ಯಶವಂತಪುರ ಬೈ ಎಲೆಕ್ಷನ್‌ ಕನ್ಫರ್ಮ್….? S.T.ಸೋಮಶೇಖರ್‌ ಪಕ್ಕಾ..ಆದ್ರೆ ಎದುರಾಳಿ ಮೈತ್ರಿ ಅಭ್ಯರ್ಥಿ ಯಾರು…? ಜವರಾಯಿಗೌಡ/ನಿಖಿಲ್‌ ಕುಮಾರಸ್ವಾಮಿನಾ..?!

*3 ಬಾರಿ ಸೋತರೂ ಮತ್ತೊಂದು ಗೆಲುವಿನ ಅವಕಾಶದ ನಿರೀಕ್ಷೆಯಲ್ಲಿ ಜವರಾಯಿಗೌಡ.. *ಜವರಾಯಿಗೌಡರನ್ನೇ ಅಭ್ಯರ್ಥಿಯನ್ನಾಗಿಸಿ ದಳಪತಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ..? *ಜವರಾಯಿಗೌಡರಿಗಿಂತ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದೇವೆ ಎಂದು ಶಾಕ್‌ ಕೊಡ್ತಾರಾ..? *ಬಿಜೆಪಿ ಜವರಾಯಿಗೌಡ ಅವರನ್ನೇ ತಮ್ಮ ಮೈತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುತ್ತಾ..? *ದಳಪತಿಗಳು ಕೈ ಕೊಟ್ರ ಜವರಾಯಿಗೌಡ ನಿಲುವೇನು..? ಬೇರೆ ಅಭ್ಯರ್ಥಿಯನ್ನು ಒಪ್ಪಿಕೊಳ್ತಾರಾ..? ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾಗಿ ಮತ ಚಲಾಯಿಸುತ್ತಿದ್ದಂತೆ ಆಯಾ ಕ್ಷೇತ್ರ ಗಳಲ್ಲಿ ಬೈ ಎಲೆಕ್ಷನ್ ಆಗೋದು ಪಕ್ಕಾ … Read more

ದಿ-ಫೈಲ್ ಮಹಾಂತೇಶ್ ವಿರುದ್ದ ಬೇಹುಗಾರಿಕೆ…!?

ದಿಕ್ಕಾರವಿರಲಿ, ಸತ್ಯದ ಉಸಿರು ನಿಲ್ಲಿಸುವ ಆಳುವವರ  ದುಸ್ಸಾಹಸಕ್ಕೆ..! ಕುಲಗೆಟ್ಟು ಹೋಗಿರುವ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಪತ್ರಿಕೋದ್ಯಮವೂ ಬಹುತೇಕ ಕಲುಷಿತಗೊಂಡಿದೆ.ಸಿದ್ದಾಂತ-ಆದರ್ಶ-ವೃತ್ತಿನಿಷ್ಟೆ-ರಾಜಿಯಾಗದ ಮನಸ್ಥಿತಿ-ನಿಷ್ಟವಾದುದನ್ನ ನಿಷ್ಟೂರವಾಗಿ ಹೇಳುವ ಜಾಯಮಾನವನ್ನು ಶೇಕಡಾ 99 ರಷ್ಟು ಮಾದ್ಯಮಗಳು ಕಳಕೊಂಡುಬಿಟ್ಟಿವೆ ಎನ್ನುವುದು ದುರಂತವಾದ್ರೂ ಒಪ್ಪಿಕೊಳ್ಳಲೇಬೇಕಾದ ಸಂಗತಿ.ಇದರ ನಡುವೆಯೂ ಒಂದಷ್ಟು ವೃತ್ತಿಪಾವಿತ್ರ್ಯತೆಯನ್ನು ಮಾದ್ಯಮ ಉಳಿಸಿಕೊಂಡಿದೆ ಎನ್ನುವುದಾದ್ರೆ ಬೆರಳೆಣಿಕೆಯ ವಸ್ತುನಿಷ್ಟ ಪತ್ರಕರ್ತರೇ ಕಾರಣ..ಅಂಥಾ ಕೆಲವೇ ಕೆಲವು ಪತ್ರಕರ್ತರಲ್ಲಿ ಜಿ.ಮಹಾಂತೇಶ್ ಒಬ್ಬರು. ಅವರಲ್ಲಿ ಯಾವ ತರಹದ ವೃತ್ತಿನಿಷ್ಟೆಸತ್ಯಸಂದತೆಯಿನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸ್ಪೋಟಕ ಸುದ್ದಿಗಳನ್ನೇ ಪ್ರಧಾನವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ದಿ ಫೈಲ್ … Read more

