advertise here

Search

25ನೇ ವಯಸ್ಸಿಗೆ ಸಿವಿಲ್ ಜಡ್ಜ್: ಶಿರಸಿಯ ಸುಮಂತ್ ಐತಿಹಾಸಿಕ ಸಾಧನೆ!

sumanth manjunath naik

ಭೂಮಿಯ ಮೇಲಿನ ಅತ್ಯಂತ ಬೆಲೆಬಾಳುವ ಆಸ್ತಿ ಯಾವುದಾದರೂ ಇದ್ದರೆ ಅದು ಕೇವಲ ‘ವಿದ್ಯೆ’ ಮಾತ್ರ. ಯಾರು ಎಷ್ಟೇ ಕದ್ದರೂ ಕರಗದ, ಹಂಚಿದಷ್ಟು ಹೆಚ್ಚಾಗುವ ಈ ಜ್ಞಾನಭಂಡಾರಕ್ಕೆ ಒಲಿದವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಮಾತಿಗೆ ಅಕ್ಷರಶಃ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ ಕೇವಲ 25 ವರ್ಷದ ಯುವಕ, “ಸುಮಂತ್ ಮಂಜುನಾಥ್ ನಾಯ್ಕ್”. ಇವರ ಸಾಧನೆ ಯುವಜನತೆಯಲ್ಲಿ ಹೊಸದೊಂದು ಭರವಸೆಯ ಕಿಡಿ ಹೊತ್ತಿಸುವಂತಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆ ಕಟ್ಟಾ ಮೂಲದ ಸುಮಂತ್ ಅವರ ಹಿನ್ನೆಲೆಯೇ ಒಂದು ಕಾನೂನಿನ ಪಾಠಶಾಲೆ ಇದ್ದಂತೆ. ಇವರ ತಂದೆ ಮಂಜುನಾಥ್ ನಾಯ್ಕ್ ಅವರು ಲೋಕಾಯುಕ್ತದ ಸರ್ಕಾರಿ ಅಭಿಯೋಜಕರು (Public Prosecutor). ತಾಯಿ ಸುಜಾತ ನಾಯ್ಕ್ ಅವರು ಕೂಡ ವಕೀಲ ವೃತ್ತಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಂತಹ ಕಾನೂನು ದಿಗ್ಗಜರ ಮನೆಯಲ್ಲಿ ಬೆಳೆದ ಸುಮಂತ್, ಈಗ ಕೇವಲ 25ನೇ ವಯಸ್ಸಿಗೆ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ಇಡೀ ರಾಜ್ಯವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಚೆಸ್ ಆಟಗಾರನ ಸಾಧನೆಯ ಹಾದಿ:

ವಿಶೇಷವೆಂದರೆ, ಸುಮಂತ್ ಅವರು ಕೇವಲ ಪುಸ್ತಕದ ಬದನೆಕಾಯಿಯಲ್ಲ, ವಿದ್ಯೆಯನ್ನು ಅಂಕಗಳಿಗಿಂತ ಹೆಚ್ಚಾಗಿ ‘ಜ್ಞಾನ’ ಎಂದು ಪರಿಗಣಿಸಿದವರು. ಇವರು ರಾಜ್ಯ ಮಟ್ಟದ ಚೆಸ್ ಆಟಗಾರರು ಕೂಡ ಹೌದು. ಚದುರಂಗದ ಆಟದಲ್ಲಿನ ತಾಳ್ಮೆ, ತಂತ್ರ ಮತ್ತು ಬುದ್ಧಿಮತ್ತೆಯನ್ನು ತಮ್ಮ ಜೀವನದ ಗುರಿ ಮುಟ್ಟಲೂ ಅವರು ಅಳವಡಿಸಿಕೊಂಡಿದ್ದಾರೆ. ಇದರ ಪರಿಣಾಮವೇ, 2025ನೇ ಸಾಲಿನ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ (Civil Judge Exam) ತಮ್ಮ ಮೊದಲನೇ ಪ್ರಯತ್ನದಲ್ಲೇ ರಾಜ್ಯಕ್ಕೆ ದ್ವಿತೀಯ (2nd Rank) ಸ್ಥಾನ ಪಡೆದು ಸಾಧನೆಯ ಶಿಖರವೇರಿದ್ದಾರೆ.

ALSO READ :  ಚೆನ್ನಪಟ್ಟಣ ಉಪಸಮರ-2024: ಸಿ.ಪಿ ಯೋಗೇಶ್ವರ್ ಎದುರು ಕಣಕ್ಕಿಳಿಯಲು ನಿಖಿಲ್ ಹಿಂದೇಟು..?! ಲೆಕ್ಕಾಚಾರ ಕೆಳಗಾಗಿ ಸೋತರೆ "ಐರನ್ ಲೆಗ್" ಕಳಂಕ ಹೊತ್ತುಕೊಳ್ಳುವ ಆತಂಕ..?!

ಇದನ್ನೂ ಓದಿ | succese-inspirational story of a journalist”ಪತಕರ್ತ”ನ ಯಶೋಗಾಥೆ..ಅಂದಿನ ಯಶಸ್ವಿ “ಕ್ರೈಂ ರಿಪೋರ್ಟರ್‌” ,ಇವತ್ತು “ಶಾಲೆ”ಯ “ಮಾಲೀಕ”

ಯುವಜನತೆಗೆ ಸ್ಫೂರ್ತಿ:

“ವಿದ್ಯೆಯಿಂದ ಏನಾಗುತ್ತದೆ?” ಎಂದು ಅಸಡ್ಡೆ ಮಾಡುವವರಿಗೆ ಸುಮಂತ್ ಅವರ ಯಶಸ್ಸೇ ತಕ್ಕ ಉತ್ತರ. ಯಾವ ನ್ಯಾಯಾಲಯದಲ್ಲಿ ತಮ್ಮ ತಂದೆ-ತಾಯಿ ವಕೀಲರಾಗಿ ನಿಂತು ವಾದ ಮಂಡಿಸುತ್ತಾರೋ, ಇಂದು ಅದೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಅವರ ಮಗ ನ್ಯಾಯಾಧೀಶರಾಗಿ ಅತ್ಯುನ್ನತ ಸ್ಥಾನ ಅಲಂಕರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಕಠಿಣ ಪರಿಶ್ರಮ, ಗುರಿಯ ಮೇಲಿನ ಏಕಾಗ್ರತೆ ಹಾಗೂ ಜ್ಞಾನದ ದಾಹವಿದ್ದರೆ ಯಾವ ವಯಸ್ಸಿನಲ್ಲಾದರೂ ಎಂತಹ ಮೈಲಿಗಲ್ಲನ್ನೂ ತಲುಪಬಹುದು ಎಂಬುದಕ್ಕೆ ಸುಮಂತ್ ಅವರೇ ಸಾಕ್ಷಿ.


Political News

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

ದಾವಣಗೆರೆ ದಕ್ಷಿಣದಲ್ಲಿ ಜಮೀರ್ ಗೈರುಹಾಜರಿ: ಸಮರ್ಥ್ ಶಾಮನೂರು ಗೆಲುವಿಗೆ ಮುಸ್ಲಿಂ ಮತಗಳೇ ಅಡ್ಡಿ?

Scroll to Top