advertise here

Search

PU ಬೋರ್ಡ್”ನ   ಭ್ರಷ್ಟರು-ಮೈಗಳ್ಳರಿಗೆ ಸಿಂಹಸ್ವಪ್ನವಾದ“ಮಿಸ್ಟರ್ ಕ್ಲೀನ್”


ಪದವಿಪೂರ್ವ ಶಿಕ್ಷಣ ಮಂಡಳಿ( ಪಿಯು ಬೋರ್ಡ್)ಗೆ ಮಿಸ್ಟರ್ ಕ್ಲೀನ್ ಎಂದೇ ಖ್ಯಾತಿ ಪಡೆದಿರುವ ಕಿರಿಯ ಐಎಎಸ್ ಅಧಿಕಾರಿ ಭರತ್ ಎಂಟ್ರಿ ಕೊಟ್ಟ ಮೇಲೆ ಭ್ರಷ್ಟರು-ಮೈಗಳ್ಳರು-ಇಲಾಖೆ ಕೊಡುವ ಸಂಬಳಕ್ಕೆ ನೀಯತ್ತಿಲ್ಲದೆ ಅಕ್ರಮಗಳಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಸೃಷ್ಟಿಯಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಖಡಕ್ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಕಾರ್ಯನಿರ್ವಹಣೆಗೆ ವೇಗ ದೊರೆತಿದೆ.ಯಾವೊಬ್ಬ ಅಧಿಕಾರಿಯ ನಿರೀಕ್ಷೆಯಲ್ಲಿ ಅವರಿದ್ದರೋ ಅಂತದ್ದೇ ಅಧಿಕಾರಿಯ ಸ್ವರೂಪದಲ್ಲಿ ಭರತ್ ಸಿಕ್ಕಿದ್ದಾರೆ ಎಂದೇ ಶಿಕ್ಷಣ ಇಲಾಖೆ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಕಿರಿಯ ಐಎಎಸ್ ಅಧಿಕಾರಿ ಭರತ್ ಪಿಯು ಬೋರ್ಡ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು ಒಂದೆರೆಡು ತಿಂಗಳಾಗಿರಬಹುದೇನೋ..?ಅಷ್ಟರಲ್ಲಾಗಲೇ ಅಮೂಲಾಗ್ರ ಬದಲಾವಣೆಯೊಂದು ಪಿಯು ಬೋರ್ಡ್ ನಲ್ಲಿ ಕಾಣಿಸಲಾರಂಭಿಸಿದೆ. ಮಂಡಳಿಯಲ್ಲಿ ನಡೆಯುತ್ತಿದೆ ಎನ್ನಲಾದ ವ್ಯಾಪಕ ಭ್ರಷ್ಟಾಚಾರ-ಹಗರಣ ಬಹುತೇಕ ನಿಂತ್ಹೋ್ಗಿದೆ. ಅನೇಕ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳ ಅಲೆದಾಟಕ್ಕೆ ಬ್ರೇಕ್ ಬಿದ್ದಿದೆ.ಭ್ರಷ್ಟರಷ್ಟೇ ಅಲ್ಲದೆ ಮೈಗಳ್ಳರಾಗಿ ಹೋಗಿದ್ದ ಬಹುತೇಕ ಅಧಿಕಾರಿ ಸಿಬ್ಬಂದಿ ಎಲ್ಲಕ್ಕೂ ತಿಲಾಂಜಲಿ ಇಟ್ಟು ಕಚೇರಿಯಲ್ಲೇ ಕೆಲಸ ಮಾಡಲಾರಂಭಿಸಿದ್ದಾರೆ.ಹಿಂದಿನ ನಿರ್ದೇಶಕರ ನಿರ್ಲಕ್ಷ್ಯವೋ ಅಥವಾ ಅನಾದಾರವೋ ಗೊತ್ತಿಲ್ಲ.ಹೇಳೋರು ಕೇಳೋರಿಲ್ಲದಂತೆ ಆಗಿದ್ದ ಅಧಿಕಾರಿ ಸಿಬ್ಬಂದಿಗೆ ಚುರುಕು ಮುಟ್ಟಿಸಿದ್ದಾರೆ.ಪಿಯು ಮಂಡಳಿ ಕಚೇರಿ ಒಂದು ರೀತಿ ನೋಡಲು ಸಹ್ಯ ಎನ್ನುವಂತ ವಾತಾವರಣ ಹೊದ್ದುಕೊಂಡಿದೆ.

