–ಟಿವಿ-9 ಕನ್ನಡಕ್ಕೆ ಮುಖಭಂಗ-ಮರ್ಮಾಘಾತ-ಅಪಮಾನ; ಅಹಂ-ಅತಿಯಾದ ಆತ್ಮವಿಶ್ವಾಸ-ನಿರ್ಲಕ್ಷ್ಯ-ಸ್ವಯಂಕೃತಾಪರಾಧಕ್ಕೆ ಬೆಲೆ ತೆತ್ತಿತಾ..!
–ಇದು ಟಿವಿ-9 ಕನ್ನಡದ ಅಧಃಪತನದ ಮುನ್ಸೂಚನೆಯೇ..? ಎಚ್ಚರಿಕೆಯ ಕರೆಗಂಟೆಯೇ..?
–ಕೆಲವು “ಬ್ರಹಸ್ಪತಿ”ಗಳ “ಕಪಿಮುಷ್ಠಿ”ಗೆ ಸಿಲುಕಿ ನಲುಗುತ್ತಿದೆಯೇ ಟಿವಿ9 ಕನ್ನಡ ಸಾಮ್ರಾಜ್ಯ..!?
–ಟಿವಿ 9 ಕನ್ನಡದ ಸೃಷ್ಟಿಕರ್ತ ಮಹೇಂದ್ರ ಮಿಶ್ರಾ ಇದ್ದಿದ್ದರೆ ಹೀಗಾಗುತ್ತಿತ್ತೇ..?


ಇದು ಒಂದು ಚಾನೆಲ್ ಗೆ ಸಂಭ್ರಮವಾದ್ರೆ..ಇನ್ನೊಂದು ಚಾನೆಲ್ ಗೆ ಎಚ್ಚರಿಕೆಯ ಕರೆಗಂಟೆ ಎನ್ನಬಹುದೇನೋ..?ತನ್ನ ಮನೆ ಕೋಳಿ ಕೂಗಿ ದರೇನೆ ಬೆಳಗಾಗುವುದು ಎನ್ನುವ ಗಾಧೆ ಮಾತಿನಂತೆ ತಾನ್ ಏನ್ ಸುದ್ದಿ ಕೊಟ್ರೂ ಜನ ನೋಡ್ತಾರೆ..ನಂಬ್ತಾರೆ..ಎಂಬ ಅತಿಯಾದ ಆತ್ಮವಿಶ್ವಾಸ ದಲ್ಲಿದ್ದ ಕನ್ನಡದ ನಂಬರ್ ಒನ್ ನ್ಯೂಸ್ ಚಾನೆಲ್ ಟಿವಿ 9 ಕನ್ನಡಕ್ಕೆ ಮರ್ಮಾಘಾತವೇ ಆಗ್ಹೋಗಿದೆ ಅನ್ನಿಸುತ್ತೆ..ಹಾಗೊಂದು ಮುಟ್ಟಿ ನೋಡಿಕೊಳ್ಳುವಂಥ ಪೆಟ್ಟು ನೀಡಿರುವುದು ನ್ಯೂಸ್ 18 ಕನ್ನಡ. ಹಾಗಾಗಿ ನ್ಯೂಸ್ 18 ಕನ್ನಡದ ಕಚೇರಿಯಲ್ಲಿ ಹಬ್ಬದ ಸನ್ನಿವೇಶ ಮನೆ ಮಾಡಿದ್ರೆ, ಟಿವಿ9 ಕುಟುಂಬದಲ್ಲಿ ಸೂತಕದ ಛಾಯೆ-ಅಪಮಾನ-ಮುಜುಗರದ ವಾತಾವರಣ ಮೂಡಿದಂತಿದೆ.