EXCLUSIVE… BBMP ಯಿಂದ “ಬೀದಿ ನಾಯಿ ಕಲ್ಯಾಣ” ವೋ..!! “ಲೂಟಿ”ಯೋ..?! 1 ಮೈಕ್ರೋಚಿಪ್-195 ರೂ: 1,84,671 ಬೀದಿನಾಯಿ: 3 ಕೋಟಿ 81 ಲಕ್ಷ ವೆಚ್ಚ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಲ್ಲಿ ಹಗರಣದ ಸ್ವರೂಪ ಪಡೆಯುವ ಶಂಕೆ ಮೂಡಿಸಿರುವ  ಮತ್ತೊಂದು ಸುದ್ದಿ ಸದ್ದು ಮಾಡಿದೆ. ಬೀದಿನಾಯಿಗಳಿಗೆ ಅಳವಡಿಸಲು ಹೊರಟಿರುವ ಮೈಕ್ರೋಚಿಪ್ ಈಗ ಹಗರಣದ ಸ್ವರೂಪ ಪಡೆದುಕೊಳ್ಳುತ್ತಿದೆ.ಅನಗತ್ಯ ಹಾಗೂ ಅಪಾಯಕಾರಿಯಾಗಿರುವ ಮೈಕ್ರೋಚಿಪ್ ಅಳವಡಿಕೆ ನಿಯಮಬಾಹಿರ ಕೃತ್ಯ ಎಂದು ಪ್ರಾಣಿಪ್ರಿಯರು ಈಗ ವರಾತ ತೆಗೆದಿದ್ದಾರೆ. ನಾಯಿಗಳ ಸೆನ್ಸಸ್ ನಲ್ಲಿ ನಡೆಯಿತೆನ್ನಲಾದ ಹಗರಣದ ನಂತರ ಪಶುಪಾಲನಾ ಇಲಾಖೆಯಲ್ಲಿ ನಡೆಯೊಕ್ಕೆ ಹೊರಟಿರುವ ಹಗರಣ ಇದೆನ್ನಲಾಗಿದೆ. ಬೃಹತ್ತಾಗಿ ಬೆಳೆದಿರುವ ಬೆಂಗಳೂರಿನಲ್ಲಿ  ಬೀದಿನಾಯಿಗಳು ಎಷ್ಟಿವೆ ಎಂದು ಕೇಳಿದ್ರೆ ಕರಾರುವಕ್ಕಾಗಿ ಹೇಳೊಕ್ಕೆ … Read more

ಸಿಂ ಅಂಕಲ್, ನಮ್ಗೆ ಶಾಲೆಗೆ ಹೋಗ್ಲಿಕ್ಕೆ ಬಸ್ ಬಿಡಿಸಿ.ಶಾಲಾ ಬಾಲಕಿಯಿಂದ ಮುಖ್ಯಮಂತ್ರಿಗೆ ಭಾವನಾತ್ಮಕ ಮನವಿ

