ಟಿವಿ9 ಕನ್ನಡದಲ್ಲಿ ಕೆಲ ಸುದ್ದಿಮಿತ್ರರಿಗೆ “ಗೇಟ್ ಪಾಸ್”..! ಪ್ರಾಮಾಣಿಕ ಸಿಬ್ಬಂದಿ “ಕೇರ್ ಆಫ್ ಪುಟ್ಪಾತ್..!”

ಟಿವಿ9 ಕೇಂದ್ರ ಮ್ಯಾನೇಜ್ಮೆಂಟ್‌ ನಿಗಧಿಪಡಿಸಿದ ಮಾನದಂಡವೇ ನಿರ್ಲಕ್ಷ್ಯ:..! ಬೆಂಗಳೂರು ಕಚೇರಿಯಲ್ಲಿ ದರ್ಬಾರ್‌ ನಡೆಸ್ತಿರುವವರಿಂದ ನಿಜಕ್ಕೂ ಅರ್ಹರಿಗೆ ಆಗೋಯ್ತಾ ಅನ್ಯಾಯ..? ಬೆಂಗಳೂರು:ಟಿವಿ9  ಕನ್ನಡ(TV9 KANNADA)ದ ಕಚೇರಿಯ ಇತಿಹಾಸದಲ್ಲೇ ಇಷ್ಟೊಂದು ಭೀತಿ-ಆತಂಕದ ವಾತಾವರಣ  ಹಿಂದೆಂದೂ ನಿರ್ಮಾಣವೇ ಆಗಿರಲಿಕ್ಕಿಲ್ಲವೇನೋ..? ಫಾರ್‌ ದಿ ಫಸ್ಟ್‌ ಟೈಮ್‌ ಚಾನೆಲ್‌ ನ ಕಚೇರಿಯಲ್ಲಿ ಭಯದ ದೊಡ್ಡ  ಸುನಾಮಿನೇ ಎದ್ದಿದೆ.ಯೆಸ್..ಈ ಸುನಾಮಿ ಸಾಕಷ್ಟು ಉದ್ಯೋಗಿಗಳ “ತುತ್ತ”ನ್ನೇ ಕಸಿದುಕೊಂಡಿದೆ.ಇದಕ್ಕೆಲ್ಲಾ ಕಾರಣ ಅನಗತ್ಯ ಅಥವಾ ಹೆಚ್ಚು”ವರಿ”ವೆಚ್ಚಗಳ ಕಡಿತ ಎನ್ನಲಾಗಿದೆ.ಈ ಪೈಕಿ ಕೆಲಸ ಕಳೆದುಕೊಂಡಿರುವವರಲ್ಲಿ ಹೆಚ್ಚಿನವರು ಬೆಂಗಳೂರು ಕೇಂದ್ರ ಕಚೇರಿ ಮತ್ತು … Read more

ಕ್ರೈಂ ವರದಿಗಾರನ ಸಸ್ಪೆನ್ಸ್-ಥ್ರಿಲ್ಲರ್ ಅನುಭವವೇ “ಕಪ್ಪುಹುಂಜ” ಕಾದಂಬರಿಯಾದಾಗ..?

