advertise here

Search

“ದಿ-ಎಂಡ್” …ತಮನ್ನಾ -ವಿಜಯ್ ವರ್ಮಾ ಪ್ರೇಮ ಸಂಬಂಧ..! ಉಳಿದಿರೋದು ‘ಸ್ನೇಹ ಮಾತ್ರವಂತೆ..!


ಬಾಲಿವುಡ್ ನಲ್ಲಿ ಸಧ್ಯ ತಮ್ಮ ವಿಚಾರಗಳಿಂದ ಹೆಚ್ಚು ಸುದ್ದಿಯಲ್ಲಿದ್ದ ಜೋಡಿ ಎಂದರೆ ಅದು  ಮಿಲ್ಕಿ ಬ್ಯೂಟಿ  ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ.ಇಬ್ಬರ ನಡುವಿದ್ದ ಬೆಸುಗೆ ಗಮನಿಸಿದ್ದವರು ಮದುವೆಯಾಗಲಿದ್ದಾರೆ ಎಂದೇ ಹೇಳುತ್ತಿದ್ದರು.ಇನ್ನು ಕೆಲವರಂತೂ ಈ ಜೋಡಿ ನೋಡಿ ಹೊಟ್ಟೆ ಉರಿದುಕೊಂಡಿದ್ದು ಉಂಟು.ಆದರೆ ಇದೀಗ ಬಾಲಿವುಡ್ ಅಂಗಳದಿಂದ ಹೊರಬಿದ್ದಿರುವ ಸುದ್ದಿ ಎಲ್ಲರನ್ನು ಶಾಕ್ ಗೀಡು ಮಾಡಿದೆ. ತಮನ್ನಾ-ವಿಜಯ್ ತಮ್ಮ ಸಂಬಂಧವನ್ನು ಕೊನೆಗಾಣಿಸಿಕೊಂಡಿದ್ದಾರೆ.ಅವರಿಬ್ಬರು ಇನ್ಮುಂದೆ ಪ್ರೇಮಿಗಳಲ್ಲ..ಕೇವಲ ಸ್ನೇಹಿತರು ಎಂದು ಅವರೇ ಡಿಕ್ಲೇರ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ ನ ಕೆಲವು ಸುದ್ದಿ ಮೂಲಗಳ ಪ್ರಕಾರ ಇವರಿಬ್ಬರು ತಾವಿನ್ನೂ ಪ್ರೇಮಿಗಳಾಗಿ  ಮುಂದುವರೆಯಲು ಸಾಧ್ಯವಿಲ್ಲ.ಪರಸ್ಪರ ಗೌರವಿಸುವ ಸ್ನೇಹಿತರಾಗಿಯಷ್ಟೇ ಇರುತ್ತೇವೆ.ಇಬ್ಬರು ಇದಕ್ಕೆ ಸಹಮತ ವ್ಯಕ್ತಪಡಿಸಿಕೊಂಡಿದ್ದೇವೆ. ಇಬ್ಬರೂ ತಮ್ಮ ವೃತ್ತಿಜೀವನದ ಮೇಲೆ ಹೆಚ್ಚು ಗಮನ  ಕೇಂದ್ರೀಕರಿಸಿದ್ದೇವೆ. ಬಿಡುವಿಲ್ಲದ ವೇಳಾಪಟ್ಟಿಗಳಿಂದ ಇಬ್ಬರಿಗೂ ಸಮಯ ಕೊಡಲಿಕ್ಕೆ ಸಾಧ್ಯವಾಗುತ್ತಿಲ್ಲ.ಇದು ಮದುವೆಯಾದ ಮೇಲೆಯೂ ಮುಂದುವರೆದರೆ ಬೇರೆಯದೆ ಆಯಾಮ ಪಡೆದುಕೊಳ್ಳುವ ಸಾಧ್ಯತೆಗಳಿರುವುದರಿಂದ ನಮ್ಮಿಬ್ಬರ ನಡುವಿನ ಸಂಬಂಧ ಕೊನೆಗಾಣಿಸಿಕೊಳ್ಳಲು ನಿರ್ದರಿಸಿರುವುದಾಗಿ ಹೇಳಿಕೊಂಡಿದ್ದಾರಂತೆ.

