advertise here

Search

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?



ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದಲ್ಲಿರುವ “ಕೈ“ಮುಖಂಡ ರೆಹಮಾನ್ ಖಾನ್ ಮಾಲೀಕತ್ವದ ಪ್ರತಿಷ್ಟಿತ ಡೆಲ್ಲಿ ಪಬ್ಲಿಕ್ ಸ್ಕೂಲ್ ಅಕ್ರಮನಾ..?!


ಬೆಂಗಳೂರು:ಈ ನೆಲದಲ್ಲಿನ ಕಾನೂನು ಎಲ್ಲರಿಗೂ ಒಂದೇ ರೀತಿಯಾಗಿ ಅಪ್ಲೈ ಆಗಬೇಕು ಅಲ್ವಾ…? ಪ್ರತಿಷ್ಟಿತರು,ಬಲಾಢ್ಯರಿಗೊಂದು ಜನಸಾಮಾನ್ಯರಿಗೇ ಇನ್ನೊಂದು ಎನ್ನುವಂತ ಗೊಂದಲಕಾರಿ ವ್ಯವಸ್ಥೆ ಏನಾದ್ರೂ ಜಾರಿಯಲ್ಲಿದೆಯೇ..? ಇಂತದ್ದೊಂದು ಅನುಮಾನ ಸಹಜವಾಗಿ ಕಾಡೊಕ್ಕೆ ಕಾರಣ, ಎಲ್ಲಾ ನಿಯಮಗಳ ಮಾಹಿತಿ-ಅರಿವು ಇದ್ದ ಹೊರತಾಗ್ಯೂ ಕಾಂಗ್ರೆಸ್‌ ನ ಪ್ರಭಾವಿ ಮುಖಂಡನ ಮನೆತನ ಶೈಕ್ಷಣಿಕ ಅಕ್ರಮ ನಡೆಸಿರೋದು… ಅಂದ್ಹಾಗೆ ಇಂತದ್ದೊಂದು ಆಪಾದನೆ ಕೇಳಿಬಂದಿರೋದು ಕಾಂಗ್ರೆಸ್‌ ನ ಪ್ರಭಾವಿ ಮುಸ್ಲಿಂ ನಾಯಕ ರಾಜ್ಯಸಭೆ ಮಾಜಿ ಎಂಪಿ ರೆಹಮಾನ್‌ ಖಾನ್‌ ಕುಟುಂಬದ ವಿರುದ್ಧ.

ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಬೆಂಗಳೂರಿನ ಹೊರವಲಯದಲ್ಲಿ ನಿರ್ಮಿಸಿರುವ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ಇದೀಗ ವಿವಾದದ ಕೇಂದ್ರವಾಗಿದೆ.ಶಾಲೆಗೆ ನೀಡಿರುವ ಅನುಮತಿಯನ್ನೇ ರದ್ದು ಮಾಡಿ, ರೆಹಮಾನ್‌ ಕುಟುಂಬದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶೈಕ್ಷಣಿಕ ಕಾಳಜಿಯಲ್ಲಿ ಕೆಲಸ ಮಾಡುತ್ತಿರುವ ಪಾಠಶಾಲೆ ಎನ್ನುವ ಶೈಕ್ಷಣಿಕ ಸಂಸ್ಥೆ ಲೋಕಾಯುಕ್ತಕ್ಕೆ ಸಾಕ್ಷ್ಯ ಸಮೇತ ದೂರು ಸಲ್ಲಿಸಿದೆ.(ಶೈಕ್ಷಣಿಕ ಅಕ್ರಮ ನಡೆಸಿರುವುದಕ್ಕೆ ಪೂರಕ ದಾಖಲೆಗಳು ಕನ್ನಡ ಫ್ಲ್ಯಾಶ್‌ ನ್ಯೂಸ್‌ಗೆ ಲಭ್ಯವಾಗಿದೆ).