ಕ್ರೈಂ ಸುದ್ದಿ (crime news)ಜಗತ್ತಿನಲ್ಲಿ ಅಪರಾಧವೊಂದರ ಬೆನ್ನತ್ತಿ ವರದಿಗಾರಿಕೆ(reporting) ಮಾಡುವುದು ಒಬ್ಬ ಕ್ರೈಂ ರಿಪೋರ್ಟರ್‌ ಗೆ, ತನಿಖಾಧಿಕಾರಿಯ ಇನ್ವೆಸ್ಟಿಗೇ಼ಷನ್‌(investigation) ನಷ್ಟೇ ಸವಾಲಿನದು ಹಾಗೆಯೇ ಕ್ಲಿಷ್ಟವಾದದ್ದು, ಎಲ್ಲ ಮೀರಿ ರೋಚಕವಾದದ್ದು. ಅದಕ್ಕೊಂದು ತಾರ್ಕಿಕ ಅಂತ್ಯ ಕೊಡೋದಿದೆಯೆಲ್ಲಾ ಅದು ನೀಡುವ ಸಮಾಧಾನ-ಆತ್ಮತೃಪ್ತಿ ತುಂಬಾ ದೊಡ್ಡದು.ನಮ್ಮ ಕ್ರೈಂ ಸುದ್ದಿಮಿತ್ರರ ದೈನಂದಿನ ವೃತ್ತಿ ಯಾವುದಾದರೊಂದು ಕ್ರೈಂನ ಸುತ್ತವೇ ಸುತ್ತುತ್ತಲಿರುತ್ತದೆ.ಅದರ ಫಾಲೋಅಪ್‌, ಟ್ವಿಸ್ಟ್‌, ಯೂಟರ್ನ್‌.. ಹೀಗೆಯೇ ನಡೆದಿರುತ್ತದೆ.ಅದನ್ನೆಲ್ಲಾ ಕ್ರೋಢೀಕರಿಸಿದ್ರೆ ಎಲ್ಲರೂ ಒಂದೊಂದು ಕಥೆ-ಕಾದಂಬರಿ ಬರೆಯಬಲ್ಲಷ್ಟು ಅಗಾಧ ಅನುಭವ ಪಡೆದಿರುತ್ತಾರೆ. ಯಾವುದಾದರೂ ಅನುಭವಿ ಕ್ರೈಂ ರಿಪೋರ್ಟರ್‌(crime … Read more

ಟಿವಿ 9 ಸಮೂಹಕ್ಕೆ “ಆರ್ಥಿಕ” ಹಿಂಜರಿಕೆಯೇ..!? ಅನಗತ್ಯ “ವೆಚ್ಚ”ಕ್ಕೂ ಬ್ರೇಕ್‌..! ಸಧ್ಯಕ್ಕೆ ಸಿಬ್ಬಂದಿಗಿಲ್ಲವಂತೆ “ಅಭದ್ರತೆ”ಯ ಆತಂಕ…!

ಇದನ್ನು ಅಘಾತಕಾರಿ ಎನ್ನಬೇಕೋ.. ಆತಂಕಕಾರಿ ಎನ್ನಬೇಕೋ..ಅಥವಾ ನಿರೀಕ್ಷಿತ ಎನ್ನಬೇಕೋ ಗೊತ್ತಾಗ್ತಿಲ್ಲ.ಕನ್ನಡದ ನಂಬರ್‌ 1 ಚಾನೆಲ್‌ ಟಿವಿ9 ನ  ಮಾತೃ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಸಾಕಷ್ಟು ಚಾನೆಲ್‌ ಗಳು ಆರ್ಥಿಕ ನಷ್ಟದಲ್ಲಿವೆ ಎನ್ನುವ ಸುದ್ದಿ ಮಾರುಕಟ್ಟೆಯಲ್ಲಿ ಪಸರ್‌ ಆಗ್ತಿದೆ. ಟಿವಿ9 ಟ್ಯಾಗ್‌ ನ ಅಡಿಯಲ್ಲಿ ನಡೆಯುತ್ತಿರುವ ಚಾನೆಲ್‌ ಗಳ ಪೈಕಿ ಲಾಭದಲ್ಲಿರುವುದು ಕೇವಲ ಟಿವಿ9 ಕನ್ನಡ ಎನ್ನಲಾಗ್ತಿದೆ.ಉಳಿದ ಪ್ರಾದೇಶಿಕ ಭಾಷೆಯ ನ್ಯೂಸ್‌ ಚಾನೆಲ್‌ ಗಳ ಆರ್ಥಿಕತೆ ಕುಸಿದುಬಿದ್ದಿದೆಯಂತೆ.ಇದನ್ನು ಸರಿದೂಗಿಸುವ ಕಾರಣಕ್ಕೆ ಮ್ಯಾನೇಜ್ಮೆಂಟ್‌ ಮೊದಲ ಹಂತದಲ್ಲಿ ಕೈ ಹಾಕಿರುವುದು ಅನಗತ್ಯ … Read more

ಖ್ಯಾತ ವಿಜ್ಞಾನಿ,ಸಾಹಿತಿ ಪ್ರಸನ್ನ ಸಂತೆಕಡೂರು ಗೆ ವಿಶ್ವದ ಐವರು ಅಗ್ರಗಣ್ಯ ವಿಜ್ಞಾನಿಗಳಲ್ಲಿ ಸ್ಥಾನ

