ಬಿಎಂಟಿಸಿ ಸಿಬ್ಬಂದಿ ಯೂನಿಫಾರ್ಮ್ ಗೆ ಪುಡಿಗಾಸು..!

ಊಟಕ್ಕಿಲ್ಲದ ಉಪ್ಪಿನಕಾಯಿ,… ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ..ಆನೆ ಬಾಯಿಗೆ ಹಪ್ಪಳ..ಎನ್ನುವ ಗಾಧೆಗಳನ್ನು ನೆನಪಿಸುವಂತಿದೆ ಬಿಎಂಟಿಸಿ ಆಡಳಿತದ ಧೋರಣೆ.ಕಾರ್ಮಿಕ ಸಿಬ್ಬಂಧಿಯ ಕಲ್ಯಾಣಕ್ಕಾಗಿ ಜಾರಿಗೊಳಿಸುತ್ತಿರುವ ಕಾರ್ಯಕ್ರಮ ಹಾಗೂ ಯೋಜನೆಗಳು ಅವರ ಪ್ರಯೋಜನಕ್ಕೆ ಬಾರದಂತಾಗ್ತಿದೆ..ಇದಕ್ಕೆ ಸಾಕ್ಷಿಯಾಗುತ್ತಾ ಬಂದಿರುವುದು ಸಮವಸ್ತ್ರದ ಯೋಜನೆ.ದುರಂತ ಎಂದ್ರೆ ಈ ಬಾರಿಯೂ ಆ ಅಮಾನವೀಯ ಪರಂಪರೆ ಮುಂದುವರೆದಿದೆ. ಜಗತ್ತಿಗೆ ಜಗತ್ತೇ ಬದಲಾಗುತ್ತಿದೆ.ನಮ್ಮ ಜೀವನಶೈಲಿಗಳು ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿವೆ.ಹಾಗೆಯೇ ನಾವು ಬಳಸುತ್ತಿದ್ದ ಎಲ್ಲಾ ವಸ್ತುಗಳ ದರವೂ ದುಬಾರಿಯಾಗುತ್ತಿದೆ.ಆದರೆ ಎಲ್ಲಾ ಬದಲಾದರೂ ಬಿಎಂಟಿಸಿಯ ಆಡಳಿತದ ಮನಸ್ಥಿತಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ … Read more

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

ಸಚಿವ್ರೇ..!ನಿಮ್ಮೆ ಕಾಳಜಿ ಇದ್ರೆ ಮೊದಲು ಹಾಗೆ ಮಾಡಿ… ಬೆಂಗಳೂರು: ಅಪಘಾತಗಳ ಕಾರಣಕ್ಕೆ BMTC (bengaluru metopolitan transport corporatio)ಗೆ ಮೊದಲೆಲ್ಲಾ “ಕಿಲ್ಲರ್‌” ಎನ್ನುವ ಕಳಂಕ ಮೆಟ್ಟಿಕೊಳ್ತಿತ್ತು..ಅದನ್ನು ಸರಿಪಡಿಸುವ ಸಾಕಷ್ಟು ಕೆಲಸಗಳನ್ನು ನಿಗಮದ ಮಾಡಿದ ಕಾರಣಕ್ಕೇನೋ ಗೊತ್ತಿಲ್ಲ, ಅಪಘಾತಗಳ ಸಂಖ್ಯೆ ಕಡ್ಮೆಯಾಯ್ತು..ಸಾಯೋರ ಪ್ರಮಾಣ ವೂ ಕ್ಷೀಣಿಸ್ತು.ಆದರೆ ಕೆಲ ವರ್ಷಗಳ ಈಚೆಗೆ ನಡೀತಿರೋ ಅಪಘಾತಗಳು-ಅದಕ್ಕೆ ಕಾರಣವಾಗ್ತಿರುವ ಸಂಗತಿಗಳನ್ನು ಗಮನಿಸಿದ್ರೆ ಆತಂಕವಾಗುತ್ತೆ..ಕಿಲ್ಲರ್‌ ಎನ್ನುವ ಹಣೆಪಟ್ಟಿ ಮತ್ತೆ ಅಂಟಿಸಿಕೊಳ್ಳೊಕ್ಕೆ ನಿಗಮನೇ ಪ್ರಯತ್ನಿಸ್ತಿದೆಯಾ ಎನ್ನುವ ಶಂಕೆ ಕಾಡ್ತಿದೆ.ಇದಕ್ಕೆ ಕಾರಣ ಇವಿ ಬಸ್‌ ಗಳಿಂದಾಗುತ್ತಿರುವ ಅಪಘಾತ … Read more