ಹೌದು.. ರಾಜ್ಯಸಭೆ ಮಾಜಿ ಸದಸ್ಯ, ನೆಹರು ಕುಟುಂಬದ ಆಪ್ತ..ಮುಸ್ಲಿಂ ಮುಖಂಡರಾದ ರೆಹಮಾನ್ ಖಾನ್‌ ಕುಟುಂಬದ ವಿರುದ್ಧ ಗಂಭೀರ ಆಪಾದನೆ ಕೇಳಿಬಂದಿದೆ.ಅಂದ್ಹಾಗೆ ರೆಹಮಾನ್‌ ಖಾನ್ ಕೇಂದ್ರದ ಕಾಂಗ್ರೆಸ್ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.ಇದೇ ಕಾರಣದಿಂದ ರಾಜ್ಯಸಭೆಗೆ ಎಂಪಿಯಾಗಿಯೂ ನೇಮಕಗೊಂಡಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ಉತ್ತಮ ಕೆಲಸ ಮಾಡಿದರೋ ಗೊತ್ತಿಲ್ಲ, ತಮ್ಮ ರಾಜಕೀಯ ಪ್ತಭಾವ ಬಳಸಿಕೊಂಡು ಸಾಕಷ್ಟು ಅಕ್ರಮ ನಡೆಸಿದರೆನ್ನುವ ಮಾತು ಬೇರೆಲ್ಲೂ ಬೇಡ ಮುಸ್ಲಿಂ ಸಮುದಾಯದಲ್ಲೇ ಕೇಳಿಬರುತ್ತಿದೆ.ಹಾಗಾಗಿನೇ ರೆಹಮಾನ್‌ ಖಾನ್‌ ಹೆಸರು ಕೇಳಿದಾಕ್ಷಣ ಮುಸ್ಲಿಂ ಸಮುದಾಯ ಅಮಾನತ್‌ ಬ್ಯಾಂಕ್‌ ನ ವಿಚಾರದ ಹಿನ್ನಲೆಯಲ್ಲಿ ಕೆಂಡಮಂಡಲವಾಗುತ್ತದೆ.ಅವರ ಕುಟುಂಬಕ್ಕೆ ಹಿಡಿಶಾಪ ಹಾಕುತ್ತದೆ ಎನ್ನುವುದು ಇಡೀ ಸಮಾಜಕ್ಕೆ ಗೊತ್ತಿದೆ.

ಇಂಥಾ ರೆಹಮಾನ್ ಖಾನ್ ಅವರು ಕೆಕೆ ಎಜುಕೇಷನಲ್ ಟ್ರಸ್ಟ್ ಎನ್ನುವ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕವೇ ಬೆಂಗಳೂರಿನ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾದ ಡೆಲ್ಲಿ ಪಬ್ಲಿಕ್ ಸ್ಕೂಲ್ ನಡೆಸುತ್ತಿದ್ದಾರೆ.ಸಧ್ಯಕ್ಕೆ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ಅಂದ್ಹಾಗೆ ಮನ್ಸೂರ್ ಅಲಿ ಖಾನ್ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಿ ಕಡಿಮೆ ಮತಗಳ ಅಂತರದಿಂದ ಸೋತಿದ್ರು. ಇನ್ನೇನು ಗೆದ್ದೇ ಬಿಟ್ಟರು ಎನ್ನುವಂತಿದ್ದ ವಾತಾವರಣ ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಮಾಯವಾಗಿಬಿಟ್ಟಿದ್ದು ಈಗ ಇತಿಹಾಸ ಬಿಡಿ. ಆದರೆ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ಮೂಲಕ ಮನ್ಸೂರ್‌ ಅಲಿಖಾನ್‌ ಶೈಕ್ಷಣಿಕವಾಗಿ ಯಶಸ್ವಿ ಪುರುಷ ಎನಿಸಿಕೊಂಡಿದ್ದು ಮಾತ್ರ ಸತ್ಯ.ಆದ್ರೆ ಶೈಕ್ಷಣಿಕವಾಗಿ ಅವರು ಪಡೆದ ಯಶಸ್ಸು, ರಾಜಕೀಯವಾಗಿ ಪಡೆದುಕೊಳ್ಳಲಿಕ್ಕಾಗಲಿಲ್ಲ ಎನ್ನುವ ಮಾತಿದೆ.ಆದರೂ ಸೋತಾಕ್ಷಣ ಅವರನ್ನು ಕೈಬಿಡದ ಕಾಂಗ್ರೆಸ್ ಅನ್ಯರಾಜ್ಯವೊಂದರ ಉಸ್ತುವಾರಿಯಾಗಿ ನಿಯೋಜಿಸಿ ಅವರ ಸೇವೆ ಪಡೆದುಕೊಳ್ಳುತ್ತಿದೆ.

