advertise here

Search

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!


ಬೆಂಗಳೂರಿಗರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ ) ಜತೆಗೆ ಕಾಯ್ದುಕೊಂಡಿದ್ದ ದಶಕದವರೆಗಿನ  ಭಾವನಾತ್ಮಕ ಸಂಬಂಧದ ಕೊಂಡಿ ಇವತ್ತೇ ಶಾಶ್ವತವಾಗಿ ಕಳಚಿ ಬೀಳಲಿದೆ.ನಾಳೆಯಿಂದ ಎಲ್ಲವೂ ಹೊಸ ಹೊಸದು…ಯಾವ ಹಳೆಯ ಆಡಳಿತಾತ್ಮಕ ವಿಚಾರಗಳು ಅಸ್ಥಿತ್ವದಲ್ಲಿ ಇರುವುದೇ ಇಲ್ಲ.. ಏಕೆಂದರೆ ನಾಳೆಯಿಂದ ಬೆಂಗಳೂರಿನ ನಾಗರಿಕರ ಪಾಲಿಗೆ ಬಿಬಿಎಂಪಿ ಒಂದು ಕನಸಾಗಿಯೇ ಉಳಿಯಲಿದೆ. ಶಾಶ್ವತಕ್ಕೂ ನೇಪಥ್ಯಕ್ಕೆ ಸರಿಯಲಿದೆ ಬಿಬಿಎಂಪಿ ಇತಿಹಾಸ. ನಾಳೆಯಿಂದ ಬಿಬಿಎಂಪಿ ಹೆಸರೇಳಲು ಅವಕಾಶ ಸಿಗುವುದಿಲ್ಲ.ಕಾರಣ, ಬಿಬಿಎಂಪಿಯ ಯುಗಾಂತ್ಯ-ಹೊಸ ಆಡಳಿತದ ಯುಗಾರಂಭ.

ಹೌದು..ಬೆಂಗಳೂರಿನ ಆಡಳಿತದಲ್ಲಿ  ಹೊಸ ಅಧ್ಯಾಯ ಶುರುವಾಗಲಿದೆ. ಹಳೆಯ ಆಡಳಿತ ವ್ಯವಸ್ಥೆಗೆ ಕೊನೆ ಬೀಳಿದೆ. ಬೆಂಗಳೂರು ಆಡಳಿತದಲ್ಲಿ ನೂತನ ಶಖೆಯೊಂದು  ಆರಂಭಗೊಳ್ಳಲಿದೆ. ಬಿಬಿಎಂಪಿಗೆ ಅಂತಿಮ ಷರಾ ಬರೆದಿರುವ ಸರ್ಕಾರ ನೂತನ ವ್ಯವಸ್ಥೆ ಶುರು ಮಾಡುತ್ತಿದೆ.ಹೀಗಾಗಿ ಬಿಬಿಎಂಪಿ ಆಯಸ್ಸು ಇಂದಿಗೇ ಕೊನೆಯಾಗಲಿದೆ. ನಾಳೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎನ್ನುವ ಹೊಸ ಆಡಳಿತ ವ್ಯವಸ್ಥೆ ಜಾರಿಯಾಗುತ್ತಿದೆ.

