WHY SENIOR J‌OURNALIST LAXMAN HOOGAR QUIT JOURNALISM/ “ಪತ್ರಿಕೋದ್ಯಮ”ದ ಗಟ್ಟಿ ದ್ವನಿ “ಲಕ್ಷ್ಮಣ್ ಹೂಗಾರ್” ಮೌನಿಯಾಗಿದ್ದೇಕೆ..? ಇಲ್ಲಿವೆ ಅವರೇ ನೀಡುವ ಕಾರಣ..!

ಲಕ್ಷ್ಮಣ್ ಹೂಗಾರ್.. …ಕನ್ನಡ ಪತ್ರಿಕೋದ್ಯಮ ಇವತ್ತಿಗೂ ಮಿಸ್ ಮಾಡಿಕೊಳ್ಳುತ್ತಿರುವ ಹೆಸರಿದು.. ಬಹುತೇಕ ಪತ್ರಕರ್ತರು ಅಗತ್ಯಕ್ಕೋ-ಅನಿವಾರ್ಯಕ್ಕೋ ಪರಿಸ್ಥಿತಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಇಂದಿನ ಪ್ರಕ್ಷುದ್ಧ ಪರಿಸ್ತಿತಿಯಲ್ಲಿ ಲಕ್ಷ್ಮಣ್ ಹೂಗಾರ್ ಎನ್ನುವಂತ ಪತ್ರಕರ್ತನ ಅನುಪಸ್ತಿತಿ ತೀವ್ರವಾಗಿ ಕಾಡದೆ ಇರೊಲ್ಲ…ಇತ್ತೀಚೆಗೆ ಸಾಮಾಜಿಕ ಜಾಲತಾಣ ಗಳಲ್ಲಿ  ಲಕ್ಷ್ಮಣ್ ಹೂಗಾರ್ ಅವರ ಕಣ್ಮರೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.ಅಷ್ಟೊಂದು ಆಕ್ಟೀವ್ ಆಗಿದ್ದ ಲಕ್ಷ್ಮಣ್  ಎಲ್ಲಿ ಹೋದರು..? ಎಲ್ಲಿದ್ದಾರೆ..? ಏನಾದರು..?ಏನ್ ಮಾಡುತ್ತಿದ್ದಾರೆ..?ಪತ್ರಿಕೋದ್ಯಮದ ಸಂಗ-ಸಹವಾಸ-ಸಾಂಗತ್ಯವನ್ನೇ ಬಿಟ್ರಾ..? ಪರ್ಯಾಯವನ್ನೇನಾದ್ರೂ ಹುಡುಕಿಕೊಂಡಿದ್ದಾರಾ..? ಪತ್ರಿಕೋದ್ಯಮಕ್ಕಿಂತ ಅವರು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲೇ ನೆಮ್ಮದಿಯಾಗಿದ್ದಾರಾ..? ಎನ್ನುವ … Read more

ಮಾಲೀಕರ “ಸ್ವಾರ್ಥ”ಕ್ಕೆ ಆ ವೃತ್ತಿಪರ “ನ್ಯೂಸ್‌ ಚಾನೆಲ್” ಬಲಿ..!?

ಕನ್ನಡ ಸುದ್ದಿಕ್ಷೇತ್ರದಲ್ಲಿ “ವಿಸ್ತಾರ” ಮರು ಲೋಕಾರ್ಪಣೆ(19-04-2026), ಫ್ರೀಡಂ ಚಾನೆಲ್‌ ಲೋಕಾರ್ಪಣೆ ಯಾಗುತ್ತಿರುವಂಥ ಸನ್ನಿವೇಶದಲ್ಲೇ ಅಘಾತಕಾರಿ ಎನ್ನುವಂತ ಮತ್ತೊಂದು ಸುದ್ದಿ ಕೇಳಿಬಂದಿದೆ. ಅಲ್ಲಿನ ಪರಿಸ್ಥಿತಿ ಗಮನಿಸಿದ್ರೆ ಸಧ್ಯಕ್ಕೆ ಅಲ್ಲದಿದ್ದರೂ ಇನ್ನೊಂದೆರೆಡು ತಿಂಗಳಲ್ಲಿ ಚಾನೆಲ್‌ ಬಾಗಿಲು ಎಳೆದು ಕೊಳ್ಳುವ ಸಾಧ್ಯತೆಗಳು ದಟ್ಟವಾದಂತಿದೆ.ನೊಂದು-ಬೆಂದು-ಬಳಲಿ ಬೆಂಡಾಗಿರುವ ಅಲ್ಲಿನ ಸಂತ್ರಸ್ಥ ಮಾದ್ಯಮ ಸಿಬ್ಬಂದಿಯೇ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ಇಂತದ್ದೊಂದು ಸುಳಿವು ನೀಡಿದ್ದಾರೆ.ಚಾನೆಲ್‌ ಗೆ ಬಂದೆಲ್ಲಾ ಲಾಭವನ್ನು ತಮ್ಮ “ಸ್ವಂತ”ಕ್ಕೆ ಹೂಡಿಕೆ ಮಾಡಿದ್ದಾರೆನ್ನಲಾಗಿರುವ ಆ ಮಾಲೀಕರು  ಪಾಪ.! ನೀಯತ್ತಾಗಿ ದುಡಿಯುತ್ತಿರುವ “ಮಾದ್ಯಮ ಮಿತ್ರ”ರಿಗೆ ಅವರ … Read more