ಇದೆಲ್ಲಾ ಸರಿ ಬಿಡಿ..ಆದರೆ ಕೆಕೆ ಎಜುಕೇಷನ್ ಟ್ರಸ್ಟ್ ನ ಅಡಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಬೆಟ್ಟದಾಸಪುರದಲ್ಲಿ ನಿರ್ಮಿಸಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ವಿಚಾರದಲ್ಲಿ ಮನ್ಸೂರ್ ಅಲಿ ಖಾನ್ ಅವರ ಕುಟುಂಬ ಶೈಕ್ಷಣಿಕ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಿಲುಕಿದೆ.ಆನೇಕಲ್ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿ ಲಿಮಿಟ್ಸ್ ನಲ್ಲಿ ಬೆಟ್ಟದಾಸನಪುರ ಎನ್ನುವ ಗ್ರಾಮವಿದೆ.ಇದೇ ಗ್ರಾಮದಲ್ಲಿ ಮನ್ಸೂರ್ ಅಲಿಖಾನ್ ಅವರಿಗೆ ಸೇರಿದ ಡೆಲ್ಲಿ ಪಬ್ಲಿಕ್ ಸ್ಕೂಲ್ ಎಕರೆಗಟ್ಟಲೇ ಪ್ರದೇಶದಲ್ಲಿ ಕೆಲಸ ಮಾಡುತ್ತಿದೆ.ಮೇಲ್ಕಂಡ ಶಾಲೆ ಯಾವುದೇ ನಿಯಮ ಉಲ್ಲಂಘಿಸದೆ ಕಾರ್ಯಾರಂಭ ಮಾಡಿದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ..ಆದರೆ ರೆಹಮಾನ್ ಖಾನ್ ಕುಟುಂಬ ತಮಗಿದ್ದ ಪೊಲಿಟಿಕಲ್ ಪವರ್ ನ್ನು ಮಿಸ್ಯೂಸ್ ಮಾಡಿಕೊಂಡು ಭೂ ಪರಿವರ್ತನೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳಲ್ಲಿ ಸರ್ಕಾರಿ ನಿಯಮಗಳನ್ನೇ ಉಲ್ಲಂಘಿಸಿಬಿಟ್ಟಿದೆಯಂತೆ.

ALSO READ :  BBMP ಡಿಸಿಎಫ್‌ ವಿರುದ್ಧ 15 % ಕಮಿಷನ್‌ ಆರೋಪ-ಡಿಸಿಎಂಗೆ ದೂರು.

ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಬೆಟ್ಟದಾಸಪುರದಲ್ಲಿರುವ ಡೆಲ್ಲಿ ಪಬ್ಲಿಕ್ ಶಾಲೆ ಪರವಾನಗಿ,ಭೂ ಪರಿವರ್ತನೆಯಿಲ್ಲದೆ ಕಾರ್ಯಾರಂಭ ಮಾಡಿದೆ ಎನ್ನುವುದು ದಾಖಲೆಗಳಲ್ಲೇ ದೃಢಪಟ್ಟಿದೆ. ಬೆಟ್ಟದಾಸಪುರ ಸರ್ವೆ ನಂಬರ್ 33,ಸರ್ವೆ ನಂಬರ್ 35ರಲ್ಲಿ ಎಕ್ರೆ ಗಟ್ಟಲೇ ಭೂಮಿಯಲ್ಲಿ ಶಾಲೆ ನಿರ್ಮಾಣ ಮಾಡಿದೆ.ಈ ಅಕ್ರಮಕ್ಕೆ ಸಬ್ ರಿಜಿಸ್ಟ್ರಾರ್, ವಿಶೇಷ ತಹಸೀಲ್ದಾರ್ ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದೆ.ಇದಕ್ಕಾಗಿ ಅಪಾರ ಪ್ರಮಾಣದ ಕಿಕ್ ಬ್ಯಾಕ್ ಸಂದಾಯವಾಗಿರುವ ಆಪಾದನೆ ಕೇಳಿಬಂದಿದೆ.ಸಹಜವಾಗಿ ಸೇಲ್ ಅಗ್ರಿಮೆಂಟ್ ಆದ ಮೇಲೆ ಸೇಲ್ ಡೀಡ್ ಮಾಡುವುದು ಸಂಪ್ರದಾಯ ಹಾಗೂ ನಿಯಮ.ಆದರೆ ಮೇಲ್ಕಂಡ ಪ್ರಕರಣದಲ್ಲಿ ಸೇಲ್ ಅಗ್ರಿಮೆಂಟ್ ಮೇಲೆಯೇ ರೆಕ್ಟಿಫಿಕೇಷ್ ಡೀಡ್ ಮಾಡಿಕೊಂಡು ಶಾಲೆ ನಿರ್ಮಾಣ ಮಾಡಲಾಗಿದೆ ಎನ್ನುವುದು ದೂರಿನಲ್ಲಿರುವ ಸಾರಾಂಶ.

ಮಜರ್ ಪಾಷಾ ಎನ್ನುವವರಿಂದ ಖರೀದಿಸಿದ್ದಾಗಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎನ್ನಲಾಗಿದೆ. ಶೈಕ್ಷಣಿಕ ಉದ್ದೇಶಕ್ಕೆ ಭೂಮಿಯನ್ನೇ ಪರಿವರ್ತನೆ ಮಾಡಿಕೊಂಡಿಲ್ಲವಂತೆ. ಈ ಮೂಲಕ ಕೋಟ್ಯಾಂತರ ಸ್ಟ್ಯಾಂಪ್ ಡ್ಯೂಟಿ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡಿರುವ ಆಪಾದನೆಯಿದೆ.ಜತೆಗೆ ಶಾಲೆ ನಿರ್ಮಾಣಕ್ಕೆ ಬೇಕಾದ ಯಾವುದೇ ನಿಯಮ ಪಾಲಿಸಿಲ್ಲವಂತೆ.ಹಾಗೆಯೇ ಬೃಹತ್ ಕಟ್ಟಡಕ್ಕೆ ಸ್ಥಳೀಯ ಪ್ರಾಧಿಕಾರ ಗಳಿಂದ ಪರ್ಮಿಷನ್ ಪಡೆದಿಲ್ಲವಂತೆ.ಸಂಬಂಧಪಟ್ಟ ಅನೇಕ ಇಲಾಖೆಗಳಿಂದ ಎನ್ ಓಸಿ ಪಡೆದಿರೋದೆ ಡೌಟ್ ಎನ್ನಲಾಗ್ತಿದೆ.