ಸಂಶೋ‍ಧಕನಾಗಷ್ಟೇ ಸೀಮಿತಗೊಳ್ಳದೆ ಸಾಹಿತ್ಯಕ್ಕೂ ತನ್ನನ್ನು ತೆರೆದುಕೊಂಡು ಯಶಸ್ವಿಯಾದ ಪ್ರಸನ್ನ ಸಂತೆಕಡೂರು ಶಿವಮೊಗ್ಗ ಜಿಲ್ಲೆಯ ಪ್ರತಿಭೆ ಖ್ಯಾತ ಸಂಶೋಧಕ..ವಿಜ್ಞಾನಿ…ಶಿವಮೊಗ್ಗ ಮೂಲದ ಪ್ರತಿಭಾನ್ವಿತ ಪ್ರಸನ್ನ ಸಂತೆಕಡೂರು ಅವರಿಗೆ ವಿಶ್ವದ ಅಗ್ರಗಣ್ಯ ಐವರು ವಿಜ್ಞಾನಿಗಳ ಪಟ್ಟಿಯಲ್ಲಿ ಒಬ್ಬರಾಗಿ ಗೌರವಾನ್ವಿತ ಸ್ಥಾನ ಪಡೆದಿದ್ದಾರೆ. ಆತ್ಮೀಯ ಸ್ನೇಹಿತ ಪ್ರಸನ್ನ ಸಂತೆಕಡೂರು ಅವರಿಗೆ ಅಭಿನಂದನೆಗಳು..ಅವರ ಸಾಧನೆ ಬಗ್ಗೆ ಬರೆಯಲೇಬೇಕಿದೆ. ನಾವೆಲ್ಲಾ ಒಂದಷ್ಟು ಸಾವಿರಗಳಷ್ಟು ಸಂಬಳದ ಉದ್ಯೋಗ ಸಿಕ್ಕರೆ ಸಾಕಪ್ಪಾ..ಲೈಫ್ ಸೆಟ್ಲಾದಂತೆ ಎಂದು ಕಂಫರ್ಟ್ ಝೋನ್ ಕಂಡುಕೊಳ್ಳುವ ಯತ್ನದಲ್ಲಿದ್ದಾಗ ಪ್ರಸನ್ನ ಪ್ರಯೋಗಾಲಯಗಳಲ್ಲಿ ಸೆಲ್ಸು….ಝೀನ್ಸ್…ಇವುಗಳ ಸುತ್ತಲೇ ಪ್ರಯೋಗಶೀಲನಾಗಿದ್ದ…ಆಗಲೇ ಅನ್ನಿಸಿತ್ತು..ಈತ … Read more

ಎಕ್ಸೆಲ್‌ ಪಿಯು ಕಾಲೇಜ್‌ ಕ್ಲೋಸ್..!‌ ಸಾಲು ಸಾಲು ಶೈಕ್ಷಣಿಕ ನಿಯಮ ಉಲ್ಲಂಘನೆ..ವಿದ್ಯಾರ್ಥಿಗಳ ಕಥೆ ಏನು.? ಪೋಷಕರ ಅಳಲು ಕೇಳೋರು ಯಾರು..!?