2023 ರಲ್ಲಿ ಲಸ್ಟ್ ಸ್ಟೋರೀಸ್ 2 ವೆಬ್ ಸೀರಿಯಸ್ ನಲ್ಲಿ ಅವರಿಬ್ಬರ ನಡುವಿನ ಕೆಮಿಸ್ಟ್ರಿ ಬಗ್ಗೆ ಸಿಕ್ಕಾಪಟ್ಟೆ ಗುಲ್ಲು ಶುರುವಾಗಿತ್ತು.ಚಿತ್ರದಲ್ಲಿನ ಅವರಿಬ್ಬರ ಆಪ್ತತೆ ಕುರಿತು ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದ್ದವು.ಆ ಚಿತ್ರದಲ್ಲಿ ಶುರುವಾದ ಸಂಬಂಧ ಮದುವೆಯಾಗುವ ಮಟ್ಟಕ್ಕೆ ತಲುಪಿತ್ತು.ವಿಜಯ್ ವರ್ಮಾ ಹೆಚ್ಚಿನ ಕಾಳಜಿ ಮಾಡಲು ಶುರುಮಾಡಿದ್ದರು ಎಂದು ತಮನ್ನಾ ಅವರೇ ಹೇಳಿಕೊಂಡಿದ್ದರು.ತಮ್ಮ ಭವಿಷ್ಯದ ಬದುಕಿನ ಬಗ್ಗೆಯೂ ಮಾದ್ಯಮಗಳ ಮುಂದೆ ಸಿಕ್ಕಾಗಲೆಲ್ಲಾ ಮಾತನಾಡಿಕೊಂಡಿದ್ದರು. ಬಾಲಿವುಡ್ ನ ಬ್ಯುಟಿಫುಲ್ ಪೇರ್ ಎಂದು ವಿಶ್ಲೇಷಿಸಲಾಗುತ್ತಿತ್ತು.ಆದರೆ ಇದೀಗ ಅವರಿಬ್ಬರು ಪರಸ್ಪರ ಸಹಮತದ ಮೂಲಕ ಬೇರೆಯಾಗಲು ನಿರ್ದರಿಸಿದ್ದಾರೆ ಎನ್ನಲಾಗಿದೆ.

ALSO READ :  "ಯುದ್ಧಭೂಮಿ"ಯಲ್ಲಿ ಪ್ರಾಣದ ಹಂಗು ತೊರೆದ "ಮಾದ್ಯಮಯೋಧರು"

ಇಬ್ಬರು ತಮ್ಮದೆ ಆದ ಚಿತ್ರಗಳಲ್ಲಿ, ಶೆಡ್ಯೂಲ್ ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಎನ್ನುವುದು ಸತ್ಯ.ಇಬ್ಬರು ಕೂಡ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದಾರೆ.ನಟನೆಗಿಂತ ತಮನ್ನಾ ಹೆಚ್ಚು ನೃತ್ಯ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.ವಿಜಯ್ ವರ್ಮಾ ಕೂಡ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.ಪುರುಸೊತ್ತಿಲ್ಲದಷ್ಟು ಕಾರ್ಯಗಳಲ್ಲಿ ಇಬ್ಬರು ಬ್ಯುಸಿ ಇರುವುದರಿಂದ ಸಹಜವಾಗೇ ಭಿನ್ನಾಭಿಪ್ರಾಯ ಮೂಡುವ ಆತಂಕ ಇರುವುದರಿಂದ ಒಪ್ಪಿಗೆ ಮೂಲಕವೇ ದೂರವಾಗುತ್ತಿದ್ದಾರೆ..ಅವರಿಬ್ಬರ ಅಭಿಪ್ರಾಯಗಳನ್ನು ಗೌರವಿಸಬೇಕು ಎಂದು ಬಾಲಿವುಡ್ ಮಾತನಾಡುತ್ತಿದೆ.


Political News

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

Scroll to Top