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

-ಬೆಲ್ಲಕ್ಕೆ ನೊಣಗಳಂತೆ ಚಂದ್ರುವನ್ನು ಮುತ್ತಿಕೊಳ್ಳುತ್ತಿದ್ದ ಆ ಸಾರಿಗೆ ಸಿಬ್ಬಂದಿ ಎಲ್ಲೋದರು.? -ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತರಾ ಚಂದ್ರು-ಕಚೇರಿ ಬಾಡಿಗೆ ಕಟ್ಟಲಿಕ್ಕೂ ಪರದಾಡುತ್ತಿದ್ದಾರಾ..? -ನಾಯಕತ್ವದ ಗುಣಗಳಿಗೆ ತಿಲಾಂಜಲಿ ಇಟ್ಟು,ಸಾಮೂಹಿಕ ನಾಯಕತ್ವ ಮರೆತು ಸರ್ವಾಧಿಕಾರಿಯಂತಾಗಿದ್ದಕ್ಕೆ ಆಪ್ತರೇ ಕೊಟ್ಟ ಶಿಕ್ಷೆನಾ ಇದು..?! ಇಂಥಾ ಸ್ಥಿತಿ ಯಾವೊಬ್ಬ ವ್ಯಕ್ತಿಗೂ ಬರಬಾರದು..ಅದರಲ್ಲೂ ಅತೀ ಕಡಿಮೆ ಅವಧಿಯಲ್ಲಿ ರಾತ್ರೋ ರಾತ್ರಿ ದೊಡ್ಡ ಲೀಡರ್‌ ಆಗಿ ಬೆಳೆದು ಹೆಸರು ಮಾಡಿ, ಶ್ರಮಿಕ ಸಮುದಾಯದ ಪ್ರೀತಿಗೆ ಪಾತ್ರವಾಗಿ, ತನ್ನ ಮಾತಿಗೆ ತಲೆ ಬಾಗುವ ಮಟ್ಟದಲ್ಲಿ ಅವರ ಮನಸಿನಲ್ಲಿ ಉಳಿದುಕೊಂಡಿದ್ದ … Read more

“ಅಧಿಕಾರಿ”ಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ “ಇವ್ರು” ಬಸ್ ಓಡಿಸೊಲ್ಲವಂತೆ!

****ಸಾರಿಗೆ ಮುಷ್ಕರದ ನಿರ್ದಾರಕ್ಕೆ ಹೊಸ ಟ್ವಿಸ್ಟ್: ಅಧಿಕಾರಿಗಳಿಗೆ ಸವಾಲೆಸೆದ ಸಾರಿಗೆ ಸಿಬ್ಬಂದಿ ****ಸಾರಿಗೆ ಸಿಬ್ಬಂದಿ ಜತೆ ಅಧಿಕಾರಿ ವರ್ಗ ಕೈ ಜೋಡಿಸಿದ್ರೆ ಇತಿಹಾಸ ನಿರ್ಮಾಣ ಪಕ್ಕಾ ****ಪ್ರತಿ ಮುಷ್ಕರಕ್ಕು ಪ್ರಚೋದನೆ ಕೊಟ್ಟು, ಒಳಗೆ ಕುಳಿತುಕೊಳ್ಳುವ ಅಧಿಕಾರಿ ವರ್ಗಕ್ಕೆ ಸಿಬ್ಬಂದಿ ಠಕ್ಕರ್ ****ಒಳ್ಳೇದಾದ್ರೆ ಇಬ್ಬರಿಗೂ ಆಗಲಿ..ಕೆಟ್ಟದಾದ್ರೂ ಇಬ್ಬರಿಗೂ ಆಗಲಿ..ಪ್ರತಿಫಲ ನಿಮ್ಗೆ-ಶಿಕ್ಷೆ ಭಾಗ್ಯ ನಮಗೆ ಮಾತ್ರ ಏಕೆ..? ಬೆಂಗಳೂರು:ಪ್ರತಿ ಬಾರಿ  ಮುಷ್ಕರ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಳ್ಳೋದು ನಾವು..ಸೇಫ್ ಆಗೋದು ಅಧಿಕಾರಿಗಳಾ..? ಇದ್ಯಾವ ಸೀಮೆಯ ನ್ಯಾಯ.ಇನ್ಮುಂದೆ ಹಾಗೆ ನಡೆಯೊಕ್ಕೆ ನಾವು ಬಿಡೊಲ್ಲ..ನಮಗೆ … Read more

