ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಚಾಲೆಂಜ್ ಮೇಲೆ ಚಾಲೆಂಜ್ ಎದುರಾಗುತ್ತಿದೆ.ಒಂದ್ ಮುಗೀತು ಎನ್ನುವಷ್ಟರಲ್ಲಿ ಮತ್ತೊಂದು ಟೆನ್ಷನ್ ಶುರುವಾಗ್ತಿದೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ತಗಡು ಎಂದು ಸಂಬೋಧಿಸಿದ್ದಕ್ಕೆ ಒಕ್ಕಲಿಗ ಸಮುದಾಯ ತಿರುಗಿಬಿದ್ದ ಘಟನೆ ಬೆನ್ನಲ್ಲೇ  ಇದೀಗ ಗೌಡ್ತಿಯರು ಮಹಿಳೆಯರ ಬಗ್ಗೆ ದರ್ಶನ್ ತೀರಾ ಲಘುವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿದ್ದಾರೆ.ದರ್ಶನ್ ವಿರುದ್ಧ ಕಠಿಣ ಕ್ರಮ ಜಾರಿಯಾಗಬೇಕು ಎಂದು ಒತ್ತಾಯಿಸಿ  ಮಹಿಳಾ ಆಯೋಗಕ್ಕೆ  ದೂರು ಸಲ್ಲಿಕೆಯಾಗಿದೆ.

ನಟ ದರ್ಶನ್ ಗೆ ಮತ್ತೆ ಹೊಸ ಸಂಕಷ್ಟ ಎದುರಾಗಿದೆ.ಸುಮ್ಮನಿರದೆ ಇರುವೆ ಬಿಟ್ಟುಕೊಂಡರು ಎನ್ನುವಂತೆ ದರ್ಶನ್ ಪರಿಸ್ಥಿತಿಯಾಗಿದೆ.ಕಾಟೇರ  ಚಿತ್ರದ 50 ದಿನಗಳ ಸಕ್ಸೆಸ್ ಸೆಲಬ್ರೇಷನ್ ನಲ್ಲಿ ಸುಮ್ಮನೆ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದಿದ್ದರೆ ಸಾಕಿತ್ತು..ಅವರ ಬಾಯಿಂದ ಬಂದ  ಅ ಒಂದು ಪದ ಅನಗತ್ಯವಾದ ಕಾಂಟ್ರವರ್ಸಿಯಲ್ಲಿ ಸಿಕ್ಕಾಕಿಕೊಳ್ಳುವಂತೆ ಮಾಡಿದೆ.

ದರ್ಶನ್ ಪ್ರಜ್ನಾಪೂರ್ವಕವಾಗಿ ಹಾಗೆ ಮಾತನಾಡಿದ್ರೋ ಅಥವಾ ಮಾತಿನ ಭರಾಟೆಯಲ್ಲಿ ಅವರಿಂದ ಹಾಗೊಂದು ಮಾತು ಬಂತೋ ಗೊತ್ತಿಲ್ಲ.ಒಂದು ಕಾಲದಲ್ಲಿ ಅನ್ನ ಹಾಕಿದ ನಿರ್ಮಾಪಕ ಉಮಾಪತಿ ಅವರನ್ನು ತಗಡು ಎಂದುಬಿಟ್ಟರು.ಇದು ಇಂಥಾ ಕಾಂಟ್ರವರ್ಸಿಯೊಂದನ್ನು ಸೃಷ್ಟಿಸುತ್ತೆ ಎಂದು ಸ್ವತಃ ದರ್ಶನ್ ಗೂ ಗೊತ್ತಿರಲಿಕ್ಕಿಲ್ಲ ಎನ್ನಿಸುತ್ತೆ.ಅದು ವಿಕೋಪಕ್ಕೆ ತಿರುಗಿದೆ

ಒಕ್ಕಲಿಗ ಸಮುದಾಯಕ್ಕೆ ಸೇರಿದ ಉಮಾಪತಿ ಅವರಿಗಾದ ಅವಮಾನ ಅದು  ಕೇವಲ ಅವರಿಗಷ್ಟೇ ಅಲ್ಲ, ಇಡೀ ಸಮುದಾಯಕ್ಕೆ ಆದ ಅಪಮಾನ ಎಂದು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಮುದಾಯ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆಗೆ ಪ್ಲ್ಯಾನ್ ಮಾಡಿರುವುದು ಗೊತ್ತಿರುವ ವಿಚಾರವೇ.

ಅದರ ಬೆನ್ನಲ್ಲೇ ಗೌಡ್ತಿಯರ ಸಂಘಟನೆ ಜಯಶ್ರೀ ಎಂಬುವವರ ನೇತೃತ್ವದಲ್ಲಿ ದರ್ಶನ್ ಗೆ ಸಂಬಂಧಿಸಿದಂತೆ ನಡೆದ ಪ್ರಕರಣವೊಂದರಲ್ಲಿ  ಲಿಖಿತ ರೂಪದಲ್ಲಿ ದೂರು ನೀಡಿದೆ.ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿಪರ್ವದಲ್ಲಿ ದರ್ಶನ್ ಮಾತಿನ ಲಹರಿಯಲ್ಲಿ, ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ರಂತೆ “ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ..” ಎಂದಿದ್ದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮೇಲ್ಕಂಡ ಕಾರ್ಯಕ್ರಮದಲ್ಲಿ ದರ್ಶನ್ ಈ ವಾಕ್ಯಗಳನ್ನು  ತಮ್ಮ ವೈಯಕ್ತಿಕ ಜೀವನದ ಕುರಿತು ಹೇಳಿದ್ದರಾದ್ರೂ ಅದು ಮಹಿಳಾ ಸಂಕುಲಕ್ಕೆ ಮಾಡಿದ ಅಪಮಾನ ಎಂದು ಭಾವಿಸಿರುವ ಗೌಡ್ತಿಯರು  ಮಹಿಳಾ ಆಯೋಗದ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.ಇದು ದರ್ಶನ್ ಗೆ ಇನ್ನ್ಯಾವ ಸಂಕಷ್ಟ ತಂದೊಡ್ಡಲಿದೆಯೋ ಕಾದು ನೋಡಬೇಕಿದೆ.

Spread the love

Leave a Reply

Your email address will not be published. Required fields are marked *