ದಿನೇ ದಿನೇ ಭೌಗೋಳಿಕವಾಗಿ ತನ್ನ ವ್ಯಾಪ್ತಿ-ವಿಸ್ತೀರ್ಣ ಹೆಚ್ಚಿಸಿಕೊಳ್ಳುತ್ತಿರುವ ಬೆಂಗಳೂರಿಗೆ ಸಧ್ಯದಲ್ಲಿ ಜಾರಿಯಲ್ಲಿದ್ದ ಬಿಬಿಎಂಪಿ ಆಡಳಿತದಿಂದ ಸಮರ್ಪಕ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತಿರಲಿಲ್ಲ.ಹಾಗಾಗಿ ಇದರ ವ್ಯಾಪ್ತಿ-ವಿಸ್ತೀರ್ಣ ಹೆಚ್ಚಿಸುವುದರ ಜತೆಗೇನೆ ಆಡಳಿತದಲ್ಲು ಅಮೂಲಾಗ್ರ ಬದಲಾವಣೆ ತರಬೇಕೆನ್ನುವ ಉದ್ದೇಶದಲ್ಲಿ ಸರ್ಕಾರಗಳು ಬಿಬಿಎಂಪಿಯ ಪರಿಷ್ಕರಣೆಗೆ ಕೈ ಹಾಕಿದ್ವು.2014 ರಲ್ಲಿ ಶುರುವಾದ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಹಿಡಿದಿದ್ದು ಬರೋಬ್ಬರಿ 11 ವರ್ಷ.ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳಾದ್ವು.ಅದೆಲ್ಲದರ ಫಲಿತಾಂಶ ಎನ್ನುವಂತೆ ಅಂತಿಮವಾಗಿ ಬಿಬಿಎಂಪಿ, ಗ್ರೇಟೆರ್ ಬೆಂಗಳೂರು ಸ್ವರೂಪ ಪಡೆದಿದೆ. ಸರ್ಕಾರ ಇಂದೇ ಇದಕ್ಕೆ ಅಧಿಸೂಚನೆ ಹೊರಡಿಸಲಿರುವುದರಿಂದ  ನಾಳೆಯಿಂದ ಗ್ರೇಟರ್ ಬೆಂಗಳೂರೆನ್ನುವ ಹೊಸ ಅಧ್ಯಾಯ ಶುರುವಾಗಲಿದೆ.

ವಾರ್ಡ್ ಗಳ ಪುನರ್ವಿಂಗಡಣೆ ಪ್ರಕ್ರಿಯೆಯ ಭಾಗವಾಗಿ ಸಧ್ಯಕ್ಕೆ ಬಿಬಿಎಂಪಿ ಲಿಮಿಟ್ಸ್ ನಲ್ಲಿ 225 ವಾರ್ಡ್ ಗಳಿದ್ದವು. ನಾಳೆಯಿಂದ ಅಸ್ತಿತ್ವಕ್ಕೆ ಬರಲಿರುವ ಜಿಬಿಎನಲ್ಲೂ ಸಧ್ಯಕ್ಕೆ ಇಷ್ಟೇ ವ್ಯಾಪ್ತಿಯ  ವಾರ್ಡ್ ಉಳಿಸಿಕೊಳ್ಳಲು ನಿರ್ದರಿಸಲಾಗಿದೆ. ಜಿಬಿಎ ಗಡಿ ಅಂತಿಮವಾಗುವವರೆಗೂ ಇದೇ 225 ವಾರ್ಡ್ ಗಳೇ ಪಕ್ಕಾ ಆಗಲಿದೆ.ಇನ್ನು ಎಲ್ಲಾ ನಿರ್ದಾರವಾಗಲು ಕನಿಷ್ಟ 120 ದಿನ ಬೇಕಾಗಿರುವುದರಿಂದ ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿ  3 ಪಾಲಿಕೆ ಮಾಡಲು ನಿರ್ದರಿಸಲಾಗಿದೆ.ಈ ಮೂರು ಪಾಲಿಕೆಗಳ ವ್ಯಾಪ್ತಿಯಲ್ಲಿಯೇ ಜಿಬಿಎ ಕಾರ್ಯನಿರ್ವಹಿಸಲಿದೆ.

ಸರ್ಕಾರ ಅಂದುಕೊಂಡಂತಾದ್ರೆ 3 ಪಾಲಿಕೆಯೇ ಫೈನಲ್ ಆಗಬಹುದು.ಒಂದು ವೇಳೆ ಒತ್ತಡ-ಒತ್ತಾಯ-ಆಗ್ರಹ ಕೇಳಿಬಂದ್ರೆ  5 ಪಾಲಿಕೆಗಳಾದ್ರೂ ಅಚ್ಚರಿಯಿಲ್ಲ. ಪಾಲಿಕೆ 3 ಆಗಲಿದೆಯೋ..5ಕ್ಕೆ ಫೈನಲ್ ಆಗಲಿದೆಯೋ ಎಲ್ಲವೂ ಪಕ್ಕಾ ಆಗಬೇಕಿದೆ ಅದಕ್ಕೆ  120 ದಿನಗಳ ಕಾಲಾವಕಾಶವಿದೆ.ಇನ್ನು ಹೇಗಿರಲಿದೆ ಗೊತ್ತಾ ಅಡಳಿತ ವ್ಯವಸ್ಥೆ ಎನ್ನುವುದನ್ನು ನೋಡಿದ್ರೆ, ಹೊಸ ವ್ಯವಸ್ಥೆ ಜಾರಿಯಾಗುವವರೆಗೂ ಹಾಲಿ ಅಧಿಕಾರದಲ್ಲಿರುವ ಆಡಳಿತಾಧಿಕಾರಿನೇ ಸುಪ್ರಿಂ ಆಗಿರುತ್ತಾರೆ.ಅಂದ್ರೆ ಆಢಳಿತಾಧಿಕಾರಿ ತುಷಾರ ಗಿರಿನಾಥ್ ಅವರೇ ಜಿಬಿಎ ಮುನ್ನಡೆಸಲಿದ್ದಾರೆ.