ಏಪ್ರಿಲ್,18ಕ್ಕೆ “ವಿಸ್ತಾರ” ರೀ ಲಾಂಚ್…ಶೀಘ್ರವೇ “ಫ್ರೀಡಂ” ಲೋಕಾರ್ಪಣೆ

ಭವಿಷ್ಯದ ಪರಿಣಾಮಗಳೇನೇ ಇರಲಿ,ಕನ್ನಡ ಮಾದ್ಯಮ ಲೋಕ ಎರಡು ಬೆಳವಣಿಗೆಗಳಿಗೆ ಸಾಕ್ಷಿ ಆಗುತ್ತಿದೆ.  ಒಂದು ಕೆಲ ವರ್ಷಗಳಿಂದೆ ಅಬ್ಬರದಲ್ಲಿ ಆರಂಭವಾದಷ್ಟೇ ವೇಗದಲ್ಲಿ ಬಾಗಿಲು ಮುಚ್ಚಿಕೊಂಡ ವಿಸ್ತಾರ ನ್ಯೂಸ್ ಚಾನೆಲ್ ಏಳು ಬೀಳುಗಳ ತರುವಾಯ ರೀ ಲಾಂಚ್ ಆಗುತ್ತಿರುವುದು ಮೊದಲ ಸಂಗತಿಯಾದರೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಮೂಡಿಬರುತ್ತಿದ್ದ ಫ್ರೀಡಂ ನ್ಯೂಸ್ ಚಾನೆಲ್ ಆಗಿ ಲೋಕಾರ್ಪಣೆಗೊಳ್ಳಲು ಅಣಿಯಾಗುತ್ತಿದೆ. ಕನ್ನಡ ಫ್ಲ್ಯಾಶ್ ನ್ಯೂಸೇ ,ವಿಸ್ತಾರ ನ್ಯೂಸ್ ಚಾನೆಲ್ ಬಗ್ಗೆ ಈ ಹಿಂದೆನೇ ಸಾಕಷ್ಟು ಬರೆದಿತ್ತು.ವಿಸ್ತಾರದ ಭವಿಷ್ಯ ಡೋಲಾಯಮಾನವಾದ ಸನ್ನಿವೇಶದಲ್ಲೇ ಎಚ್ಚರಿಸುವ ಕೆಲಸ … Read more

“ಅರ್ಹ”ರನ್ನು ಕಡೆಗಣಿಸ್ತಾ ಚಂದನವನ ಕ್ರಿಟಿಕ್‌ ಅವಾರ್ಡ್ಸ್‌?!

ಚಂದನವನದಲ್ಲಿ ನೀಡಲಾಗುವ ವಿಮರ್ಷಕರ ಪ್ರಶಸ್ತಿಗೆ ವಿವಾದದ ಕಳಂಕ ತಟ್ಟಿದಂತಿದೆ. ಚಿತ್ರರಂಗದ ವಿದ್ಯಾಮಾನಗಳನ್ನು ದಶಕಗಳಿಂದಲೂ ಗಮನಿಸುತ್ತಾ,ಅದರ ಒಳಹೊರಗನ್ನು ನೇರ-ನಿಷ್ಟೂರ-ತೀಕ್ಷ್ಣವಾಗಿ  ವರದಿ ಮಾಡುತ್ತಿದ್ದ ಬಹುತೇಕ ಹಿರಿಯ ಸಿನಿ ಪತ್ರಕರ್ತರನ್ನೇ ಪಕ್ಕ ಕ್ಕಿಟ್ಟು ಆಯ್ದ ಕೆಲವರೇ ಪ್ರಶಸ್ತಿ ಆಯ್ಕೆ- ಪ್ರಧಾನ ಮಾಡಿ ಮುಗಿಸಿದ್ದಾರೆನ್ನುವ ಅಸಮಾಧಾನ ಸ್ಯಾಂಡಲ್ವುಡ್‌ ನಲ್ಲಿ  ಹೊಗೆಯಾಡತೊಡಗಿದೆ. ಚಂದನವನದ ಸಿನಿ ಪತ್ರಕರ್ತರ ಒಳಗೆ ಇಷ್ಟು ದಿನ ಕುದಿಯುತ್ತಿದ್ದ ಬಂಡಾಯ-ಮುನಿಸು-ವ್ಯತ್ಯಾಸಗಳು ಅದ್ಹೇಕೋ ಸ್ಪೋಟಗೊಳ್ಳುವ ಲಕ್ಷಣ ಗೋಚರಿಸುವಂತಿದೆ. ಹೌದು..ಚಂದನವನದಲ್ಲಿ ಸಿನಿ ಪತ್ರಕರ್ತರೇ ಒಗ್ಗೂಡಿ,ಪ್ರತಿಭೆ-ಸಾಮ ರ್ಥ್ಯ ವುಳ್ಳ ಕಲಾವಿದರು-ತಂತ್ರಜ್ಞರಿಗೆ  ತೂಗಿ ಅಳೆದು ನೀಡುತ್ತಾ ಬಂದಿ … Read more

