“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ವಿಕ್ಟೋರಿಯಾ ಆಸ್ಪತ್ರೆ “ನೆಫ್ರೋ ಯುರಾಲಜಿ” ಡೈರೆಕ್ಟರ್ ಡಾ.ಶಿವಲಿಂಗಯ್ಯ ಕರ್ಮಕಾಂಡ ಬಯಲಿಗೆಳೆದಿದ್ದಕ್ಕೆ ವರ್ಗಾವಣೆ ಬಹುಮಾನ..! ಬೆಂಗಳೂರು: ರಾಜ್ಯದ ಅಡಳಿತ ನಿಜಕ್ಕೂ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ಬರ ಎದುರಿಸುತ್ತಿದೆ ..ಅದರಲ್ಲೂ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ “ಐಎಎಸ್-ಕೆಎಎಸ್” ನಂತ ಅಧಿಕಾರಿಗಳಲ್ಲಿ ಬಹುತೇಕ ರು ಭ್ರಷ್ಟರಾಗಿರುವ ಸಂಕಷ್ಟದ ಸನ್ನಿವೇಶದಲ್ಲಿ ಬೆರಳೆಣಿಕೆಯ ಅಧಿಕಾರಿಗಳು ನಮ್ಮ ನಡುವಿದ್ದಾರೆ ನ್ನು ವುದು ಸಮಾಧಾನದ ಸಂಗತಿ.ಆದರೆ ದುರಂತದ ಸಂಗತಿ ಏನಪ್ಪಾ ಅಂದ್ರೆ ಇಂಥಾ ಬೆರಳೆಣಿಕೆಯ ಅಧಿಕಾ ರಿಗಳಿಗೂ ಕೂಡ ಕೆಲಸ ಮಾಡಲಿಕ್ಕಾಗದಂಥ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸ … Read more

PU ಬೋರ್ಡ್”ನ   ಭ್ರಷ್ಟರು-ಮೈಗಳ್ಳರಿಗೆ ಸಿಂಹಸ್ವಪ್ನವಾದ“ಮಿಸ್ಟರ್ ಕ್ಲೀನ್”

ಪದವಿಪೂರ್ವ ಶಿಕ್ಷಣ ಮಂಡಳಿ( ಪಿಯು ಬೋರ್ಡ್)ಗೆ ಮಿಸ್ಟರ್ ಕ್ಲೀನ್ ಎಂದೇ ಖ್ಯಾತಿ ಪಡೆದಿರುವ ಕಿರಿಯ ಐಎಎಸ್ ಅಧಿಕಾರಿ ಭರತ್ ಎಂಟ್ರಿ ಕೊಟ್ಟ ಮೇಲೆ ಭ್ರಷ್ಟರು-ಮೈಗಳ್ಳರು-ಇಲಾಖೆ ಕೊಡುವ ಸಂಬಳಕ್ಕೆ ನೀಯತ್ತಿಲ್ಲದೆ ಅಕ್ರಮಗಳಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಸೃಷ್ಟಿಯಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಖಡಕ್ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಕಾರ್ಯನಿರ್ವಹಣೆಗೆ ವೇಗ ದೊರೆತಿದೆ.ಯಾವೊಬ್ಬ ಅಧಿಕಾರಿಯ ನಿರೀಕ್ಷೆಯಲ್ಲಿ ಅವರಿದ್ದರೋ ಅಂತದ್ದೇ ಅಧಿಕಾರಿಯ ಸ್ವರೂಪದಲ್ಲಿ ಭರತ್ ಸಿಕ್ಕಿದ್ದಾರೆ ಎಂದೇ ಶಿಕ್ಷಣ ಇಲಾಖೆ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಕಿರಿಯ ಐಎಎಸ್ … Read more

pU ಬೋರ್ಡ್‌ ನೂತನ ನಿರ್ದೇಶಕ ಭರತ್‌ ಎದುರು ದಂಡಿ ದಂಡಿ ಸವಾಲುಗಳು..!