ksrtc ಚಾಲನಾ ಸಿಬ್ಬಂದಿಯ “ಡ್ಯೂಟಿ ರೋಟಾ ಕೌನ್ಸೆಲಿಂಗ್” ನಲ್ಲೂ “ಅಕ್ರಮ”ದ ಶಂಕೆ..! ಹೈಕೋರ್ಟ್‌ ಆದೇಶಕ್ಕಾದ್ರೂ ಬೆಲೆ ಕೊಡ್ತಾರಾ ಅಧಿಕಾರಿಗಳು..?

ಶಿವಮೊಗ್ಗ: ಕೇಂದ್ರ ಕಚೇರಿ ಹೊರಡಿಸುವ ಸುತ್ತೋಲೆಗಳು ಜಿಲ್ಲೆಗಳಲ್ಲಿ ಬೆಲೆ ಕಳೆದುಕೊಂಡು ಬಿಟ್ಟಿವೆಯಾ..? ಬೆಲೆನೇ ಇಲ್ಲ ಅಂದ ಮೇಲೆ,ಅವುಗಳ ಪಾಲನೆಯೇ ಆಗೊಲ್ಲ ಎಂದಾದ್ರೆ ಸುತ್ತೋಲೆಗಳನ್ನು ಯಾಕಾದ್ರೂ ಹೊರಡಿಸಬೇಕೋ ಗೊತ್ತಾಗುತ್ತಿಲ್ಲ.ಇದನ್ನೆಲ್ಲಾ ಹೇಳೊಕ್ಕೆ ಕಾರಣವೇ ಶಿವಮೊಗ್ಗ ವಿಭಾಗೀಯ ಕಚೇರಿಯಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಅವ್ಯವಸ್ಥೆ ಹಾಗೂ ಅಂದದರ್ಬಾರ್‌. ಚಾಲನಾ ಸಿಬ್ಬಂದಿಗಳಿಗೆ ಡ್ಯೂಟಿ ರೋಟಾ ಕೌನ್ಸೆಲಿಂಗ್ ಮೂಲಕ ಚಾಲನಾ ಸಿಬ್ಬಂದಿಗಳಿಗೆ ಮಾರ್ಗಚರಣೆಯ ಮಾರ್ಗಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.ಅಂದ್ಹಾಗೆ ಇದೊಂದು ಸಹಜ ಪ್ರಕ್ರಿಯೆ.ಎಲ್ಲವೂ ಪಾರದರ್ಶಕ ವಾಗಿ ನಡೆಯಬೇಕು. ಯಾರೊಬ್ಬರಿಗೂ ಸಮಸ್ಯೆ ಆಗಬಾರದು.ಯಾವುದೇ ಚಾಲನಾ ಸಿಬ್ಬಂದಿ … Read more

EXCLUSIVE..ತೆಲಂಗಾಣದ ನಂತರ ಉತ್ತರ ಪ್ರದೇಶ-ಆಂದ್ರಪ್ರದೇಶಗಳಲ್ಲೂ “ಶಕ್ತಿ” ಯೋಜನೆ ಅನುಷ್ಟಾನ..!