ಪಿಯು ಮಂಡಳಿ ಎಂದರೆ ಅದು ಹಗರಣಗಳ ಗೂಡು..ಭ್ರಷ್ಟಾಚಾರದ ಕೊಂಪೆ..ದಲ್ಲಾಳಿಗಳ ಅಡ್ಡ..ಸೋಮಾರಿಗಳ ತಾಣ.. ಎಂಬೆಲ್ಲಾ ಆಪಾದನೆಗಳಿದ್ದವು. ಶೈಕ್ಷಣಿಕವಾದಂಥ ವಿಚಾರಗಳಿಗಿಂತ ಬೇರೆಯಾದ ವಿಚಾರಗಳಲ್ಲಿ ಬಹುತೇಕ ಅಧಿಕಾರಿ ಸಿಬ್ಬಂದಿ ಮುಳುಗಿ ಹೋಗಿರುತ್ತಿದ್ದರು.ನಿರ್ದೇಶಕರೇ ಕಣ್ಮುಂದೆ ಹೋದರೂ ಅದಕ್ಕೆ ಕ್ಯಾರೆ ಎನ್ನದಷ್ಟು ಇಲ್ಲಿನ ಬಹುತೇಕ ಸಿಬ್ಬಂದಿ ಉಢಾಳರಾಗಿದ್ದರು.ಇಲಾಖೆಯನ್ನು ಕಂಟ್ರೊಲ್ ನಲ್ಲಿಟ್ಟುಕೊಳ್ಳುವಲ್ಲಿ ನಿರ್ದೇಶಕರು ವಿಫಲವಾಗಿದ್ದೇ ಇದಕ್ಕೆಲ್ಲಾ ಕಾರಣವಾಗಿತ್ತು.ಇದರಿಂದಲೇ ಶೈಕ್ಷಣಿಕ ಅಕ್ರಮಗಳು ಏನೇ ನಡೆದರೂ ನಡೆದೇ ಇಲ್ಲ ಎನ್ನುವಂತ ಸನ್ನಿವೇಶ ಸೃಷ್ಟಿಸಲಾಗುತ್ತಿತ್ತು.ಒಂದಷ್ಟು ಅಧಿಕಾರಿ-ಸಿಬ್ಬಂದಿ ನೇರವಾಗಿ ಅಕ್ರಮಗಳಲ್ಲಿ ಶಾಮೀಲಾಗಿ ಯಾರಿಗೆ ಎಷ್ಟನ್ನು ತಲುಪಿಸಬೇಕೊ ಅಷ್ಟನ್ನು ಚಾಚೂ ತಪ್ಪದೇ ರವಾನಿಸಿ ತಮ್ಮ ಕೆಲಸ ಮಾಡಿಕೊಂಡು ಆರಾಮಾಗಿದ್ದರು( ಒಂದೆರೆಡು ವರ್ಷಗಳ ಅವಧಿಯಲ್ಲಿ ನಿರ್ದೇಶಕರ ಕಚೇರಿಗೆ ಬಂದ ದೂರುಗಳು-ಹಾಕಲ್ಪಟ್ಟ ಆರ್ ಟಿ ಐ ಅರ್ಜಿಗಳನ್ನು ಗಂಭೀರವಾಗಿ ಅವಲೋಕಿಸಿ-ಪರಿಶೀಲಸಿದ್ರೆ ಬಹುಷಃ ಅಲ್ಲಿ ನಡೆದಿರ ಬಹುದಾದ ಅಕ್ರಮ-ಅವ್ಯವಹಾರಗಳ ಅಂದಾಜು ಸಿಕ್ಕೋಗಬಹುದೇನೊ..?.

ಆದರೆ ಭರತ್ ಅವರು ಬಂದ ಮೇಲೆ ಅಂಥಾ ಅವ್ಯವಸ್ಥೆ-ಅಕ್ರಮಗಳಿಗೆ ಬ್ರೇಕ್ ಬೀಳಲಾರಂಬಿಸಿದೆ.ಇಲಾಖೆಯಲ್ಲಿ ನಡೆಯುತ್ತಿರುವ ಎಲ್ಲಾ ವ್ಯವಹಾರಗಳು ಅವರ ಗಮನಕ್ಕೆ ಈಗಾಗಲಾ ಬಂದಿವೆ.ಪಾಠಶಾಲೆ ಸೇರಿದಂತೆ ಅನೇಕ ಹೋರಾಟಗಾರರು ನೀಡಿರುವ ದಂಡಿ ದಂಡಿ ದೂರುಗಳನ್ನು ಅವಲೋಕಿಸುವ ಕೆಲಸವನ್ನು ಅವರೇ ಮಾಡುತ್ತಿದ್ದಾರಂತೆ. ಬೋರ್ಡ್ ನ ಅಧಿಕಾರಿಗಳನ್ನು ಕರೆದು ಅವರಿಗೆ ಚುರುಕು ಮುಟ್ಟಿಸುತ್ತಿದ್ದಾರಂತೆ.ದೂರುಗಳ ಮೇಲೆ ಏಕೆ ಕ್ರಮ ಜಾರಿ ಮಾಡುತ್ತಿಲ್ಲ ಎಂದು ಜಾಡಿಸುತ್ತಿದ್ದಾರಂತೆ.ಅವರ ಖಡಕ್ ತನಕ್ಕೆ ಇಲಾಖೆಯಲ್ಲಿರುವ ಭ್ರಷ್ಟರು ವಿಲ ವಿಲ ಒದ್ದಾಡುತ್ತಿದ್ದಾರಂತೆ,.ನಮ್ಮ ಬುಡವನ್ನೆಲ್ಲಿ ಕಾಯಿಸ್ತಾರೋ ಎನ್ನುವ ಆತಂಕ ಶುರುವಾಗಿದೆಯಂತೆ,.ಆದರೆ ಈ ಬೆಳವಣಿಗೆ ಮಂಡಳಿಯಲ್ಲಿ ಬೆರಳೆಣಿಕೆಯಷ್ಟಿರುವ ಪ್ರಾಮಾಣಿಕರು-ದಕ್ಷರಿಗೆ ನೆಮ್ಮದಿ ತರಿಸಿರುವುದಂತೂ ಸತ್ಯ.