ಕನ್ನಡದ ನಂಬರ್ ಒನ್ ಚಾನೆಲ್ ಟಿವಿ9 ಕನ್ನಡವನ್ನು ಹಿಂದಿಕ್ಕುವ ಮೂಲಕ ಮೈಲಿಗಲ್ಲಿನ ಸಾಧನೆ ಮಾಡಿದ ನ್ಯೂಸ್ 18 ಕನ್ನಡದ ತಂಡಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ತಂಡದ ಅಭಿನಂದನೆಗಳು.(ಹಿಂದೊಮ್ಮೆಯೂ ಟಿವಿ-9ನ್ನು ಹಿಂದಿಕ್ಕಿದ ಸಂಭ್ರಮಾಚರಣೆಯೂ ನ್ಯೂಸ್ 18 ಕನ್ನಡದಲ್ಲಿ ನಡೆದಿತ್ತು.ಆದರೆ ಅದನ್ನು ಒಪ್ಪಲು ಸ್ವತಃ ಅಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರೇ ಸಿದ್ದವಿರಲಿಲ್ಲ. ಹಾಗಾಗಿ ಆ ಆಚರಣೆಗೆ ಅರ್ಥವೂ ದೊರೆತಿರಲಿಲ್ಲ. ಹೆಚ್ಚು ಒತ್ತು ಕೂಡ ನೀಡಿರಲಿಲ್ಲ).ಅದೆಲ್ಲಾ ಹಳೆಯ ಮಾತು, ಆದರೆ ಪರಿಸ್ತಿತಿ ಹಿಂದಿ ನಂತಿಲ್ಲ..ಈ ಬಾರಿ ಇದಕ್ಕೆ ಕಾರಣವೂ ಇದೆ.. ಉದ್ದೇಶವೂ ಇದೆ.ಹಿನ್ನೆಲೆಯೂ ಇದೆ..ಏಕೆಂದರೆ ಒಂದು ತಂಡದ ಪ್ರಯತ್ನ-ಪರಿಶ್ರಮ ಈ ಸಾಧನೆ ಹಿಂದಿರುವುದು ದಟ್ಟವಾಗಿದೆ. ಹಾಗಾಗಿಯೇ ಈ ಬಾರಿಯ ಮೈಲಿಗಲ್ಲಿನ ಸಾಧನೆಗೆ ಸೆಕ್ಯೂರಿಟಿ ಯಿಂದಿಡಿದು. ಹೌಸ್ ಕೀಪಿಂಗ್ ವರೆಗೂ ಡ್ರೈವರ್ ನಿಂದ ಹಿಡಿದು ರಿಪೋರ್ಟರ್ ಕ್ಯಾಮೆರಾಮನ್ ಅವರ ಪರಿಶ್ರಮ ಕಾರಣವಾಗಿರುವುದು ಸ್ಪಷ್ಟ..ಹಾಗಾಗಿನೇ ನ್ಯೂಸ್ 18 ತಂಡಕ್ಕೆ ಮತ್ತೊಮ್ಮೆ ಶುಭಾಷಯ..ಯಶಸ್ಸಿನ ಅಭಿಯಾನ ಹೀಗೆಯೇ ಮುಂದುವರೆಯಲಿ ಎನ್ನುವ ಶುಭ ಹಾರೈಕೆ ಜತೆಗೆ ಈ ಯಶಸ್ಸಿನ ಅಮಲಿನಲ್ಲಿ ಮೈ ಮರೆಯದಿರಿ ಎನ್ನುವ ಎಚ್ಚರಿಕೆಯನ್ನೂ ಕನ್ನಡ ಫ್ಲ್ಯಾಶ್ ನ್ಯೂಸ್ ತಂಡ ಹೇಳೊಕ್ಕೆ ಬಯಸುತ್ತದೆ.

ಕೆಲವರ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿದೆಯೇ ಟಿವಿ9 ಕನ್ನಡ..!? : ಟಿವಿ ೯ನ ಸಧ್ಯದ ಸ್ತಿತಿಯನ್ನು ಅವಲೋಕಿಸಿ ಮಾತನಾಡುವವರ ಲಹರಿ ಗಮನಿಸಿದ್ರೆ ಹೀಗೊಂದು ಅನುಮಾನ ಕಾಡುತ್ತೆ.ಟ ವಿ9 ದಶಕಗಳವರೆಗೂ ಟಾಪ್ 1 ಸ್ಥಾನದಲ್ಲಿ ಮುಂದುವರೆಯುತ್ತಾ ಬಂದಿದೆ ಎಂದರೆ ಅದು ಕಾಪಾಡಿ ಕೊಂಡ ವಿಶ್ವಾಸಾರ್ಹತೆ ಮತ್ತು ಅಲ್ಲಿ ಕೆಲಸವ ನ್ನಷ್ಟೇ ಮಾಡುತ್ತಿರುವ ಪ್ರಾಮಾಣಿಕ ಸಿಬ್ಬಂದಿಯೇ ಕಾರಣ.ಆದರೆ ಕೆಲಸವೊಂದನ್ನು ಬಿಟ್ಟು ಉಳಿದ ರಾಜಕೀಯ-ಅನಾಚಾರ ನಡೆಸುವ ಕೆಲವು ಹೀನಸುಳಿಗಳ ಬಗ್ಗೆ ಕೆಂಡ ದಂಥ ಕೋಪವಿದೆ.ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ಮಾತನಾಡಿದ ಕೆಲವರು,ಸರ್… ಇಲ್ಲಿ ಕೆಲವರು ನಡೆಸುತ್ತಿರುವ ಅಂದಾದರ್ಬಾರ್ ಸಹಿಸಿಕೊಳ್ಳೊಕ್ಕೆ ಆಗ್ತಿಲ್ಲ. ಬೇರೆಲ್ಲೂ ಹೋಗದೆ ಇದ್ದ ಸ್ಥಾನಗಳಲ್ಲೇ ಗೂಟಾ ಹೊಡೆದುಕೊಂಡು ಕೂತಿರುವ ಕೆಲವರಿಂದ ಚಾನೆಲ್ ರೆಪ್ಯೂಟೇಷನ್ ಹಾಳಾಗ್ತಿದೆ.ಇಲ್ಲಿ ಉಸ್ತುವಾರಿ ನೋಡಿಕೊಳ್ಳುವ ವರನ್ನು ಯಾಮಾರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.ಅವರಿಗೂ ಇವರು ಮಾಡುತ್ತಿರುವ ವಂಚನೆ-ವಿಶ್ವಾಸಘಾತುಕತನ-ಭ್ರಷ್ಟಾಚಾರ-ಅಕ್ರಮಗಳೆಲ್ಲಾ ಗೊತ್ತು. ಆದರೂ ಅದ್ಹೇಕೆ ಸುಮ್ಮನಿದ್ದಾರೋ ಗೊತ್ತಿಲ್ಲ.ಸುದ್ದಿ ಆಯ್ಕೆ ವಿಚಾರದಿಂದಿಡಿದು ಅದನ್ನು ರೂಪಿಸಿ ಪ್ರಸೆಂಟ್ ಮಾಡುವ ವಿಚಾರದಲ್ಲಿ ಹಿಂದೆ ಚಾನೆಲ್ ನಲ್ಲಿದ್ದ ವೃತ್ತಿಪರತೆ-ಬದ್ಧತೆಯೇ ಇಂದು ಇಲ್ಲವಾಗಿದೆ.ಬಹುತೇಕರು ಅವರವರ ಸ್ವಾರ್ಥಕ್ಕಾಗಿಯೇ ಕೆಲಸ ಮಾಡುತ್ತಿದ್ದಾರೆ.ತಮ್ಮ ಬೇಳೆ ಬೇಯಿಸಿಕೊಳ್ಳಲು ಚಾನೆಲ್ ಹೆಸರನ್ನು ಅಡ ಇಟ್ಟುಕೊಳ್ಳುತ್ತಿದ್ದಾರೆ.ಹಿಂದಿದ್ದ ಟಿವಿ9ನ್ನು ಇವತ್ತಿಗೆ ಹೋಲಿಸಿಕೊಂಡು ಹೊಟ್ಟೆ ಉರಿಸಿಕೊಳ್ಳುತ್ತಿದ್ದೇವೆ ತೀರಾ ಸಂಕಟದಿಂದ ನುಡಿಯುತ್ತಾರೆ.
ಹಾಗೆ ನೋಡಿದ್ರೆ ,ನ್ಯೂಸ್ 18 ಕನ್ನಡ ತಂಡದ ಸಾಧನೆ ಕಡಿಮೆಯದೇನಲ್ಲ. ಕನ್ನಡ ಸುದ್ದಿ ಮಾದ್ಯಮ ಕ್ಷೇತ್ರದಲ್ಲಿ ನಂಬರ್ 1 ಚಾನೆಲ್ ಆಗಿ ಜನಮಾನಸದಲ್ಲಿ ಮನೆ ಮಾತಾಗಿರುವ ಟಿವಿ9ನ್ನು ಟಿಆರ್ ಪಿಯಲ್ಲಿ ಹಿಂದಿಕ್ಕುವುದೆಂದರೆ ಅದೇನ್ ಕಡಿಮೆ ಮಾತಾ..ಎಷ್ಟೇ ತಿಪ್ಪರಲಾಗ ಹಾಕಿದ್ರೂ ದಶಕಗಳಿಂದಲೂ ಸಾಧ್ಯವಾಗದಿದ್ದ ಈ ಸಾಧನೆಯನ್ನು ನ್ಯೂಸ್ 18 ಕನ್ನಡ ಮಾಡಿದೆ.( ಈ ಹಿಂದೆ ಪಬ್ಲಿಕ್ ಟಿವಿ ಅಂತದ್ದೊಂದು ಸಾಧನೆ ಮಾಡಿತ್ತೆನ್ನುವ ಮಾತಿದೆ.)ಯಾವ ಒಂದು ಸಾಧನೆಯ ಕನಸಿನ ಬೆನ್ನತ್ತಿತ್ತೋ ಅದನ್ನು ತಂಡ ಸಾಕಾರಗೊಳಿಸಿದೆ.ಹಾಗಾಗಿನೇ ಚಾನೆಲ್ ಮನೆಯಲ್ಲಿ ಯುದ್ದಗೆದ್ದ ಸಂಭ್ರಮ..ಗಮ್ಯ ಸಾದಿಸಿದ ಸಾರ್ಥಕ ಭಾವ.ಎಂತದ್ದೇ ಕಠಿಣ ಸವಾಲುಗಳನ್ನು ಬೇಕಾದ್ರೂ ಗೆಲ್ಲಬಹುದೆನ್ನುವ ಆತ್ಮವಿಶ್ವಾಸವೊಂದನ್ನು ಈ ಗೆಲುವು ದೊರಕಿಸಿಕೊಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.


