advertise here

Search

“ರಿಪಬ್ಲಿಕ್ ಕನ್ನಡ”ದ ಮುಖ್ಯಸ್ಥರ ಹುದ್ದೆಯನ್ನು  ಅಜಿತ್ ಹನುಮಕ್ಕನವರ್  ನಿರಾಕರಿಸಿದ್ದೇಕೆ..? “ಸುವರ್ಣ”ದಲ್ಲಿಯೇ “ಶೋಭಾ” ಉಳಿಯಲಿಲ್ಲ ಏಕೆ.?!


ಬೆಂಗಳೂರು: ವಿಷಯದ ಬಗ್ಗೆ ವಿವರಣೆ ಕೊಡುವ ಮುನ್ನ ಎರಡು ಪ್ರಮುಖ ವಿಷಯಗಳನ್ನು ಮೊದಲೇ ಹೇಳಿ ಅವರನ್ನು ಅಭಿನಂದಿಸುತ್ತದೆ ಕನ್ನಡ ಫ್ಲ್ಯಾಶ್ ನ್ಯೂಸ್.

ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್ ನ ಮುಖ್ಯಸ್ಥೆಯಾಗಿ ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ನೇಮಕಗೊಂಡಿದ್ದಾರೆ.ಇನ್ನೊಂದೆಡೆ ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ಪ್ರಜಾವಾಣಿಯ ಅಂಗಪತ್ರಿಕೆ ಸುಧಾ ವಾರಪತ್ರಿಕೆಯ ಮುಖ್ಯಸ್ಥರಾಗಿ ಹಿರಿಯ ವರದಿಗಾರ್ತಿ ರಶ್ಮಿ ಎಸ್. ನಿಯೋಜನೆ ಗೊಂಡಿದ್ದಾರೆ.ಅವರವರ ಕ್ಷೇತ್ರದಲ್ಲಿ ಸಮರ್ಥರಾಗಿರುವ ಇವರಿಬ್ಬರಿಗೂ ಸಂಸ್ಥೆ ಅರ್ಹ ಹಾಗೂ ಯೋಗ್ಯವಾದ ಸ್ಥಾನಮಾನವನ್ನೇ ನೀಡಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವೃತ್ತಿಜೀವನದಲ್ಲಿ ದೊರೆತ ಸುವರ್ಣಾವಕಾಶವನ್ನು ಇಬ್ಬರು ಸದುಪಯೋಗ ಪಡಿಸಿಕೊಳ್ಳಲಿ ಇವರಿಬ್ಬರಿಗೂ ಶುಭವಾಗಲಿ.ತಮ್ಮ  ಮುಂದಿರುವ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವಂತಾಗಲಿ..  

ಈಗ ಪ್ರಮುಖ ವಿಷಯದ ಬಗ್ಗೆ ಬೆಳಕು ಚೆಲ್ಲುವ ಯತ್ನ.. ಕನ್ನಡದ ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್  ಗೆ ಯಾರು  ಮುಖ್ಯಸ್ಥರಾಗುತ್ತಾರೆನ್ನುವ  ತಿಂಗಳವರೆಗಿನ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಅನೇಕ ವರ್ಷಗಳವರೆಗೆ ಕೆಲಸ ಮಾಡಿರುವ ಅನುಭವಿ ಶೋಭಾ ಮಳವಳ್ಳಿ ಅವರನ್ನು ರಿಪಬ್ಲಿಕ್ ಆಡಳಿತ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.ರಿಪಬ್ಲಿಕ್ ಆಡಳಿತ ಶೋಭಾ ಅವರನ್ನು ನೇಮಕ ಮಾಡಿಕೊಂಡಿದೆ ಎಂದರೆ ತೂಗಿ ಅಳೆದೇ ನಿರ್ದಾರ ಕೈಗೊಂಡಿರುತ್ತದೆ ಎನ್ನುವುದು ಎಷ್ಟು ಸತ್ಯವೋ, ಶೋಭಾ ಅವರ ನೇಮಕ ಅನೇಕರಲ್ಲಿ ಅಚ್ಚರಿ ಮೂಡಿಸಿರುವುದು ಕೂಡ ನಿಜ. ಏಕೆಂದರೆ ಸುದ್ದಿ ಮನೆಯ ಒಂದು ವಿಭಾಗವನ್ನಷ್ಟೇ ಮುನ್ನಡೆಸುತ್ತಿದ್ದ ಶೋಭಾ ಒಂದಿಡೀ ಚಾನೆಲ್ ನ ಮುಖ್ಯಸ್ಥೆನಾ..? ಎನ್ನುವ ಪ್ರಶ್ನೆ ಸಹಜವಾಗಿಯೇ ಅವರನ್ನು ಕಾಡಿರಬಹುದು.ಗುರುತರ ಜವಾಬ್ದಾರಿ ನಿರ್ವಹಣೆ ಬಗ್ಗೆ ಅವರ ಬಗ್ಗೆ ಅನೇಕರಿಗೆ ಇರಬಹುದಾದ ಅನುಮಾನವನ್ನು ದೂರ ಮಾಡಿ ಸೈ ಎನಿಸಿಕೊಳ್ಳುವ ದೊಡ್ಡ ಸವಾಲನ್ನು ಶೋಭಾ ನಿಭಾಯಿಸಲಿ ಎನ್ನುವುದು ನಮ್ಮ ಅಶಯ.

