advertise here

Search

ಲಕ್ಕುಂಡಿ ನಿಧಿ ರಹಸ್ಯ ಬಯಲು: ಚಿನ್ನದ ಬಿಸ್ಕಿಟ್ ಹೆಸರಲ್ಲಿ ‘ಚಾಕಲೇಟ್’ ಆಟ! ಮೌಲ್ವಿ ಅರೆಸ್ಟ್

lakkundi fake treasure scam

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕಿದೆ ಎಂಬ ಸುದ್ದಿ ಕೇಳಿ ಇಡೀ ರಾಜ್ಯವೇ ಕುತೂಹಲದಿಂದ ಇತ್ತು. ಆದರೆ, ಈ ನಿಧಿಯ ಹಿಂದೆ ಅಡಗಿದ್ದದ್ದು ಅಸಲಿ ಬಂಗಾರವಲ್ಲ, ಬದಲಿಗೆ ಅಂತರಾಜ್ಯ ಮಟ್ಟದ ವಂಚಕ ಜಾಲದ ಕರಾಳ ಮುಖ! ನಿಧಿ ಆಸೆಗೆ ಬಿದ್ದ ರೈತರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಲೂಟಿ ಮಾಡಲು ಸ್ಕೆಚ್ ಹಾಕಿದ್ದ ಉತ್ತರಾಖಂಡ ಮೂಲದ ಕಿಂಗ್‌ಪಿನ್ ಹಜರತ್ ಮೌಲ್ವಿಯನ್ನು ಗದಗ ಪೊಲೀಸರು ಹಡೆಮುರಿ ಕಟ್ಟಿದ್ದಾರೆ.

ಹೇಗಿತ್ತು ನಿಧಿ ಶೋಧದ ಮೋಸದಾಟ?

ಈ ವಂಚನೆಯ ಕಥೆ ಶುರುವಾಗಿದ್ದು 2022ರಲ್ಲಿ. ಲಕ್ಕುಂಡಿಯ ಸಣ್ಣಬಸಪ್ಪ ಮತ್ತು ದೊಡ್ಡಬಸಪ್ಪ ಎಂಬ ಸಹೋದರರ ಜಮೀನಿನಲ್ಲಿ ನಿಧಿಯಿದೆ ಎಂದು ನಂಬಿಸಿದ ವಂಚಕರ ತಂಡ, ಅದನ್ನು ತೆಗೆಯಲು ಮಾಟ-ಮಂತ್ರದ ಮೊರೆ ಹೋಗುವಂತೆ ನಾಟಕವಾಡಿತ್ತು.

ಬಂಧಿತ ಆರೋಪಿ ಹಜರತ್ ಮೌಲ್ವಿ ಗದಗಕ್ಕೆ ಬಂದು ಹಳೆಯ ಭಾಂಡೆ ಅಂಗಡಿಯಲ್ಲಿ ಒಂದು ಬಿಂದಿಗೆಯನ್ನು ಖರೀದಿಸಿದ್ದ. ಅದರಲ್ಲಿ ಮಣ್ಣು ತುಂಬಿಸಿ, ಅದರ ಮೇಲೆ ಚಿನ್ನದ ಬಣ್ಣದ ಚಾಕಲೇಟ್ ಕಾಯಿನ್‌ಗಳು ಮತ್ತು ನಕಲಿ ಬಿಸ್ಕಿಟ್‌ಗಳನ್ನು ಇಟ್ಟು ಜಮೀನಿನ ಆರು ಅಡಿ ಹಳ್ಳದಲ್ಲಿ ಹೂತು ಹಾಕಿದ್ದ.

ಪೂಜೆ ಮಾಡಿ ಹಳ್ಳ ತೋಡಿದಾಗ ಹಂಡೆಯಲ್ಲಿ ಬಂಗಾರ ಹೊಳೆಯುತ್ತಿರುವುದನ್ನು ಕಂಡ ರೈತರು ಬೆರಗಾಗಿದ್ದರು. ಇದನ್ನು ವಿಡಿಯೋ ಮಾಡಿಕೊಂಡಿದ್ದ ವಂಚಕರು, ಇತರರಿಗೂ ಮೋಸ ಮಾಡಲು ಈ ವಿಡಿಯೋ ಬಳಸಿಕೊಳ್ಳಲು ಸಿದ್ಧತೆ ನಡೆಸಿದ್ದರು.

ALSO READ :  ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ

ಹಣ ಸಿಗದಿದ್ದಾಗ ಮಣ್ಣಾದ ‘ಬಂಗಾರ’!