 ಬೆಂಗಳೂರಿನ ಹೊರವಲಯದಿಂದ ಅದೆಷ್ಟೋ ಪ್ರದೇಶಗಳಿಗೆ ಇನ್ನೂ BMTC ಬಸ್ ಇಲ್ಲವಂತೆ..? ಬೆಂಗಳೂರು: ಇದು ನಿಜಕ್ಕೂ ಮನಕಲಕುವ ಸುದ್ದಿ.ಓದುವ ಹಂಬಲ ಬೆಟ್ಟದಷ್ಟಿದ್ದರೂ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿನಿಯೋರ್ವಳು ತನ್ನಂತದ್ದೇ ಸಮಸ್ಯೆ ಎದುರಿಸುತ್ತಿರುವ ಹತ್ತಾರು ಮಕ್ಕಳ ಸಮಸ್ಯೆ ಬಗೆಹರಿಸಿಕೊಡಿ ಎಂದು ಮಾನ್ಯ ಮುಖ್ಯಮಂತ್ರಿ, ಬಿಎಂಟಿಸಿ ಎಂಡಿಗೆ ಬರೆದಿರುವ ವಿದ್ಯಾರ್ಥಿ ಕಾಳಜಿಯ ಪತ್ರ ಬರೆದಿರುವ ಸ್ಟೋರಿ. ಇದು ಏಕೆ ಬಹುಮುಖ್ಯ ಎನಿಸುತ್ತೆ ಎಂದ್ರೆ ಬಿಎಂಟಿಸಿ ಬಸ್ ಸೌಕರ್ಯ ಇದ್ದ ಹೊರತಾಗ್ಯೂ ಈ ಭಾಗಕ್ಕೆ ಮಾತ್ರ ಬಸ್ ಸೌಕರ್ಯ ಕಲ್ಪಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ … Read more

ಈ ಕನ್ನಡ ವಿರೋಧಿ IFS ರಮೇಶ್ ಕುಮಾರ್ ಬಗ್ಗೆ ಸರ್ಕಾರಕ್ಕೇಕೆ “ಮಮಕಾರ”..! “ಭ್ರಷ್ಟಾಚಾರ” ಆರೋಪವಿದ್ದಾಗ್ಯೂ ರಕ್ಷಿಸುತ್ತಿರೋದು ಯಾರು “ಸಚಿವ”ರೇ..?

ಬೆಂಗಳೂರು:ಅರಣ್ಯ ಇಲಾಖೆ ಇನ್ನೂ ಈ ಅಧಿಕಾರಿಯನ್ನು ಅದ್ಹೇಕೆ ಉಳಿಸಿಕೊಂಡಿದೆಯೋ ಅರ್ಥವಾಗುತ್ತಿಲ್ಲ.ಇಷ್ಟೊಂದು ಆರೋಪಗಳು ಬಂದ ಮೇಲೂ ಮುಜುಗರದಿಂದ ತಪ್ಪಿಸಿಕೊಳ್ಳಲಿಕ್ಕಾದ್ರೂ ಈ ಅಧಿಕಾರಿಯ ವಿರುದ್ಧ ಕ್ರಮಕ್ಕೋ..ತನಿಖೆಗೋ ಆದೇಶ ಕೊಡಬೇಕಿತ್ತು.ಆದರೆ ಅದ್ಯಾವುದನ್ನೂ ಮಾಡದೆ ದುಂಡಾವರ್ತನೆ ಮೆರೆಯೊಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅನೇಕ ಗುಮಾನಿ ಸೃಷ್ಟಿಸಿದೆ. ಅಂದ್ಹಾಗೆ ರಮೇಶ್ ಕುಮಾರ್ ಐಎಫ್ ಎಸ್..ಬಂಡಿಪುರ ಅರಣ್ಯ ವಲಯದ ಮುಖ್ಯ ಅರಣ್ಯಾಧಿಕಾರಿ…ಈ ಅಧಿಕಾರಿ ವಿರುದ್ಧ ಕೇಳಿಬಂದ ಆರೋಪ ಒಂದಾ ಎರಡಾ..? ಅಧಿಕಾರ ದುರ್ಬಳಕೆ,ವ್ಯಾಪಕ  ಭ್ರಷ್ಟಾಚಾರ, ಅನುದಾನ ದುರ್ವಿನಿಯೋಗ ,ಕರ್ತವ್ಯಲೋಪ…ಎಲ್ಲಕ್ಕಿಂತ ಹೆಚ್ಚಾಗಿ ಸಿಎಟಿಯಿಂದ ವರ್ಗಾವಣೆಗೆ ಆದೇಶ ಬಂದಾಗ್ಯೂ ಲಾಭಿ … Read more

