ಸಚಿವ್ರೇ..!ನಿಮ್ಮೆ ಕಾಳಜಿ ಇದ್ರೆ ಮೊದಲು ಹಾಗೆ ಮಾಡಿ…

ಬೆಂಗಳೂರು: ಅಪಘಾತಗಳ ಕಾರಣಕ್ಕೆ BMTC (bengaluru metopolitan transport corporatio)ಗೆ ಮೊದಲೆಲ್ಲಾ “ಕಿಲ್ಲರ್” ಎನ್ನುವ ಕಳಂಕ ಮೆಟ್ಟಿಕೊಳ್ತಿತ್ತು..ಅದನ್ನು ಸರಿಪಡಿಸುವ ಸಾಕಷ್ಟು ಕೆಲಸಗಳನ್ನು ನಿಗಮದ ಮಾಡಿದ ಕಾರಣಕ್ಕೇನೋ ಗೊತ್ತಿಲ್ಲ, ಅಪಘಾತಗಳ ಸಂಖ್ಯೆ ಕಡ್ಮೆಯಾಯ್ತು..ಸಾಯೋರ ಪ್ರಮಾಣ ವೂ ಕ್ಷೀಣಿಸ್ತು.ಆದರೆ ಕೆಲ ವರ್ಷಗಳ ಈಚೆಗೆ ನಡೀತಿರೋ ಅಪಘಾತಗಳು-ಅದಕ್ಕೆ ಕಾರಣವಾಗ್ತಿರುವ ಸಂಗತಿಗಳನ್ನು ಗಮನಿಸಿದ್ರೆ ಆತಂಕವಾಗುತ್ತೆ..ಕಿಲ್ಲರ್ ಎನ್ನುವ ಹಣೆಪಟ್ಟಿ ಮತ್ತೆ ಅಂಟಿಸಿಕೊಳ್ಳೊಕ್ಕೆ ನಿಗಮನೇ ಪ್ರಯತ್ನಿಸ್ತಿದೆಯಾ ಎನ್ನುವ ಶಂಕೆ ಕಾಡ್ತಿದೆ.ಇದಕ್ಕೆ ಕಾರಣ ಇವಿ ಬಸ್ ಗಳಿಂದಾಗುತ್ತಿರುವ ಅಪಘಾತ ಹಾಗೂ ಸಾಯುತ್ತಿರುವ ಪ್ರಯಾಣಿಕರ ಸಂಖ್ಯೆ.
“ಅಂತದ್ದೊಂದು ಆಲೋಚನೆ ನಡೆಯುತ್ತಿರುವುದು ಸತ್ಯ- ಇವಿ ಬಸ್ ಗಳಿಂದ ಅಪಘಾತ ಹೆಚ್ಚುತ್ತಿರುವುದನ್ನು ಅಲ್ಲಗೆಳೆಯೊಕ್ಕೆ ಆಗೊಲ್ಲ.ಇದು ಸತ್ಯ..ಇದನ್ನು ಸುಧಾರಿಸಬಹುದಾ ಎನ್ನುವ ಬಗ್ಗೆ ಚಿಂತನೆ ನಡೆದಿದ್ದು ಸತ್ಯ..ಆದ್ರೆ ಅದಕ್ಕೆ ನಿರೀಕ್ಷಿತ ಫಲಿತಾಂಶ ದೊರೆಯಲಿಲ್ಲ..ಪ್ರೈವೇಟ್ ಬಸ್ ಗಳವ್ರು ಬಿಎಂಟಿಸಿ ಡಿಪೋಗೆ ಬಂದ ದಿನಗಳಿಂದಲೂ ನಮ್ಮ ಡ್ರೈವರ್ಸ್ ಗೂ ಅವರಿಗೂ ಒಂದು ದೊಡ್ಡ ಸಂಘರ್ಷವೇ ನಡೆಯುತ್ತಿತ್ತು.ಸಮನ್ವಯ ಸಾಧಿಸಲು ಕಷ್ಟವಾಗುತ್ತಿತ್ತು.