ಜನವರಿ ಮೊದಲ ವಾರದಲ್ಲಿ ಆಂದ್ರಪ್ರದೇಶ ಮತ್ತು ಫೆಬ್ರವರಿ 2ನೇ ವಾರದಲ್ಲಿ ಉತ್ತರ ಪ್ರದೇಶ ರಾಜ್ಯಗಳ ನಿಯೋಗ ಕರ್ನಾಟಕಕ್ಕೆ ಭೇಟಿ ಸಾಧ್ಯತೆ ಬೆಂಗಳೂರು/ತೆಲಂಗಾಣ: ಕರ್ನಾಟಕ(KARNATAKA)ವನ್ನು ಅನೇಕ ವಿಚಾರಗಳಲ್ಲಿ ಕೆಟ್ಟದಾಗಿ ಬಿಂಬಿಸುವ ಪ್ರವೃತ್ತಿ ರಾಜಕೀಯದಲ್ಲಿ ನಡೆಯುತ್ತಲೇ ಬಂದಿದೆ.ಕರ್ನಾಟಕದಲ್ಲಿ ಜಾರಿಗೊಳಿಸಲಾದ “ಉಚಿತ”ಗಳಿಂದ ರಾಜ್ಯ ಬರ್ಬಾದ್ ಆಗಿದೆ.ಅಭಿವೃದ್ಧಿಗೆ ಹಣವಿಲ್ಲ ಎಂದು ಬಿಂಬಿಸಿ ಅದನ್ನು  ಚುನಾವಣೆ ವೇಳೆ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸೇರಿದಂತೆ ಅನೇಕ ವಿಪಕ್ಷಗಳು ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದ್ದವು.ಆದರೆ ತೆಲಂಗಾಣ(TELANGANA) ದಲ್ಲಿ ಕಾಂಗ್ರೆಸ್(CONGRESS) ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಘೋಷಿಸಿದ್ದ ಭರವಸೆಗಳನ್ನು  ಜಾರಿ ಮಾಡಿದ ಬೆನ್ನಲ್ಲೇ … Read more

BMTC ಸಿಬ್ಬಂದಿ ಪಾಲಿಗೆ ಕತ್ತಲಾದ ದೀಪಾವಳಿ, KSRTC ಸಿಬ್ಬಂದಿಗೆ ಫುಲ್ ಸ್ಯಾಲರಿ!

ಬೆಂಗಳೂರು: ಎಲ್ಲಾ ನಿಗಮಗಳ ಸಾರಿಗೆ ಸಿಬ್ಬಂದಿಯನ್ನೂ ಒಂದೇ ರೀತಿ ಸರ್ಕಾರ ಟ್ರೀಟ್ ಮಾಡಬೇಕಾಗುತ್ತದೆ.ಅದು ಸ್ವಾಭಾವಿಕ ಅಷ್ಟೇ ಅಲ್ಲ ಸಾಮಾಜಿಕ ನ್ಯಾಯ ಕೂಡ ಹೌದು..ಆದ್ರೆ ಪರಸ್ಪರರು ಹಿಡಿಶಾಪ ಹಾಕಿಕೊಳ್ಳುವ ,ಬೈಯ್ದಾಡಿಕೊಳ್ಳುವ,ಆರೋಪ-ಪ್ರತ್ಯಾರೋಪಗಳಲ್ಲಿ ಸಂಘರ್ಷಕ್ಕಿಳಿಯುವ ಮಟ್ಟಕ್ಕೆ  ನಿಗಮಗಳ ಸಿಬ್ಬಂದಿಯ ನಡುವೆ ತಂದಿಟ್ಟು ತಮಾಷೆ ನೋಡುವ ಕೆಲಸವನ್ನು ಸರ್ಕಾರ ಮಾಡಿದ್ರೆ ಹೇಗೆ..? ಅದನ್ನು ಸಹಿಸಿಕೊಳ್ಳಲಿಕ್ಕೆ ಆಗುತ್ತಾ..? ಖಂಡಿತಾ ಇಲ್ಲ. ಕೆಎಸ್ ಆರ್ ಟಿಸಿ(KSRTC) ಹಾಗೂ ಬಿಎಂಟಿಸಿ (BMTC) ಸಿಬ್ಬಂದಿ ಪರಿಸ್ತಿತಿ ಹಾಗೆಯೇ ಆಗಿದೆ.ಇದಕ್ಕೆಲ್ಲಾ ಕಾರಣ  ಬೆಳಕಿನ ಹಬ್ಬ ದೀಪಾವಳಿ(DEEPAVALI FESTIAVAL) ಆಚರಣೆಗೆ ಪೂರಕವಾಗಿ … Read more