ವೀಕ್ಷಕರ ಸಂಖ್ಯೆಯನ್ನು ಆಧರಿಸಿ ನೀಡಲಾಗುವ ಟಿಆರ್ ಪಿ( ಟೆಲಿ ರೇಟಿಂಗ್ ಪಾಯಿಂಟ್)ನೇ ನ್ಯೂಸ್ ಚಾನೆಲ್ ಗಳ ಮಟ್ಟಿಗೆ ಜನಪ್ರಿಯತೆಯ ಮಾನದಂಡ.ಅದರ ಆಧಾರದಲ್ಲಿ ಈ ವಾರ ಟಿವಿ9 ತನ್ನ ಸ್ಥಾನವನ್ನು ನ್ಯೂಸ್ 18 ಕನ್ನಡಕ್ಕೆ ಬಿಟ್ಟುಕೊಟ್ಟಿದೆ.ಬಿಟ್ಟುಕೊಟ್ಟಿದೆ ಎನ್ನುವುದಕ್ಕಿಂತ ತನ್ನ ಕಳಪೆ ಫರ್ಫಾಮೆನ್ಸ್ ನಿಂದ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದರೆ ಸರಿಯಾಗಬಹುದೇನೋ..? ತಾನು ಕೊಟ್ಟಿದ್ದನ್ನೇ ಜನ ನಂಬಿಕೆಯಿಂದ ನೋಡುತ್ತಾರೆ.ನಂಬುತ್ತಾರೆ.ನಮ್ಮನ್ನು ಬಿಟ್ಟು ಬೇರೆ ಯಾರನ್ನು ನೋಡುವುದಿಲ್ಲ ಎನ್ನುವ ಭ್ರಮೆಯ ಪೊರೆಯನ್ನು ನ್ಯೂಸ್ 18 ಸಾಧನೆಯೇ, ಕಳಚಿ ಸತ್ಯದರ್ಶನ ಮಾಡಿಸಿದೆ.ವೀಕ್ಷಕರಿಗೆ ಆಯ್ಕೆಯ ಪರ್ಯಾಯಗಳಿವೆ.ಸುದ್ದಿಯನ್ನು ವಿಶ್ವಾಸಾರ್ಹತೆ-ಆಕರ್ಷಣೀಯ ಹಾಗೂ ಪರಿಣಾಮಕಾರಿಯಾಗಿ ಯಾರೇ ಕೊಟ್ಟರೂ ಅದನ್ನು ಪ್ರೀತಿಯಿಂದ ವೀಕ್ಷಿಸುತ್ತಾರೆ ಎನ್ನುವುದನ್ನು ಈ ಸಾಧನೆ ಜಗಜ್ಜಾಹೀರುಗೊಳಿಸಿದೆ.ತನ್ನ ಕೋಳಿ ಕೂಗಿದರೇನೇ ಸುದ್ದಿ ಜಗತ್ತಿನಲ್ಲಿ ಬೆಳಗಾಗುವುದು ಎಂಬ ಅತಿಯಾದ ಆತ್ಮವಿಶ್ವಾಸವೇ ಟಿವಿ-9ಗೆ ಮುಳುವಾಗಿದ್ದನ್ನು ಈ ಸಾಧನೆ ಸಾರಿ ಹೇಳಿದೆ .

ಮಹೇಂದ್ರ ಮಿಶ್ರಾ ಇದ್ದಿದ್ದರೆ ಹೀಗಾಗುತ್ತಿತ್ತೇ..? ನಾನೂ ಸೇರಿದಂತೆ ಟಿವಿ 9 ಕನ್ನಡದಲ್ಲಿ ಕೆಲಸ ಮಾಡಿದ ನೂರಾರು ಸಿಬ್ಬಂದಿಗೆ ಈ ಆಪತ್ಕಾಲದಲ್ಲಿ ನೆನಪಾಗೋ ಒಂದೇ ಒಂದು ಹೆಸರು ದಿ ಗ್ರೇಟ್ ಮಹೇಂದ್ರ ಮಿಶ್ರಾ.. ಬಹುಷಃ ಆ ಒಬ್ಬ ಮಹಾನುಭಾವ ಇಲ್ಲದಿದ್ದರೆ ಇವತ್ತು ಟಿವಿ9 ನಂಬರ್ ಒನ್ ಆಗಿ ದಶಕಗಳ ಕಾಲ ಅದೇ ಸ್ಥಾನವನ್ನು ಅಬಾಧಿತ ವಾಗಿಟ್ಟುಕೊಳ್ಳೊಕ್ಕೆ ಸಾಧ್ಯವೇ ಅಗುತ್ತಿರಲಿಲ್ಲವೇನೋ..? ಕೆಲಸದಲ್ಲಿ ಅವರು ತೋರುತ್ತಿದ್ದ ಬದ್ಧತೆ-ಸುದ್ದಿ ಆಯ್ಕೆ ವಿಷಯದಲ್ಲಿನ ಜಾಣ್ಮೆ-ಸೂಕ್ಷ್ಮತೆಗೆ ಬೇರೊಬ್ಬ ಸಾಟಿನೇ ಆಗೊಲ್ಲ.