ಪ್ರಯಾಣಿಕರು-ಸಾರ್ವಜನಿಕರು ಕೂಡ ಖಾಸಗಿ ಡ್ರೈವರ್ ಗಳು ಬೇಕಾ ಎನ್ನುವ ಪ್ರಶ್ನೆ ಎತ್ತಿದ್ದರು. ಅಂತಿಮವಾಗಿ ಅವರನ್ನು ಬದಲಿಸಿ, ನಮ್ಮ ಡ್ರೈವರ್ ಗಳನ್ನೇ ಹಾಕಿಕೊಂಡ್ರೆ ಹೇಗೆ ಎನ್ನುವ ಚಿಂತನೆ ನಡೆದು ಆ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ..ಸಚಿವರು ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಷ್ಟೆ.” -ಹೆಸರು ಹೇಳಲಿಚ್ಚಿಸದ ಬಿಎಂಟಿಸಿ ಕಾರ್ಯಾಚರಣೆ ವಿಭಾಗದ ಅಧಿಕಾರಿ

ಬಿಎಂಟಿಸಿ ಅಂಗಳಕ್ಕೆ ಎಲೆಕ್ಟ್ರಿಕ್ ಬಸ್(e.V-electric bus) ಗಳು ಅದ್ಯಾವ ಘಳಿಗೆಯಲ್ಲಿ ಕಾಲಿಟ್ಟವೋ ಗೊತ್ತಿಲ್ಲ..ಸಂಸ್ಥೆಗಿದ್ದ ಹೆಸರೂ ಹಾಳಾಯ್ತು… ಲಾಭದಲ್ಲೂ ಇಳಿಕೆ ಆಯ್ತು.ಬಿಎಂಟಿಸಿ ಎಂದ್ರೆ ಪ್ರಯಾಣಿಕಸ್ನೇಹಿ ಎಂಬ ಹೆಗ್ಗಳಿಕೆ ಏನಿತ್ತು,ಅದು ಅಪಘಾತಗಳ ಕಾರಣಕ್ಕೆ ಯಮಸ್ವರೂಪಿ ಎಂದು ಬದಲಾಯ್ತು.
ಕಳೆದ ಒಂದು ವರ್ಷದಲ್ಲಿ ಸಂಭವಿಸಿರುವ ಅಪಘಾತಗಳನ್ನೇ ಲೆಕ್ಕಕ್ಕೆ ತೆಗೆದುಕೊಂಡ್ರ 80ಕ್ಕೂ ಹೆಚ್ಚು ಜನರು ಇ.ವಿ ಬಸ್ ಗಳ ಅಪಘಾತದಲ್ಲಿ ಪ್ರಾಣ ತೆತ್ತಿರುವ ಬಗ್ಗೆ ದಾಖಲೆಗಳಿವೆ.ಈ ಎಲ್ಲಾ ಅಪಘಾತಗಳಿಗೂ ಚಾಲಕರ ನಿರ್ಲಕ್ಷ್ಯ-ಹೊಣೆಗೇಡಿತನ-ಅತಿವೇಗದ-ಅಜಾಗರೂಕತೆಯೇ ಕಾರಣ ಎನ್ನುವುದನ್ನು ಬಿಎಂಟಿಸಿ ನಿಗಮನೇ ಒಪ್ಪಿಕೊಳ್ಳಬೇಕಾಗ್ತದೆ.ಏಕೆಂದರೆ ಅಪಘಾತದ ನೈತಿಕ ಹೊಣೆ ಹೊರಬೇಕಿರುವುದು ಕೂಡ ನಿಗಮನೇ ಅಲ್ವಾ..?
