ಟಿವಿ9 ಕನ್ನಡದಲ್ಲಿ ಕೆಲ ಸುದ್ದಿಮಿತ್ರರಿಗೆ “ಗೇಟ್ ಪಾಸ್”..! ಪ್ರಾಮಾಣಿಕ ಸಿಬ್ಬಂದಿ “ಕೇರ್ ಆಫ್ ಪುಟ್ಪಾತ್..!”

ಟಿವಿ9 ಕೇಂದ್ರ ಮ್ಯಾನೇಜ್ಮೆಂಟ್‌ ನಿಗಧಿಪಡಿಸಿದ ಮಾನದಂಡವೇ ನಿರ್ಲಕ್ಷ್ಯ:..! ಬೆಂಗಳೂರು ಕಚೇರಿಯಲ್ಲಿ ದರ್ಬಾರ್‌ ನಡೆಸ್ತಿರುವವರಿಂದ ನಿಜಕ್ಕೂ ಅರ್ಹರಿಗೆ ಆಗೋಯ್ತಾ ಅನ್ಯಾಯ..? ಬೆಂಗಳೂರು:ಟಿವಿ9  ಕನ್ನಡ(TV9 KANNADA)ದ ಕಚೇರಿಯ ಇತಿಹಾಸದಲ್ಲೇ ಇಷ್ಟೊಂದು ಭೀತಿ-ಆತಂಕದ ವಾತಾವರಣ  ಹಿಂದೆಂದೂ ನಿರ್ಮಾಣವೇ ಆಗಿರಲಿಕ್ಕಿಲ್ಲವೇನೋ..? ಫಾರ್‌ ದಿ ಫಸ್ಟ್‌ ಟೈಮ್‌ ಚಾನೆಲ್‌ ನ ಕಚೇರಿಯಲ್ಲಿ ಭಯದ ದೊಡ್ಡ  ಸುನಾಮಿನೇ ಎದ್ದಿದೆ.ಯೆಸ್..ಈ ಸುನಾಮಿ ಸಾಕಷ್ಟು ಉದ್ಯೋಗಿಗಳ “ತುತ್ತ”ನ್ನೇ ಕಸಿದುಕೊಂಡಿದೆ.ಇದಕ್ಕೆಲ್ಲಾ ಕಾರಣ ಅನಗತ್ಯ ಅಥವಾ ಹೆಚ್ಚು”ವರಿ”ವೆಚ್ಚಗಳ ಕಡಿತ ಎನ್ನಲಾಗಿದೆ.ಈ ಪೈಕಿ ಕೆಲಸ ಕಳೆದುಕೊಂಡಿರುವವರಲ್ಲಿ ಹೆಚ್ಚಿನವರು ಬೆಂಗಳೂರು ಕೇಂದ್ರ ಕಚೇರಿ ಮತ್ತು … Read more

ಮಹಿಳಾ ಉದ್ಯೋಗಿಯ ಅಮ್ಮನನ್ನೇ ಬಲಿ ತೆಗೆದುಕೊಂಡುಬಿಡ್ತಾ ಆ ನ್ಯೂಸ್‌ ಚಾನೆಲ್..?!

*ನನ್ನ ಅಮ್ಮನೇ ಹೋದ್ಮೇಲೆ ನಿಮ್ಮ ಸ್ಯಾಲರಿ ತಗಂಡ್‌ ಏನ್‌ ಮಾಡೋಣ ಬಿಡಿ ಸಾರ್..‌* *ಅನ್ಯಾಯವಾಗಿ ನನ್ನ ಅಮ್ಮನನ್ನು  ಕೊಂದ್‌ ಬಿಟ್ರಲ್ಲಾ ಸಾರ್..!?* *ನ್ಯಾಯಯುತ ದ್ವನಿಯಲ್ಲಿ ಹಕ್ಕಿನ ವೇತನ ಕೇಳಿದ್ದಕ್ಕೆ ಗೇಟ್‌ ಪಾಸ್… ಸಂಬಳ ಕೊಡದೆ ಸತಾವಣೆ..* ಬೆಂಗಳೂರು: ಈ ಸುದ್ದಿ ನಿಜಕ್ಕೂ ಎಂಥಾ ಕಲ್ಲು ಮನಸನ್ನು ಕರೆಗಿಸುತ್ತದೆ…ಸುದ್ದಿ ಮನೆಗಳಲ್ಲಿ ಕೆಲಸ ಮಾಡುವವರನ್ನು ಇಷ್ಟೊಂದು ತಾತ್ಸಾರದಿಂದ ನಡೆಸಿಕೊಳ್ಳಲಾಗುತ್ತಾ..? ತಮಗೆ ಬರಬೇಕಿರೋ ಸಂಬಳಕ್ಕೆ ದ್ವನಿ ಎತ್ತಿದ್ರೆ ಸಂಸ್ಥೆಯಿಂದಲೇ ಗೇಟ್‌ ಪಾಸ್‌ ಕೊಡಲಾಗುತ್ತಾ..? ಕೊನೆಗೆ ಅವರ ಕುಟುಂಬದವರ ಸಾವಿಗೂ  ನೈತಿಕವಾಗಿ ಕಾರಣವಾಗುವಂತ … Read more