ಬೆಳ್ತಂಗಡಿ/ಬೆಂಗಳೂರು: ರಾಜ್ಯದ ಪ್ರತಿಷ್ಟಿತ ಕಾಲೇಜೊಂದರ ಬಗ್ಗೆ ಕೆಟ್ಟ ಸುದ್ದಿ ಹೊರಬಿದ್ದಿದೆ. ಶೈಕ್ಷಣಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಕಾಲೇಜ್‌ ಮಾನ್ಯತೆಯನ್ನೇ ರದ್ದು ಮಾಡಿ ೩೦ ದಿನಗಳೊಳಗೆ ಇಡೀ ಕಾರ್ಯಾಚರಣೆ ‍ಸ್ಥಗಿತಗೊಳಿಸಬೇಕೆನ್ನುವುದು ಆ ಸುದ್ದಿ.ಲಕ್ಷಾಂತರ ಹಣ ಕೊಟ್ಟು ಮಕ್ಕಳನ್ನು  ಕಾಲೇಜಿಗೆ ಸೇರಿಸಿರುವ ಪೋಷಕರು ಇದೀಗ ಬಾಯಿಬಾಯಿ ಬಡಿದುಕೊಳ್ಳುತ್ತಿದ್ದಾರೆ.ಆದರೆ ಹಾಗೇನು ನಡೆದೇ ಇಲ್ಲ ಎನ್ನುವಂತೆ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡ್ತಿದೆ.ಯಾರ್‌ ಮಾತು ನಂಬಬೇಕು.. ಯಾರದ್ದು ಬಿಡಬೇಕೆನ್ನುವ ಗೊಂದಲ ಪೋಷಕರಲ್ಲಿದೆ.ಈ ನಡುವೆ ಇದ್ಯಾವುದರ ಮಾಹಿತಿಯೇ ಇಲ್ಲದ ಮಕ್ಕಳು ಕಾಲೇಜಿನ ಕಟ್ಟಡದಲ್ಲಿ ಎಂದಿನಂತೆ … Read more

ಎಲ್ಲಿಯ “ವಿಜಯ್”…! ಎಲ್ಲಿಯ “ಉಪೇಂದ್ರ”..! ಇಬ್ಬರ  ಹೋಲಿಕೆ ಸರಿನಾ..?

ಪಕ್ಷ ಕಟ್ಟಿದ ದಿನದಿಂದಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದ ವಿಜಯ್‌ ಜತೆ, ಮನೆಯಲ್ಲೇ ಕೂತು ಬದಲಾವಣೆ ಬಗ್ಗೆ ಕಂಠಶೋಷಣೆ ಮಾಡಿಕೊಳ್ಳುವ  ಉಪೇಂದ್ರ ಹೋಲಿಕೆ ಸರಿನಾ..! ತಮಿಳ್ನಾಡು(tamilnadu) ರಾಜಕೀಯದಲ್ಲಿ ಬಹುದೊಡ್ಡ ಕ್ರಾಂತಿ ನಡೆದು ಸಿನೆಮಾ ನಟ(cinema star) ವಿಜಯ್‌ (vijay)  ಸಿಎಂ ಆಗುತ್ತಿದ್ದಂತೆ ನಮ್ಮ ಕರ್ನಾಟಕದಲ್ಲಿ  ಮಾದ್ಯಮಗಳಿಗೆ (karnataka medais)ಅದ್ಹೇಕೆ, ರಿಯಲ್‌ ಸ್ಟಾರ್‌ ಹಾಗೂ ಬುದ್ದಿವಂತ ನಟ ಉಪೇಂದ್ರ (real star upendra) ಅವರ ಬೆನ್ನು ಹತ್ತಿ ಕಾಡುವ ಕೆಟ್ಟ ಛಟ-ಚಾಳಿ ಮೈ ಗಂಟಿದೆಯೋ ಗೊತ್ತಾಗ್ತಿಲ್ಲ … Read more

ನಾಳೆ ಪತ್ರಕರ್ತ ಪುಟ್ಟಪ್ಪ ಸಾರಥ್ಯದ “ಪೊಲಿಟಿಕಲ್-360” ಲಾಂಚ್

ಮೈಸೂರಿನ ಪತ್ರಕರ್ತ ಮಿತ್ರ ಪುಟ್ಟಪ್ಪ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.ಮೊದಲು ಆತನಿಗೊಂದು ಆಲ್ ದಿ ಬೆಸ್ಟ್…ಅಂದ್ಹಾಗೆ ಪೊಲಿಟಿಕಲ್ 360 ಎನ್ನುವ ಡಿಜಿಟಲ್ ಫ್ಲಾಟ್ ಫಾರ್ಮ್ ನ್ನೇ ಚಾನೆಲ್ ಮಾಡ್ಲಿಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ವಿರೋಧ-ವಿವಾದ ಎಲ್ಲವನ್ನು ಮೈಮೇಲೆ ಎಳೆದುಕೊಂಡು, ಬೈಗುಳ-ಹಿಡಿಶಾಪ ಪಡೆದುಕೊಂಡು ಕೆಲಕಾಲ ಅಜ್ನಾತವಾಸಕ್ಕೆ ತೆರಳಿದ್ದ ಪುಟ್ಟಪ್ಪ ಅದು ಕಲಿಸಿಕೊಟ್ಟ ಜೀವನಾನುಭವದಿಂದ ಸಾಕಷ್ಟು ಮಾಗಿ ಇದೀಗ ಮೈ ಕೊಡವಿ ಎದ್ದುನಿಂತಿದ್ದಾನೆ.ಈ ಬಾರಿ ಗೆಲ್ಲಲೇಬೇಕೆನ್ನುವ ಮಹತ್ವಾಕಾಂಕ್ಷೆ-ಛಲ-ಆತ್ಮವಿಶ್ವಾಸ-ಉಮೇದು-ಇರಾದೆ-ಕನಸು ಎಲ್ಲವನ್ನು ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.ಅದು ನಾಳೆಯೇ( 08-05-2026) ಉಡ್ಡಯನಗೊಳ್ಳಲಿದೆ..ಅಂದ್ಹಾಗೆ ಆತನ … Read more