ಎಂತೆಂಥವರ ನಡುವೆ ಇಂಥವರು ನೆನಪಾಗೊಲ್ವಾ..!?

ಇವತ್ತು ಬೀದರ್‌ ನಲ್ಲಿ ನಡೆದ ಪತ್ರಿಕಾ ಸಮ್ಮೇಳನದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಪ್ರಶಸ್ತಿಗೆ  ನಿಜವಾಗ್ಲೂ ಯೋಗ್ಯವಾದ-ಸಮರ್ಥವಾದವರಿಗೆ ನಮ್ಮದೊಂದು ಪ್ರಾಮಾಣಿಕವಾದ ಮನಸಿನ ಅಭಿನಂದನೆ..ಪ್ರಶಸ್ತಿಗೆ ಅರ್ಹರೇ ಅಲ್ಲದ ಒಂದಷ್ಟು ಜನರಿಗೂ ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎನ್ನುವ ಒಂದಷ್ಟು ಪತ್ರಕರ್ತರ ಆರೋಪಗಳ ಸನ್ನಿವೇಶದಲ್ಲೇ  ಯಾಕೋ ಆ ಇಬ್ಬರು ಪತ್ರಕರ್ತರು ತುಂಬಾ ನೆನಪಾದರು.ನಮ್ಮ ನಡುವೆ ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ಸಾಕ್ಷಿಪ್ರಜ್ಞೆಯಂತೆ ಇರುವ ಎಷ್ಟೋ ಪತ್ರಕರ್ತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಯಾ ಎನ್ನುವ ನೋವು ಕೂಡ ಕಾಡಿತು.( ಸಧ್ಯದಲ್ಲಿ ಆ ಇಬ್ಬರು ಸಕ್ರೀಯ ಪತ್ರಿಕೋದ್ಯಮದಲ್ಲಿ ಇಲ್ಲವಾದರೂ … Read more

ಶಾಸಕ ಪ್ರದೀಪ್ ಈಶ್ವರ್ ‘ಪರಿಶ್ರಮ’ದ ಮತ್ತೊಂದು ಬಂಡವಾಳ ಬಯಲು..!

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದೇವೆ ಎಂದು ಬೀಗುತ್ತಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾಲೀಕತ್ವದ ‘ಪರಿಶ್ರಮ ನೀಟ್ ಮತ್ತು ಜೆಇಇ ಅಕಾಡೆಮಿ’ಯ ಮತ್ತೊಂದು ಕರಾಳ ಮುಖ ಈಗ ಬಯಲಾಗಿದೆ.

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

karnataka government financial crisis

ರಾಜ್ಯದ 32 ಇಲಾಖೆಗಳ 420 ಕಟ್ಟಡಗಳು ಅನುದಾನವಿಲ್ಲದೆ ಅರ್ಧಕ್ಕೆ ನಿಂತಿವೆ. ಗ್ಯಾರಂಟಿ ಹೊರೆಯಿಂದ ಅಭಿವೃದ್ಧಿ ಕಾಮಗಾರಿಗಳು ಶೂನ್ಯವಾಗುತ್ತಿವೆಯೇ? ಇಲ್ಲಿದೆ ಸಂಪೂರ್ಣ ವಿವರ.

ದೇವರಾಜು ಅರಸು ನಿಗಮದಲ್ಲಿ ಗಂಗಾ ಕಲ್ಯಾಣದ ಹೆಸರಲ್ಲಿ ₹600 ಕೋಟಿ ಲೂಟಿ!

ganga kalyan scam

ದೇವರಾಜು ಅರಸು ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದ ₹600 ಕೋಟಿ ಬೃಹತ್ ಹಗರಣದ ಕರಾಳ ಮುಖ ಇಲ್ಲಿದೆ. ಎಸ್ಕಾಂ ಅಧಿಕಾರಿಗಳು ಮತ್ತು ನಿಗಮದ ಅಧಿಕಾರಿಗಳ ನೆಕ್ಸಸ್ ಬಡ ರೈತರಿಗೆ ಹೇಗೆ ವಂಚಿಸಿದೆ? ಪೂರ್ಣ ವರದಿ ಓದಿ.