ಬಿಬಿಎಂಪಿ ಬಗ್ಗೆ ಸಾಕಷ್ಟು ಅನುಭವಿ ಆಗಿರುವ ತುಷಾರ ಗಿರಿನಾಥ್ ಅವರೇ ಜಿಬಿಎ ಆಡಳಿತಾಧಿಕಾರಿಯಾಗಿ ಮುಂದುವರಿಯಲಿದ್ದಾರೆ.ಹಾಗೆಯೇ ಹಾಲಿ ಮುಖ್ಯ ಆಯುಕ್ತರಾಗಿರುವ ಮಹೇಶ್ವರ್ ರಾವ್ ಅವರೇ ಜಿಬಿಎ ನ ಮುಖ್ಯ ಆಯುಕ್ತರಾಗಿರಲಿದ್ದಾರೆ.ಜಿಬಿಎ ಕಾಯ್ದೆ ಅನ್ವಯವೇ ಹೊಸ ಪಾಲಿಕೆಗಳ ರಚನೆ ನಿರ್ದಾರವಾಗಲಿದೆ .ಅದರ ವ್ಯಾಪ್ತಿಯಲ್ಲಿ ಆಡಳಿತ  ನಿಯಮ, ಉಪ ಬಂದಗಳು ನಿರ್ದಾರವಾಗಲಿದೆ.ಕಾಯ್ದೆ ಜಾರಿಯಾದ 120 ದಿನಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಬೇಕು. ಮುಖ್ಯ ಮಂತ್ರಿ ಅಧ್ಯಕ್ಷತೆ ಯಲ್ಲಿಯೇ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಬೇಕಿದೆ. ತಲಾ 150 ವಾರ್ಡ್‌ಗೆ ಮೀರದಂತೆ ಪಾಲಿಕೆ ರಚನೆಗೆ  ಅವಕಾಶವಿದೆ. ಬಿಬಿಎಂಪಿ  ವಿಸ್ತೀರ್ಣದಲ್ಲಿ  ಭಾರೀ ಬದಲಾವಣೆ ಆಗಲಿರುವುದರಿಂದ ಬೆಂಗಳೂರಿನ ನಾಲ್ಕು ಗಡಿಗಳಲ್ಲಿರುವ ಸಾಕಷ್ಟು ಏರಿಯಾಗಳು ಜಿಬಿಎ ಲಿಮಿಟ್ಸ್ ಗೊಳಪಡಲಿದೆ.ಅಂದಹಾಗೆ 709 ಚದರ ಕಿ.ಮೀನಿಂದ 1 ಸಾವಿರ ಚದರ ಕಿ.ಮೀ ವ್ಯಾಪ್ತಿಗೆ ಜಿಬಿಎ ವಿಸ್ತರಣೆ ಆಗಲಿದೆ.

ALSO READ :  ಸಿ.ಪಿ. ಯೋಗೇಶ್ವರ್ ಹೆಸರು ಫೈನಲ್ ಆದ ಮೇಲೂ, ಡಿಕೆಶಿ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿದ್ದೇಕೆ..?!