ಹಾಳೆದ್ದು ಹೋಗಿರುವ ಪಿಯು ಬೋರ್ಡ್ ಗೆ  ಕಾಯಕಲ್ಪ-ಲಂಗುಲಗಾಮಿಲ್ಲದಂತಾಗಿರುವ ಇಲಾಖೆಯ ಕೆಲವು ಭ್ರಷ್ಟರ ಅಂದಾದರ್ಬಾರ್-ಅಟ್ಟಹಾಸಕ್ಕೆ  ಕಡಿವಾಣ ಹಾಕುವರಾ..? ಪಿಯು ಬೋರ್ಡ್‌ ಗೆ ನೂತನ ನಿರ್ದೇಶಕರಾಗಿ ಕಿರಿಯ ಐಎಎಸ್‌ ಅಧಿಕಾರಿ ಭರತ್‌ ನಿಯೋಜನೆಗೊಂಡಿದ್ದಾರೆ. ಅನೇಕ ಇಲಾಖೆಗಳಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡಿರುವ ಯುವ ಹಾಗೂ ಉತ್ಸಾಹಿ ಐಎಎಸ್‌ ಅಧಿಕಾರಿ ಭರತ್‌ ಅವರನ್ನು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಹೃತ್ಪೂರ್ವಕವಾಗಿ ಅಭಿನಂದಿಸಿ,ಸ್ವಾಗತಿಸುವುದಲ್ಲದೇ ಹೇಳೋರ್..ಕೇಳೋರ್‌ ಇಲ್ಲದೆ ತಬ್ಬಲಿಭಾವದಿಂದ ಬಳಲುತ್ತಿರುವ ಇಲಾಖೆಯ ಬಗ್ಗೆ ಕಾಳಜಿ ವಹಿಸಿ ಅಗಾಧ ಪ್ರಮಾಣದ ಸುಧಾರಣೆಗೆ ಶ್ರಮಿಸುವಂತೆ ಮನವಿ ಮಾಡುತ್ತದೆ. ಸರ್ಕಾರದಿಂದ … Read more

IAS‌ ಸಿಂಧೂ ಬಿ ರೂಪೇಶ್ ಎತ್ತಂಗಡಿ..!-ಕೇಂದ್ರ ಸೇವೆಗೆ ನಿಯೋಜನೆ…!

ಬೆಂಗಳೂರು: ಪಿಯು ಬೋರ್ಡ್ ನ ನಿರ್ದೇಶಕರಾಗಿದ್ದ ಮಹಿಳಾ ಐಎಎಸ್‌ ಅಧಿಕಾರಿ ಸಿಂಧೂ ಬಿ ರೂಪೇಶ್‌ ಅವರನ್ನು ದಿಢೀರ್‌ ವರ್ಗ ಮಾಡಲಾಗಿದೆ.ಇಲಾಖೆ ಯಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡುವ ಅವಕಾಶವಿದ್ದಾಗ್ಯೂ ನಿಷ್ಕ್ರೀಯವಾಗಿದ್ದರೆನ್ನುವ ಆಪಾದನೆ ಹೊತ್ತಿದ್ದ ಐಎಎಸ್ ಅಧಿಕಾರಿ ಸಿಂದೂ ಬಿ ರೂಪೇಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.ಸಿಂಧೂ ಅವರನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಲಾಗಿದೆ ಎನ್ನಲಾಗ್ತಿದೆ.ಅಲ್ಲಿ ಅವರು 5 ವರ್ಷಗಳ ಕಾಲ ಕೆಲಸ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. … Read more

