advertise here

Search

Deepavali bumper: KSRTC ಗೆ 18 ಕೋಟಿ ಗಳಿಕೆ, ಒಂದೇ ದಿನ ಸಾರ್ವಕಾಲಿಕ ದಾಖಲೆಯ ಟಿಕೆಟ್ ಬುಕ್ಕಿಂಗ್


ಬೆಂಗಳೂರು: ನಷ್ಟದ ಹೊರೆಗೆ ಸಿಲುಕಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KARNATAKA STATE ROAD TRANSPORT CORPORATION) ಗೆ ದೀಪಾವಳಿ ಹಬ್ಬ(DEEPAWALI FESTIAVL) ಸ್ವಲ್ಪ ಮಟ್ಟದ ಚೇತರಿಕೆ ನೀಡಿದೆ.ಇತ್ತೀಚಿನ ವರ್ಷಗಳಲ್ಲಿ ದಾಖಲೆ ಪ್ರಮಾಣದ ಎನ್ನಬಹುದಾದ(ಆದರೆ ಸಾರ್ವಕಾಲಿಕ ದಾಖಲೆಯಲ್ಲ) ಗಳಿಕೆಯನ್ನು ಕೆಎಸ್ ಆರ್ ಟಿಸಿ ಮಾಡಿದೆ. ಗಳಿಕೆಯಲ್ಲಷ್ಟೇ ಅಲ್ಲ, ಪ್ರಯಾಣಿಕರ ಸಂಖ್ಯೆ ಮತ್ತು ಅವತಾರ್ ನಲ್ಲಿ ಟಿಕೆಟ್ ಬುಕ್ಕಿಂಗ್ ನಲ್ಲೂ ಹೊಸ ವಿಕ್ರಮವನ್ನೇ ಸಾಧಿಸಿದೆ.

ದೀಪಾವಳಿ ಹಬ್ಬದಾಚರಣೆಯ ಹಿಂದೆ ಮುಂದಿನ ದಿನಗಳಲ್ಲಿ ಸಹಜವಾಗಿಯೇ ಸಾಲು ಸಾಲು ರಜೆಗಳು ಬರುವುದರಿಂದ ಪರ ಊರುಗಳಿಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ.ಆ ಹೋಲಿಕೆಯಲ್ಲಿ ಈ ಬಾರಿಯು ಅಂದರೆ ಕಳೆದ ಬುಧವಾರದಿಂದ ಸೋಮವಾರದವರೆಗಿನ ಬಸ್ ಸಂಚಾರದ ಅಂಕಿಅಂಶಗಳು ಹಾಗೂ ಗಳಿಕೆಯ ಅಂಶಗಳನ್ನು ಲೆಕ್ಕ ಹಾಕಿದಾಗ ಕೆಎಸ್ ಆರ್ ಟಿಸಿ ಮೂಲಗಳೇ ಹೇಳುವಂತೆ ಹಬ್ಬದ ದಿನಗಳಲ್ಲಾದ ಒಟ್ಟು ಗಳಿಕೆಯನ್ನು 18.68( EIGHTEEN CRORES SIXTY EIGHT LACKS) ಕೋಟಿ ಎಂದು ಹೇಳಿವೆ.ಇದು ಕೇವಲ ಸಮಾಧಾನ ಪಡುವುದಷ್ಟೇ ಅಲ್ಲ ಹೆಮ್ಮೆ ಪಡುವಂತ ಸಂಗತಿ.ಏಕೆಂದರೆ ಸಾರಿಗೆ ಜಾಲದ ವ್ಯವಸ್ಥೆ ಎಷ್ಟೇ ಬೆಳೆದಿದ್ದರೂ ಇವತ್ತಿಗೂ ಜನ ಕೆಎಸ್ ಆರ್ ಟಿಸಿಯಷ್ಟು ವಿಶ್ವಾಸಾರ್ಹ ಹಾಗು ಆರಾಮದಾಯಕ ವ್ಯವಸ್ಥೆ ಮತ್ತೊಂದಿಲ್ಲ ಎನ್ನುವ ಭಾವನೆ ಕಳೆದುಕೊಂಡಿಲ್ಲ ಎನ್ನುವುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.

KSRTC ಅಧ್ಯಕ್ಷ ಗುಬ್ಬಿ ಶ್ರೀನಿವಾಸ್
KSRTC ಅಧ್ಯಕ್ಷ ಗುಬ್ಬಿ ಶ್ರೀನಿವಾಸ್
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕಳೆದ ಬುಧವಾರದಿಂದಲೇ ಜನ ಬೆಂಗಳೂರನ್ನು ಹಬ್ಬದ ಕಾರಣಕ್ಕೆ ಬಿಡಲು ಆರಂಭಿಸಿದ್ದರು.ಅಲ್ಲಿಂದ ಬೆಂಗಳೂರಿಗೆ ವಾಪಸ್ಸಾದ ಸೋಮವಾರದವರೆಗಿನ ಒಟ್ಟಾರೆ ಅಂಕಿಅಂಶಗಳನ್ನು ಕ್ರೋಢೀಕರಿಸಿದರೆ ಈ ಹಬ್ಬದ ದಿನಗಳಲ್ಲಿ ಕೆಎಸ್ ಆರ್ ಟಿಸಿಗೆ ಒಟ್ಟು 18.68 ಕೋಟಿಯಷ್ಟು ಗಳಿಕೆಯಾಗಿದೆ.ಅಂದ್ಹಾಗೆ ಇದಿಷ್ಟು ಲಾಭವಲ್ಲ ಎನ್ನುವುದನ್ನೂ ಗಮನಿಸಬೇಕು.ಆದರೆ ಲಾಭದ ವಿಷಯ ಬಂದರೆ ಕೆಎಸ್ ಆರ್ ಟಿಸಿ ನಿಗಮಕ್ಕೆ ಬರೋಬ್ಬರಿ 5 ಕೋಟಿ ಆದಾಯ ಬಂದಿರಬಹುದೆಂದು ಹೇಳಲಾಗುತ್ತಿದೆ.ಇದು ಕೂಡ ಹೆಗ್ಗಳಿಕೆಯ ಸಂಗತಿ.