ಮೊದಲು ಹಾಗೆ ಮಾಡಲಿ.. ” ಖಾಸಗಿ ಸಂಸ್ಥೆಯವ್ರು ನಮ್ಮ ಡಿಪೋಗಳಿಗೆ ಕಾಲಿಟ್ಟ ದಿನವೇ..ಹೀಗೆಯೇ ನಡೆಯು ತ್ತದೆ ಎಂದು ಭವಿಷ್ಯ ನುಡಿದಿದ್ದೆವು.ಹಾಗೆಯೇ ಆಗಿದೆ..ನಾವಿರುವಾಗ ಅವರೇಕೆ ಬೇಕು..ನಮ್ಮ ಮೇಲೆ ನಂಬಿಕೆ ಇಟ್ಟು ಕೆಲಸ ಕೊಟ್ಟರೆ ಪ್ರಾಮಾಣಿಕವಾಗಿ ಮಾಡ್ತೇವೆ..ಅವರಿಂದ ಕೆಟ್ಟ ಹೆಸರು ಬಂದ ಮೇಲೆ ಎಚ್ಚೆತ್ತುಕೊಂಡಿ ದ್ದಾರೆ. ತಡವಾಗಿಯಾದ್ರೂ ಪರ್ವಾಗಿಲ್ಲ.ಬುದ್ದಿ ಬಂತಲ್ಲ ಎನ್ನುವುದೇ ಸಮಾಧಾನ.ನಮ್ಮ ಚಾಲಕರೇ ಇವಿ ಬಸ್ ಚಾಲನೆ ಮಾಡುವಷ್ಟು ಸಮರ್ಥರಿದ್ದಾರೆ.ಹಾಗೇನಾದ್ರೂ ನಮಗೆ ಬಸ್ ಗಳನ್ನು ಕೊಟ್ಟರೆ ಸಂತೋಷದಿಂದ ಓಡಿಸುತ್ತೇವೆ” -ಸುರೇಶ್- ಬಿಎಂಟಿಸಿ ಚಾಲಕ
ಮಾಲಿನ್ಯ ಕಡಿಮೆ ಮಾಡುವ ಜತೆಗೆ ಪ್ರಯಾಣಿಕರಿಗೆ ಆರಾಮದಾಯಕ ಸಂಚಾರ ಸಾಧ್ಯವಾಗಬೇಕೆನ್ನುವುದೇ ಎಲೆಕ್ಟ್ರಿಕ್ ಬಸ್ ಗಳನ್ನು ಪರಿಚಯಿಸಿದ್ದರ ಹಿಂದಿನ ಉದ್ದೇಶವಾಗಿತ್ತು.ಆದರೆ ಬಿಎಂಟಿಸಿನೇ ನೇರವಾಗಿ ಎಲೆಕ್ಟ್ರಿಕ್ ಬಸ್ ಗಳನ್ನು ತನ್ನ ಸ್ವಾಮ್ಯದಲ್ಲೇ ಸಂಚಾರಕ್ಕೆ ಬಿಡಬಹುದಿತ್ತು.ಆದರೆ ತಲೆಮಾಸಿದ ಯಾವ ತಜ್ಞರು ಸಲಹೆ ಕೊಟ್ಟರೋ ಗೊತ್ತಿಲ್ಲ, ತೀವ್ರ ವಿರೋಧದ ನಡುವೆ ಎಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಲಾಯ್ತು.ಖಾಸಗಿ ಸಂಸ್ಥೆಯ ಡ್ರೈವರ್ ಮತ್ತು ಬಿಎಂಟಿಸಿ ಕಂಡಕ್ಟರ್ ಗಳ ಸಾರಥ್ಯದಲ್ಲಿ ಬಸ್ ಗಳ ಸಂಚಾರವೂ ಆರಂಭವಾಯ್ತು. ಗಳಿಕೆ ವಿಚಾರದಲ್ಲಿಯೂ ಬಿಎಂಟಿಸಿನೇ ಕೈಯಿಂದ ಪ್ರೈವೇಟ್ ಸಂಸ್ಥೆಗೆ ಹಣ ಕೊಡಬೇಕಾದ ಸ್ತಿತಿ ನಿರ್ಮಾಣ ವಾಗಿದ್ದು ಇವತ್ತಿಗೂ ಬಿಎಂಟಿಸಿ ಇತಿಹಾಸದಲ್ಲಿ ಅತೀ ದೊಡ್ಡ ದುರಂತ ಎಂದು ವಿಶ್ಲೇಷಿಸಲಾಗ್ತಿದೆ.ಇದು ಸಚಿವ ರಾಮಲಿಂಗಾ ರೆಡ್ಡಿ ಅವರಿಗೂ ಗೊತ್ತಿದೆ.