ರಿಪಬ್ಲಿಕ್ ಟಿವಿಗೆ ಶೋಭಾ ಮುಖ್ಯಸ್ಥರಾ..? ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡೊಕ್ಕೆ ಕಾರಣ. ರಿಪಬ್ಲಿಕ್ ಕನ್ನಡದ ಮುಖ್ಯಸ್ಥರ ರೇಸ್ ನಲ್ಲಿ ಅವರ ಅಚಾನಕ್ ರಂಗಪ್ರವೇಶ ಎನ್ನಲಾಗುತ್ತಿದೆ.ಏಕೆಂದರೆ ಬಹಳಷ್ಟು ಮಾದ್ಯಮಮಿತ್ರರಿಗೆ ಗೊತ್ತಿರುವಂತೆ ರಿಪಬ್ಲಿಕ್ ಕನ್ನಡದ ಮುಖ್ಯಸ್ಥರ ಹುದ್ದೆಗೆ ಚಲಾವಣೆಯಲ್ಲಿದ್ದ ಮೊದಲ ಹೆಸರೇ ಅಜಿತ್ ಹನುಮಕ್ಕನವರ್ ದ್ದು.ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಜತೆಗೆ ನಿರ್ಣಾಯಕ ಹಂತದ ಮಾತುಕತೆಗಳೂ ಮುಗಿದಿದ್ವಂತೆ.ಅಜಿತ್ ಕೂಡ ಉಸ್ತುವಾರಿ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದರಂತೆ. ಅವರು ಹಾಕಿದ್ದರೆನ್ನಲಾದ ಕಂಡೀಷನ್ಸ್ ಗು ರಿಪಬ್ಲಿಕ್ ಮ್ಯಾನೇಜ್ಮೆಂಟ್ ಬಹುತೇಕ ಒಪ್ಪಿಗೆಯನ್ನೂ ಸೂಚಿಸಿತ್ತಂತೆ.ಇನ್ನೇನು ಅಜಿತ್ ಎಂಟ್ರಿಗೆ ವೇದಿಕೆ ಅಣಿಯಾಗಬೇಕು ಎನ್ನುವಷ್ಟರಲ್ಲೇ ಕೆಲವು ದಿಢೀರ್ ಬೆಳವಣಿಗೆಗಳಾದವು ಎನ್ನುವುದು ಸುವರ್ಣ ಟಿವಿ ಹಾಗೂ ರಿಪಬ್ಲಿಕ್ ಟಿವಿ ಸುದ್ದಿ ಮೂಲಗಳಿಂದ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿದ್ದ ಮಾಹಿತಿ.ಕನ್ನಡ ಫ್ಲ್ಯಾಶ್ ನ್ಯೂಸ್ ವಿಶ್ವಸನೀಯ ಮೂಲಗಳ ಮಾಹಿತಿಯನ್ನಾಧರಿಸಿ ವರದಿ ಮಾಡಿತ್ತು..ಈ ವರದಿ ಎರಡು ಚಾನೆಲ್ ಗಳಲ್ಲಿ ಕೋಲಾಹಲ ಎಬ್ಬಿಸಿದ್ದು ಸುಳ್ಳಲ್ಲ.