WHY SENIOR J‌OURNALIST LAXMAN HOOGAR QUIT JOURNALISM/ “ಪತ್ರಿಕೋದ್ಯಮ”ದ ಗಟ್ಟಿ ದ್ವನಿ “ಲಕ್ಷ್ಮಣ್ ಹೂಗಾರ್” ಮೌನಿಯಾಗಿದ್ದೇಕೆ..? ಇಲ್ಲಿವೆ ಅವರೇ ನೀಡುವ ಕಾರಣ..!

ಲಕ್ಷ್ಮಣ್ ಹೂಗಾರ್.. …ಕನ್ನಡ ಪತ್ರಿಕೋದ್ಯಮ ಇವತ್ತಿಗೂ ಮಿಸ್ ಮಾಡಿಕೊಳ್ಳುತ್ತಿರುವ ಹೆಸರಿದು.. ಬಹುತೇಕ ಪತ್ರಕರ್ತರು ಅಗತ್ಯಕ್ಕೋ-ಅನಿವಾರ್ಯಕ್ಕೋ ಪರಿಸ್ಥಿತಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಇಂದಿನ ಪ್ರಕ್ಷುದ್ಧ ಪರಿಸ್ತಿತಿಯಲ್ಲಿ ಲಕ್ಷ್ಮಣ್ ಹೂಗಾರ್ ಎನ್ನುವಂತ ಪತ್ರಕರ್ತನ ಅನುಪಸ್ತಿತಿ ತೀವ್ರವಾಗಿ ಕಾಡದೆ ಇರೊಲ್ಲ…ಇತ್ತೀಚೆಗೆ ಸಾಮಾಜಿಕ ಜಾಲತಾಣ ಗಳಲ್ಲಿ  ಲಕ್ಷ್ಮಣ್ ಹೂಗಾರ್ ಅವರ ಕಣ್ಮರೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.ಅಷ್ಟೊಂದು ಆಕ್ಟೀವ್ ಆಗಿದ್ದ ಲಕ್ಷ್ಮಣ್  ಎಲ್ಲಿ ಹೋದರು..? ಎಲ್ಲಿದ್ದಾರೆ..? ಏನಾದರು..?ಏನ್ ಮಾಡುತ್ತಿದ್ದಾರೆ..?ಪತ್ರಿಕೋದ್ಯಮದ ಸಂಗ-ಸಹವಾಸ-ಸಾಂಗತ್ಯವನ್ನೇ ಬಿಟ್ರಾ..? ಪರ್ಯಾಯವನ್ನೇನಾದ್ರೂ ಹುಡುಕಿಕೊಂಡಿದ್ದಾರಾ..? ಪತ್ರಿಕೋದ್ಯಮಕ್ಕಿಂತ ಅವರು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲೇ ನೆಮ್ಮದಿಯಾಗಿದ್ದಾರಾ..? ಎನ್ನುವ … Read more

“ಅರ್ಹ”ರನ್ನು ಕಡೆಗಣಿಸ್ತಾ ಚಂದನವನ ಕ್ರಿಟಿಕ್‌ ಅವಾರ್ಡ್ಸ್‌?!