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

ಬೆಂಗಳೂರು : ಹೀಗೆ ಖಂಡಿತಾ ಆಗದಿರಲಿ..ಒಂದೊಮ್ಮೆ ಆದರೆ ಇದಕ್ಕಿಂತ ದೊಡ್ಡ ಶೈಕ್ಷಣಿಕ ದುರಂತ ಮತ್ತೊಂದಿರಲಾರದೇನೋ..? ಏಕಂದ್ರೆ ಅಂತಹದೊಂದು ಅಕ್ರಮವನ್ನು ಸಕ್ರಮಗೊಳಿಸುವ ಕೆಲಸ ಮಲ್ಲೇಶ್ವರಂ ನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.ದೊಡ್ಡ ಮೊತ್ತದ ಹಣದ ವ್ಯವಹಾರವೊಂದು ಸಕ್ಸೆಸ್ ಆಗುವ ಲಕ್ಷಣ ಗೋಚರಿಸುತ್ತಿದೆ ಹಾಗೇನಾದ್ರೂ ಹಾಗಿಬಿಟ್ಟರೆ ಶಿಕ್ಷಣ ಇಲಾಖೆಯೇ ತಲೆತಗ್ಗಿಸುವ ಸನ್ನಿವೇಶವೊಂದು ಸೃಷ್ಟಿಯಾದಂತಾಗಿಬಿಡುತ್ತದೆ. ಯೆಸ್…ಶೈಕ್ಷಣಿಕ ಅಕ್ರಮವೊಂದನ್ನು ಸಕ್ರಮಗೊಳಿಸುವ ಮೆಗಾ ಪ್ಲ್ಯಾನ್, ಪಿಯು ಮಂಡಳಿ ಕಾರಿಡಾರ್ ನಲ್ಲಿ ನಡೆಯುತ್ತಿದೆ ಎನ್ನುವ ಆಪಾದನೆ ಕೇಳಿಬಂದಿದೆ.ಅದು ಅಂತಿಂಥ  ಅಕ್ರಮವಲ್ಲ ಶಿಕ್ಷಣ … Read more

ಪಿಯು ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರನ್ನೇ ದಾರಿ ತಪ್ಪಿಸುವ, ತಪ್ಪೆಸಗುವಂತೆ ಪ್ರಚೋದಿಸುವ ಹಿತಾಸಕ್ತಿಗಳಿವೆಯಾ?

ನಿಜಕ್ಕೂ ದುರ್ಬಳಕೆ ಆಗುತ್ತಿದೆಯಾ.. ದಕ್ಷ-ಪ್ರಾಮಾಣಿಕ ಐಎಎಸ್ ಅಧಿಕಾರಿ ಸಿಂಧೂ ರೂಪೇಶ್ ಅವರ ಒಳ್ಳೆಯತನ? ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ 18ನೇ ತಿರುವಿನಲ್ಲಿರುವ  ಪದವಿ ಪೂರ್ವ ಶಿಕ್ಷಣ ಇಲಾಖೆ (DEPARTMENT OF SCHOOL EDUCATION-PRE UNIVERSITY) ಗೆ  ಶೈಕ್ಷಣಿಕವಾಗಿ ತನ್ನದೇ ಆದ ಹಿನ್ನಲೆಯಿದೆ.ಭವ್ಯ ಇತಿಹಾಸವಿದೆ. ನಿರ್ದೇಶಕರಾಗಿ ಬರುವ ಅಧಿಕಾರಿಗಳು ತಮ್ಮದೇ ಕನಸು-ಆಶಯ-ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಲೇ ಬಂದಿದ್ದಾರೆ.ಶೈಕ್ಷಣಿಕವಾಗಿ ಅನುಕೂಲವಾಗಬಲ್ಲ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಸಹಕಾರಿಯಾಗಬಲ್ಲ  ಒಂದಷ್ಟು ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ.ಅದೇ ನಿಟ್ಟಿನಲ್ಲಿ ಈಗಿನ ನಿರ್ದೇಶಕರ ಪ್ರಯತ್ನ ಮುಂದುವರೆದಿದ್ದರೂ ಅವರನ್ನು … Read more

ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಹಾಗೆ ಹೇಳಿದ್ದು ಸರಿನಾ..?!

