ನಿರ್ಣಾಯಕ ಹಂತದ ಮಾತುಕತೆ ಫಲಿಸಿದ್ರೆ ರಿಪಬ್ಲಿಕ್ ಗೆ ರಾಷ್ಟ್ರವಾದಿ” ಪತ್ರಕರ್ತ,ಶೀಘ್ರ ಸೇರ್ಪಡೆ-ಘಟಾನುಘಟಿಗಳಿಗೆಲ್ಲಾ ಕಾದಿದೆಯಂತೆ ಕೊಕ್ನ ಶಾಕ್..!

ಬೆಂಗಳೂರು: ನೇಷನ್ ವಾಂಟ್ಸ್ ಟು ನೌ(nation wants to know..!?)…ಎನ್ನುವ ಕಮ್ಯಾಂಡಿಂಗ್ ದ್ವನಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮನೆಮಾತಾದ ಅರ್ನಾಬ್ ಗೋಸ್ವಾಮಿಯ(arnab goswami) ಕರ್ನಾಟಕದಲ್ಲಿ ರಿಪಬ್ಲಿಕ್ ಕನ್ನಡ(republic kannada news channel) ಕಟ್ಟಿ ಬೆಳೆಸುವ ಕನಸು ಈಡೇರಿದಂತೆ ಕಾಣ್ತಿಲ್ಲ.ಜಯಪ್ರಕಾಶ್ ಶೆಟ್ಟಿ (jaya prakash shetty)ನೇತೃತ್ವದ ತಂಡದ ಫರ್ಫಾಮೆನ್ಸ್ ನಿರೀಕ್ಷೆ ಮಟ್ಟವನ್ನೂ ತಲುಪುತ್ತಿಲ್ಲ.ಹಾಗಾಗಿಯೇ ತಂಡಕ್ಕೆ ಸಮರ್ಥ ಮುಂದಾಳುವನ್ನು ತಂದು ಕೂರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಅದರ ಭಾಗವಾಗಿಯೇ ಕನ್ನಡ ಸುದ್ದಿ ವಾಹಿನಿಗಳ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯ ಹಾಗೆಯೇ ಅರ್ನಾಬ್ “ವಿಚಾರಧಾರೆ..!” ಗಳನ್ನೇ ಒಳಗೊಂಡಿರುವ ರಾಷ್ಟ್ರವಾದಿ ಪತ್ರಕರ್ತ( nationist journalsit)ನನ್ನು ತಂದು ಕೂರಿಸುವ ಗಂಭೀರ ಪ್ರಯತ್ನ ಮಾಡುತ್ತಿರುವ ಸುದ್ದಿ ವೈರಲ್ ಆಗುತ್ತಿದೆ. ಅರ್ನಾಬ್ ಜತೆಗಿನ ಮಾತುಕತೆ ನಿರ್ಣಾಯಕ ಹಂತ ತಲುಪಿದ್ದು ಎಲ್ಲಾ ನಿರೀಕ್ಷೆಯಂತಾದ್ರೆ ಇನ್ನೊಂದಷ್ಟು ದಿನಗಳಲ್ಲಿಯೇ ಆ ರಾಷ್ಟ್ರವಾದಿ ಪತ್ರಕರ್ತ ರಿಪಬ್ಲಿಕ್ ಕನ್ನಡ ಬಳಗಕ್ಕೆ ಸೇರ್ಪಡೆಯಾಗಲಿದ್ದಾರೆ.