ALSO READ :  ಸದ್ಗುರು ಜಗ್ಗಿ ವಾಸುದೇವ್ ಗೆ ರಿಲೀಫ್: ಈಶಾ ಫೌಂಡೇಷನ್ ವಿರುದ್ಧದ ಪ್ರಕರಣ ವಜಾ!

ಮನೋಹರ್ ಕೊಳ್ಳಾ ಅವರ ಕಚೇರಿಯಲ್ಲಿ ಅರುಣ್ ಎನ್ನುವ ಸಿಬ್ಬಂದಿಯಿದ್ದು ಆತನೇ ಇಡೀ ಕಚೇರಿಗೆ ಸೂಪರ್ ಡಿಡಿಪಿಯು ರೀತಿಯಲ್ಲಿ ವರ್ತಿಸ್ತಾನೆ. ಕಚೇರಿಗೆ ಬರುವ ಕಾಲೇಜುಗಳವರ ಜತೆ ಸಲಿಗೆ ಬೆಳೆಸಿಕೊಂಡು ಕೆಲಸ ಮಾಡುವ ವೇಳೆಯಲ್ಲೇ ಅವರನ್ನು ಕರೆದುಕೊಂಡು ಹೋಗಿಬರುತ್ತಿದ್ದಾನಂತೆ.ಸಂಜೆಯಾದ ಮೇಲೆಯು ಕಚೇರಿ ಬಾಗಿಲನ್ನು ರಾತ್ರಿವರೆಗೂ ತೆರೆದಿಟ್ಟುಕೊಂಡಿರುತ್ತಾರಂತೆ. ಕೊಳ್ಳಾ ಹಾಗೂ ಅರುಣ್ ಅವರಿಬ್ಬರೇ ಕಚೇರಿಯೊಳಗೆ ಇರುತ್ತಾರಂತೆ. ಸಂಬಂದವೆ ಪಡದ ಕೆಲಸವನ್ನು ಮಾಡುತ್ತಿರುವ ಅರುಣ್ ವಿರುದ್ದ ದಂಡಿ ಆಪಾದನೆಗಳಿದ್ದರೂ ಆತನ ವಿರುದ್ಧ ಕ್ರಮ ಜಾರಿಯಾಗಿಲ್ಲ.ಇದಕ್ಕೆ ಕಾರಣವೇ ಆತನಿಗೆ ಶ್ರೀರಕ್ಷೆಯಂತಿರುವ ಮನೋಹರ ಕೊಳ್ಳಾ..ಅಂತೆ. ಇಂಥವರ ವಿರುದ್ದ ಭರತ್ ಅವರು ಕ್ರಮ ಕೈಗೊಂಡ್ರೆ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ-ಸುಧಾರಣೆ ಎರಡೂ ಆಗಬಹುದು.

ಇದು ಕೇವಲ ಸ್ಯಾಂಪಲ್..ಇಂಥಾ ನೂರಾರು ಸಮಸ್ಯೆಗಳು ಪಿಯು ಮಂಡಳಿಯಲ್ಲಿವೆ.ಇದೆಲ್ಲದರ ವಿರುದ್ಧವೂ ಈಗಾಗಲೇ ಭರತ್ ಸಮರ ಸಾರಿದ್ದಾರೆ.ಅವರ ಅವಧಿಯಲ್ಲಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳಾಗಿವೆ.ಇನ್ನು ಕೆಲವು ಆಗುವ ಹಂತದಲ್ಲಿವೆ.ಈ ಸನ್ನಿವೇಶದಲ್ಲಿ ಅವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರೆ ಪಿಯು ಬೋರ್ಡ್ ನಲ್ಲಿ ಹಿಂದೆಂದು ಕಂಡಿರದಿದ್ದಂತ ಬದಲಾವಣೆಗಳಾಗಲು ಸಾಧ್ಯ.ಈ ನಿಟ್ಟಿನಲ್ಲಿ ಮಿನಿಸ್ಟರ್ ಮಧು ಬಂಗಾರಪ್ಪ ಅವರು ಭರತ್ ಬೆನ್ನಿಗೆ ಶ್ರೀರಕ್ಷೆಯಾಗಿ ನಿಲ್ಲಬೇಕಿದೆಯಷ್ಟೆ..?!


Political News

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

Scroll to Top