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಪ್ರದೇಶ ಅನೇಕ ಪ್ರದೇಶ ಜಿಬಿಎ ವ್ಯಾಪ್ತಿಗೆ.ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದೆ. ಮೊದಲ ಹಂತದಲ್ಲಿ ಜಿಬಿಎಗೆ ಅನೇಕ ಸರ್ಕಾರಿ ಸಂಸ್ಥೆಗಳ ಸೇರ್ಪಡೆ ಮಾಡಿಕೊಳ್ಳಲಾಗುವುದು.  ಎರಡನೇ ಹಂತದಲ್ಲಿ ಪಾಲಿಕೆಗಳ ರಚನೆ-ಕಾರ್ಯಚಟುವಟಿಕೆಗಳು ನಡೆಯಲಿದೆ. ಮೂರನೇ ಹಂತದಲ್ಲಿ ಪ್ರತೀ ಪಾಲಿಕೆಗಳಲ್ಲಿ ವಾರ್ಡ್ ಮಟ್ಟದ ಸಮಿತಿ ರಚನೆಯಾಗಲಿದೆ. ಆದರೆ ಎಲ್ಲವೂ ಸರ್ಕಾರದ ಅಣತಿಯಂತೆ ಆಯ್ಕೆ-ನಿರ್ವಹಣೆ ಆಗಲಿರುವುದು ವಿಶೇಷ.

ಇನ್ನು ಬಿಬಿಎಂಪಿಯಿಂದ ಜಿಬಿಎ ಆಗೋವರೆಗಿನ ಹಂತಗಳು ಸಾಗಿ ಬಂದ ಹಾದಿಯು ರೋಚಕವಾಗಿದೆ. ಬಿಬಿಎಂಪಿ ವಿಭಜನೆಗೆ 2014 ರಲ್ಲೇ ಸಮಿತಿಯನ್ನು ಸರ್ಕಾರ ರಚಿಸಿತ್ತು. 2014ಸೆ.22 ರಂದೇ  ನಿವೃತ್ತ ಮುಖ್ಯ ಕಾರ್ಯದರ್ಶಿ ಪಾಟೀಲ್ ನೇತೃತ್ವದಲ್ಲಿ  ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. 2023 ರಲ್ಲಿ ಕಾಂಗ್ರೆಸ್ ಸರ್ಕಾರದಿಂದ ತಜ್ನರ ಸಮಿತಿ ರಚನೆ ಮಾಡಲಾಗಿತ್ತು. ಆದರೆ ಹಳೆಯ ಸಮಿತಿಯ ಬಗ್ಗೆ ಅಷ್ಟೇನೂ ಸಮಾಧಾನವಿರದಿದ್ದರಿಂದ ಅಂದು ಸಿಎಂ ಆಗಿದ್ಗ ಸಿದ್ದರಾಮಯ್ಯ ಅವರು ಸಮಿತಿಯನ್ನು ಪುನರ್ ರಚಿಸಿದ್ದರು.ಹಾಗೆ ಪುನರ್ ರಚನೆಯಾದ ಹೊಸ ಸಮಿತಿಗೆ ಬಿಬಿಎಂಪಿ ಸುಧಾರಣಾ ಸಮಿತಿ ಎಂದು ನಾಮಕರಣ ಮಾಡಲಾಗಿತ್ತು.  ಬಿಬಿಎಂಪಿ ಸುಧಾರಣಾ ಸಮಿತಿಯಿಂದ ಸರ್ಕಾರಕ್ಕೆ ಕರಡು ಸಲ್ಲಿಕೆ ಮಾಡಲಾಗಿತ್ತು. 2024 ಜು.8 ರಂದು ಸರ್ಕಾರಕ್ಕೆ ಪರಿಷ್ಕರಣಾ ಸಮಿತಿ ಕರಡು ಸಲ್ಲಿಸಿತ್ತು.

ಸಮಿತಿ ಸಲ್ಲಿಸಿದ್ದ ಕರಡಿಗೆ  ‘ಗ್ರೇಟರ್‌ಬೆಂಗಳೂರು ಆಡಳಿತ ಮಸೂದೆ 2024  ಎಂದು ಹೆಸರಿಸಲಾಗಿತ್ತು.ಅದನ್ನು  ಜು.23 ರಂದು  ವಿಧಾನಸಭೆಯಲ್ಲಿ ಮಸೂದೆಯಾಗಿ ಮಂಡಿಸಲಾಯಿತು. ಜುಲೈ 25 ರಂದು  ವಿರೋಧ ಪಕ್ಷಗಳ ಆಗ್ರಹದಂತೆ ಮಸೂದ ಪರಿಶೀಲನೆಗೆ ಜಂಟಿ ಸದನ ಸಮಿತಿ ರಚನೆ ಮಾಡಲಾಗಿತ್ತು. ಆ.22 ರಂದು ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಲಾಗಿತ್ತು. ಅವರ ನೇತೃತ್ವದ ಸಮಿತಿ 2025 ಫೆ.21 ರಂದು ಸ್ಪೀಕರ್‌ ಗೆ  ವರದಿ ಸಲ್ಲಿಕೆ ಮಾಡಿತ್ತು.