ರಿಪಬ್ಲಿಕ್ ಕನ್ನಡದದಲ್ಲಿ ಆಗುತ್ತಿರುವ ಪಲ್ಲಟ-ಅಲ್ಲೋಲಕಲ್ಲೋಲದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ ಕನ್ನಡ ಫ್ಲ್ಯಾಶ್ ನ್ಯೂಸ್ ವರದಿ ಮಾಡಿತ್ತು.ಅದರ ಮುಂದುವರೆದ ಭಾಗವಾಗಿಯೇ ಮತ್ತೊಂದು ಸ್ಪೋಟಕ ಸುದ್ದಿಯನ್ನು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಕಲೆ ಹಾಕಿ ಬಿತ್ತರಿಸುತ್ತಿದೆ. ರಿಪಬ್ಲಿಕ್ ಕನ್ನಡ ತಂಡದ ಪ್ರದರ್ಶನದಿಂದ ಸ್ವಲ್ಪವೂ ತೃಪ್ತಿ ಹೊಂದದ ಅರ್ನಾಬ್ ಗೋಸ್ವಾಮಿ ತಂಡವನ್ನು ಉದ್ದೇಶಿಸಿ ಇತ್ತೀಚೆಗೆ ಹೇಳಿದ ಮಾತುಗಳನ್ನು ಅವಲೋಕಿಸಿದ್ರೆ ರಿಪಬ್ಲಿಕ್ ಕನ್ನಡದಲ್ಲಿ ಅಮೂಲಾಗ್ರ ಬದಲಾವಣೆ ಗಳಾಗುವುದಂತೂ ಸತ್ಯ.ಸುದ್ದಿವಾಹಿನಿ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ವರೆನಿಸಿಕೊಂಡವರಿಗೆ “ಗೇಟ್ ಪಾಸ್” ಸಿಗುವ ಸಾಧ್ಯತೆ ದಟ್ಟವಾದಂತೆ ಕಾಣುತ್ತಿದೆ.ಆರಂಭದಲ್ಲಿ ಅರ್ಹತೆ-ಅನುಭವ-ಸಾಮರ್ಥ್ಯ-ವಿಷಯ ಪರಿಣಿತಿಯಂಥ ನೈಜ ಮಾನದಂಡ ಅನುಸರಿಸಿದರೆ ಲಕ್ಷ ಲಕ್ಷ ಸಂಬಳ ಕೊಟ್ಟು ನೇಮಕ ಮಾಡಿಕೊಂಡ ಸಾಕಷ್ಟು ಜೊಳ್ಳುಗಳನ್ನು ಕೇರಿ ಬಿಸಾಕುವ ಸಾಧ್ಯತೆಗಳಿವೆ ಎನ್ನುವುದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ಇದೆಲ್ಲಾ ಒತ್ತಟ್ಟಿಗಿರಲಿ, ರಿಪಬ್ಲಿಕ್ ಕನ್ನಡ ಎನ್ನುವ ಕನಸಿನ ಸಾಮ್ರಾಜ್ಯವನ್ನು ಕರ್ನಾಟಕದಲ್ಲಿ ಕಟ್ಟುವಾಗಲೇ ಅರ್ನಾಬ್ ಗೋಸ್ವಾಮಿಗೆ ನಾವು ಹೇಳಿದ ಆ ರಾಷ್ಟ್ರವಾದಿ ಪತ್ರಕರ್ತನನ್ನೇ ಮುಖ್ಯಸ್ಥನಾಗಿ ತಂದು ಕೂರಿಸುವ ಇರಾದೆಯಿತ್ತಂತೆ.ಏಕಂದ್ರೆ ಕೆಲವೊಂದು ವಿಚಾರಗಳಲ್ಲಿ ಒಪ್ಪಿಕೊಳ್ಳಲಾಗ ದಿದ್ರೂ ತನ್ನನ್ನು ರಾಷ್ಟ್ರವಾದಿ ಎಂದು ಬಿಂಬಿಸಿಕೊಳ್ಳುತ್ತಲೇ ಇರುವ ಆ ಹಿರಿಯ ಪತ್ರಕರ್ತನಿಗೆ ಆ ಸಾಮರ್ಥ್ಯ ವಿರುವುದನ್ನು ಒಪ್ಪಿಕೊಳ್ಳಲೇಬೇಕು. ಏಕೆಂದರೆ ಆತ ನಡೆಸಿಕೊಡುವ ಕಾರ್ಯಕ್ರಮ-ಅದನ್ನು ನಿರೂಪಿಸುವ ಶೈಲಿ ಎಂಥವರನ್ನು ಆಕರ್ಷಿಸುತ್ತದೆ.ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಆ ರಾಷ್ಟ್ರವಾದಿ ಪತ್ರಕರ್ತನಿಗಿರುವ ಆ ತಾಕತ್ತು-ಸಾಮರ್ಥ್ಯ ಶಕ್ತಿಯನ್ನು ಒಪ್ಪುತ್ತದೆ( ಏಕೆಂದ್ರೆ ಗುಣಕ್ಕೆ ಮತ್ಸರವೇಕೆ.? ಅಲ್ವಾ)