ಸುದ್ದಿ ವಿಚಾರದಲ್ಲಿ ಮುಲಾಜೇ ಇಲ್ಲದ ರಾಜಿ ಮಾಡಿಕೊಳ್ಳದ ಮನಸ್ಥಿತಿ ಮಿಶ್ರಾ ಅವರದು. ಸುದ್ದಿ ವಿಷಯದಲ್ಲಿ ಸ್ವಲ್ಪ ಏರುಪೇರಾದ್ರೂ ಅಬ್ಬರಿಸುತ್ತಿದ್ದ ರೀತಿಯೇ ಅತ್ಯದ್ಭುತ.ಆ ಮಹಾನುಭಾವ ಡೆಸ್ಕ್ ನಲ್ಲಿದ್ದರೆ ಎಲ್ಲವೂ ನಿಶ್ಯಬ್ಧ.ಯಾರೊಬ್ಬರಿಂದಲೂ ಒಂದು ಸೊಲ್ಲು ಹೊರಗೆ ಬರುತ್ತಿರಲಿಲ್ಲ.ಅಂಥಾ ವೃತ್ತಿಪರ ಮುಖ್ಯಸ್ಥನನ್ನು ಟಿವಿ9 ಪ್ರಾತಃಸ್ಮರಣೀಯವಾಗಿ ನೆನೆಯಬೇಕಾಗುತ್ತದೆ.ಟಿವಿ9ಗೆ ಅಂತದ್ದೊಂದು ಸ್ಥಾನಮಾನ-ಹಿರಿಮೆ ಗರಿಮೆ ದೊರಕಿಸಿಕೊಟ್ಟ ಮಹೇಂದ್ರ ಮಿಶ್ರಾ ಅವರನ್ನು ಚಾನೆಲ್ ನಿಂದ ಹೊರ ಹಾಕಿದ ರೀತಿ ಮಾತ್ರ ನೋವನ್ನುಂಟುಮಾಡುತ್ತದೆ.,ಮಹೇಂದ್ರ ಮಿಶ್ರಾ ಅವರಂಥವರು ಇದ್ದಿದ್ರೆ ಟಿವಿ9ಗೆ ಇಂಥಾ ಸ್ತಿತಿ ಬರುತ್ತಿತ್ತಾ..ನೋ ಚಾನ್ಸ್.. ಯೋಗ್ಯತೆಯೇ ಇಲ್ಲದವ್ರು ತಾವೇ ಎಲ್ಲಾ ಎಂದು ಎಗರಾಡುವ ದಿನಗಳು ಎದುರಾಗುತ್ತಿದ್ವಾ..?ಚಾನ್ಸೇ ಇಲ್ಲ ಎಂದು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಟಿವಿ9 ಮಾಜಿ ಮತ್ತು ಹಾಲಿ ಸಿಬ್ಬಂದಿ..ಇದು ಸತ್ಯ ಕೂಡ..
ಇದನ್ನು ನ್ಯೂಸ್ 18 ಕನ್ನಡದ ಸಾಧನೆ ಎನ್ನುವುದರ ಜತೆಗೇನೆ ಟಿವಿ9 ಕನ್ನಡದ ವಿಶ್ವಾಸಾರ್ಹತೆ ಕುಸಿತದ ಸೂಚನೆ ಎಂತಲೂ ವಿಶ್ಲೇಷಿಸಬಹುದೇನೋ..? ಸುದ್ದಿಯನ್ನು ನೀಡುವ ವೇಗ-ಶೈಲಿಯಲ್ಲಿ ನ್ಯೂಸ್ 18 ಕನ್ನಡದ ಮುಂದೆ ಟಿವಿ9 ಮಂಕಾಗಿರುವುದನ್ನು ತೋರಿಸುವಂತಿದೆ.ಎಲ್ಲಕ್ಕಿಂತ ಹೆಚ್ಚಾಗಿ ಇವತ್ತಿನ ಕಾಲಘಟ್ಟಕ್ಕೆ ಇತರೆ ಚಾನೆಲ್ ಗಳ ಪೈಪೋಟಿ ಎದುರಿಸ್ಲಿಕ್ಕೆ ಬೇಕಾದ ಸಿದ್ದತೆ ಮಾಡಿಕೊಳ್ಳೋದನ್ನು ಬಿಟ್ಟು ಅತಿಯಾದ ಆತ್ಮವಿಶ್ವಾಸದಲ್ಲಿ ಮೈಮರೆತರೆ ಏನಾಗುತ್ತದೆ ಎನ್ನುವುದಕ್ಕೆ ವೀಕ್ಷಕ ಸರಿಯಾದ ಪಾಠವನ್ನೇ ಮುಟ್ಟಿಕೊಂಡು ನೋಡುವಂತೆ ಕಲಿಸಿದ್ದಾನೆನ್ನುವುದರಲ್ಲಿ ಯಾವುದೇ ಅತಿಶಯವಿಲ್ಲ.
