ಕ್ರೈಂ ವರದಿಗಾರನ ಸಸ್ಪೆನ್ಸ್-ಥ್ರಿಲ್ಲರ್ ಅನುಭವವೇ “ಕಪ್ಪುಹುಂಜ” ಕಾದಂಬರಿಯಾದಾಗ..?

ಕ್ರೈಂ ಸುದ್ದಿ (crime news)ಜಗತ್ತಿನಲ್ಲಿ ಅಪರಾಧವೊಂದರ ಬೆನ್ನತ್ತಿ ವರದಿಗಾರಿಕೆ(reporting) ಮಾಡುವುದು ಒಬ್ಬ ಕ್ರೈಂ ರಿಪೋರ್ಟರ್‌ ಗೆ, ತನಿಖಾಧಿಕಾರಿಯ ಇನ್ವೆಸ್ಟಿಗೇ಼ಷನ್‌(investigation) ನಷ್ಟೇ ಸವಾಲಿನದು ಹಾಗೆಯೇ ಕ್ಲಿಷ್ಟವಾದದ್ದು, ಎಲ್ಲ ಮೀರಿ ರೋಚಕವಾದದ್ದು. ಅದಕ್ಕೊಂದು ತಾರ್ಕಿಕ ಅಂತ್ಯ ಕೊಡೋದಿದೆಯೆಲ್ಲಾ ಅದು ನೀಡುವ ಸಮಾಧಾನ-ಆತ್ಮತೃಪ್ತಿ ತುಂಬಾ ದೊಡ್ಡದು.ನಮ್ಮ ಕ್ರೈಂ ಸುದ್ದಿಮಿತ್ರರ ದೈನಂದಿನ ವೃತ್ತಿ ಯಾವುದಾದರೊಂದು ಕ್ರೈಂನ ಸುತ್ತವೇ ಸುತ್ತುತ್ತಲಿರುತ್ತದೆ.ಅದರ ಫಾಲೋಅಪ್‌, ಟ್ವಿಸ್ಟ್‌, ಯೂಟರ್ನ್‌.. ಹೀಗೆಯೇ ನಡೆದಿರುತ್ತದೆ.ಅದನ್ನೆಲ್ಲಾ ಕ್ರೋಢೀಕರಿಸಿದ್ರೆ ಎಲ್ಲರೂ ಒಂದೊಂದು ಕಥೆ-ಕಾದಂಬರಿ ಬರೆಯಬಲ್ಲಷ್ಟು ಅಗಾಧ ಅನುಭವ ಪಡೆದಿರುತ್ತಾರೆ. ಯಾವುದಾದರೂ ಅನುಭವಿ ಕ್ರೈಂ ರಿಪೋರ್ಟರ್‌(crime … Read more

succese-inspirational story of a journalist”ಪತಕರ್ತ”ನ ಯಶೋಗಾಥೆ..ಅಂದಿನ ಯಶಸ್ವಿ “ಕ್ರೈಂ ರಿಪೋರ್ಟರ್‌” ,ಇವತ್ತು “ಶಾಲೆ”ಯ “ಮಾಲೀಕ”

ಬದುಕಿನಲ್ಲಿ ಎಲ್ಲಾ ಅವಕಾಶ-ವೇದಿಕೆ ಇದ್ದು ಯಶಸ್ಸು ಪಡೆಯೋದು ಸಾಧನೆಯೇ ಅಲ್ಲ..ಶೂನ್ಯದಿಂದ ಮಹತ್ತರವಾದುದನ್ನು ಗಳಿಸೋದು ಇದೆಯೆಲ್ಲಾ ಅದೇ ನಿಜವಾದ ಸಾಧನೆ-ಯಶಸ್ಸು ಎನ್ನುವುದು ಅನುಭಾವಿಗಳ ಮಾತು..ಎಲ್ಲಾ ಕ್ಷೇತ್ರಗಳಲ್ಲಿರುವಂತೆ ನಮ್ಮ ಪತ್ರಿಕೋದ್ಯಮದಲ್ಲೂ ( ಇನ್ನೊಬ್ಬರಿಗೆ ಬಹುಪರಾಖ್‌ ಹಾಕಿಕೊಂಡು,ಹೊಗಳುಭಟ್ಟರಾಗಿ ಸ್ಥಾನಮಾನ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಪತ್ರಿಕೋದ್ಯಮದಲ್ಲಿ ಇವತ್ತಿಗೆ ದೊಡ್ಡದಿದೆ ಬಿಡಿ…) ಅಂಥಾ ಸಾಧಕರು ಪರಿಶ್ರಮದ ಕಾರಣಕ್ಕೆ ಗಮನ ಸೆಳೆಯುತ್ತಾರೆ..ಇತರರಿಗೂ ಮಾದರಿಯಾಗುತ್ತಾರೆ..ಅಂಥವರ ಸಾಲಿನಲ್ಲಿ ನಿಲ್ಲುವಂತ ವ್ಯಕ್ತಿ ಪುಟ್ಟರಾಜ್..‌ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ದುಡಿದು ಉಪಜೀವನಕ್ಕೊಂದು ಪರ್ಯಾಯ ಹುಡುಕಿಕೊಂಡು ಎರಡನ್ನೂ ಸಮತೋಲನದಲ್ಲಿ ಸಂಭಾಳಿಸಿಕೊಂಡು ಅಂತಿಮವಾಗಿ ಆ ಪ್ರಯತ್ನದ್ಲಿ ಯಶಸ್ವಿಯಾದ … Read more