ಆ ರಾಷ್ಟ್ರವಾದಿ ಪತ್ರಕರ್ತ ಯಾರು ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕಾಡುತ್ತಿದೆ.ಒಂದಷ್ಟು ಪ್ರಕ್ರಿಯೆಗಳು ಇನ್ನೂ ಬಾಕಿ ಇರುವುದರಿಂದ ಆ ಹೆಸರನ್ನು ರಿವೀಲ್ ಮಾಡುವುದು ಸರಿಯಲ್ಲ.ಹಾಗಾಗಿ ಅದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಗೌಪ್ಯವಾಗಿಡಲು ಬಯಸುತ್ತದೆ.ಏಕೆಂದರೆ ಮಾದ್ಯಮಗಳಲ್ಲಿ ಈ ಕ್ಷಣದ ಬೆಳವಣಿಗೆ ಮರುಕ್ಷಣದಲ್ಲಿ ಬೇರೆಯಾಗುವ ಸಾಧ್ಯತೆಗಳಿವೆ.ಆದರೆ ಒಂದಂತೂ ಸತ್ಯ. ಆ ಹಿರಿಯ ಪತ್ರಕರ್ತ “ಆಂಜನೇಯ”ನ ಆಣೆಗೂ ತನ್ನನ್ನು ಸದಾ ರಾಷ್ಟ್ರವಾದಿ ಎಂತಲೇ ಬಿಂಬಿಸಿಕೊ ಳ್ಳುತ್ತಲೇ ಬಂದವರು.ಅದು ತಪ್ಪಲ್ಲವಾದರೂ ಅನೇಕ ಬಾರಿ ಪತ್ರಕರ್ತ ಎನ್ನುವವನು ಸದಾ ರಾಷ್ಟ್ರವಾದಿಯಾಗಿರುತ್ತಾನೆ.. ಆಗಿರಲೇಬೇಕಾಗುತ್ತದೆ.ಅಂತದ್ದರಲ್ಲಿ ತನ್ನನ್ನು ರಾಷ್ಟ್ರವಾದಿ ಎಂದು ಕರೆದುಕೊಳ್ಳುವ ಅಗತ್ಯವಿದೆಯೇ..? ಹಾಗಾದ್ರೆ ಆತ ಮಾತ್ರ ರಾಷ್ಟ್ರವಾದಿನಾ..? ಉಳಿದವರೆಲ್ಲಾ ರಾಷ್ಟ್ರಭ್ರಷ್ಟರಾ..? ಎಂದು ಪ್ರಶ್ನಿಸಿದ ಸಂದರ್ಭಗಳೂ ಇವೆ.
ಕನ್ನಡ ನ್ಯೂಸ್ ಚಾನೆಲ್ ಗಳ ಟಿಆರ್ ಪಿ ಪೈಕಿ ಮೊದಲ ಮೂರು ಸ್ಥಾನಗಳ ಪೈಕಿ ಒಂದನ್ನು ಪಡೆದಿರುವ ಚಾನೆಲ್ ನಲ್ಲಿ ಕೆಲಸ ಮಾಡುತ್ತಿರುವ ಆ ರಾಷ್ಟ್ರವಾದಿ ಪತ್ರಕರ್ತ ನಡೆಸಿಕೊಡುವ ಕಾರ್ಯಕ್ರಮ-ಚರ್ಚೆ-ವಿಶ್ಲೇಷಣೆಗಳು ಅನೇಕ ವರ್ಷಗಳಿಂದ ಕರ್ನಾಟಕದ ಮನೆ ಮಾತಾಗಿದೆ.ಆತನ ವೈಯುಕ್ತಿಕ ವಿಚಾರಗಳು ಏನೇ ಇರಲಿ,ಟೀಕೆ ಟಿಪ್ಪಣಿಗಳು ಏನೇ ಇರಲಿ, ಒಬ್ಬ ಅದ್ಬುತ ಹಾಗೂ ಎಲ್ಲರಿಗೂ ಇಷ್ಟವಾಗುವ ಅಗ್ರಗಣ್ಯ ಪತ್ರಕರ್ತ ಎಂದ್ಹೇಳು ವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಪಬ್ಲಿಕ್ ಟಿವಿ ರಂಗಣ್ಣ ಅವರ ಕಾರ್ಯಕ್ರಮಗಳನ್ನು ಬಿಟ್ಟರೆ ಕರ್ನಾಟಕದ ಮನೆ ಮಂದಿ ಹೆಚ್ಚು ಮೆಚ್ಚು ವುದೇ ಈ ರಾಷ್ಟ್ರವಾದಿ ಪತ್ರಕರ್ತನದು ಎನ್ನುವುದು ಕೂಡ ಅಷ್ಟೇ ಸತ್ಯ.
ಅರ್ನಾಬ್ ಅವರು ರಾಷ್ಟ್ರಮಟ್ಟದಲ್ಲಿ ಕೆಲವೊಂದು ಸುದ್ದಿ ಮಾಡಿದ್ದಾಗಲೂ ಕರ್ನಾಟಕದ ವಿಚಾರಗಳ ಬಗ್ಗೆ ಲೈವ್ ಗೆ ಬಂದು ಮಾಹಿತಿ ಪಡೆದಿದ್ದು ಕೂಡ ಇವರಿಂದಲೇ. ಕರ್ನಾಟಕದ ಸುದ್ದಿ ವಾಹಿನಿಗಳ ಅಪ್ ಡೇಟ್ಸ್ ನ್ನು ನಿರಂತರವಾಗಿ ಪಡೆಯುತ್ತಿರುವ ಅರ್ನಾಬ್ ಗೆ ಈ ರಾಷ್ಟ್ರವಾದಿ ಪತ್ರಕರ್ತ ಇಷ್ಟವಾದರಂತೆ.ಅಂದಿನಿಂದಲೇ ಇವರನ್ನು ಸೆಳೆಯುವ ಪ್ರಯತ್ನಗಳನ್ನೂ ಮಾಡುತ್ತಿದ್ದರಂತೆ.ಆದರೆ ಇಷ್ಟ್ ದಿನ ನೇರವಾಗಿ ಒಪ್ಪಿಕೊಳ್ಳದೆ ನಯವಾಗಿಯೇ ಆಗೊಲ್ಲ ಎಂದ್ಹೇಳಿ ನಿರಾಕರಿಸುತ್ತಿದ್ದರಂತೆ.ಆದರೆ ಎಚ್ಚರವಹಿಸಿದ್ರೆ ಸಂಪೂರ್ಣ ಮುಳುಗಿ ಹೋಗಲಿರುವ ಆತಂಕಕ್ಕೆ ಸಿಲುಕಿರುವ ರಿಪಬ್ಲಿಕ್ ಕನ್ನಡ ಸಾಮ್ರಾಜ್ಯವನ್ನು ಉಳಿಸುವ ಅಗತ್ಯ-ಅನಿವಾರ್ಯತೆ ಇರುವುದರಿಂದ ರಾಷ್ಟ್ರವಾದಿ ಪತ್ರಕರ್ತನಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲು ಸಿದ್ದವಿದ್ದು ಇದರ ಬಗ್ಗೆ ಪ್ರಸ್ತಾಪ ಕೂಡ ಮಾಡಿದ್ದಾರಂತೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಆ ರಾಷ್ಟ್ರವಾದಿ ಪತ್ರಕರ್ತ ಪ್ರಸ್ತುತ ಕೆಲಸ ಮಾಡುತ್ತಿರುವ ಚಾನೆಲ್ ಕೂಡ ಸಾಕಷ್ಟು ಬದಲಾವಣೆಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆಗಳಿವೆಯಂತೆ.ಅನೇಕ ವರ್ಷಗಳಿಂದ ಗೂಟಾ ಹೊಡೆದುಕೊಂಡು ಲಕ್ಷ ಲಕ್ಷಗಟ್ಟಲೇ ಸಂಬಳ ಪಡೆಯುತ್ತಿರುವ ಮಹಾನುಭಾವರುಗಳೇ ಇದ್ದರೂ ಟಿಆರ್ ಪಿ(trp-tele rating point) ಗಿಟ್ಟಿಸುವಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿರುವ ಆ ಚಾನೆಲ್ ನ ಆಡಳಿತವೇ ಈಗ ಚಾನೆಲ್ ನಲ್ಲೇ ಸಾಕಷ್ಟು ಬದಲಾವಣೆ ಮಾಡಲು ನಿರ್ದರಿಸಿದ್ದು ಈಗಾಗಲೇ ಅನ್ಯರಾಜ್ಯದಿಂದ 40 ಸಿಬ್ಬಂದಿ ತಂಡ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಬೀಡುಬಿಟ್ಟು ಯೋಗ್ಯರು ಯಾರು..? ಜೊಳ್ಳುಗಳು ಯಾರು ಎನ್ನುವುದರ ಪರಿಶೀಲನೆಯಲ್ಲಿ ತೊಡಗಿದೆ ಎನ್ನುವ ಮಾತಿದೆ.