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ “ಗೌಡ್ತಿ”ಯರು ಗರಂ: ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಚಾಲೆಂಜ್ ಮೇಲೆ ಚಾಲೆಂಜ್ ಎದುರಾಗುತ್ತಿದೆ.ಒಂದ್ ಮುಗೀತು ಎನ್ನುವಷ್ಟರಲ್ಲಿ ಮತ್ತೊಂದು ಟೆನ್ಷನ್ ಶುರುವಾಗ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ತಗಡು ಎಂದು ಸಂಬೋಧಿಸಿದ್ದಕ್ಕೆ ಒಕ್ಕಲಿಗ ಸಮುದಾಯ ತಿರುಗಿಬಿದ್ದ ಘಟನೆ ಬೆನ್ನಲ್ಲೇ  ಇದೀಗ ಗೌಡ್ತಿಯರು ಮಹಿಳೆಯರ ಬಗ್ಗೆ ದರ್ಶನ್ ತೀರಾ ಲಘುವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿದ್ದಾರೆ.ದರ್ಶನ್ ವಿರುದ್ಧ ಕಠಿಣ ಕ್ರಮ ಜಾರಿಯಾಗಬೇಕು ಎಂದು ಒತ್ತಾಯಿಸಿ  ಮಹಿಳಾ ಆಯೋಗಕ್ಕೆ  ದೂರು ಸಲ್ಲಿಕೆಯಾಗಿದೆ. ನಟ ದರ್ಶನ್ ಗೆ ಮತ್ತೆ ಹೊಸ ಸಂಕಷ್ಟ ಎದುರಾಗಿದೆ.ಸುಮ್ಮನಿರದೆ ಇರುವೆ … Read more

“ಅಡ್ಡಮತದಾನ”ಕ್ಕೆ ಕೋಟ್ಯಾಂತರ ಆಮಿಷ: ಮೈತ್ರಿ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ FIR

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಿಗೆ ಆಮೀಷ ಒಡ್ಡಲಾಯಿತು ಎನ್ನುವ  ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ್ದ ದೂರಿನ ಅನ್ವಯ ರಾಜ್ಯಸಭಾ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿ ನಾಲ್ವರ ವಿರುದ್ಧ FIR ದಾಖಲಾಗಿದೆ.ವಿಧಾನಸೌಧ ಪೊಲೀಸ್ ಠಾಣೆಯಲ್ಲಿ  ಕೇಸ್ ದಾಖಲಿಸಲಾಗಿದ್ದು ದೂರಿನ ಹಿನ್ನಲೆಯಲ್ಲಿ ಎಫ್ ಐ ಆರ್ ಲಾಡ್ಜ್ ಮಾಡಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ  ಪಕ್ಷೇತರ ಶಾಸಕರಿಗೆ ಬಿಜೆಪಿ ಮುಖಂಡರು ಅಡ್ಡಮತದಾನ ಮಾಡೊಕ್ಕೆ ಕೋಟ್ಯಾಂತರ ಆಮಿಷ ಒಡ್ಡಿದ್ದಾರೆ.ಆ ಪೈಕಿ  ಮಾಜಿ ಗೃಹ ಸಚಿವ ಎಂ.ಪಿ ಪ್ರಕಾಶ್ ಪುತ್ರಿ ಹಾಗೂ … Read more

