಲವನ್ನು ಮೀರಿ ಮಾತುಕತೆಯ ವೈಫಲ್ಯಕ್ಕೆ ಕಾರಣವಾಯಿತೆನ್ನಲಾದ ಸಂಗತಿಗಳು ಸಾರಿಗೆ ಹೋರಾಟದ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾಗಿ ನೆನಪಿಸಿಕೊಳ್ಳಬೇಕಾದ ಕ್ಷಣಗಳಾಗಿ … Read more
ಬೆಂಗಳೂರು:ನಾಳೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಸಾರಿಗೆ ಮುಷ್ಕರ ಸಂಬಂಧ ಇಂದು ನಡೆದ ವಿಚಾರಣೆ ವೇಳೆ ಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಎಂಜಿಎಸ್ ಕಮಲ್ ರ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ವಾದ ಮಂಡಿಸಿದ್ರೆ. ಸರ್ಕಾರದ ಪರ ನಿಲೋಫರ್ ಅಕ್ಬರ್ ವಾದ ಮಂಡಿಸಿದರು. ಕೊರೊನಾ ಸಂಧರ್ಭದಲ್ಲಿ ಸರ್ಕಾರ ಹಲವು ಸಿಬ್ಬಂದಿಯನ್ನ ವಜಾಗೊಳಿಸಿದೆ..ಬಹುತೇಕರನ್ನ ಪುನಃ ಸೇವೆಗೆ ಮರು ನೇಮಕ ಮಾಡಿಲ್ಲ.. ಹೀಗಾಗಿ ಬಾಕಿ … Read more
ಬೆಂಗಳೂರು:ನಾಳೆಯಿಂದ ಸಾರಿಗೆ ಮುಷ್ಕರ ನಡೆಯುತ್ತಾ..? ಸಂಚಾರಿ ನಾಡಿ ಸಾರಿಗೆ ವ್ಯವಸ್ಥೆ ಸ್ಥಬ್ದವಾಗುತ್ತಾ..? 23 ಸಾವಿರ ಬಸ್ ಗಳು ರಸ್ತೆಗಿಳಿಯೊಲ್ವಾ..? 1.2 ಲಕ್ಷ ಸಿಬ್ಬಂದಿ ಕೆಲಸ ಮಾಡೊಲ್ವಾ… ಕೋಟ್ಯಾಂತರ ಗಳಿಕೆ ಖೋತವಾಗುತ್ತಾ..? ಇಷ್ಟೆಲ್ಲಾ ಪ್ರಶ್ನೆಗಳಿಗೆ ಇವತ್ತೆ ಸ್ಪಷ್ಟ ಚಿತ್ರಣ ದೊರೆಯಲಿದೆ.ಈ ನಡುವೆ ಶೇಕಡಾ 25 ರಷ್ಟು ವೇತನ ಪರಿಷ್ಕರಣೆ ಮಾಡಲೇಬೇಕೆನ್ನುವುದು ಸಾರಿಗೆ ಸಂಘಟನೆಗಳ ಬಿಗಿಪಟ್ಟಾಗಿದ್ರೆ ಶೇಕಡಾ 8 ರಿಂದ 10ಕ್ಕೆ ನಾವ್ ರೆಡಿ ಅನ್ತಿದೆಯಂತೆ ಸರ್ಕಾರ..ಇಂದು ಸಂಜೆ-ರಾತ್ರಿವರೆಗೆ ಜಗ್ಗಾಡಿ, ತೂಗಿ ಅಳೆದು ಶೇಕಡಾ 12-13 ಕ್ಕೆ ವೇತನ ಪರಿಷ್ಕರಣೆ … Read more
ಬೆಂಗಳೂರು:ಓದಿಕೊಳ್ಳಲಿಕ್ಕೆಂದು ದೂರ ದೂರಿಂದ ಬೆಂಗಳೂರಿಗೆ ಬಂದು ಪಿಜಿ-ಹಾಸ್ಟೆಲ್ ಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿನಿಯರಿಗೆ ಪಿಜಿ-ಹಾಸ್ಟೆಲ್ ಗಳು ಸೇಫಲ್ವಾ..? ಇಂತದ್ದೊಂದು ಅನುಮಾನ ಕಾಡ್ಲಿಕ್ಕೆ ಕಾರಣವಾಗಿರೋದು ರಾಜಧಾನಿ ಹೊರವಲಯದಲ್ಲಿ ನಡೆದಿರುವ ಕಾಲೇಜ್ ಸ್ಟೂಡೆಂಟ್ ಒಬ್ಬಳ ರೇ *ಪ್.. ತನ್ನ ಪಿಜಿಯಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿನಿ ಮೇಲೆ ಕಣ್ಣಾಕಿದ್ದ ಕಾಮಾಂಧ ಆಕೆಯನ್ನು ಪುಸಲಾಯಿಸಿ,ಒಪ್ಪದಿದ್ದಕ್ಕೆ ಕಿಡ್ನ್ಯಾಪ್ ರೀತಿ ಎತ್ತಾಕಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಂದ್ಹಾಗೆ ಈ ಘಟನೆ ನಡೆದಿರುವುದು ಸೋಲದೆವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಪ್ರತಿಷಿತ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜ್ … Read more