advertise here

Search

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ


ಕನ್ನಡದ ವಿವಿಧ ನ್ಯೂಸ್ ಚಾನೆಲ್ ಗಳ 12 ಕ್ಯಾಮೆರಾಮನ್ ಗಳಿಗೆ ನಾಳೆ ಪ್ರಶಸ್ತಿ ಪ್ರಧಾನ

ಬೆಂಗಳೂರು: ಕ್ಯಾಮೆರಾದ ಮುಂದೆ ರಿಪೋರ್ಟರ್ ಗಳನ್ನು ಸುಂದರವಾಗಿ ಆಕರ್ಷಕವಾಗಿ ಎಲ್ಲಕ್ಕಿಂತ ಪರಿಣಾಮಕಾರಿಯಾಗಿ ತೋರಿಸುವಂಥ ನಿರ್ಣಾಯಕ ಹಾಗು ಮಹತ್ವದ ಕೆಲಸ ಮಾಡುವಂಥವರು ನಮ್ಮ ನ್ಯೂಸ್ ಚಾನೆಲ್ ನ ಕ್ಯಾಮೆರಾಮನ್ ಗಳು.ಆದರೆ ದುರಾದೃಷ್ಟಕ್ಕೆ ರಿಪೋರ್ಟರ್ ಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸ ನಡೆಯುತ್ತಲೇ ಇದೆ.ಆದ್ರೆ ಕ್ಯಾಮೆರಾಮನ್ ಗಳನ್ನು ಗುರುತಿಸುವವರೇ ಇಲ್ಲವಾಗಿದೆ.ಹಾಗಾಗಿ ಅವರಲ್ಲಿ ಪ್ರತಿಭೆ ಇದ್ದರೂ ಅದು ಕಾಡ ಬೆಳದಿಂಗಳಂತೆ ನಿಷ್ಪ್ರಯೋಜಕವಾಗುತ್ತಿದೆ.

ಆದರೆ ನ್ಯೂಸ್ ಚಾನೆಲ್ ಕ್ಯಾಮೆರಾಮನ್ ಗಳಲ್ಲಿರುವ ಅಂತದ್ದೊಂದು ಕೊರಗನ್ನು ನಿವಾರಿಸುವ ಮಹತ್ವದ ಕೆಲಸಕ್ಕೆ ಕೈ ಹಾಕಿದ್ದು ಬಿಬಿಎಂಪಿ ನೌಕರರು-ಅಧಿಕಾರಿಗಳ ಸಂಘ ಹಾಗೂ ಅದರ ರಾಜ್ಯಾಧ್ಯಕ್ಷ ಅಮೃತರಾಜ್.ಕಳೆದ ವರ್ಷದಿಂದಲೇ ಕನ್ನಡ ರಾಜ್ಯೋತ್ಸವದ ವಿಶೇಷ ಸನ್ನಿವೇಶದಲ್ಲಿ ಕ್ಯಾಮೆರಾಮನ್ ಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.ಅಂದ್ಹಾಗೆ ಕ್ಯಾಮೆರಾಮನ್ ಗಳಿಗೆ ನೀಡಲಾಗುತ್ತಿರುವ ಪ್ರಶಸ್ತಿ ಡಾ.ಪುನೀತ್ ರಾಜ್ ಕುಮಾರ್  ಪ್ರಶಸ್ತಿ.

ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಗೆ ನ್ಯೂಸ್ ಚಾನೆಲ್ ಕ್ಯಾಮೆರಾಮನ್ ಗಳ ವಿಭಾಗದಿಂದ 12 ಕ್ಯಾಮೆರಾಮನ್ ಗಳನ್ನು ಗುರುತಿಸಲಾಗಿದ್ದು ನಾಳೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂಜೆ 5ಕ್ಕೆ  ಅನೇಕ ಗಣ್ಯರ ಸಮ್ಮುಖದಲ್ಲಿ ಕ್ಯಾಮೆರಾಮನ್ ಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.

ಬಿಬಿಎಂಪಿ ನೌಕರರು-ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಅಮೃತರಾಜ್.
ಬಿಬಿಎಂಪಿ ನೌಕರರು-ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಅಮೃತರಾಜ್.

ಅಂದ್ಹಾಗೆ ಕಾರ್ಯಕ್ರಮದಲ್ಲಿ ಕ್ಯಾಮೆರಾಮನ್ ಗಳಾದ ಈರಣ್ಣ- ಬಿಟಿವಿ ನ್ಯೂಸ್ ,ಜಿ.ಎಚ್ ಶ್ರಿನಿವಾಸಲು-ನ್ಯೂಸ್ 18 ಕನ್ನಡ ,,ಶ್ರೀನಿವಾಸ್- ರಾಜ್ ನ್ಯೂಸ್, ಮಂಜುನಾಥ್-ರಿಪಬ್ಲಿಕ್ ನ್ಯೂಸ್,ರಘು ಯಜಮಾನ್-ಟಿವಿ 9 ಕನ್ನಡ ನ್ಯೂಸ್ ,ಚಂದ್ರು-ಟಿವಿ-5 ಕನ್ನಡ,ಎಸ್.ಚಂದ್ರಕಾಂತ್- ವಿಸ್ತಾರ ನ್ಯೂಸ್, ಬಿ.ವಿ. ರವಿಚಂದ್ರು- ವಿಸ್ತಾರ ನ್ಯೂಸ್, ವೆಂಕಟೇಶ್- ಸುವರ್ಣ ನ್ಯೂಸ್ , ಆವಿರಾಜ್- ನ್ಯೂಸ್ ಪಸ್ಟ್,ಮುನಿರಾಜ್  ಎಚ್. ಪಬ್ಲಿಕ್ ಟಿವಿ, ಗಂಗಾಧರ- ಪ್ರಜಾ ಟಿವಿ ಅವರನ್ನು ಸನ್ಮಾನಿಸಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಅವರು ಈ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗುತ್ತಿರುವುದು ವಿಶೇಷ.

ALSO READ :  ನ್ಯೂಜಿಲೆಂಡ್ ವನಿತೆಯರ ಟಿ-20 ಚಾಂಪಿಯನ್: ದ.ಆಫ್ರಿಕಾಗೆ 32 ರನ್ ಸೋಲು

ತೆರೆಯ ಹಿಂದೆ ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿರುವ ಪ್ರಾಮಾಣಿಕ ನ್ಯೂಸ್ ಕ್ಯಾಮೆರಾಮನ್ ಮಿತ್ರರಿಗೆ ಹಾಗೂ ಅವರ ಕೆಲಸವನ್ನು ಗುರುತಿಸಿ ಸನ್ಮಾನಿಸುತ್ತಿರುವ  ಬಿಬಿಎಂಪಿ ನೌಕರರು-ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಅಮೃತರಾಜ್ ಅವರನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಅಭಿನಂದಿಸುತ್ತದೆ.

ಪುನೀತ್ ರಾಜ್ ಕುಮಾರ್ ಪ್ರಶಸ್ತಿಗೆ ಭಾಜನವಾದ ನ್ಯೂಸ್ ಚಾನೆಲ್ ಕ್ಯಾಮೆರಾಮನ್ ಗಳ ಪಟ್ಟಿ

-ಜಿ.ಎಚ್ ಶ್ರಿನಿವಾಸಲು-ನ್ಯೂಸ್ 18 ಕನ್ನಡ ,

-ಶ್ರೀನಿವಾಸ್- ರಾಜ್ ನ್ಯೂಸ್

-ಮಂಜುನಾಥ್-ರಿಪಬ್ಲಿಕ್ ನ್ಯೂಸ್

 -ರಘು ಯಜಮಾನ್-ಟಿವಿ 9 ಕನ್ನಡ ನ್ಯೂಸ್

– ಚಂದ್ರು-ಟಿವಿ-5 ಕನ್ನಡ
ಎಸ್.ಚಂದ್ರಕಾಂತ್- ವಿಸ್ತಾರ ನ್ಯೂಸ್

– ಬಿ.ವಿ. ರವಿಚಂದ್ರು- ವಿಸ್ತಾರ ನ್ಯೂಸ್

 -ವೆಂಕಟೇಶ್- ಸುವರ್ಣ ನ್ಯೂಸ್

– ಆವಿರಾಜ್- ನ್ಯೂಸ್ ಪಸ್ಟ್

– ಮುನಿರಾಜ್  ಎಚ್. ಪಬ್ಲಿಕ್ ಟಿವಿ

 -ಗಂಗಾಧರ- ಪ್ರಜಾ ಟಿವಿ

– ಈರಣ್ಣ- ಬಿಟಿವಿ ನ್ಯೂಸ್

 


Political News

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Scroll to Top