ಮಾರ್ಚ್ 4ಕ್ಕೆ ಮುನ್ನವೇ ಪ್ರತಿಭಟನೆ: ಸಾರಿಗೆ ಕೂಟದ ಚಂದ್ರುಗೆ, ಜಂಟಿ ಕ್ರಿಯಾಸಮಿತಿ ಅನಂತಸುಬ್ಬರಾವ್ ತಿರುಗೇಟು

ಬೆಂಗಳೂರು: ಮಾರ್ಚ್ 4ಕ್ಕೆ ಸಾರಿಗೆ ಪ್ರತಿಭಟನೆ ಬಗ್ಗೆ ಈಗಾಗಲೇ ಸಾರಿಗೆ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿಕೆ ಕೊಟ್ಟಾಗಿದೆ.ಪ್ರೆಸ್ ಮೀಟೂ ಮಾಡಾಗಿದೆ. ಸಾರಿಗೆ ಸಂಘಟನೆಗಳನ್ನು ಕರೆಯಿಸಿ ಮಾತನಾಡುತ್ತಿರುವ ಮ್ಯಾನೇಜ್ನೆಂಟ್ ನಮ್ಮನ್ನು ಮಾತುಕತೆಗೆ ಆಹ್ವಾನಿಸಿಲ್ಲ ಎನ್ನುವ ಬೇಸರವೂ ಮಾರ್ಚ್ 4 ಪ್ರತಿಭಟನೆ ನಿರ್ದಾರಕ್ಕೆ ಕಾರಣ ಎನ್ನಲಾಗುತ್ತಿದೆ. ಸಾರಿಗೆ ಕೂಟ  ಹಾಗೂ ಬೆಂಬಲಿತ ಸಂಘಟನೆಗಳು ಇದನ್ನು ಬೆಂಬಲಿಸಿವೆ ಕೂಡ.ಆದರೆ ಸಾರಿಗೆ ಹೋರಾಟಗಳಲ್ಲಿ ದಶಕಗಳಷ್ಟು ಅನುಭವ ಇರುವ ಅನಂತಸುಬ್ಬರಾವ್ ಅವರಂಥ ಹಿರಿಯರಿಗೆ ಸಾರಿಗೆ ಕೂಟದ ನಿಲುವು-ಧೋರಣೆ ಬೇಸರ ಮೂಡಿಸಿರಬಹುದೆನಿಸುತ್ತಿದೆ. ಹಾಗಾಗಿನೇ ಮಾರ್ಚ್ 4 … Read more

“ಮನೆ” ನಿರ್ಮಾಣಕ್ಕೆ ಅಲೆಯುವಂಗಿಲ್ಲ..ಲಂಚಕೊಡುವಂಗಿಲ್ಲ..ಅಪ್ಲೈ ಮಾಡಿದ 3-4ದಿನಗಳಲ್ಲೇ “ಮನೆಬಾಗಿಲಿಗೆ ಪ್ಲ್ಯಾನ್ (ನಕ್ಷೆ)” ಭಾಗ್ಯ..