“ಗುರು ಒಬ್ಬ ವ್ಯಸನಿ….ಆತನಲ್ಲಿ ಸೃಜನಶೀಲತೆಯೇ ಸತ್ತೋಗಿತ್ತು..ನನ್ನಿಂದ ಕೆಟ್ಟ ಸಿನೆಮಾ ಮಾಡಿಸಿದಾತ..ಎಂದು ಹೇಳಿದ್ದ ಜಗ್ಗೇಶ್.”ಸಾವನ್ನು ಯಾರೂ‌ ಸಂಭ್ರಮಿಸಬಾರದು..ಸತ್ತವರ ಬಗ್ಗೆ ಅವರ ನೆಗೆಟಿವ್ಸ್ ಏನೇ ಇರಲಿ ಅದನ್ನು ಪರಾಮರ್ಷೆ ಮಾಡಿ,ಹೀಯಾಳಿಸಬಾರದು ಎನ್ನುತ್ತಾರೆ ಹಿರಿಯರು ಹಾಗೂ ಅನುಭಾವಿಗಳು.. ಅವರ ಮಾತನ್ನು ಪರಿಗಣಿಸುವುದೇ ಆದಲ್ಲಿ,ಜಗ್ಗೇಶ್ ಅವರಂಥ ಹಿರಿಯ ನಟರ ಬಾಯಲ್ಲಿ ಇಂಥಾ ಮಾತುಗಳು ಬರಬಾರದಿತ್ತು..ಹೀಗೆ ನನಗಷ್ಟೇ ಅಲ್ಲ,ನನ್ನಂತ ಎಷ್ಟೋ ಜ‌ನರಿಗೆ ಎನ್ನಿಸಿದರೂ ತಪ್ಪಿಲ್ಲ.. ಕನ್ನಡದ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾದ ಬಗ್ಗೆ ಮೊದಲು ಚಾನೆಲ್ ಗಳು ಮಾತನಾಡಿಸಿದ್ದೇ ನಟ ಜಗ್ಗೇಶ್ ಅವರನ್ನು..ಆರಂಭದಲ್ಲಿ … Read more

“POLITICAL 360” NEWS CHANNEL IN BIG CRISIS..!? “ಪುಟ್ಟಪ್ಪ”ನ ನಂಬಿ “ಕೇರ್‌ ಆಫ್‌ ಪುಟ್ಪಾತ್‌” ಆದ್ರಾ “ಪೊಲಿಟಿಕಲ್‌ 360” ಚಾನೆಲ್‌ ನ 250 ಸಿಬ್ಬಂದಿ..!?

ನಿರ್ದೇಶಕ ಸ್ಥಾನಕ್ಕೆ ಅಧೀಕೃತವಾಗಿ ರಾಜೀನಾಮೆ ಘೋಷಿಸಿದ “ಅರಮನೆ ಶಂಕರ್‌” ಬೆಂಗಳೂರು: ಇದು ನಿಜಕ್ಕೂ ಖಂಡನೀಯ…ಹಾಗೆಯೇ ಅಮಾನವೀಯ ಕೂಡ….ಯಾರೇ ಪತ್ರಕರ್ತರು ಕೆಲಸವಿಲ್ಲದೆ ಅತಂತ್ರರಾಗುವುದನ್ನು ನೋಡಿದಾಗ ಬೇಸರವಾಗುತ್ತದೆ.ಈ “ಫೀಲ್ಡ್‌” ಇಷ್ಟೊಂದು ಅಭದ್ರನಾ..? ಅಸುರಕ್ಷಿತನಾ..? ಅತಂತ್ರನಾ.? ಎಂಬ ನೋವುಂಟಾಗುತ್ತದೆ.ಪತ್ರಕರ್ತ ತನ್ನ ಸ್ವಯಂಕೃತಾಪರಾಧದಿಂದ ಅತಂತ್ರವಾಗೋದಕ್ಕೂ, ಅವರನ್ನು ನಂಬಿಸಿ ನಡು ದಾರೀಲಿ ಒಂಟಿಯಾಗಿಸೋದಕ್ಕೂ ಭಾರೀ ವ್ಯತ್ಯಾಸವಿದೆ.. .”ಪೊಲಿಟಿಕಲ್‌-360” ಎನ್ನುವ ಚಾನೆಲ್‌ನ ಕಥೆಯೂ ಸೇಮ್‌ ಟು ಸೇಮ್..ಕಣ್ಬಿಡುವ ಮುನ್ನವೇ ಅದರ ಕತ್ತುಹಿಸುಕುವ ಕೆಲಸ ಆ ಚಾನೆಲ್‌ ಮುನ್ನೆಡೆಸುತ್ತೇನೆ ಎಂದು ಹೇಳಿಕೊಂಡು, 250 ಕ್ಕೂ ಹೆಚ್ಚು ಸಿಬ್ಬಂದಿ … Read more