ALSO READ :  "ಅಡ್ಡಮತದಾನ"ಕ್ಕೆ ಕೋಟ್ಯಾಂತರ ಆಮಿಷ: ಮೈತ್ರಿ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ FIR

ಹಬ್ಬದ ಹಿನ್ನಲೆಯಲ್ಲಿ ಕೆಎಸ್ ಆರ್ ಟಿಸಿ ಒಟ್ಟು 2 ಸಾವಿರ ಬಸ್ ಗಳನ್ನು ವ್ಯವಸ್ಥೆ ಮಾಡಿತ್ತು.ಪ್ರಯಾಣಿಕರಿಂದ(PASSENGERS) ತುಂಬಿ ತುಳುಕುತ್ತಿದ್ದ ಬಸ್ ಗಳು ಎಲ್ಲೆಡೆ ಕಾಣಸಿಗುತ್ತಿತ್ತು.ಕೆಎಸ್ ಆರ್ ಟಿಸಿ ಬಸ್ ಗಳಿಲ್ಲದೆ ಬಿಎಂಟಿಸಿ(BENGALURU METROPOLITAN TRANSPORT CORPORATION) ಬಸ್ ಗಳನ್ನು ಕೂಡ ಬಳಸಿಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.ಗರಿಷ್ಟ ಪ್ರಮಾಣದಲ್ಲಿ ಜನರು ಕೂಡ ಈ ಬಾರಿ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಸಂಚರಿಸಿರುವುದು ಕೂಡ ಸ್ಪಷ್ಟವಾಗಿದೆ ಎಂದು ಕೆಎಸ್ ಆರ್ ಟಿಸಿ ಮೂಲಗಳು ತಿಳಿಸಿವೆ.

ಕೇವಲ ಗಳಿಕೆಯಲ್ಲಷ್ಟೆ ಅಲ್ಲ, ಟಿಕೆಟ್ ಬುಕ್ಕಿಂಗ್ ನಲ್ಲೂ ಅಪ್ರತಿಮ ದಾಖಲೆಯೊಂದನ್ನು ಕೆಎಸ್ ಆರ್ ಟಿಸಿ ಬರೆದಿದೆ. ಅವತಾರ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಆರಂಭವಾದ ಇಷ್ಟು ವರ್ಷಗಳಲ್ಲಿ ಒಂದೇ ದಿನ ಇಷ್ಟೊಂದು ಪ್ರಮಾಣದ ಟಿಕೆಟ್ ಗಳು ಬುಕ್ಕಿಂಗ್ ಆಗಿರಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಟಿಕೆಟ್ ಬುಕ್ ಆಗಿರುವುದು ದಾಖಲೆಯೇ ಸರಿ.ಕೆಎಸ್ ಆರ್ ಟಿಸಿ ಮೂಲಗಳ ಪ್ರಕಾರ ನವೆಂಬರ್‌ 3 ರಂದು ಅವತಾರ್(AWATAR ADVANCE TICKET BOOKING)  ಅಡಿಯಲ್ಲಿ 85462 ಟಿಕೆಟ್ ಬುಕ್ಕಿಂಗ್ ಆಗಿವೆಯಂತೆ.ಕೆಎಸ್ ಆರ್ ಟಿಸಿ ಇತಿಹಾಸದಲ್ಲಿ ಒಂದೇ ದಿನ ಇಷ್ಟೊಂದು ಟಿಕೆಟ್ ಗಳು ಬುಕ್ಕಿಂಗ್ ಆದ ಇತಿಹಾಸವೇ ಇರಲಿಲ್ಲವಂತೆ.ಇದು ಕೂಡ ಒಂದು ಸಾರ್ವಕಾಲಿಕ ದಾಖಲೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಶಕ್ತಿ ಯೋಜನೆ (SHAKTHI SCHEME)ಅನುಷ್ಟಾನದ ಪರಿಣಾಮವಾಗಿ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವ ಕೆಎಸ್ ಆರ್ ಟಿಸಿಗೆ ದೀಪಾವಳಿಯ ಗಳಿಕೆ ಒಂದಷ್ಟು ಪ್ರಮಾಣದಲ್ಲಿ ನಗುವಿನ ಆಕ್ಸಿಜನ್ ನೀಡಿರುವುದಂತೂ ಸತ್ಯ.ಕೇವಲ ಕೆಎಸ್ ಆರ್ ಟಿಸಿಯಷ್ಟೇ ಅಲ್ಲ ಬಿಎಂಟಿಸಿ ಸೇರಿದಂತೆ ಇತರೆ ಮೂರು ನಿಗಮಗಳು ಕೂಡ ಹೆಚ್ಚಿನ ಗಳಿಕೆ ಮಾಡುವುದರ ಮೂಲಕ ನಗುವಿನ ಮಂದಹಾಸವನ್ನೇ ಬೀರಿದೆ.


Political News

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

Scroll to Top