ಮಾರ್ಚ್ 5 ರಂದು ಸಮಿತಿ ಶಿಫಾರಸಿನಂತೆ ಜಿಬಿಎ ಮಸೂದೆ ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿತ್ತು.  ಮಾರ್ಚ್10 ರಂದು  ವಿಧಾನಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆಯಿತು.ಮಾರ್ಚ್ 11  ರಂದು ವಿಧಾನ ಪರಿಷತ್‌ನಲ್ಲಿ ಮಸೂದೆಗೆ ಒಪ್ಪಿಗೆ ದೊರೆಯಿತು. ಇನ್ನು ಮಾರ್ಚ್17 ರಂದು  ರಾಜ್ಯಪಾಲರ ಅಂಕಿತಕ್ಕೆ ಮಸೂದೆಯನ್ನು ರಾಜಭವನಕ್ಕೆ ರವಾನೆ ಮಾಡಲಾಯಿತು.ಅಷ್ಟೊತ್ತಿಗಾಗ್ಲೇ ಬಿಜೆಪಿ,ಜೆಡಿಎಸ್ ಪಕ್ಷಗಳು ರಾಜ್ಯಪಾಲರ ಮಟ್ಟದಲ್ಲಿಯೂ ಜಿಬಿಎ ವಿರುದ್ದ ಹೋ್ರಾಟ ಮಾಡಿದ್ವು.ಇದನ್ನೆಲ್ಲಾ ಪರಿಗಣಿಸಿ ಮಾರ್ಚ್ 25 ರಂದು ಸರ್ಕಾರದಿಂದ ಕೆಲವು ಸ್ಪಷ್ಟನೆ ಕೋರಿ ರಾಜ್ಯಪಾಲರಿಂದ ಮಸೂದೆ ವಾಪಸ್ ಕಳುಹಿಸಿದ್ರು. ಅದಕ್ಕೆ ಪೂರಕವಾದ ಸ್ಪಷ್ಟನೆ ಕೊಟ್ಟ ಮೇರೆಗೆ ಏಪ್ರಿಲ್ 24 ರಂದು ಗ್ರೇಟರ್‌ಬೆಂಗಳೂರು ಆಡಳಿತ ಮಸೂದೆಗೆ ರಾಜ್ಯಪಾಲರ ಅಂಕಿತ ದೊರೆಯಿತು. ಈ ಮೂಲಕ ನಾಳೆಯಿಂದ ಅಂದರೆ  ಮೇ 15 ರಿಂದ ಗ್ರೇಟರ್ ಬೆಂಗಳೂರು ಪ್ರಾದಿಕಾರ ಅಸ್ತಿತ್ವಕ್ಕೆ ಬರಲಿದೆ.

ಒಟ್ಟಿನಲ್ಲಿ ಬಿಬಿಎಂಪಿ ಸ್ಥಾನ ತುಂಬಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೆಂಗಳೂರಿಗರ ಹಿತ ಕಾಯಲಿ,ಮೂಲಭೂತ ಹಾಗೂ ನಾಗರಿಕ ಸಮಸ್ಯೆಗಳಿಗೆ ಪರಿಹಾರ ನೀಡಲಿ.ಆಡಳಿತಾತ್ಮಕವಾದ ಗೊಂದಲ ದೂರ ಮಾಡಿ,ಸಮಸ್ಯೆಗಳಿಗೆ ಮುಕ್ತಿ ದೊರಕಿಸಲಿ ಎನ್ನುವುದಷ್ಟೇ ನಮ್ಮ ಆಶಯ.


Political News

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

Scroll to Top