ಈ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡಿದ್ದು ಏಷಿಯಾನೆಟ್ ನ ಕೇರಳಾ ಟೀಮ್ ಮಲ್ಲಿಗೆ ಆಸ್ಪತ್ರೆ ಎದುರಿರುವ ಮುಖ್ಯ ಕಚೇರಿಗೆ ಬಂದು ಠಿಕಾಣಿ ಹೂಡಿ ಟೋಟಲ್ ವ್ಯವಸ್ಥೆ ಬದಲಿಸಲು ಕುಳಿತುಕೊಂಡಾಗ,ಆಗಲೇ  ಅಜಿತ್ ಅವರು ಬದಲಾಗುತ್ತಾರೆನ್ನುವ ಸುದ್ದಿ ಪಸರ್ ಆಗಿತ್ತು.ಈಗಿನ ಟೀಮ್ ನ ಪರ್ಫಾಮೆನ್ಸ್ ಬಗ್ಗೆ ಅಷ್ಟೇನು ಸಂತುಷ್ಟವಾಗಿರದ ಕೇರಳಾ ಮ್ಯಾನೇಜ್ಮೆಂಟ್ ಸಂಪಾದಕರಾದಿಯಾಗಿ ಬಹಳಷ್ಟು ಬದಲಾವಣೆ ಮಾಡುವ ಕೆಲಸಕ್ಕೆ ಕೈ ಹಾಕಿದೆ ಎನ್ನುವ ಸುದ್ದಿ ಹರಡಲಾರಂಭಿಸಿತ್ತು.ಅಜಿತ್ ಕೂಡ ಹೊರ ನಡೆಯುವ ಪ್ರಯತ್ನ ಮಾಡಿದ್ದರೆನ್ನುವ ಮಾತುಗಳಿವೆ.ಆಗಲೇ ಅಜಿತ್ ರಿಪಬ್ಲಿಕ್ ಗೆ ಹೋದರೆ ಇಲ್ಲಿ ಯಾರು ಎನ್ನುವ  ಪ್ರಶ್ನೆ ಸೃಷ್ಟಿಯಾಗಿತ್ತು.ಆಗ ಕೇಳಿಬಂದಿದ್ದ ಹೆಸರೇ ಶೋಭಾ ಅವರದ್ದಂತೆ.ಪ್ರಶಾಂತ್ ನಾತು ಅನುಭವಿಯಾಗಿದ್ದರೂ ಅವರು ಸಂಪಾದಕ ಸ್ಥಾನಕ್ಕೆ ಯಾವತ್ತೂ ಇಷ್ಟಪಟ್ಟವರಲ್ಲ..ಅದಕ್ಕಾಗಿ ಪ್ರಯತ್ನವನ್ನೂ ಪಟ್ಟವರಲ್ಲ.ಅವರ ನಂತರ ಇನ್ನ್ಯಾರು ಎಂದಾಗ ಶೋಭಾ ಹೆಸರೇ ಹರಿದಾಡಲಾರಂಭಿಸಿತ್ತಂತೆ.

ALSO READ :  ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 830 ವಾಣಿಜ್ಯ ಕಟ್ಟಡಗಳು ಸೀಜ್..

ಆದರೆ ರಿಪಬ್ಲಿಕ್ ಗೆ ಹೋಗುವ ಮನಸನ್ನು ಬದಲಿಸಿ ಸುವರ್ಣದಲ್ಲೇ ಉಳಿಯುವ ನಿರ್ದಾರವನ್ನು ಅಜಿತ್ ಮಾಡಿದರೋ ಶೋಭಾ ಅವರಿಗೆ ಬೇಸರವಾಗಿದ್ದಂತೂ ಸತ್ಯವಂತೆ.ಕೆಲವು ಮೂಲಗಳ ಪ್ರಕಾರ ಅಜಿತ್ ಸ್ಥಾನಕ್ಕೆ ಶೋಭಾ ಅವರನ್ನು ಪ್ರತಿಷ್ಟಾಪಿಸುವ ವಿಚಾರದಲ್ಲಿಯೂ ಮಾತುಕತೆಗಳು ನಡೆದಿದ್ದವೆನ್ನುವ ಮಾತಿದೆ.ಶೋಭಾ ಕೂಡ ಈ ವಿಷಯದಲ್ಲಿ ಆತ್ಮ ವಿಶ್ವಾಸದಿಂದ ಇದ್ದರಂತೆ.ಆದರೆ ಲೆಕ್ಕಾಚಾರಗಳು ತಲೆಕೆಳಗಾದಾಗ ಬೇಸರವಾದ್ರೂ ಹೊಸ ಅವಕಾಶಗಳು ಅವರಿಗಾಗಿ ತೆರೆದುಕೊಂಡವಂತೆ.ಆ ಅವಕಾಶವೇ ರಿಪಬ್ಲಿಕ್ ಕನ್ನಡದ ಮುಖ್ಯಸ್ಥರ ಹುದ್ದೆ.