50*80 ವಿಸ್ತೀರ್ಣದವರೆಗಿನ  ಸ್ವತ್ತುದಾರರಿಗೆ ಮನೆ ನಿರ್ಮಿಸಲು ಸರ್ಕಾರದ ಬೊಂಬಾಟ್ “ಪ್ಲ್ಯಾನ್”. ಬೆಂಗಳೂರು: ಎಲ್ಲಾ ರೀತಿಯ ಸಮರ್ಪಕ ದಾಖಲೆ ಇದ್ಯಾಗ್ಯೂ ಮನೆ ಕಟ್ಟಿಸೊಕ್ಕೆ  ಪ್ಲ್ಯಾನ್ ಪಡೆಯಲು ಬಿಬಿಎಂಪಿ ಕಚೇರಿಗೆ ಅಲೆದಲೆದು ಸುಸ್ತಾಗಿದಿರಾ..? ಪ್ಲ್ಯಾನ್  ನೀಡಲು ಬಿಬಿಎಂಪಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರಾ..? ಇಲ್ಲದ ಸಬೂಬು  ನೀಡಿ ಚಪ್ಪಲಿ ಸವೆಸುವಂತೆ ಮಾಡ್ತಿದಾರ…? ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಾರಾ..?..ಇನ್ಮುಂದೆ ಹಾಗೆಲ್ಲಾ ಆಗೊಕ್ಕೆ ಸಾಧ್ಯನೇ ಇಲ್ಲ ಬಿಡಿ…ಏಕೆಂದರೆ ಕುಳಿತಲ್ಲೇ  ನಿಮ್ಮ ಕೈ ಬೆರಳುಗಳಲ್ಲಿ ಪ್ಲ್ಯಾನ್ ಪಡೆಯುವ ದಿನಗಳು ಹತ್ತಿರವಿಲ್ಲ..ಇಂತಹದೊಂದು ಅತ್ಯದ್ಭುತ ಪರಿಕಲ್ಪನೆ ಜಾರಿಗೊಳಿಸ್ಲಿಕ್ಕೆ ಬಿಬಿಎಂಪಿ ಮುಂದಾಗಿದೆ.ಅಂದ್ಹಾಗೆ … Read more

EXCLUSIVE..”ಖಡಕ್” IAS “ಮೌದ್ಗಿಲ್” ಎತ್ತಂಗಡಿಗೆ “ಪ್ಲ್ಯಾನ್”..! ಸರ್ಕಾರದ ಮಟ್ಟದಲ್ಲಿ “ಲಾಭಿ”..?

“B” ಖಾತೆಗಳಿಗೆ “A” ಖಾತೆ ಭಾಗ್ಯ ನೀಡಿ “ಕೋಟಿ”ಗಳಲ್ಲಿ ದುಂಡಗಾಗುತ್ತಿದ್ದಾರಾ ಕೆಲವು ಭ್ರಷ್ಟ “ಕಂದಾಯಾಧಿಕಾರಿಗಳು” ಬೆಂಗಳೂರು: ಬಿಬಿಎಂಪಿ(BBMP) ಕೇಂದ್ರ ಕಚೇರಿಯಲ್ಲಿ IAS  ಮನಿಷ್ ಮೌದ್ಗಿಲ್(MANISH MAUDGIL)  ಬಿಬಿಎಂಪಿ ಬೊಕ್ಕಸ ಹೇಗೆ ತುಂಬಿಸೋದು ಎಂದು ತಲೆಕೆಡೆಸಿಕೊಂಡು ಕೆಲಸ ಮಾಡ್ತಿದ್ರೆ ಅವರದೇ, ಕಂದಾಯ ವಿಭಾಗದ ಕೆಲವು ಭ್ರಷ್ಟ ಅಧಿಕಾರಿ ಸಿಬ್ಬಂದಿ ಸಾಹೇಬ್ರರು ಹೊರಡಿಸಿರುವ ಆ ಆದೇಶವನ್ನೇ ಲೂಟಿಕೋರತನಕ್ಕೆ ಮಿಸ್ಯೂಸ್ ಮಾಡಿಕೊಂಡಿರುವುದು ದುರಂತ.ಬಹುಷಃ ಮನಿಷ್ ಸಾಹೇಬ್ರು ಕಚೇರಿ ಬಿಟ್ಟು ವಲಯಗಳ ವ್ಯಾಪ್ತಿಯಲ್ಲಿರುವ ಕಂದಾಯ  ಕಚೇರಿಗಳನ್ನು ತಲಾಶ್ ಮಾಡಿ ಅಧಿಕಾರಿಗಳ ಬಂಡವಾಳ ಪರಿಶೀಲಿಸಿದ್ದೇ … Read more