ಇವಿ ಬಸ್ ಗಳಿರಲಿ..ಚಾಲಕರು ಚೇಂಜ್ ಆಗಲಿ- “ಇ.ವಿ ಬಸ್ ಗಳು ಮಾಲಿನ್ಯಮುಕ್ತ…ಆರಾಮದಾಯಕ ಎನ್ನುವುದು ಸತ್ಯ.ಆದ್ರೆ ಅಪಘಾತಗಳು ಹೆಚ್ಚಾಗುತ್ತಿರುವುದನ್ನು ನೋಡಿದ್ರೆ ಆ ಬಸ್ ಗಳಲ್ಲಿ ಸಂಚರಿಸುವುದು ಎಷ್ಟರ ಮಟ್ಟಿಗೆ ಸೇಫ್ ಎನ್ನುವ ಅನುಮಾನ ಕಾಡುತ್ತಿದೆ. ಹಾಗಾಗಿ ಇ.ವಿ ಬಸ್ ಗಳಲ್ಲಿ ಸಂಚರಿಸುವುದನ್ನೇ ಬಿಟ್ಟಿದ್ದೇವೆ..ಮತ್ತೆ ನಮ್ಮ ಬಿಎಂಟಿಸಿ ಡ್ರೈವರ್ ಗಳನ್ನೇ ಬಳಸಿಕೊಳ್ತೇವೆ ಎಂದ್ರೆ ನಂಬಿಕೆ-ಧೈರ್ಯದಿಂದ ಬಸ್ ಗಳನ್ನು ಹತ್ತುತ್ತೇವೆ”- ಶ್ವೇತಾ-ವಿನುತಾ-ಬಸ್ ಪ್ರಯಾಣಿಕರು

ಬಿಎಂಟಿಸಿ ಮೂಲಗಳ ಪ್ರಕಾರವೇ ಸರಿಸುಮಾರು 80ರಷ್ಟು ಅಪಘಾತಗಳು ಇವಿ ಬಸ್ ಗಳಿಂದ ನಡೆದಿದೆಯಂತೆ.ಅದರಲ್ಲಿ ಪ್ರಾಣತೆತ್ತವರು ಬಹುತೇಕ ಡ್ರೈವರ್ ಗಳ ಹೊಣೆಗೇಡಿತನದಿಂದ ಎನ್ನುವುದು ದುರಾದೃಷ್ಟಕರ.ಅದೇ ಬಸ್ ಗಳನ್ನು ಬಿಎಂಟಿಸಿಯ ಟ್ರೈನ್ಡ್ ಡ್ರೈವರ್ ಗಳು ಚಾಲನೆ ಮಾಡಿದಿದ್ದರೆ ಅಷ್ಟೊಂದು ಪ್ರಮಾಣದ ಅಪಘಾತಗಳೂ ಆಗ್ತಿರಲಿಲ್ಲ…ಅಷ್ಟೊಂದು ಅಮಾಯಕರು ಕೂಡ ಪ್ರಾಣ ಕಳೆದುಕೊಳ್ತಿರಲಿಲ್ವೇನೋ ಎಂದೆನಿಸುವುದು ಸಹಜ.
ಇವಿ ಬಸ್ ಗಳನ್ನು ಚಾಲನೆ ಮಾಡುತ್ತಿರುವ ಡ್ರೈವರ್ ಗಳು ಎಷ್ಟರ ಮಟ್ಟಿಗೆ ಸಮರ್ಥರಿದ್ದಾರೆ..ಅರ್ಹರಿದ್ದಾರೆ ಎನ್ನುವುದನ್ನು ಪರೀಕ್ಷಿಸುವ ಒಂದು ಮಾನದಂಡವೇ ಬಿಎಂಟಿಸಿಯಲ್ಲಿ ಇಲ್ಲ ಎನ್ನಲಾಗ್ತದೆ.ಆ ಡ್ರೈವರ್ ಗಳನ್ನು ಪೂರೈಸುವ ಔಟ್ ಸೋರ್ಸಿಂಗ್ ಸಂಸ್ಥೆಯವ್ರು ಡ್ರೈವರ್ ನ ಸಮರ್ಥ-ಅರ್ಹತೆಗೆ ತಕ್ಕ ದಾಖಲೆಗಳನ್ನು-ಪ್ರಮಾಣ ಪತ್ರಗಳನ್ನು ಪರಿಶೀಲಿಸುತ್ತಾರೆನ್ನುವುದು ಕೂಡ ಅನುಮಾನವೇ..ಒಂದ್ವೇಳೆ ಸಮರ್ಥವಾಗಿಲ್ಲದವರನ್ನು ಕಳುಹಿಸಿದ್ರೆ ಅದನ್ನು ಪರೀಕ್ಷಿಸಿ-ದೃಢಪಟ್ಟ ನಂತರವೇ ಅವರನ್ನು ನೇಮಿಸಿಕೊಳ್ಳುವ ಕೆಲಸವನ್ನಾದ್ರೂ ಬಿಎಂಟಿಸಿ ಮಾಡಬೇಕಲ್ಲವಾ..? ಇಷ್ಟೆಲ್ಲಾ ಅಪಘಾತಗಳು ಆಗುತ್ತಿರುವುದನ್ನು ಗಮನಿಸಿದ್ರೆ ಇದೆಲ್ಲವನ್ನು ಬಿಎಂಟಿಸಿಯಲ್ಲಿ ಅದಕ್ಕೆಂದೇ ಇರಬಹುದಾದ ವಿಭಾಗ ಮಾಡುತ್ತಿಲ್ಲವೇನೋ ಎಂದೆನಿಸುತ್ತದೆ..