ಇದೆಲ್ಲಕ್ಕೂ ಕಾರಣವೇನು..? …ಸುದ್ದಿ ಮನೆಯಲ್ಲಿ ಕೆಲಸ ಮಾಡುವ ಕೆಲವು ಬ್ರಹಸ್ಪತಿ-ಮಹಾನ್ ಬುದ್ದಿವಂತರು-ಪ್ರಖಳಾಂತ ಪಂಡಿತರೆನಿಸಿಕೊಂಡವರ ಅತಿಯಾದ ಆತ್ಮವಿಶ್ವಾಸ..ಭ್ರಮಾಧೀನ ಮನಸ್ಥಿತಿ,ತಲೆಗಷ್ಟೇ ಅಲ್ಲ ಮೈಮನಸುಗಳಿಗೂ ಏರಿದ ಯಶಸ್ಸಿನ ಅಮಲು,ತಮ್ಮನ್ನು ಮೆಟ್ಟಿನಿಲ್ಲೋರು ಯಾರಿದ್ದಾರೆನ್ನುವ ನಿರ್ಲಕ್ಷ್ಯ-ತಾತ್ಸಾರ, ಗಟ್ಟಿತನ ಕಳೆದುಕೊಂಡ ಸುದ್ದಿಯ ಗುಣಮಟ್ಟ, ತೀಕ್ಷ್ಣತೆ-ಪ್ರಖರತೆ-ಗಂಭೀರತೆ ಕಳೆದುಕೊಂಡ ಸುದ್ದಿ ಪ್ರಸಾರದ ನೀರಸ ವೈಖರಿಗಳೇ ಟಿವಿ-9 ಕನ್ನಡದ ಹಿನ್ನಡೆ-ವೈಫಲ್ಯಕ್ಕೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ತಾವು ಹಾಕಿದ್ದೇ ಸುದ್ದಿ..ಪ್ರಸಾರ ಮಾಡಿದ್ದೇ ಸುದ್ದಿ..ಅದನ್ನೇ ಜನ ನೋಡಬೇಕೆನ್ನುವ ಮನಸ್ತಿತಿಯವರೇ ಸುದ್ದಿ ಮನೆಯಲ್ಲಿ ಬಹುತೇಕ ತುಂಬೋಗಿ ರುವುದರಿಂದಲೇ ಸುದ್ದಿ ಪ್ರಸಾರದ ಗುಣಮಟ್ಟದ ಬಗ್ಗೆಯಾಗಲಿ,ಅದು ವೀಕ್ಷಕರನ್ನು ಪರಿಣಾಮಕಾರಿ ಯಾಗಿ ತಲುಪುತ್ತಿದೆಯಾ ಎಂಬುದನ್ನು ಖಾತರಿ ಪಡಿಸಿಕೊಳ್ಳುವ ಬಗ್ಗೆಯಾಗಲಿ ತಲೆಕಡಿಸಿಕೊಳ್ಳು ವವರಿಲ್ಲದಂತಾಗಿದೆಯಂತೆ.ಇದೇ ಜನಪ್ರಿಯತೆಯ ಪತನಕ್ಕೆ ಕಾರಣವಾಯಿತೆನ್ನುವುದನ್ನು ಅಲ್ಲಿಯೇ ಕೆಲಸ ಮಾಡುತ್ತಿರುವ ಕೆಲವರು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.
ಇವತ್ತಿಗೂ ಟಿವಿ9 ಕನ್ನಡ ಚಾನೆಲ್ ನಂಬರ್ ಒನ್ನೇ..ಟಿಆರ್ ಪಿ ಎನ್ನುವ ಹಾವು ಏಣಿಯಾಟದಲ್ಲಿ ಒಂದು ವಾರ ನ್ಯೂಸ್ 18 ಕನ್ನಡ ಟಿಆರ್ ಪಿಯಲ್ಲಿ ಟಾಪ್ ಬರಬಹದು..ಆದರೆ ಆಗಿರುವ ಸಮಸ್ಯೆಯನ್ನು ಅಲ್ಲಿಯೇ ಸರಿಪಡಿಸುವ ಚಾಣಕ್ಯತನ-ಚಾಕಚಕ್ಯತೆಗಳೆರೆಡೂ ಟಿವಿ9 ತಂಡಕ್ಕೆ ಇದೆ. ಈ ತಂಡ ಮನಸು ಮಾಡಿದ್ರೆ ಕರ್ನಾಟಕ ಸುದ್ದಿ ಮಾದ್ಯಮ ಕ್ಷೇತ್ರದಲ್ಲಿ ಅಸಾಧ್ಯ ವೆನ್ನೋ ದೇ ಇಲ್ಲದಂತಿದೆ.ಆದರೆ ನನ್ನ ಕೋಳಿ ಕೂಗಿದರೇನೇ ಬೆಳಗಾಗಬೇಕೆನ್ನುವ ಕೆಲವರ ಹಠ-ಸ್ವಾರ್ಥದಿಂದಾಗಿಯೇ ಹೀನಾಯ ಪ್ರದರ್ಶನ ನೋಡುವಂತಾಗಿದ್ದು ದೌರ್ಭಾಗ್ಯಪೂರ್ಣವೇ ಸರಿ.