ಮೊದಲಿದ್ದ ಲೆಕ್ಕಾಚಾರಗಳ ಪ್ರಕಾರ ಅಜಿತ್ ಅವರೇನಾದ್ರೂ ರಿಪಬ್ಲಿಕ್ ಕನ್ನಡದ ಕಡೆ ಹೆಜ್ಜೆ ಹಾಕಿದ್ದರೆ ಅವರ ಸ್ಥಾನಕ್ಕೆ ಬರುತ್ತಿದ್ದವರು ಇದೇ ಶೋಭಾ ಅವರೆನ್ನುವ ವಾತಾವರಣವಿತ್ತು.ಆದರೆ ಅಜಿತ್ ಯಾವ ಕಾರಣಕ್ಕೆ ರಿಪಬ್ಲಿಕ್ ಕಡೆ ಹೋಗಲಿಲ್ಲವೋ ಗೊತ್ತಿಲ್ಲ..ಆದರೆ ಅವಕಾಶ ನಿರಾಕರಿಸಿದ ಪರಿಣಾಮ ಶೋಭಾ ಅವರಿಗೆ ರಿಪಬ್ಲಿಕ್ ಕನ್ನಡದ ಮುಖ್ಯಸ್ಥರ ಸ್ಥಾನ ಸಿಕ್ಕಿದ್ದಂತೂ ಸತ್ಯ.ಅಜಿತ್ ಅವರಿಗೆ ಹುದ್ದೆ-ಸ್ಥಾನಮಾನದ ವಿಚಾರದಲ್ಲಿ ಯಾವತ್ತಿದ್ರೂ ಕಾಂಪಿಟೇಟರ್ ಆಗಲಿದ್ದ ಶೋಭಾ  ನಿರ್ಗಮನದಿಂದ ಅಜಿತ್ ಸ್ವಲ್ಪ ನಿಟ್ಟುಸಿರುಬಿಟ್ಟಿರುವಂತಿದೆ ಎನ್ನುವ  ಮಾತುಗಳಿವೆ.ಅಜಿತ್ ಅವರಿಗೆ ಅದು ನಿರೀಕ್ಷಿತವಾಗಿದ್ರೂ ಶೋಭಾ ಅವರ ನಿರ್ಗಮನ ಸುವರ್ಣದ ಬಳಗಕ್ಕೆ ದೊಡ್ಡ ಶಾಕ್ ಮೂಡಿಸಿದೆಯಂತೆ.ಏಕೆಂದರೆ ಸುದ್ದಿ ಮನೆಯ ಎಲ್ಲರನ್ನೂ ಅಷ್ಟೊಂದು ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರೆನ್ನುವ ಮಾತಿದೆ.