ಕೆಟ್ಟ ಮೇಲಾದ್ರೂ ಬುದ್ದಿ ಬಂತಲ್ಲ.. “ನಮ್ಮ ಸಂಸ್ಥೆಯ ಹಣೆಬರಹವೇ ಅಂತದ್ದು..ಇ.ವಿ ಬಸ್ ಗಳನ್ನು ಪರಿಚ ಯಿಸಿದ ದಿನವೇ ಬೇಡ ಎಂದು ಆಕ್ಷೇಪ-ವಿರೋಧ ವ್ಯಕ್ತಪಡಿಸಿದ್ದೆವು.ಆದರೆ ಅದೇನೋ ಕಿತ್ ದಬಾಕ್ತೀನಿ ಅಂಥಾ ಸರ್ಕಾರ ಹೊರಡ್ತು..ಆದ್ರೆ ಆಗಿದ್ದೇನು.ನಮ್ಮ ಕಣ್ಮುಂದೆ ಇದೆ.. ಇ.ವಿ ಬಸ್ ಡ್ರೈವರ್ ಆಕ್ಸಿಡೇಂಟ್ ಮಾಡೋದು.. ಅದನ್ನು ನಮ್ಮ ತಲೆಗೆ ಬರೋದು..ನಮ್ಮನ್ನೆಲ್ಲಾ ಕಿಲ್ಲರ್ ಡ್ರೈವರ್ಸ್ ಎಂದು ಜನ ನೋಡುವಂತಾಗಿತ್ತು.ಆದರೆ ಈಗ ಸರ್ಕಾರ ಬದಲಾವಣೆ ಮಾಡಲಿಕ್ಕೇನೋ ಹೊರಟಿದೆ ಎನ್ನುವ ಸುದ್ದಿ ಕೇಳಿತು…ಇದನ್ನು ಸ್ವಾಗತಿಸುತ್ತೇವೆ. ಸರ್ಕಾರಕ್ಕೆ ಈಗಲಾದ್ರೂ ನಮ್ಮ ಬಿಎಂಟಿಸಿ ಡ್ರೈವರ್ ಗಳ ಬಗ್ಗೆ ನಂಬಿಕೆ ಬಂತಲ್ಲ ಎನ್ನುವುದೇ ಸಮಾಧಾನ.” -ಆನಂದ್-ಬಿಎಂಟಿಸಿ ಮುಖಂಡ
ಇಷ್ಟೊಂದು ಪ್ರಮಾಣದ ಅಪಘಾತ-ಸಾವು ನೋವು ಸಂಭವಿಸುತ್ತಿರುವ ಸನ್ನಿವೇಶ ದಲ್ಲಿ ಇ.ವಿ ಬಸ್ ಗಳನ್ನು ಉಳಿಸಿಕೊಳ್ಳುವುದು ಸರಿನಾ..? ಎನ್ನುವ ಪ್ರಶ್ನೆ ಕಾಡುತ್ತಿದೆ.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮುಂದೆಯೇ ಈ ಒಂದು ಪ್ರಶ್ನೆಯನ್ನು ಪ್ರಯಾಣಿಕರು ಇಟ್ಟಿದ್ದಾರೆ.ಎಲ್ಲವನ್ನು ಕೊಟ್ಟರೂ ಸರಿಯಾಗಿ ಕೆಲಸ ಮಾಡದೆ ಅಪಘಾತ-ಸಾವು ನೋವಿಗೆ ಕಾರಣವಾಗುತ್ತಿರುವ ಇವಿ ಡ್ರೈವರ್ ಗಳ ಕಾರಣಕ್ಕೆ ಕಿಲ್ಲರ್ ಡ್ರೈವರ್ಸ್ ಎನ್ನುವ ಕಳಂಕ ನಮಗೆ ಮೆಟ್ಟುತ್ತಿದೆ.ನಮ್ಮನ್ನು ಸಮಾಜದಲ್ಲಿ ಕೆಟ್ಟದಾಗಿ ನೋಡುವಂತಾಗಿದೆ ಎಂದು ಬಿಎಂಟಿಸಿಯ ಅನೇಕ ಡ್ರೈವರ್ಸ್ ಗಳೇ ಅಳಲು ತೋಡಿಕೊಂಡಿದ್ದಾರೆ.ಬಹುಷಃ ಇದು ಕೂಡ ಸಚಿವರಿಗೆ ಸರಿ ಎನ್ನಿಸಿರಬೇಕು.. ಹಾಗಾಗಿನೇ ಇವಿ ಬಸ್ ಗಳನ್ನು ಉಳಿಸಿಕೊಂಡು ಅಲ್ಲಿನ ಡ್ರೈವರ್ ಗಳನ್ನು ವಾಪಸ್ ಕಳುಹಿಸಿದ್ರೆ ಹೇಗೆ ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ಆರಂಭವಾಗಿವೆ ಎಂದ್ಹೇಳಲಾಗುತ್ತಿದೆ.