ಇದು ಕೇವಲ ಒಂದು ವಾರದ ಸಂಭ್ರಮ ಬಿಡಿ ಸಾರ್..:ಈ ಬಗ್ಗೆ ಟಿವಿ9 ನಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಬ್ರಹಸ್ಪತಿಗಳನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ವಿಚಾರಿಸಲು ಕರೆ ಮಾಡಿದಾಗ ಅವರ ಕಡೆಯಿಂದ ಬಂದ ಉತ್ತರ ಬಾಲಿಶ ಮತ್ತು ಹಾಸ್ಯಾಸ್ಪದ ವಾಗಿತ್ತು.ಇದೇ ನ್ಯೂಸ್ 18 ಕನ್ನಡ ಕಚೇರಿಯಲ್ಲಿ ನಮ್ಮನ್ನು ಹಿಂದಿಕ್ಕಿದ ಸಂಭ್ರಮ ಆಚರಿಸಿದ್ದರು ಸರ್.ಆದ್ರೆ ಅದು ಅವತ್ತಿಗಷ್ಟೇ ಸೀಮಿತವಾಗಿತ್ತು.ಮಾರನೇ ವಾರ ನಾವೇ ಫಸ್ಟ್ ಇದ್ದೆವು.ಅವರ ಸಂಭ್ರಮವೇನಿದ್ದರೂ ಒಂದು ವಾರ ಅಷ್ಟೇ..ಅದರಲ್ಲೇ ಅವರು ಖುಷಿ ಪಡಲಿ ಬಿಡಿ ಎಂದವರೇ ಹೆಚ್ಚು.ಆಗ ಎನಿಸಿದ್ದು ಇವರ ತಲೆ-ಮೆದುಳಿನಲ್ಲಿ ತುಂಬೋಗಿರುವ ಭ್ರಮೆ.ಅದು ಎಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂದರೆ ಜನ ಏನಿದ್ದರೂ ನಮ್ಮನ್ನೇ ನೋಡೋದು..ಬೇರೆ ಯಾವ್ದೇ ಚಾನೆಲ್ ನಮಗಿಂತ ಪರಿಣಾಮಕಾರಿಯಾದ-ಸ್ಪೋಟಕವಾದ ಸುದ್ದಿ ಪ್ರಸಾರ ಮಾಡಿದ್ರೂ ನಾವ್ ಕೊಡೋದೇ ಸತ್ಯ ಎಂದು ನಂಬ್ತಾರೆ..ನಾವೇಕೆ ತಲೆಕೆಡಿಸಿಕೊಳ್ಳಬೇಕು ಎನ್ನುವ ಮನಸ್ಥಿತಿ ಇವರಲ್ಲಿದ್ದಂತಿದೆ.ಬಹುಷಃ ಮ್ಯಾನೇಜ್ಮೆಂಟ್ ಲೆವಲ್ ನಲ್ಲಿ ಕಿವಿ ಹಿಂಡುವ ಕೆಲಸವಾಗಿದಿದ್ದರೆ ಇಂಥಾ ಕೆಟ್ಟ ಮನಸ್ತಿತಿ ಅಲ್ಲಿ ಕೆಲಸ ಮಾಡುವವರಲ್ಲಿ ಇರುತ್ತಿರಲಿಲ್ಲವೇನೋ ಅನ್ನಿಸುತ್ತೆ..ಮನೆ ಯಜಮಾನ ಸರಿ ಇದ್ರೆ ಎಲ್ಲವೂ ಸರಿ ಇರುತ್ತದೆ. ಆದ್ರೆ ಹೇಳೋರ್ ಕೇಳೋರ್ ಇಲ್ಲದೆ ಕೆಲವರ ಅಂದಾದರ್ಬಾರ್ ನಿಂದ ಚಾನೆಲ್ ಅಧೋಗತಿಗೆ ತಲುಪುತ್ತಿದೆ ಎನ್ನುವ ಬೇಸರ ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಎಷ್ಟೋ ಸಿಬ್ಬಂದಿಯಲ್ಲಿದೆ.ನ್ಯೂಸ್ 18 ಕನ್ನಡ ಕೊಟ್ಟ ಪೆಟ್ಟು ಇಲ್ಲಿ ಮೆರೆದಾಡುತ್ತಿರುವ ಕೆಲವರ ಅಹಂಕಾರ ಅಡಗಿಸಿದೆ.ಇವತ್ತು ನಾವೆಲ್ಲಾ ಮನೆಗೆ ಹೋಗಿ ಹಾಲು ಕುಡಿಯುತ್ತೇವೆ ಎಂದು ಹೇಳ್ತಾರೆ ಅಂದ್ರೆ ಚಾನೆಲ್ ನಲ್ಲಿರುವ ಆ ಒಂದು ಪಟಾಲಂ ಸೃಷ್ಟಿಸಿರುವ ನರಕ ಎಂತದ್ದು..ಅಲ್ಲಿರುವ ಅಸಹನೀಯ ವಾತಾವರಣ ಎಂತದ್ದೆನ್ನುವ ಅಂದಾಜು ಸಿಕ್ಕುತ್ತದೆ.