ಸಿಂ ಅಂಕಲ್, ನಮ್ಗೆ ಶಾಲೆಗೆ ಹೋಗ್ಲಿಕ್ಕೆ ಬಸ್ ಬಿಡಿಸಿ.ಶಾಲಾ ಬಾಲಕಿಯಿಂದ ಮುಖ್ಯಮಂತ್ರಿಗೆ ಭಾವನಾತ್ಮಕ ಮನವಿ

 ಬೆಂಗಳೂರಿನ ಹೊರವಲಯದಿಂದ ಅದೆಷ್ಟೋ ಪ್ರದೇಶಗಳಿಗೆ ಇನ್ನೂ BMTC ಬಸ್ ಇಲ್ಲವಂತೆ..? ಬೆಂಗಳೂರು: ಇದು ನಿಜಕ್ಕೂ ಮನಕಲಕುವ ಸುದ್ದಿ.ಓದುವ ಹಂಬಲ ಬೆಟ್ಟದಷ್ಟಿದ್ದರೂ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿನಿಯೋರ್ವಳು ತನ್ನಂತದ್ದೇ ಸಮಸ್ಯೆ ಎದುರಿಸುತ್ತಿರುವ ಹತ್ತಾರು ಮಕ್ಕಳ ಸಮಸ್ಯೆ ಬಗೆಹರಿಸಿಕೊಡಿ ಎಂದು ಮಾನ್ಯ ಮುಖ್ಯಮಂತ್ರಿ, ಬಿಎಂಟಿಸಿ ಎಂಡಿಗೆ ಬರೆದಿರುವ ವಿದ್ಯಾರ್ಥಿ ಕಾಳಜಿಯ ಪತ್ರ ಬರೆದಿರುವ ಸ್ಟೋರಿ. ಇದು ಏಕೆ ಬಹುಮುಖ್ಯ ಎನಿಸುತ್ತೆ ಎಂದ್ರೆ ಬಿಎಂಟಿಸಿ ಬಸ್ ಸೌಕರ್ಯ ಇದ್ದ ಹೊರತಾಗ್ಯೂ ಈ ಭಾಗಕ್ಕೆ ಮಾತ್ರ ಬಸ್ ಸೌಕರ್ಯ ಕಲ್ಪಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ … Read more

ಮಾರ್ಚ್ 4ಕ್ಕೆ ಮುನ್ನವೇ ಪ್ರತಿಭಟನೆ: ಸಾರಿಗೆ ಕೂಟದ ಚಂದ್ರುಗೆ, ಜಂಟಿ ಕ್ರಿಯಾಸಮಿತಿ ಅನಂತಸುಬ್ಬರಾವ್ ತಿರುಗೇಟು