ನಿಧಿ ತೆಗೆದ ಬಳಿಕ ರೈತರಿಂದ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೌಲ್ವಿ, ಹಣ ಕೊಡಲು ರೈತರು ನಿರಾಕರಿಸಿದಾಗ ಹೊಸ ನಾಟಕವಾಡಿದ್ದ. “ನೀವು ಹಣ ಕೊಡದಿದ್ದರೆ ಈ ನಿಧಿ ಮಣ್ಣಾಗುತ್ತದೆ” ಎಂದು ಹೇಳಿ ಆ ಹಂಡೆಯನ್ನು ಕಾಲಿನಿಂದ ಒದ್ದು ಮತ್ತೆ ಮಣ್ಣು ಮಾಡಿದ್ದ. ರೈತರು ಇದನ್ನು ದೈವಶಾಪವೆಂದೇ ನಂಬಿದ್ದರು! ಆದರೆ ಇತ್ತೀಚೆಗೆ ಲಕ್ಕುಂಡಿಯಲ್ಲಿ ಮತ್ತೆ ನಿಧಿಯ ಚರ್ಚೆ ಶುರುವಾದಾಗ ಪೊಲೀಸರು ರೈತರನ್ನು ವಿಚಾರಣೆ ನಡೆಸಿದಾಗ ಈ ಎಲ್ಲಾ ಕರಾಳ ಸತ್ಯಗಳು ಹೊರಬಂದಿವೆ.

ಇದನ್ನೂ ಓದಿ | ವಿಕ್ಟೋರಿಯಾದಲ್ಲಿ ಸ್ಕ್ಯಾನಿಂಗ್‌ ಭಾಗ್ಯವಿಲ್ಲ! ಬಡ ರೋಗಿಗಳ ಪಾಲಿಗೆ ‘ನರಕ’ವಾದ ಮಹಾ ಆಸ್ಪತ್ರೆ

ಗದಗ ಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉತ್ತರಾಖಂಡದ ಕಾಶಿಪುರದ ಹಜರತ್ ಮೌಲ್ವಿಯನ್ನು ಬಂಧಿಸಲಾಗಿದೆ. ಈ ಜಾಲದ ಹಿಂದೆ ಬಸೀರಾ ಎಂಬ ಮಹಿಳೆ ಸೇರಿದಂತೆ ಇಕ್ಬಾಲ್, ಗೂಳಪ್ಪ ಎಂಬುವವರ ದೊಡ್ಡ ಸಂಚೇ ಇರುವುದು ಬೆಳಕಿಗೆ ಬಂದಿದೆ. ಲಕ್ಕಿ ರೆಸಿಡೆನ್ಸಿಯಲ್ಲಿ ವಾಸ್ತವ್ಯ ಹೂಡಿ ನಿಧಿ ಶೋಧದ ಹೆಸರಲ್ಲಿ ಮೋಸ ಮಾಡುತ್ತಿದ್ದ ಈ ಗ್ಯಾಂಗ್‌ನ ಹಳೆಯ ಕಡತಗಳಿಗೆ ಈಗ ಮರುಜೀವ ಬಂದಿದೆ.


Political News

“ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ” ಟ್ರಂಪ್ ಹೇಳಿಕೆ

ಎಐ ಶೃಂಗಸಭೆಯಲ್ಲಿ ಹೈಡ್ರಾಮಾ: ಅರೆಬೆತ್ತಲೆ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು!

ವಿಕ್ಟೋರಿಯಾ(ನೆಫ್ರೋ) ಆಸ್ಪತ್ರೆಯ “ಯಮರೂಪಿ” ವೈದ್ಯರ ನಿರ್ಲಕ್ಷ್ಯಕ್ಕೆ ಜೀವಂತ “ಶವ” ವಾದ ರಂಜಿತ್..-4 ವರ್ಷ ಗಳಿಂದ ಲೂ “ಪ್ರಜ್ಞಾಹೀನ”-ರಾತ್ರೋರಾತ್ರಿ ಶಿಫ್ಟ್ ಗೆ ಡಾ.ಶಿವಲಿಂಗಯ್ಯ ಪ್ಲ್ಯಾನ್..!

“ಧರ್ಮಪತ್ನಿ”ಯ ಕಂಪೆನಿ ವಿರುದ್ಧ “ಭ್ರಷ್ಟಾಚಾರ”ದ ಆರೋಪ..ಸುವರ್ಣನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್‌  ಗೆ  “ಮುಜುಗರ”..!?

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

BDA BIG SCAM: 524 ಕೋಟಿ ಬಿಡಿಎ ಅಕ್ರಮ:ತನಿಖೆಗೆ ಕ್ಯಾಪ್ಟನ್ ಮಣಿವಣ್ಣನ್ ರಿಂದ ಸಮಿತಿ ರಚನೆ, ಅಧಿಕಾರಿಗಳಿಗೆ “ಢವ ಢವ”..

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

Scroll to Top