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ಹೀಗೊಂದು ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.ಚಿಕ್ಕಾಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಮಾಲೀಕತ್ವದ ಪರಿಶ್ರಮ ಶಿಕ್ಷಣ ಸಂಸ್ಥೆ ಹೆಸರಲ್ಲಿ ಅವರು ನಡೆಸುತ್ತಿದ್ದಾರೆ ಎನ್ನಲಾಗಿರುವ ಬೃಹತ್‌ ಅಕ್ರಮವನ್ನು ಪಾಠಶಾಲೆ ನಾಳೆ ಜಗಜ್ಜಾಹೀರುಗೊಳಿಸಲಿದೆಯಂತೆ. ಪರಿಶ್ರಮ ಜೆಇಇ ಹಾಗೂ ನೀಟ್‌ ಅಕಾಡೆಮಿಗೆ ಪರ್ಮಿಷನ್‌ ಪಡೆದು ಆ ಸೆಂಟರ್‌ ಗಳಲ್ಲಿ ಅಕ್ರಮವಾಗಿ ಪಿಯು ಕಾಲೇಜ್‌ ( ಮಲ್ಲತ್ತಹಳ್ಳಿಯಲ್ಲಿ ಮಾತ್ರ ಪಿಯು ಕಾಲೇಜಿಗೆ ಅವಕಾಶ ನೀಡಿರುವದು, ಆದ್ರೆ ಪ್ರದೀಪ್‌ ಈಶ್ವರ್‌ ಮೂರು ಕಡೆ ಅನಧೀಕೃತವಾಗಿ ಕಾಲೇಜ್‌ ನಡೆಸುತ್ತಿದ್ದಾರೆನ್ನುವುದನ್ನು ತನಿಖಾ ವರದಿಯಲ್ಲೇ … Read more

“ರಿಪಬ್ಲಿಕ್‌ ಕನ್ನಡ”ಕ್ಕೆ ಹಿರಿಯ ಪತ್ರಕರ್ತ ಶಿವಶಂಕರ್ ಎಂಟ್ರಿ.. ಗರಿಗೆದರಿದ “ಮರುಹುಟ್ಟಿ”ನ ನಿರೀಕ್ಷೆ..

ನಾವಿಕನಿಲ್ಲದ ದೋಣಿಯಂತಾಗಿದ್ದ ರಿಪಬ್ಲಿಕ್‌ ಕನ್ನಡ(republic tv)ಕ್ಕೆ ಸಮರ್ಥ ಸಾರಥಿ ಸಿಕ್ಕಿದ್ದಾರೆಂದು ಅನ್ನಿಸುತ್ತೆ.ಟಿವಿ೯ ಕನ್ನಡ ಚಾನೆಲ್‌ ಸ್ಥಾಪಕರಲ್ಲೊಬ್ಬರಾಗಿದ್ದ ಹಿರಿಯ ಪತ್ರಕರ್ತ ಶಿವಶಂಕರ್‌( senior journalist shivashankar) ರಿಪಬ್ಲಿಕ್‌ ಕನ್ನಡದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದಾರೆ.ನಿನ್ನೆ ಅಂದರೆ ಏಪ್ರಿಲ್‌ ೨ ರಂದು ಅಧಿಕಾರ ವಹಿಸಿಕೊಂಡಿರುವ ಶಿವಶಂಕರ್‌ ಮೇಲೆ ಮೊಣಭಾರದ ಜವಾಬ್ದಾರಿಗಳಿವೆ…ಆತ್ಮಸ್ಥೈರ್ಯಕ್ಕೆ ಸವಾಲೆಸೆಯುವ ಮಟ್ಟಿಗಿನ ಗಂಭೀರ ಸವಾಲುಗಳಿರುವುದಂತೂ ಸತ್ಯ..ಏಕೆಂದರೆ ಶೂನ್ಯದಿಂದ ಚಾನೆಲ್‌ ನ್ನು ಕಟ್ಟಿ ಬೆಳೆಸಬೇಕಾದ ಸ್ಥಿತಿಯಲ್ಲಿದೆ ರಿಪಬ್ಲಿಕ್‌ ಕನ್ನಡದ ಸಧ್ಯದ ಸ್ಥಿತಿ.ಹಾಗಾಗಿ ಶಿವಶಂಕರ್‌ ಅವರ ಪಯಣ ಅಂದುಕೊಂಡಷ್ಟು ಸಲೀಸಾಗಿಯಂತೂ ಇಲ್ಲ. ಶಿವಶಂಕರ್‌ ಕನ್ನಡ … Read more