ಬೆಂಗಳೂರು: ಮಾರ್ಚ್ 4ಕ್ಕೆ ಸಾರಿಗೆ ಪ್ರತಿಭಟನೆ ಬಗ್ಗೆ ಈಗಾಗಲೇ ಸಾರಿಗೆ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿಕೆ ಕೊಟ್ಟಾಗಿದೆ.ಪ್ರೆಸ್ ಮೀಟೂ ಮಾಡಾಗಿದೆ. ಸಾರಿಗೆ ಸಂಘಟನೆಗಳನ್ನು ಕರೆಯಿಸಿ ಮಾತನಾಡುತ್ತಿರುವ ಮ್ಯಾನೇಜ್ನೆಂಟ್ ನಮ್ಮನ್ನು ಮಾತುಕತೆಗೆ ಆಹ್ವಾನಿಸಿಲ್ಲ ಎನ್ನುವ ಬೇಸರವೂ ಮಾರ್ಚ್ 4 ಪ್ರತಿಭಟನೆ ನಿರ್ದಾರಕ್ಕೆ ಕಾರಣ ಎನ್ನಲಾಗುತ್ತಿದೆ. ಸಾರಿಗೆ ಕೂಟ  ಹಾಗೂ ಬೆಂಬಲಿತ ಸಂಘಟನೆಗಳು ಇದನ್ನು ಬೆಂಬಲಿಸಿವೆ ಕೂಡ.ಆದರೆ ಸಾರಿಗೆ ಹೋರಾಟಗಳಲ್ಲಿ ದಶಕಗಳಷ್ಟು ಅನುಭವ ಇರುವ ಅನಂತಸುಬ್ಬರಾವ್ ಅವರಂಥ ಹಿರಿಯರಿಗೆ ಸಾರಿಗೆ ಕೂಟದ ನಿಲುವು-ಧೋರಣೆ ಬೇಸರ ಮೂಡಿಸಿರಬಹುದೆನಿಸುತ್ತಿದೆ. ಹಾಗಾಗಿನೇ ಮಾರ್ಚ್ 4 … Read more

“ಕಳಂಕಿತ” ಅಧಿಕಾರಿ ನಾಗರಾಜಮೂರ್ತಿ ಬೆನ್ನಿಗೆ ನಿಂತಿರುವುದೇಕೆ BMTC ಆಡಳಿತ..?!

ಅಕ್ರಮ ಕಣ್ಣಿಗೆ ರಾಚುವಂತಿದ್ರೂ  ಡಿ ಸಿ.ನಾಗರಾಜಮೂರ್ತಿ ವಿರುದ್ದ ಕ್ರಮವೇಕಿಲ್ಲ…?! BMTCಯಲ್ಲಿ  ಇದೆಂಥಾ ಅನ್ಯಾಯ..!? ಕ್ಷುಲ್ಲಕ ತಪ್ಪೆಸಗಿದ್ರೆ ಸಿಬ್ಬಂದಿಗೆ ಸಸ್ಪೆಂಡ್-ಡಿಸ್ಮಿಸ್.. ಗಂಭೀರ ಆಪಾದನೆಯಿದ್ರೂ ಕ್ಷಮಾದಾನ..?! ಬೆಂಗಳೂರು: ಬಿಎಂಟಿಸಿ ಆಡಳಿತದ ಕಾರ್ಮಿಕ ವಿರೋಧಿ ಧೋರಣೆ ಮತ್ತೆ ಸಾಬೀತಾಗಿದೆ.ನಮ್ಮ ಬೆಂಬಲ-ಸಹಕಾರ ಯಾವತ್ತಿದ್ರೂ ಅಧಿಕಾರಿಗಳಿಗೇ ವಿನಃ ,ಕೆಳಹಂತದ ಸಿಬ್ಬಂದಿಗಲ್ಲ. ಅಧಿಕಾರಿಗಳು ಕಣ್ಣಿಗೆ ರಾಚುವಂತ ಗಂಭೀರ ಸ್ವರೂಪದ ತಪ್ಪು ಮಾಡಿದ್ರೂ ಅವರನ್ನು ರಕ್ಷಿಸುವುದೇ ನಮ್ಮ ಮೂಲಮಂತ್ರ.ಹಾಗೆಯೇ ಕೆಳಹಂತದ ಸಿಬ್ಬಂದಿ ಕ್ಷುಲ್ಲಕ ಎನಿಸುವಂತ ತಪ್ಪೆಸಗಿದ್ರೂ ನಮಗದು ಗಂಭೀರ.ಅವರನ್ನು ಅಮಾನತುಗೊಳಿಸದೆ ಬಿಡೋ ಪ್ರಶ್ನೆಯೇ ಇಲ್ಲ ಎನ್ನುವಂತ ಆಡಳಿತದ … Read more