ಚಂದನವನದಲ್ಲಿ ನೀಡಲಾಗುವ ವಿಮರ್ಷಕರ ಪ್ರಶಸ್ತಿಗೆ ವಿವಾದದ ಕಳಂಕ ತಟ್ಟಿದಂತಿದೆ. ಚಿತ್ರರಂಗದ ವಿದ್ಯಾಮಾನಗಳನ್ನು ದಶಕಗಳಿಂದಲೂ ಗಮನಿಸುತ್ತಾ,ಅದರ ಒಳಹೊರಗನ್ನು ನೇರ-ನಿಷ್ಟೂರ-ತೀಕ್ಷ್ಣವಾಗಿ  ವರದಿ ಮಾಡುತ್ತಿದ್ದ ಬಹುತೇಕ ಹಿರಿಯ ಸಿನಿ ಪತ್ರಕರ್ತರನ್ನೇ ಪಕ್ಕ ಕ್ಕಿಟ್ಟು ಆಯ್ದ ಕೆಲವರೇ ಪ್ರಶಸ್ತಿ ಆಯ್ಕೆ- ಪ್ರಧಾನ ಮಾಡಿ ಮುಗಿಸಿದ್ದಾರೆನ್ನುವ ಅಸಮಾಧಾನ ಸ್ಯಾಂಡಲ್ವುಡ್‌ ನಲ್ಲಿ  ಹೊಗೆಯಾಡತೊಡಗಿದೆ. ಚಂದನವನದ ಸಿನಿ ಪತ್ರಕರ್ತರ ಒಳಗೆ ಇಷ್ಟು ದಿನ ಕುದಿಯುತ್ತಿದ್ದ ಬಂಡಾಯ-ಮುನಿಸು-ವ್ಯತ್ಯಾಸಗಳು ಅದ್ಹೇಕೋ ಸ್ಪೋಟಗೊಳ್ಳುವ ಲಕ್ಷಣ ಗೋಚರಿಸುವಂತಿದೆ. ಹೌದು..ಚಂದನವನದಲ್ಲಿ ಸಿನಿ ಪತ್ರಕರ್ತರೇ ಒಗ್ಗೂಡಿ,ಪ್ರತಿಭೆ-ಸಾಮ ರ್ಥ್ಯ ವುಳ್ಳ ಕಲಾವಿದರು-ತಂತ್ರಜ್ಞರಿಗೆ  ತೂಗಿ ಅಳೆದು ನೀಡುತ್ತಾ ಬಂದಿ … Read more

ಶಾಶ್ವತವಾಗಿ ಹಾಡು ನಿಲ್ಲಿಸಿದ ಆಶಾ ಬೋಸ್ಲೆ

ಪ್ರಣಯ ಗೀತೆಗಳು, ಪಾರ್ಟಿ ಸಾಂಗ್ಸ್ ಮತ್ತು ಐಟಂ ಸಾಂಗ್ಸ್, ಭಾವಪೂರ್ಣ ಗಜಲ್‌ಗಳು , ಭಕ್ತಿಗೀತೆಗಳು ,ಪಾಪ್ ಸಂಗೀತ..ಹೀಗೆ ಎಲ್ಲಾ ಗಾಯನ ಪ್ರಾಕಾರಗಳಲ್ಲಿ ತಮ್ಮ ಅತ್ಯದ್ಭುತ ಕಂಠಸಿರಿಯಿಂದ ಪ್ರಸಿದ್ದಿ ಪಡೆದಿದ್ದ ಭಾರತೀಯ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕಿ ಆಶಾ ಬೋಸ್ಲೆ ಶಾಶ್ವತವಾಗಿ ಹಾಡು ನಿಲ್ಲಿಸಿದ್ದಾರೆ. ಆಶಾ ಬೋಸ್ಲೆ ಅವರಿಗೆ ೯೨ ವರ್ಷ ವಯಸ್ಸಾಗಿತ್ತು.ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ನಿನ್ನೆ( ಶನಿವಾರ -೧೧-೦೪-೨೦೨೬) ರಂದು ದಾಖಲಿಸಲಾಗಿತ್ತು.ಅವರ ಆರೋಗ್ಯದಲ್ಲಿ ಇಂದು ಏರುಪೇರು ಕಂಡು ಬಂತು.ವೈದ್ಯರ … Read more