advertise here

Search

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ


ಬೆಂಗಳೂರು:ನಾಳೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಸಾರಿಗೆ ಮುಷ್ಕರ ಸಂಬಂಧ  ಇಂದು ನಡೆದ ವಿಚಾರಣೆ ವೇಳೆ  ಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಎಂಜಿಎಸ್ ಕಮಲ್ ರ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ವಾದ  ಮಂಡಿಸಿದ್ರೆ.  ಸರ್ಕಾರದ ಪರ ನಿಲೋಫರ್ ಅಕ್ಬರ್ ವಾದ ಮಂಡಿಸಿದರು.

ಕೊರೊನಾ‌ ಸಂಧರ್ಭದಲ್ಲಿ ಸರ್ಕಾರ ಹಲವು ಸಿಬ್ಬಂದಿಯನ್ನ ವಜಾಗೊಳಿಸಿದೆ..ಬಹುತೇಕರನ್ನ ಪುನಃ ಸೇವೆಗೆ ಮರು ನೇಮಕ ಮಾಡಿಲ್ಲ.. ಹೀಗಾಗಿ ಬಾಕಿ ವೇತನ‌ ನೀಡುವ ಪ್ರಶ್ನೆ ಬರಲ್ಲ..ಇದು ಅರ್ಜಿದಾರರ ಪ್ರಾಮಾಣಿಕತೆಗೆ ಸಂಬಂಧಿಸಿದ ವಿಚಾರ.. ಅರ್ಜಿದಾರರ ಕಳಕಳಿಯನ್ನ ನೀವು ನೋಡಬೇಕು.. ಸರ್ಕಾರ ಇನ್ನೊಬ್ಬರ ಹೆಗಲ ಮೇಲೆ ಇಟ್ಟು ಶೂಟ್ ಮಾಡಲಾಗದು.. ಜುಲೈ 15ರಂದು ಪ್ರತಿಭಟನಾಕಾರರು ನೊಟೀಸ್ ನೀಡಿದ್ದಾರೆ.. ಈ ಹೊತ್ತಿಗಾಗಲೇ ನೀವು ಕ್ರಮ ಕೈಗೊಳ್ಳಬೇಕಿತ್ತು..ಸರ್ಕಾರಕ್ಕೆ ವಿಭಾಗೀಯ ಪೀಠ ಪ್ರಶ್ನೆ.. ಕೈಗಾರಿಕಾ ನ್ಯಾಯ ಮಂಡಳಿಯಲ್ಲಿ ಸಂಧಾನ ಸಭೆ ನಡೆದಿತ್ತು.. ಹಣಕಾಸು ನೆರವಿನ ವಿಚಾರದ ಬಗ್ಗೆ ಸರ್ಕಾರದ ಸಲಹೆ ಕೇಳಬೇಕು ಎಂದು ತಿಳಿಸಲಾಗಿತ್ತು..ಮುಖ್ಯಮಂತ್ರಿಗಳು ಬೆಳಗ್ಗೆಯಿಂದ ನಿರಂತರವಾಗಿ ಸಭೆ ನಡೆಸ್ತಿದ್ದಾರೆ ಎಂದು  ಸಾರಿಗೆ ಪರ ವಕೀಲರು ವಾದ ಮಂಡಿಸಿದರು

ALSO READ :  PLEASE ALLOW TO X'MAS MIDNIGHT HOLY MASS..."ಮಧ್ಯರಾತ್ರಿ" ಕ್ರಿಸ್ಮಸ್‌ ಆಚರಣೆಗೇಕೆ ನಿರ್ಬಂಧ,ಕಾಂಗ್ರೆಸ್‌ ಸರ್ಕಾರಕ್ಕೆ ಕ್ರೈಸ್ತರ ಪ್ರಶ್ನೆ:ಅವಕಾಶ ನೀಡದಿದ್ದರೆ ಉಗ್ರ ಪರಿಣಾಮ..!

ವಜಾಗೊಳಿಸಿದ್ದ ಬಹುತೇಕ ಸಿಬ್ಬಂದಿಯನ್ನ ಮರು ನೇಮಕ ಮಾಡಲಾಗಿದೆ..ವೇತನ ಪರಿಷ್ಕರಣೆ ಕೇಳ್ತಿದ್ದಾರೆ, ಇದು ಸಾಧ್ಯವೇ ಇಲ್ಲಾ.. ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ನಡೆಯುತ್ತೆ.. 2020ರಲ್ಲಿ ವೇತನ ಪರಿಷ್ಕರಣೆ ಆಗಿತ್ತು.. ಕೋವಿಡ್ ಕಾರಣದಿಂದ ನಂತರ ವೇತನ ಪರಿಷ್ಕರಣೆ ಆಗಿಲ್ಲ.. ಮುಖ್ಯಮಂತ್ರಿಗಳ ಜೊತೆ ಸಭೆ ನಡೆಯುತ್ತಿದೆ.. ಸಂಘಟನೆಗಳು ಸಾರಿಗೆ ಸೇವೆ ಮುಷ್ಕರಕ್ಕೆ ಅವಕಾಶ ಮಾಡಿಕೊಡಬಾರದು.. ಅಗತ್ಯ ಸೇವೆಯನ್ನ ಸಾಮಾನ್ಯ ಜನ ಬಳಸುತ್ತಾರೆ.. ಅವರಿಗೆ ಹಾನಿಯಾಗಬಾರದು ಎಂದು ವಾದಿಸಿದರು.

ಈ ಹಿನ್ನಲೆಯಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ಒಂದು ದಿನ ಮಾತ್ರ ಮುಷ್ಕರ ಮುಂದೂಡುವಂತೆ ಆದೇಶಿಸಿತು.ಆದರೆ ಎರಡು‌ ದಿನ ಮುಂದೂಡುವಂತೆ ಸಾರಿಗೆ ಇಲಾಖೆ ಪರ ವಕೀಲರು ಮನವಿ ಮಾಡಿದ್ರೂ, ಸಿಎಂ ಸಭೆ ಹಿನ್ನಲೆಯಲ್ಲಿ ಒಂದು ದಿನ ವಿಚಾರಣೆ ಮುಂದೂಡಲಾಗ್ತಿದೆ ಎಂದು ಅಭಿಪ್ರಾಯಿಸಿತು.


Political News

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

Scroll to Top