ಇನ್ನು ಕೆಲವೇ ದಿನಗಳಲ್ಲಿ ಶೋಭಾ ರಿಪಬ್ಲಿಕ್ ಕನ್ನಡದ ಮುಖ್ಯಸ್ಥರ ಹುದ್ದೆಯನ್ನು ಅಧಿಕೃತವಾಗ ಅಲಂಕರಿಸಲಿದ್ದಾರೆ.ಅಲ್ಲಿ ಶೋಭಾರ ಯುಗ ಆರಂಭವಾಗಲಿದೆ.ಆದರೆ ಶೋಭಾ ಅವರ ಎಂಟ್ರಿಯಿಂದ ಸಧ್ಯಕ್ಕೆ ಮುಖ್ಯಸ್ಥರ ಸ್ಥಾನದಲ್ಲಿರುವ ಜಯಪ್ರಕಾಶ್ ಶೆಟ್ಟಿಗೆ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ.ಅಷ್ಟೇ ಅಲ್ಲ ಅಲ್ಲಿರುವ ಸಾಕಷ್ಟು ಮಾದ್ಯಮ ಮಿತ್ರರಿಗೂ ತೊಂದರೆಯಾಗುವ ಸಾಧ್ಯತೆಗಳಿವೆಯಂತೆ.ಇನ್ನು ಸುವರ್ಣದಲ್ಲಿಯೂ ಶೋಭಾ ಅವರೊಂದಿಗೆ ಗುರುತಿಸಿಕೊಂಡಿದ್ದ 10-15 ಸಿಬ್ಬಂದಿ ರಿಪಬ್ಲಿಕ್ ಟೀಮ್ ಸೇರುವ ಸಾಧ್ಯತೆಗಳಿವೆಯಂತೆ.( ಈ ಟೀಮ್ ಎನ್ನುವ ದರಿದ್ರ ಕಾನ್ಸೆಪ್ಟ್ ನಿಂದಲೇ ಒಂದಿಡೀ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗ್ತದೆ..ಈ ತಿಕ್ಕಾಟದಲ್ಲಿ ಪ್ರಾಮಾಣಿಕರು-ದಕ್ಷರು ಬಲಿಪಶುಗಳಾಗುತ್ತಾರೆ). ಒಂದು ಮೂಲದ ಪ್ರಕಾರ ಸುವರ್ಣ ಟೀಮ್ ನಲ್ಲಿರುವ ಸಾಕಷ್ಟು ರಿಪೋರ್ಟರ್ಸ್ ಹಾಗೂ  ಇತರೆ ಸಿಬ್ಬಂದಿಗೆ ಕೊಕ್ ಕೊಡುವ ಸಾಧ್ಯತೆಗಳಿವೆಯಂತೆ.ಅವರ ನಿರ್ಗಮನದಿಂದ ಸಂಸ್ಥೆಗೆ ತೊಂದರೆಯಾ ಗಬಾರದೆನ್ನುವ ಕಾರಣಕ್ಕೇನೆ ಇತ್ತೀಚಿಗೆ ಬೇಕಾಗಿದ್ದಾರೆ ಎನ್ನುವ ಜಾಹಿರಾತು ನೀಡಿದ್ದಂತೆ.ಹಾಗಾಗಿ ಒಂದಷ್ಟು ಸಿಬ್ಬಂದಿ ಬೇರೆಲ್ಲೂ ಹೋಗಲ್ಲ..ಇಲ್ಲೇ ಇರುತ್ತೇನೆ ಎಂದರೂ ಕೆಲಸ ಕಳೆದುಕೊಳ್ಳುವ ಆತಂಕವಿದೆ ಎನ್ನಲಾಗುತ್ತಿದೆ.

 ಅದೇನೇ ಆಗಲಿ, ಯಾರ ಎಂಟ್ರಿಯಿಂದಾಗಲಿ, ಯಾರ ನಿರ್ಗಮನದಿಂದಾಗಲಿ ಸಂಸ್ಥೆಯನ್ನೇ ನೆಚ್ಚಿಕೊಂಡು ಕೆಲಸ ಮಾಡುತ್ತಿರುವ ಅಮಾಯಕ ಹಾಗು ಪ್ರಾಮಾಣಿಕ ಸಿಬ್ಬಂದಿಗೆ ತೊಂದರೆಯಾಗಬಾರದು ಅಷ್ಟೇ..ಸಂಸ್ಥೆಯಲ್ಲಿ ನಡೆಯುವ ಈ ಹಾವು ಏಣಿ ಆಟ ಯಾರನ್ನು ಬೀದಿಗೆ ಬೀಳಿಸಬಾರದು.ಶೋಭಾ ಅವರು ಹೋದರೆನ್ನುವ ಕಾರಣಕ್ಕೆ ಅವರ ಜತೆಗೆ ಗುರುತಿಸಿಕೊಂಡವರನ್ನು ಅಜಿತ್ ಟಾರ್ಗೆಟ್ ಮಾಡುವುದಾಗಲಿ, ಅಥವಾ ಶೋಭಾ ರಿಪಬ್ಲಿಕ್ ಗೆ ಹೋದ ಮೇಲೆ ತನ್ನ ಜತೆ ಬರಬಹುದಾದವರಿಗೆ ನೆಲೆ ಕಲ್ಪಿಸಲು  ಅಲ್ಲಿರುವ ಸಿಬ್ಬಂದಿಯನ್ನು ಟಾರ್ಗೆಟ್ ಮಾಡುವ ಎರಡೂ ಬೆಳವಣಿಗೆಗಳು ಅಮಾನವೀಯ ಹಾಗೂ ಅಪಾಯಕಾರಿ ಕೂಡ..ಹೀಗೊಂದು ಕೆಟ್ಟ ಬೆಳವಣಿಗೆಗೆ ಇಬ್ಬರೂ ಉದಾಹರಣೆಯಾಗದಿರಲಿ. ಇಬ್ಬರು ತಮ್ತಮ್ಮ ಚಾನೆಲ್ ಗಳ ಮೂಲಕ ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡಲಿ ಎನ್ನುವುದಷ್ಟೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಮನವಿ ಹಾಗೂ ಕಳಕಳಿ..


Political News

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

Scroll to Top