advertise here

Search

ಪ್ರಿಯಕರ ಜೊತೆ ಸೇರಿ ಇಬ್ಬರು ಮಕ್ಕಳನ್ನು ಕೊಂದ ಪಾಪಿ ತಾಯಿ!


ಪ್ರಿಯಕರನ ಜೊತೆಗೂಡಿ ಹೆತ್ತ ಇಬ್ಬರು ಮಕ್ಕಳನ್ನೇ ತಾಯಿಯೊಬ್ಬಳು ಕೊಂದ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ಕೆಂಪೇಗೌಡ ವೃತ್ತದ ಬಳಿಯ ನಿವಾಸಿ ಸ್ವೀಟಿ (21) ಮತ್ತು ಪ್ರಿಯಕರ ಗ್ರಗೋರಿ ಫ್ರಾನ್ಸಿಸ್ ಜೊತೆಗೂಡಿ ಕಬಿಲ್ ಹಾಗೂ 11 ತಿಂಗಳ ಕಬಿಲನ್ ನನ್ನು ಹತ್ಯೆ ಮಾಡಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾರೆ.

ಸ್ವೀಟಿಗೆ ಈ ಹಿಂದೆ ಶಿವು ಎಂಬಾತನ ಜೊತೆ ಮದುವೆ ಆಗಿದ್ದು, ಎರಡು ಮಕ್ಕಳಿದ್ದವು. ಮಕ್ಕಳಾದ ನಂತರ ಶಿವುವನ್ನು ತೊರೆದು ಗ್ರೆಗೋರಿ ಫ್ರಾನ್ಸಿಸ್ ಜೊತೆ ವಾಸಿಸುತ್ತಿದ್ದಳು. ಮಕ್ಕಳಿಂದ ಪ್ರಿಯಕರ ಜೊತೆ ಸೇರಲು ಅಡ್ಡಿಯಾಗುತ್ತಿದೆ ಎಂದು 11 ತಿಂಗಳ ಕಬಿಲನ್ ನನ್ನು ಹತ್ಯೆಗೈದಿದ್ದರು.

ALSO READ :  EXCLUSIVE...BMTC ಲಾಕ್‌ಡೌನ್‌ "ಗೋಲ್ಮಾಲ್‌"ಮುಖ್ಯಲೆಕ್ಕಾಧಿಕಾರಿ SUSPEND...ಬಾಡಿಗೆ ವಿನಾಯ್ತಿ" ಹಗರಣದಲ್ಲಿ ಲೆಕ್ಕ ವಿಭಾಗದ ಇನ್ನಷ್ಟು ಅಧಿಕಾರಿ-ಸಿಬ್ಬಂದಿಗೂ ಸಂಕಷ್ಟ..!?

ಪ್ರಿಯಕರ ಜೊತೆಗೂಡಿ ಕಬಿಲನ್ ನ ಶವ ಹೂಳಲು ಸ್ಮಶಾನಕ್ಕೆ ತೆರಳಿದ್ದಾಗ ಮಗುವಿನ ಮೈಮೇಲೆ ಗಾಯಕಂಡು ಸ್ಮಶಾನದ ಸಿಬ್ಬಂದಿ ಮಗುವಿಗೆ ಏನಾಗಿತ್ತು ಎಂದು ಕೇಳಿದ್ದಾರೆ. ಆಗ ಮಗು ಕಾಯಿಲೆ ಬಂದು ಮೃತಪಟ್ಟಿದೆ ಎಂದು ಹೇಳಿದ್ದಾರೆ.

ಇದರಿಂದ ಅನುಮಾನಗೊಂಡ ಸಿಬ್ಬಂದಿ ಸ್ವೀಟಿ ಹಾಗೂ ಫ್ರಾನ್ಸಿಸ್ ಫೋಟೊ ತೆಗೆದುಕೊಂಡಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ವೀಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆಘಾತಕಾರಿ ವಿಷಯ ಅಂದರೆ ಇದಕ್ಕೂ ಮುನ್ನ ಮತ್ತೊಬ್ಬ ಮಗ ಕಬಿಲ್ ನನ್ನು ಕೂಡ ಇದೇ ರೀತಿ ಕೊಂದಿರುವುದು ಬೆಳಕಿಗೆ ಬಂದಿದೆ.


Political News

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

Scroll to Top