advertise here

Search

ಕಗ್ಗಲೀಪುರದಲ್ಲಿ ವಿಕೃತಿಯ ಪರಮಾವಧಿ – ಬರ್ತಡೆ ಪಾರ್ಟಿಗೆ ಬಂದವನ ಮೇಲೆ ಮೃಗೀಯ ಹಲ್ಲೆ!

kaggalipura thattaguppe youth assault

ರಾಮನಗರ: ಸ್ನೇಹಿತರ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋದ ಯುವಕನ ಮೇಲೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮೃಗೀಯವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಟ್ಟಗುಪ್ಪೆ ಗ್ರಾಮದ ಕೆರೆ ಬಳಿ ನಡೆದ ಈ ಭೀಕರ ಕೃತ್ಯವು ಮನುಷ್ಯತ್ವವೇ ನಾಚುವಂತಿದೆ.

ಪುನೀತ್ ಎಂಬ ಯುವಕನು ತನ್ನ ಪರಿಚಯಸ್ಥರ ಬರ್ತಡೆ ಪಾರ್ಟಿಗೆಂದು ತಟ್ಟಗುಪ್ಪೆ ಕೆರೆ ಬಳಿ ಬಂದಿದ್ದನು. ಈ ವೇಳೆ ಅಲ್ಲಿಗೆ ಬಂದ ಕ್ರಿಮಿನಲ್ ಹಿನ್ನೆಲೆಯುಳ್ಳ ಗಜೇಂದ್ರ ಹಾಗೂ ಸುಮಂತ್ ಎಂಬುವವರು ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಪುನೀತ್ ಮೇಲೆರಗಿದ್ದಾರೆ. ಹಲ್ಲೆಗೊಳಗಾದ ಪುನೀತ್ ಪ್ರಾಣ ಉಳಿಸಿಕೊಳ್ಳಲು ಕೈ ಮುಗಿದು ಬೇಡಿಕೊಂಡರೂ, ಕಾಲು ಹಿಡಿದು ಕ್ಷಮೆಯಾಚಿಸಿದರೂ ಈ ಕಿರಾತಕರು ಮಾತ್ರ ಬಿಡಲಿಲ್ಲ.

ವಿಕೃತಿಯ ಪರಮಾವಧಿ:

ಆರೋಪಿಗಳಾದ ಗಜೇಂದ್ರ ಮತ್ತು ಸುಮಂತ್ ಅವರು ಪುನೀತ್‌ನನ್ನು ಕಾಲಿನಿಂದ ಒದ್ದು, ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಈ ವಿಕೃತ ಮನಸ್ಸಿನವರು, ಹೊಡೆತದಿಂದ ರಕ್ತ ಸುರಿಯುತ್ತಿದ್ದರೂ ಪುನೀತ್ ತಲೆಯ ಮೇಲೆ ಮದ್ಯ ಸುರಿದು ವಿಕೃತವಾಗಿ ಸಂಭ್ರಮಿಸಿದ್ದಾರೆ. ಈ ಮೃಗೀಯ ವರ್ತನೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ALSO READ :  EXCLUSIVE...BMTC ಲಾಕ್‌ಡೌನ್‌ "ಗೋಲ್ಮಾಲ್‌"ಮುಖ್ಯಲೆಕ್ಕಾಧಿಕಾರಿ SUSPEND...ಬಾಡಿಗೆ ವಿನಾಯ್ತಿ" ಹಗರಣದಲ್ಲಿ ಲೆಕ್ಕ ವಿಭಾಗದ ಇನ್ನಷ್ಟು ಅಧಿಕಾರಿ-ಸಿಬ್ಬಂದಿಗೂ ಸಂಕಷ್ಟ..!?

ದಾಖಲಾದ ಕೊಲೆ ಯತ್ನ ಪ್ರಕರಣ:

ಈ ಹಿಂದೆ ಸುಮಂತ್ ಮೇಲೆ ಪುನೀತ್ ಹಲ್ಲೆ ಮಾಡಿದ್ದನು ಎಂಬ ಕಾರಣಕ್ಕೆ, ಅದೇ ಸೇಡನ್ನು ತೀರಿಸಿಕೊಳ್ಳಲು ಗಜೇಂದ್ರನನ್ನು ಕರೆಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಕಗ್ಗಲೀಪುರ ಪೊಲೀಸರು, ಗಜೇಂದ್ರ ಹಾಗೂ ಸುಮಂತ್ ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | ಧರ್ಮಸ್ಥಳ ಪ್ರಕರಣ: ಮರುತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ನಾಗರಿಕ ಸಮಾಜದಲ್ಲಿ ಇಂತಹ ವಿಕೃತ ಘಟನೆಗಳು ನಡೆಯುತ್ತಿರುವುದು ಆತಂಕಕಾರಿಯಾಗಿದ್ದು, ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Political News

ಈಗ ‘ಕೇರಳ’ ಅಲ್ಲ, ಅಧಿಕೃತವಾಗಿ ‘ಕೇರಳಂ’: ಕೇಂದ್ರ ಸಂಪುಟ ಅಸ್ತು!

ತಮಿಳುನಾಡು ಮತದಾರರ ಪಟ್ಟಿಯಲ್ಲಿ ಭಾರಿ ಕಡಿತ; 74 ಲಕ್ಷ ಮತದಾರರ ಹೆಸರು ನಾಪತ್ತೆ!

ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್..

ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ: 5 ಲಕ್ಷ ಲಂಚ ಪಡೆಯುವಾಗ ಅರೆಸ್ಟ್!

ಟ್ರಂಪ್‌ ಆರ್ಥಿಕ ಸಂಘರ್ಷ: ಸುಪ್ರೀಂ ಕೋರ್ಟ್ ತಡೆ ನಡುವೆಯೂ ಶೇ.10ರಷ್ಟು ಆಮದು ಸುಂಕ ಜಾರಿ!

“ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ” ಟ್ರಂಪ್ ಹೇಳಿಕೆ

ಎಐ ಶೃಂಗಸಭೆಯಲ್ಲಿ ಹೈಡ್ರಾಮಾ: ಅರೆಬೆತ್ತಲೆ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು!

ವಿಕ್ಟೋರಿಯಾ(ನೆಫ್ರೋ) ಆಸ್ಪತ್ರೆಯ “ಯಮರೂಪಿ” ವೈದ್ಯರ ನಿರ್ಲಕ್ಷ್ಯಕ್ಕೆ ಜೀವಂತ “ಶವ” ವಾದ ರಂಜಿತ್!

Scroll to Top