ವೃತ್ತಿಪರತೆಯದೇ ದೊಡ್ಡ ಕೊರತೆ: ಇಂದು ಟಿವಿ9 ನ್ನು ನ್ಯೂಸ್ 18 ಕನ್ನಡ ಹಿಂದಿಕ್ಕಿ ಮುನ್ನುಗ್ಗುತ್ತದೆ ಎಂದ್ರೆ ಅದು ನ್ಯೂಸ್ 18 ಕನ್ನಡದ ಗರಿಮೆ ಎನ್ನೋದು ಎಷ್ಟು ಸತ್ಯವೋ, ಟಿವಿ9ನ ವೃತ್ತಿಪರತೆಯ ಕೊರತೆ ಎನ್ನೋದು ಕೂಡ ಅಷ್ಟೇ ವಾಸ್ತವ.ಟಿವಿ9 ನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದವರಿಗೆ ಅದರ ಅರಿವಾಗುತ್ತದೆ. 2006 ಆರಂಭಗೊಂಡ ದಿನಗಳಲ್ಲಿ ಬದ್ಧತೆಯಿಂದ ಕೆಲಸ ಮಾಡುವ ತಂಡ ಹಾಕಿಕೊಟ್ಟ ಭದ್ರ ತಳಹದಿ ಮೇಲೆ ಟಿವಿ9 ನಿಂತಿದೆಯೇ ಬಿಟ್ಟರೆ ಇವತ್ತಿನವರ ಕೊಡುಗೆಯೇನೂ ಇಲ್ಲ ಎನ್ನುವುದು ಕೂಡ ಸತ್ಯ.ಏಕಂದ್ರೆ ಇವತ್ತು ಸುದ್ದಿಯ ವೇಗದ ನಡುವೆ ಇತರೆ ಚಾನೆಲ್ ಗಳು ಪೈಪೋಟಿಗೆ ಬಿದ್ದು ಕೆಲಸ ಮಾಡುತ್ತಿದ್ದರೆ ಟಿವಿ9 ತುಂಬಾ ಹಿಂದುಳಿದಿದೆ.ಏಕಂದ್ರೆ ಅದಕ್ಕಿಂತ ಮುನ್ನವೇ ಬೇರೆ ಚಾನೆಲ್ ಗಳು ಸ್ಪೋಟಕ ಸುದ್ದಿಗಳನ್ನು ಬ್ರೇಕ್ ಮಾಡಿರುತ್ತವೆ.ಎಲ್ಲರಲ್ಲೂ ಸುದ್ದಿ ಪ್ರಸಾರ ಮಾಡಿದ ಅದೆಷ್ಟೋ ನಿಮಿಷಗಳ ನಂತರ ಒಂದಷ್ಟು ಅಂಶಗಳನ್ನು ಸೇರಿಸಿ ಸುದ್ದಿ ನೀಡಿ ಖುಷಿ ಪಟ್ಟುಕೊಳ್ಳಲಾಗ್ತಿದೆ ಅಷ್ಟೆ..?
ಅವತ್ತಿಂದ ನಂಬರ್ ಒನ್ ಆಗಿದೆ ಎನ್ನುವ ಏಕೈಕ ಕಾರಣಕ್ಕೆ ವೀಕ್ಷಕರು ಟಿವಿ9 ನೋಡುತ್ತಿದ್ದಾರೆಯೇ ಹೊರತು,ಅದರಲ್ಲೇನೋ ವಿಶೇಷವಿದೆ ಎನ್ನುವ ಕಾರಣಕ್ಕಲ್ಲ ಎನ್ನುವುದನ್ನುಟಿವಿ9 ನ್ನು ವೃತ್ತಿಪರತೆಯಿಂದ ವಂಚಿತಗೊಳಿಸಿದ ಆಯಕಟ್ಟಿನ ಹುದ್ದೆಯಲ್ಲಿರುವ ಕೆಲವು ಬ್ರಹಸ್ಪತಿಗಳು ಅರ್ಥ ಮಾಡಿಕೊಳ್ಳಬೇಕಿದೆ.ಎಚ್ಚೆತ್ತುಕೊಂಡು ಲೋಷ ದೋಷಗಳನ್ನು ಸರಿಪಡಿಸಿಕೊಳ್ಳಬೇಕಿದೆ .ಇಲ್ಲ ನಾವು ಮಾಡಿದ್ದೇ ಮಾಡೋದು ಎನ್ನುವ ನಿರ್ಲಕ್ಷ್ಯದ ಮನಸ್ತಿತಿಯಲ್ಲೇ ಮುಂದುವರೆದರೆ ಇತರೆಲ್ಲಾ ಚಾನೆಲ್ ಗಳು ಟಿವಿ9ನ್ನು ಹಿಂದಿಕ್ಕಿ ಮುನ್ನುಗ್ಗುವುದು ಕಷ್ಟವೇನಲ್ಲ.. ನ್ಯೂಸ್ 18 ಕನ್ನಡದ ಬೆಳವಣಿಗೆಯನ್ನು ಮ್ಯಾನೇಜ್ಮೆಂಟ್ ಅರ್ಥ ಮಾಡಿಕೊಂಡು ಬ್ರಹಸ್ಪತಿಗಳೆನಿಸಿಕೊಂಡವ್ರ ಕಿವಿ ಹಿಂಡುವ ಕೆಲಸ ಮಾಡಬೇಕಿದೆ.ಅದು ಆಗುತ್ತಾ..ಅದೇ ಮಿಲಿಯನ್ ಡಾಲರ್ ಪ್ರಶ್ನೆ.