ಇಷ್ಟು ರಾಜಾರೋಷವಾಗಿ ಡೆಲ್ಲಿ ಪಬ್ಲಿಕ್ ಶಾಲೆ ನಡೆಸುತ್ತಿರುವುದನ್ನು ಗಮನಿಸಿದಾಗ ಎಂಥವರಿಗೂ ಶೈಕ್ಷಣಿಕ ಅಕ್ರಮಕ್ಕೆ ಮಾಜಿ ಸಂಸದರು ಅಧಿಕಾರ ದುರ್ಬಳಕೆ ಮಾಡಿಕೊಂಡ್ರಾ ಎನ್ನುವ ಶಂಕೆ ವ್ಯಕ್ತವಾಗುತ್ತದೆ. ಅನೇಕಲ್ ಸಬ್ ರಿಜಿಸ್ಟ್ರಾರ್,ವಿಶೇಷ ತಹಸೀಲ್ದಾರ್ ಅವರ ಮೇಲೆ ಪ್ರಭಾವ ಬೀರಿದ್ರಾ..? ಸಮರ್ಪಕ ದಾಖಲೆ, ಸರಿಯಾದ ನಿಯಮ ಪಾಲಿಸದೆ ಭೂಮಿ ಪಡೆದುಕೊಂಡ್ರಾ..? ಎಕರೆಗಟ್ಟಲೇ ಸ್ಥಳದಲ್ಲಿ ಬೃಹತ್ತಾದ ಡೆಲ್ಲಿ ಪಬ್ಲಿಕ್ ಸ್ಕೂಲ್ ನಿರ್ಮಿಸಿದ್ರಾ.? ಎನ್ನುವ ಶಂಕೆ ವ್ಯಕ್ತವಾಗುತ್ತದೆ ಎನ್ನುತ್ತಾರೆ ಪಾಠಶಾಲೆ ಸಂಚಾಲಕ ಗಂಗಾಧರ್.

ಈ ಬಗ್ಗೆ ಸ್ಪಷ್ಟನೆ ಕೇಳೊಕ್ಕೆ ಮನ್ಸೂರ್ ಅಲಿಖಾನ್ ಅವರನ್ನು ಸಂಪರ್ಕಿಸಿದ್ರೆ ಮಾಲೀಕರಿಂದ ಹಾರಿಕೆ ಉತ್ತರ ದೊರೆತಿದೆ. ಲೀಗಲ್ ಸೆಲ್ ಟೀಮ್ ನಿಂದ ನೀಡಿರುವ ಮಾಹಿತಿ ಅಪೂರ್ಣವಾಗಿದೆ. ಆದರೆ ಮನ್ಸೂರ್ ಅಲಿ ಖಾನ್ ಅವರು ಮಾತ್ರ ಎಲ್ಲವು ಸರಿಯಾಗಿದ ಎಂದು ವಾದಿಸುತ್ತಲೇ ಇದ್ದಾರೆ.ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ನ ಜಾಗದ ವಿಚಾರದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರೊದಕ್ಕೆ ಪಾಠಶಾಲೆ ಅವರ ಬಳಿ ದಂಡಿ ಸಾಕ್ಷ್ಯಗಳಿವೆಯಂತೆ ಎಂದು ಹೇಳಿದ್ರೂ ಅವರ ಕಾನೂನು ಸಲಹೆಗಾರರು ಕಳುಹಿಸಿರುವ ದಾಖಲೆಗಳು ಸತ್ಯಕ್ಕೆ ದೂರವಾದ ಸಂಗತಿ ಹೊಂದಿದೆ ಎನ್ನುವುದು ದೂರುದಾರರ ಆಪಾದನೆ.

ಹಾಗಾಗಿನೇ. ಈ ಪಾಠಶಾಲೆ ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಗೆ ನೀಡಿರುವ ಭೂ ಪರಿವರ್ತನೆ ರದ್ದು ಮಾಡುವಂತೆ ಆಗ್ರಹ ಮಾಡಲಾಗಿದೆ. ಸ್ಟ್ಯಾಂಪ್ ಡ್ಯೂಟಿ ಪಾವತಿಸದೆ ಸರ್ಕಾರಕ್ಕೆ ವಂಚಿಸಿರುವುದರ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಗಿದೆ. ಶೈಕ್ಷಣಿಕ ನಿಯಮ ಪಾಲಿಸದ ಟ್ರಸ್ಟ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಲೋಕಾಯಕ್ತದಿಂದ ಏನೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Political News

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

Scroll to Top