advertise here

Search

ಕರಾವಳಿಗೆ ಬಂತು ‘ಅನಿಲ’ ಸಂಜೀವಿನಿ: ಮಂಗಳೂರು ಬಂದರಿಗೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿ!

lpg ship arrives

ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ (Middle East) ನಡೆಯುತ್ತಿರುವ ಭೀಕರ ಸಂಘರ್ಷದ ನಡುವೆಯೂ ಕರ್ನಾಟಕದ ಇಂಧನ ಭದ್ರತೆಗೆ ಹೊಸ ಬಲ ಸಿಕ್ಕಿದೆ. ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಪೂರೈಕೆ ಅಸ್ತವ್ಯಸ್ತಗೊಂಡಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ನವಮಂಗಳೂರು ಬಂದರಿಗೆ (New Mangalore Port) ಬೃಹತ್ ಪ್ರಮಾಣದ ಎಲ್‌ಪಿಜಿ (LPG) ಹೊತ್ತ ಹಡಗು ಯಶಸ್ವಿಯಾಗಿ ಆಗಮಿಸಿದೆ. ಇದು ರಾಜ್ಯದಲ್ಲಿ ಉಂಟಾಗಿದ್ದ ಅಡುಗೆ ಅನಿಲದ ತೀವ್ರ ಅಭಾವಕ್ಕೆ ಕೊಂಚ ಮಟ್ಟಿನ ಮದ್ದು ನೀಡುವ ನಿರೀಕ್ಷೆಯಿದೆ.

ಮಂಗಳೂರು ತಲುಪಿದ ‘ಅಪೋಲೋ ಓಷನ್’:

ಅಂದಾಜು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತಿರುವ ‘ಅಪೋಲೋ ಓಷನ್’ (Apollo Ocean) ಹೆಸರಿನ ಬೃಹತ್ ಸರಕು ಹಡಗು ನವಮಂಗಳೂರು ಬಂದರಿಗೆ ಲಂಗರು ಹಾಕಿದೆ. ಬಂದರಿಗೆ ಆಗಮಿಸಿದ ಕೂಡಲೇ ಅನಿಲವನ್ನು ಇಳಿಸುವ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ಆರಂಭವಾಗಿವೆ. ಹಾರ್ಮುಜ್ ಜಲಸಂಧಿಯಲ್ಲಿನ ಬಿಕ್ಕಟ್ಟಿನ ಕಾರಣದಿಂದಾಗಿ ಹಡಗುಗಳ ಸಂಚಾರ ಕಠಿಣವಾಗಿದ್ದರೂ, ಪರ್ಯಾಯ ವ್ಯವಸ್ಥೆಗಳ ಮೂಲಕ ಈ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.

ಈ ಅನಿಲ ಪೂರೈಕೆಯ ಹಿಂದೆ ಒಂದು ರೋಚಕವಾದ ರಣತಂತ್ರ ಅಡಗಿದೆ. ಮೂಲತಃ ಕತಾರ್‌ನ ರಾಸ್ ಲಫಾನ್‌ನಿಂದ ಸುಮಾರು 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಎಂಬ ಹಡಗು ಮಾರ್ಚ್ 16ರಂದು ಗುಜರಾತ್‌ನ ಮುದ್ರಾ ಬಂದರಿಗೆ ಬಂದಿಳಿದಿತ್ತು. ಈ ಹಡಗು ಮಂಗಳೂರಿಗೆ ಬರಬೇಕಿತ್ತಾದರೂ, ಹಾರ್ಮುಜ್ ಜಲಸಂಧಿಯ ಭದ್ರತಾ ದೃಷ್ಟಿಯಿಂದ ಶಿವಾಲಿಕ್ ಹಡಗಿನಲ್ಲಿದ್ದ ಎಲ್ಲಾ ಸರಕನ್ನು ಮುದ್ರಾ ಬಂದರಿನಲ್ಲೇ ಇಳಿಸಲಾಯಿತು. ಅಲ್ಲಿಂದ ಅಲ್ಪ ಪ್ರಮಾಣದ ಸರಕನ್ನು ಅಂದರೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಸಣ್ಣ ಹಡಗಾದ ‘ಅಪೋಲೋ ಓಷನ್’ಗೆ ತುಂಬಿಸಿ, ಈಗ ಮಂಗಳೂರಿಗೆ ರವಾನಿಸಲಾಗಿದೆ.

ALSO READ :  EXCLUSIVE..ಬೆಂಗಳೂರಿಗರೇ ಹುಷಾರ್..! “ಅಸಲಿ”ಹೋಲುವ “ನಕಲಿ”ದಾಖಲೆ ಸೃಷ್ಟಿಸುವ ಖತರ್ನಾಕ್ "ವಂಚಕ"ರಿದ್ದಾರೆ..

ರಾಜ್ಯದ ಹೋಟೆಲ್ ಮತ್ತು ಮನೆಗಳಿಗೆ ರಿಲೀಫ್:

ಇತ್ತೀಚೆಗಷ್ಟೇ ಎಲ್‌ಪಿಜಿ ಕೊರತೆಯಿಂದಾಗಿ ಬೆಂಗಳೂರಿನ ಹೋಟೆಲ್ ಉದ್ಯಮವು ಪ್ರತಿ ವಾರ 50 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿದೆ ಎಂಬ ವರದಿಗಳು ಬಂದಿದ್ದವು. ಇಂಡಕ್ಷನ್ ಸ್ಟೌವ್ ಮತ್ತು ಕಟ್ಟಿಗೆ ಒಲೆಗಳ ಮೇಲೆ ಅಡುಗೆ ಮಾಡುವಂತಹ ದುಸ್ಥಿತಿ ನಿರ್ಮಾಣವಾಗಿತ್ತು. ಈಗ ಬಂದಿರುವ ಈ 16 ಸಾವಿರ ಮೆಟ್ರಿಕ್ ಟನ್ ಅನಿಲವು ಗೃಹ ಬಳಕೆದಾರರಿಗೆ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆಗೆ ಹೆಚ್ಚಿನ ಶಕ್ತಿ ತುಂಬಲಿದೆ.

ಇದನ್ನೂ ಓದಿ | ಸಾರಿಗೆ ನೌಕರರಿಗೆ ‘ದ್ರೋಹ’ದ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಆನಂದ್!

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಭರವಸೆ ನೀಡಿದಂತೆ, ಯುದ್ಧದ ನಡುವೆಯೂ ಭಾರತದ ಇಂಧನ ದಾಸ್ತಾನು ಕುಂಠಿತವಾಗದಂತೆ ಸರ್ಕಾರ ಎಚ್ಚರಿಕೆ ವಹಿಸುತ್ತಿದೆ. ರಷ್ಯಾದಿಂದ ತೈಲ ಖರೀದಿ ಹೆಚ್ಚಿಸುವುದರ ಜೊತೆಗೆ, ಪಶ್ಚಿಮ ಏಷ್ಯಾದಿಂದ ಪೂರೈಕೆಯಾಗುವ ಅನಿಲವನ್ನು ಸುರಕ್ಷಿತ ಮಾರ್ಗಗಳ ಮೂಲಕ ದೇಶದ ವಿವಿಧ ಬಂದರುಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಮಂಗಳೂರು ಬಂದರಿಗೆ ಬಂದಿರುವ ಈ ಹಡಗು ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ಇಡೀ ಕರ್ನಾಟಕದ ಇಂಧನ ಮಾರುಕಟ್ಟೆಗೆ ಚೈತನ್ಯ ನೀಡಲಿದೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top