advertise here

Search

ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಂದ ಮಾದರಿ ಹೊಸವರ್ಷಾಚರಣೆ


ಬೆಂಗಳೂರು:ಮನಸು ಮಾಡಿದ್ರೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಎನಿಸಿಕೊಳ್ಳುವವರು ಅವರ ಕೆಪಾಸಿಟಿ ಹಾಗೂ ಪವರ್ ಗೆ ಎಷ್ಟ್  ಅದ್ದೂರಿಯಾಗಿ ಬೇಕಾದ್ರೂ ವರ್ಷಾಚರಣೆ ಮಾಡಿಕೊಳ್ಳಬಹುದು.ಆದರೆ ಇದಕ್ಕೆ ಅಪವಾದ ಎನ್ನುವಂತಿದ್ದಾರೆ ನಮ್ಮ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ .ಅದಕ್ಕೇನೆ ಅವರಿಗೆ ಕಾಮನ್ ಮ್ಯಾನ್ ಕಮಿಷನರ್ ಎನ್ನುವುದು. ಇದೇ ದಯಾನಂದ್ ಅವರು ನೂತನ ವರ್ಷಾಚರಣೆಯಲ್ಲೂ ಮಾದರಿ ಹಾಗು ಆದರ್ಶ ಮೆರೆದಿದ್ದಾರೆ.

ಹೌದು..ಇದನ್ನು ಕೇಳಿದ್ರೆ ಅಚ್ಚರಿಯಾಗಬಹುದು.ಇಡೀ ಜಗತ್ತು ಸಕಲ ಸಂಭ್ರಮ-ವೈಭೋಗಗಳಲ್ಲಿ ಮೈಮರೆತು ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಮಾಡಿದ್ರೆ ದಯಾನಂದ್ ಅವರು,ಮಾತ್ರ ಮಾರನೇ ದಿನ ಅಂದರೆ ಇಂದು ಬೆಳಗ್ಗೆ  ಹೊಸ ವರ್ಷವನ್ನು ವಿನೂತನವಾಗಿಯಷ್ಟೇ ಅಲ್ಲ ಮಾದರಿ-ಆದರ್ಶಪ್ರಾಯರಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ.ಸೋಶಿಯಲ್ ಮೀಡಿಯಾಗಳಲ್ಲಿ ಅವರ ಬದ್ಧತೆ-ಸಾಮಾಜಿಕ ಕಳಕಳಿ ಹಾಗೂ ಸಂವೇದನಾಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಂದು ಬೆಳಗ್ಗೆ ನೇರವಾಗಿ ಅನಾಥ ಆಶ್ರಮಕ್ಕೆ ತೆರಳಿದ ದಯಾನಂದ್ ಅವರು ಅಲ್ಲಿದ್ದ ದೇವರ ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿ ಹೊಸ ವರ್ಷವನ್ನು ಆಚರಿಸಿಕೊಂಡರು.ಮಕ್ಕಳು ಕೂಡ ದಯಾನಂದ್ ಅವರಿಗೆ ಶುಭಾಷಯ ಕೋರಿದರು. ಪ್ರತಿ ವರ್ಷವು ಅನಾಥ ಆಶ್ರಮ ಮಕ್ಕಳ ಜೊತೆ ಬಿ ದಯಾನಂದ ಅವರು ವರ್ಷಾಚರಣೆ ಮಾಡುವುದು  ಸಂಪ್ರದಾಯವಾಗಿ ಬಂದಿದೆ.ಅದರ ಮುಂದುವರೆದ ಭಾಗವಾಗಿಯೇ ಇವತ್ತು ಅನಾಥಮಕ್ಕಳ ಜತೆ ಸಂಭ್ರಮಿಸಿದರು. ತಮ್ಮ ಜತೆ ಇದ್ದ ಅಧಿಕಾರಿ ಮತ್ತು ಸಿಬ್ಬಂದಿಗು ಸಹ ಇಂಥಾ ಕೆಲಸ ಮಾಡುವ ಮುಲಕ ಮಾದರಿಯಾಗಬೇಕೆಂದು ತಿಳಿ ಹೇಳಿದರು. ತಮ್ಮ ವ್ಯಾಪ್ತಿಯ ಅನಾಥ ಆಶ್ರಮ, ವೃದ್ದಶ್ರಾಮ, ವಿಶೇಷ ಮಕ್ಕಳನ್ನು ಭೇಟಿ ಮಾಡಿ ಶುಭಾಶಯ ತಿಳಿಸಿ ಹೊಸ ವರ್ಷ ಆಚರಣೆ ಮಾಡುವಂತೆ  ಈಗಾಗಲೇ ಸೂಚನೆ ನೀಡಿದ್ದು,ನಗರದ ಪೊಲೀಸ್ ಅಧಿಕಾರಿಗಳು ಅನಾಥ ಆಶ್ರಮ ಹಾಗೂ ವೃದ್ದಶ್ರಾಮಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿರುವುದು ವಿಶೇಷ.

ALSO READ :  ಕೊಲೆ ಮಾಡಿ "ರಾಕ್ಷಸನ ಸಂಹಾರ"ವಾಗಿದೆ ಎಂದು ಮೆಸೇಜ್‌ ಮಾಡಿದ್ದ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಪತ್ನಿ..!

Political News

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

Scroll to Top