ಸಚಿವ ರಾಮಲಿಂಗಾರೆಡ್ಡಿ ಅವರೇ ನಿಗಮದ ಅಧಿಕಾರಿಗಳ ಜತೆ ಚರ್ಚೆ-ಸಮಾಲೋಚನೆ ನಡೆಸಿ ಇವಿ ಬಸ್ ಗಳು ಮಾಲಿನ್ಯ ಕಡಿಮೆ ಮಾಡಿವೆ ಎನ್ನುವ ಕಾರಣಕ್ಕೆ ಇರಲಿ..ಆದ್ರೆ ಕಿಲ್ಲರ್ ಎನ್ನುವ ಹಣೆಪಟ್ಟಿ ತಂದಿರುವ ಡ್ರೈವರ್ಸ್ ಗಳನ್ನು ಉಳಿಸಿಕೊಳ್ಳೋದು ಬೇಡ..ನಮ್ಮಡ್ರೈವರ್ ಗಳನ್ನೇ ಬಳಸಿಕೊಳ್ಳೋಣ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. ಇದನ್ನು ಬಿಎಂಟಿಸಿ ಆಡಳಿತ ವರ್ಗ ಕೂಡ ಸ್ವಾಗತಿಸಿದೆ ಎನ್ನಲಾಗ್ತಿದೆ.ಬಿಎಂಟಿಸಿ ಕ್ಯಾಂಪಸ್ ನೊಳಗೆ ಪ್ರೈವೇಟ್ ನವ್ರ ಪ್ರವೇಶವಾದ ದಿನವೇ ಅದನ್ನು ಖಂಡಿಸಿದ್ದ ಬಿಎಂಟಿಸಿ ಡ್ರೈವರ್ ಗಳೂ ಕೂಡ ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.ನಮ್ಮ ಕೈಗೆ ಇ.ವಿ ಬಸ್ ಗಳನ್ನು ಕೊಟ್ಟು ನೋಡಿ, ಪ್ರಯಾಣಿಕ ಸ್ನೇಹಿ ಎನ್ನುವ ಹೆಸರನ್ನು ಉಳಿಸ್ತೇವೆ..ಕಿಲ್ಲರ್ ಎನ್ನುವ ಕಳಂಕವನ್ನು ಅಳಿಸ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳ್ತಿದಾರೆ. ಸಚಿವರ ಆಲೋಚನೆ, ಕೇವಲ ಚಿಂತನೆಯಾಗೇ ಉಳಿಯದೆ ಕಾರ್ಯರೂಪಕ್ಕೆ ಬರಲಿ ಎನ್ನುವುದು ಡ್ರೈವರ್ ಗಳ ಆಶಯ.
ಒಟ್ಟಿನಲ್ಲಿ ಎಲ್ಲವೂ ಅಂದುಕೊಂಡಂತಾದ್ರೆ ಇವಿ ಬಸ್ ಗಳನ್ನು ಚಾಲನೆ ಮಾಡುತ್ತಿರುವ ಖಾಸಗಿ ಡ್ರೈವರ್ ಗಳ ದರ್ಬಾರ್ ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ..ಬಿಎಂಟಿಸಿ ಡ್ರೈವರ್ ಗಳು ಆ ಸ್ಥಾನ ಅಲಂಕರಿಸಬಹುದು..ಆದಷ್ಟು ಬೇಗ ಅದು ಘೋಷಣೆಯಾದ್ರೆ ಇ.ವಿ ಬಸ್ ಗಳ ಸಂಚಾರದಿಂದ ವಿಮುಖವಾಗಿದ್ದ ಸಾಕಷ್ಟು ಪ್ರಯಾಣಿಕರು ಮತ್ತೆ ಬಸ್ ಗಳನ್ನೇರುವ ದಿನಗಳು ದೂರವಿಲ್ಲ ಎನ್ನಿಸುತ್ತದೆ. ಹೌದಲ್ವಾ..!










