advertise here

Search

ಕ್ರೈಸ್ತ ಧರ್ಮದ ಸಾರವೇ ಶಾಂತಿ,ಶಿಕ್ಷಣಕ್ಕೆ ಕ್ರೈಸ್ತರ ಕೊಡುಗೆ ಅಪಾರ: ಮಹಾಧರ್ಮಾಧ್ಯಕ್ಷ ಡಾ||ಪೀಟರ್ ಮಚಾಡೊ,


ಬೆಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ||ಪೀಟರ್ ಮಚಾಡೊ
ಬೆಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ||ಪೀಟರ್ ಮಚಾಡೊ

ಬೆಂಗಳೂರು:ಕ್ರೈಸ್ತ ಸಮುದಾಯ ವಿಶ್ವಕ್ಕೆ ಶಾಂತಿ ಸಾರುವ ಧರ್ಮವಾಗಿದೆ. ಎಲ್ಲ ಧರ್ಮ ಮತ್ತು ವರ್ಗದವರಿಗೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳನ್ನು ತೆರದು ವಿದ್ಯಾವಂತ ಸಮಾಜ ನಿರ್ಮಾಣಕ್ಕೆ ಕ್ರೈಸ್ತ ಸಮುದಾಯ ಅಪಾರ ಕೊಡುಗೆ ನೀಡಿದೆ.ಕ್ರೈಸ್ತರನ್ನು ಗುರುತಿಸುವ ಕೆಲಸವಾಗಬೇಕು ಎಂದು  ಬೆಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ||ಪೀಟರ್ ಮಚಾಡೊ ಆಶಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ ಜಾಗೃತಿ ವೇದಿಕೆ ವತಿಯಿಂದ ಡಾಕ್ಟರೇಟ್ ಪಡೆದ 72 ಕ್ರೈಸ್ತ  ಪದವೀಧರನ್ನು ಸನ್ಮಾನಿಸುವ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ ಜಾಗೃತಿ ವೇದಿಕೆ 15ವರ್ಷಗಳಿಂದ ಕ್ರೈಸ್ತ ಸಮುದಾಯ ಸಂಘಟನೆ ಮತ್ತು ಕ್ರೈಸ್ತ ಸಮುದಾಯದವರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಆದರ್ಶಪ್ರಾಯ ಬೆಳವಣಿಗೆ ಎಂದರು.

ALSO READ :  MG Road ಗ್ಯಾಂಗ್ ರೇಪಿಸ್ಟ್‌ಗಳಿಗೆ ಜೀವಾವಧಿ ಶಿಕ್ಷೆ

ವೇದಿಕೆಯಲ್ಲಿ ಉಪಸ್ಥಿತರಿದ್ದ ಐ.ಪಿ.ಎಸ್.ಅಧಿಕಾರಿ ಸಿ.ಬಿ.ರಿಶ್ವಂತ್ ಕ್ರೈಸ್ತ ಸಮುದಾಯದ ಡಾಕ್ಟರೇಟ್ ಪಡೆದವರಿಗೆ ಗುರುತಿಸಿ, ಸನ್ಮಾನ ಮಾಡುವುದು ಒಳ್ಳೆಯ ಕೆಲಸ, ಉತ್ತಮ ಕೆಲಸ ಮಾಡುವ ಎಲ್ಲ ಸಂಘದವರಿಗೆ ಅಭಿನಂದನೆಗಳು.
ಒಳ್ಳೆಯ ಕೆಲಸ ಮಾಡಲು ಒಬ್ಬರಿಂದ ಸಾಧ್ಯವಿಲ್ಲ, ಎಲ್ಲರು ಒಂದುಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬರ್ತಲೋಮ್ ರವರು , ಐ.ಪಿ.ಎಸ್.ಪೊಲೀಸ್ ಅಧಿಕಾರಿ ರಿಶ್ವಂತ್ , ಸಂಗೀತ ನಿರ್ದೇಶಕ, ನಟ ಸಾಧಕೋಕಿಲ, ಆರೋಗ್ಯಸ್ವಾಮಿ, ಶಿಕ್ಷಣ ತಜ್ಞೆ ಗ್ಲೋರಿ, ವಕೀಲರಾದ ಬಾಲರಾಜ್, ಸಮಾಜದ ಮುಖಂಡರಾದ ಕಿರೀಟಪ್ಪ, ಶಾಂತಪ್ಪ,ವೇದಿಕೆಯ ಯೇಸುದಾಸ್, ಅರುಳಪ್ಪ, ಸಗಾಯರಾಜ್ ಪ್ರಕಾಶ್ ಎ.ಜಿ ಪಾಲ್ಗೊಂಡಿದ್ದರು. ಇದೇ ವೇಳೆ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಾಯಿತು. ಏಸುಕ್ರಿಸ್ತ ಕುರಿತು ಭಕ್ತಿಗೀತೆಗಳನ್ನು ಹಾಡಲಾಯಿತು.


Political News

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

Scroll to Top