ಮೊದಲ ಭಾಗದ ಅಂತ್ಯದಲ್ಲಿ ಹಮ್ಜಾ ಅಲಿ ಮಜಾರಿ (ರಣವೀರ್ ಸಿಂಗ್) ಪಾತ್ರವು ಕರಾಚಿಯ ಭೂಗತಲೋಕದಲ್ಲಿ ಹೇಗೆ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿತು ಎಂಬುದನ್ನು ತೋರಿಸಲಾಗಿತ್ತು. ಈಗ ‘ಧುರಂಧರ್ 2’ ಚಿತ್ರವು ಅಲ್ಲಿಂದಲೇ ಮುಂದುವರಿಯುತ್ತದೆ. ಟ್ರೇಲರ್ ನೋಡಿದರೆ, ಈ ಬಾರಿ ಕಥೆ ಕೇವಲ ಗ್ಯಾಂಗ್ವಾರ್ಗೆ ಸೀಮಿತವಾಗಿಲ್ಲ, ಬದಲಾಗಿ ಭಯೋತ್ಪಾದನೆಯ ನಿರ್ಮೂಲನೆಯ ಕಡೆಗೆ ಸಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ರಣವೀರ್ ಸಿಂಗ್ ಅವರು ಭಯೋತ್ಪಾದಕ ಜಾಲವನ್ನು ಒಳಗಿನಿಂದಲೇ ಭೇದಿಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುವ ರೌದ್ರಾವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ನಲ್ಲಿನ ಆಕ್ಷನ್ ಸೀಕ್ವೆನ್ಸ್ಗಳು ಹಾಲಿವುಡ್ ಮಟ್ಟದ ಕ್ವಾಲಿಟಿಯನ್ನು ಹೊಂದಿದ್ದು, ಪ್ರೇಕ್ಷಕರ ಎದೆಯಲ್ಲಿ ರೋಚಕತೆ ಹೆಚ್ಚಿಸಿದೆ. ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಅವರಂತಹ ಬಲಿಷ್ಠ ತಾರಾಗಣವು ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಕೇವಲ ಸಾಹಸ ದೃಶ್ಯಗಳಲ್ಲದೆ, ತಮ್ಮ ಕುಟುಂಬಕ್ಕೆ ಆದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಹಮ್ಜಾ ಪಾತ್ರದ ತೀವ್ರತೆಯನ್ನು ಟ್ರೇಲರ್ ಎತ್ತಿ ತೋರಿಸಿದೆ.
ಇದನ್ನೂ ಓದಿ | ಯಶ್ ‘ಟಾಕ್ಸಿಕ್’ ರಿಲೀಸ್ ಡೇಟ್ ಮುಂದಕ್ಕೆ: ಹೊಸ ದಿನಾಂಕ ಘೋಷಿಸಿದ ಚಿತ್ರತಂಡ!
ನಿರ್ದೇಶಕ ಆದಿತ್ಯ ಧರ್ ಅವರು ಮೊದಲ ಭಾಗಕ್ಕಿಂತಲೂ ಈ ಸೀಕ್ವೆಲ್ನಲ್ಲಿ ಕಥೆಯನ್ನು ಇನ್ನಷ್ಟು ಆಳವಾಗಿ ಮತ್ತು ತಾಂತ್ರಿಕವಾಗಿ ಶ್ರೀಮಂತವಾಗಿ ಕಟ್ಟಿಕೊಟ್ಟಿದ್ದಾರೆ. ರಣವೀರ್ ಸಿಂಗ್ ಅವರ ಪಾತ್ರವು ಹೇಗೆ ‘ಶೇರ್-ಎ-ಬಲೂಚ್’ ಆಗಿ ಬೆಳೆಯುತ್ತದೆ ಎಂಬುದೇ ಈ ಚಿತ್ರದ ಪ್ರಮುಖ ಆಕರ್ಷಣೆ. ಮಾರ್ಚ್ 19ರಂದು ಚಿತ್ರ ಬಿಡುಗಡೆಯಾಗಲಿದ್ದು, ಗೂಡಿ ಪಡ್ವಾ ಮತ್ತು ಯುಗಾದಿ ಹಬ್ಬದ ರಜಾ ದಿನಗಳ ಲಾಭವನ್ನು ಪಡೆಯಲು ಚಿತ್ರತಂಡ ಸಜ್ಜಾಗಿದೆ.










