ಕ್ರೈಂ ವರದಿಗಾರನ ಸಸ್ಪೆನ್ಸ್-ಥ್ರಿಲ್ಲರ್ ಅನುಭವವೇ “ಕಪ್ಪುಹುಂಜ” ಕಾದಂಬರಿಯಾದಾಗ..?

ಕ್ರೈಂ ಸುದ್ದಿ (crime news)ಜಗತ್ತಿನಲ್ಲಿ ಅಪರಾಧವೊಂದರ ಬೆನ್ನತ್ತಿ ವರದಿಗಾರಿಕೆ(reporting) ಮಾಡುವುದು ಒಬ್ಬ ಕ್ರೈಂ ರಿಪೋರ್ಟರ್‌ ಗೆ, ತನಿಖಾಧಿಕಾರಿಯ ಇನ್ವೆಸ್ಟಿಗೇ಼ಷನ್‌(investigation) ನಷ್ಟೇ ಸವಾಲಿನದು ಹಾಗೆಯೇ ಕ್ಲಿಷ್ಟವಾದದ್ದು, ಎಲ್ಲ ಮೀರಿ ರೋಚಕವಾದದ್ದು. ಅದಕ್ಕೊಂದು ತಾರ್ಕಿಕ ಅಂತ್ಯ ಕೊಡೋದಿದೆಯೆಲ್ಲಾ ಅದು ನೀಡುವ ಸಮಾಧಾನ-ಆತ್ಮತೃಪ್ತಿ ತುಂಬಾ ದೊಡ್ಡದು.ನಮ್ಮ ಕ್ರೈಂ ಸುದ್ದಿಮಿತ್ರರ ದೈನಂದಿನ ವೃತ್ತಿ ಯಾವುದಾದರೊಂದು ಕ್ರೈಂನ ಸುತ್ತವೇ ಸುತ್ತುತ್ತಲಿರುತ್ತದೆ.ಅದರ ಫಾಲೋಅಪ್‌, ಟ್ವಿಸ್ಟ್‌, ಯೂಟರ್ನ್‌.. ಹೀಗೆಯೇ ನಡೆದಿರುತ್ತದೆ.ಅದನ್ನೆಲ್ಲಾ ಕ್ರೋಢೀಕರಿಸಿದ್ರೆ ಎಲ್ಲರೂ ಒಂದೊಂದು ಕಥೆ-ಕಾದಂಬರಿ ಬರೆಯಬಲ್ಲಷ್ಟು ಅಗಾಧ ಅನುಭವ ಪಡೆದಿರುತ್ತಾರೆ. ಯಾವುದಾದರೂ ಅನುಭವಿ ಕ್ರೈಂ ರಿಪೋರ್ಟರ್‌(crime … Read more

SAD DEMISE: ಕ್ರೈಂ ಪತ್ರಿಕೋದ್ಯಮದ “ಪದ-ಪಂಡಿತ” ಅಕ್ಷರಗಳಲ್ಲಿ ಲೀನ..

“ಕ್ರೈಂ ಬರಹಗಾರಿಕೆಗೊಂದು ಹೊಸ ಭಾಷ್ಯ ಬರೆದ ಅಕ್ಷರಗಾರುಡಿಗ-ಗಣೇಶ್  ಎನ್ನುವ ಗುರುಕುಲದಲ್ಲಿ ಬೆಳೆದ ಶಿಷ್ಯ ಕೋಟಿ ದೊಡ್ಡದು” “ಶತೃತ್ವ ಕಟ್ಟಿಕೊಳ್ಳದ ಅಜಾತಶತೃ-ಮಹಾನ್ ಹಾಸ್ಯಪ್ರಜ್ನೆಯ  ಜೀವನ್ಮುಖಿ-ಇನ್ನೊಬ್ಬರ ಸಮಸ್ಗೆಗೆ ಮಿಡಿಯುವ ಮಹಾನ್ ಮಾನವತಾವಾದಿ” ಬೆಂಗಳೂರು: ಕನ್ನಡ  ಕ್ರೈಂ ಪತ್ರಿಕೋದ್ಯಮದ ದೈತ್ಯಪ್ರತಿಭೆ ಶಾಶ್ವತಕ್ಕೂ ನೇಪಥ್ಯಕ್ಕೆ ಸರಿದಿದೆ. ಕ್ರೈಂ ವರದಿಗಾರಿಕೆಯ ಸಾಕ್ಷಿಪ್ರಜ್ನೆಯಂತಿದ್ದ ಗಣೇಶ್ ಅಕ್ಷರಗಳಲ್ಲಿ ಲೀನವಾಗಿದ್ದಾರೆ.ಬಹು ಅಂಗಾಗ ವೈಫಲ್ಯದಿಂದ ಇಂದು ಬೆಳಗ್ಗೆ ವಸಂತನಗರದ ಜೈನ್ ಆಸ್ಪತ್ರೆಯಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.ಕೇವಲ 41ರ ವಯಸ್ಸಿನಲ್ಲೇ ಪತ್ರಿಕೋದ್ಯಮದ ಅಪಾರ ಹಿರಿ-ಕಿರಿಯ ಸ್ನೇಹಿತರನ್ನು ಗಣೇಶ್ ಅಗಲಿದ್ದಾರೆ.ಅವರ ನಿಧನಕ್ಕೆ ಕನ್ನಡ ಪತ್ರಿಕೋದ್ಯಮವೇ … Read more