advertise here

Search

ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಹನಿಟ್ರಾಪ್ ಸಂಚು? ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್!

jakkur villa valentines day

ಬೆಂಗಳೂರು: ಪ್ರೇಮಿಗಳ ದಿನದಂದು (ಫೆಬ್ರವರಿ 14) ಜಕ್ಕೂರಿನ ‘ರೆಕ್ಸ್ ವಿಲ್ಲಾ’ದಲ್ಲಿ ನಡೆದ ಘಟನೆ ಈಗ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದೆ. ತಮಿಳುನಾಡು ಮೂಲದ 19 ವರ್ಷದ ಯುವತಿಯನ್ನು ಪಾರ್ಟಿಗೆ ಕರೆಸಿ, ಆಕೆಗೆ ನಶೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪಾರ್ಟಿಯಿಂದ ಶುರುವಾದ ಹನಿಟ್ರಾಪ್?

ದೂರುದಾರರಾದ ನಿಖಿಲ್ ಎಂಬುವವರು ಜಕ್ಕೂರಿನಲ್ಲಿ ವಿಲ್ಲಾವೊಂದನ್ನು ಲೀಸ್ ಪಡೆದು ಪಾರ್ಟಿಗಳಿಗೆ ಬಾಡಿಗೆ ನೀಡುವ ವ್ಯವಹಾರ ಮಾಡುತ್ತಿದ್ದರು. ಫೆಬ್ರವರಿ 14ರಂದು ಅವರ ಸ್ನೇಹಿತ ದೀಕ್ಷನ್ ಎಂಬುವವರು ವ್ಯಾಲೆಂಟೈನ್ಸ್ ಡೇ ಪಾರ್ಟಿಗಾಗಿ ವಿಲ್ಲಾ ಬುಕ್ ಮಾಡಿದ್ದರು. ಅಂದು ರಾತ್ರಿ ನಡೆದ ಪಾರ್ಟಿಯಲ್ಲಿ ವೈಭವಿ (ವಿವಿ) ಎಂಬ ಯುವತಿ ನಿಖಿಲ್ ಅವರಿಗೆ ಪರಿಚಯವಾಗಿದ್ದಳು.

ಪಾರ್ಟಿಯ ಸಮಯದಲ್ಲಿ ವೈಭವಿ ತನ್ನ ವೈಯಕ್ತಿಕ ನೋವುಗಳನ್ನು ಹೇಳಿಕೊಳ್ಳುತ್ತಾ ನಿಖಿಲ್ ಜೊತೆ ಅತಿ ಸಲುಗೆಯಿಂದ ವರ್ತಿಸಲು ಪ್ರಾರಂಭಿಸಿದ್ದಳು. ಅಷ್ಟೇ ಅಲ್ಲದೆ, ತಾನು ‘ಶುಗರ್ ಬೇಬಿ’ ತನಗೆ ‘ಶುಗರ್ ಡ್ಯಾಡಿ’ ಬೇಕು ಎಂದು ಕೇಳಿಕೊಂಡಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್..

ಇನ್ಸ್ಟಾಗ್ರಾಮ್ ಪೋಸ್ಟ್ ಮತ್ತು ಬ್ಲಾಕ್‌ಮೇಲ್ ಶುರು

ಪಾರ್ಟಿ ಮುಗಿದ ನಾಲ್ಕು ದಿನಗಳ ನಂತರ, ಅಂದರೆ ಫೆಬ್ರವರಿ 18ರಂದು ವೈಭವಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿಖಿಲ್ ಮತ್ತು ದೀಕ್ಷನ್ ಅವರು ತನಗೆ ಮಾದಕ ವಸ್ತು ನೀಡಿ ಲೈಂಗಿಕ ಹಲ್ಲೆ ನಡೆಸಿದ್ದಾರೆ ಎಂದು ಪೋಸ್ಟ್ ಹಾಕಿದ್ದಳು. ಇದರ ಬೆನ್ನಲ್ಲೇ ಇಮ್ರಾನ್ ಎಂಬಾತ ತಾನು ‘ರಾಜ್ ನ್ಯೂಸ್’ ಚಾನೆಲ್‌ನ ಕ್ರೈಂ ಬ್ರಾಂಚ್ ಹೆಡ್ ಎಂದು ಪರಿಚಯಿಸಿಕೊಂಡು ನಿಖಿಲ್ ಅವರಿಗೆ ಕರೆ ಮಾಡಿದ್ದಾನೆ. ಆರೋಪಿಗಳು ನಿಖಿಲ್ ಅವರ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಲು ಶುರುಮಾಡಿದ್ದಾರೆ. ಕೇಳಿದಷ್ಟು ಹಣ ನೀಡದಿದ್ದರೆ ನ್ಯೂಸ್ ಚಾನೆಲ್‌ನಲ್ಲಿ ಪ್ರೋಮೋ ಹಾಕಿ ಮಾನ ಮರ್ಯಾದೆ ತೆಗೆಯುವುದಾಗಿ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ALSO READ :  ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಅರೆಸ್ಟ್: ನಾಲ್ವರು ಯುವತಿಯರ ರಕ್ಷಣೆ!

ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ವೈಭವಿ ಮತ್ತು ಇಮ್ರಾನ್ ವಿರುದ್ಧ Bharatiya Nyaya Sanhita (BNS) ಸೆಕ್ಷನ್ 308(2) ಮತ್ತು Information Technology Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ವ್ಯವಸ್ಥಿತವಾಗಿ ನಡೆದ ಹನಿಟ್ರಾಪ್ ಜಾಲವೇ ಅಥವಾ ಅತ್ಯಾಚಾರದ ಆರೋಪದಲ್ಲಿ ಸತ್ಯವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top