ಜೊಳ್ಳುಗಳ ಸಾಲಿನಲ್ಲಿ ಈ ರಾಷ್ಟ್ರವಾದಿ ಪತ್ರಕರ್ತನ ಹೆಸರು ಇಲ್ಲದಿದ್ದರೂ ಕೆಲವೊಂದು ವಿಷಯಗಳಲ್ಲಿ ಅಪಸ್ವರ ಇರುವುದಂತೂ ಸತ್ಯವಂತೆ..! ಅದನ್ನೇ ಮ್ಯಾನೇಜ್ಮೆಂಟ್ ದೊಡ್ಡದು ಮಾಡಿಕೊಂಡು ರಂಪಾಟ ಮಾಡಿದರೆ ತನಗೂ ಸಂಕಷ್ಟ ಎದುರಾದ್ರೆ ಹೇಗೆ ಎನ್ನುವ ಆಲೋಚನೆಯಲ್ಲಿ ರಿಪಬ್ಲಿಕ್ ಕನ್ನಡಕ್ಕೆ ಬಂದಿರುವ ಆಹ್ವಾನವನ್ನು ಒಪ್ಪಿಕೊಳ್ಳುವ ನಿರ್ದಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಕೇಳಿದಷ್ಟು ಸಂಬಳ ನೀಡಿ,ಬೇಕಾದ ಸೌಲಭ್ಯ ಕೊಟ್ಟು, ಸ್ವಯಂ ನಿರ್ದಾರ ಕೈಗೊಳ್ಳುವಷ್ಟು ಅಧಿಕಾರ-ಸ್ವಾತಂತ್ರ್ಯ ಕೊಡುವುದಾಗಿ ಅರ್ನಾಬ್ ಭರವಸೆ ನೀಡಿದ್ದಾರಂತೆ.ಈ ಸನ್ನಿವೇಶದಲ್ಲಿ ಆ ರಾಷ್ಟ್ರವಾದಿ ಪತ್ರಕರ್ತನಿಗೂ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೊಂದಿರಲಾರದು ಎಂದೆನಿಸಿ, ದಿಕ್ಕಿಲ್ಲದಂತಾಗುತ್ತಿರುವ ರಿಪಬ್ಲಿಕ್ ಕನ್ನಡಕ್ಕೆ ಸಾರಥಿಯಾಗಲು ಒಪ್ಪಿಕೊಂಡರೂ ಆಶ್ಚರ್ಯವಿಲ್ಲವಂತೆ.ಈ ನಡುವೆ ಆ ರಾಷ್ಟ್ರವಾದಿ ಪತ್ರಕರ್ತನನ್ನು ಕರೆ ತರುವ ಪ್ರಯತ್ನ ಗಂಭೀರವಾಗಿ ನಡೆಯುತ್ತಿರುವುದನ್ನು ಗಮನಿಸಿರುವ ರಿಪಬ್ಲಿಕ್ ಕನ್ನಡದ ಸುದ್ದಿಬಳಗದ ಕೆಲವು ಘಟಾನುಘಟಿಗಳಿಗೆ ತಮ್ಮ ಅಸ್ಥಿತ್ವದ ಚಿಂತೆ ಶುರುವಾಗಿದೆಯಂತೆ. ಅದೇನೇ ಆಗಲಿ..ಏನೇ ಬದಲಾವಣೆಗಳಾಗಲಿ ಅದು ಚಾನೆಲ್ ನ ಅಸ್ಥಿತ್ವ ಹಾಗೂ ಅಲ್ಲಿ ಕೆಲಸ ಮಾಡುವ ಪ್ರಾಮಾಣಿಕ ಮನಸ್ತಿತಿಯ ಮಾದ್ಯಮ ಸ್ನೇಹಿತರಿಗೆ ಮಾರಕ ಆಗಬಾರದು ಅಷ್ಟೇ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ.