ಸಾವನ್ನು ಬೆನ್ನಿಗೆ ಕಟ್ಟಿಕೊಂಡು ವೃತ್ತಿ ನಿಷ್ಟೆಯಿಂದ ಸುದ್ದಿಮಾಡುತ್ತಿರುವ ಮಾದ್ಯಮಯೋಧರು ನಮ್ಮ ಹೆಮ್ಮೆ- ಪತ್ರಿಕಾಯೋಧರಿಗೆ ಹ್ಯಾಟ್ಸಾಫ್..

ಬೆಂಗಳೂರು-ಕಾಶ್ಮೀರ: ಸಧ್ಯ ದೇಶದಲ್ಲೆಲ್ಲಾ ಯುದ್ಧ(war)ದ್ದೇ ಮಾತು.ಸಾಂಪ್ರದಾಯಿಕ ಶತೃರಾಷ್ಟ್ರ ಪಾಕಿಸ್ತಾನ(pakistan)ವನ್ನು ಅದರ ನೆಲದಲ್ಲೇ ನುಗ್ಗಿ ಬಗ್ಗು ಬಡಿಯುತ್ತಿರುವ,ಅದರ ನಡ ಮುರಿ ಯುತ್ತಿರುವ ಭಾರತ(india)ದ ಹೆಮ್ಮೆಯ ಸೇನೆ(armed forces)ಯದ್ದೇ ಸುದ್ದಿ. ಪೆಹಲ್ಗಾಮ್ ನ ಭಯೋತ್ಪಾದಕ(terrorist) ದಾಳಿಗೆ ಪ್ರತೀಕಾರವಾಗಿ ಭಾರತ ,ಪಾಕಿಸ್ತಾನವನ್ನು ಆಪರೇಷನ್ ಸಿಂಧೂರ (operation sindhoora) ಹೆಸರಲ್ಲಿ ಸರ್ವನಾಶ ಮಾಡುತ್ತಿರುವಂತದ್ದು ಪ್ರತಿಯೊಬ್ಬ ಭಾರತೀಯ ಹೆಮ್ಮೆ-ಆತ್ಮಾಭಿಮಾನದಿಂದ ಬೀಗಬೇಕಿರುವ ಸಂಗತಿ. ಪಾಪಿ…ಪಾಕಿಸ್ತಾನವನ್ನು ಮಣ್ಣುಮುಕ್ಕಿಸುತ್ತಿರುವ ಈ ಬೆಳವಣಿಗೆಗಳ ಪ್ರತಿಯೊಂದು ವರ್ತಮಾನವನ್ನು ಜನರತ್ತ ತಲುಪಿಸುವಲ್ಲಿ ಮಾದ್ಯಮಗಳು ನಿರ್ವಹಿಸುತ್ತಿರುವ ಪಾತ್ರ ಅತ್ಯಂತ ದೊಡ್ಡದು.ಪ್ರಾಣದ ಹಂಗುತೊರೆದು ಯುದ್ಧಭೂಮಿಯಲ್ಲಿನ ದೃಶ್ಯಗಳನ್ನು ಸೆರೆಹಿಡಿಯುತ್ತಿರುವ ಪತ್ರಿಕಾ ಹಾಗು ವಿದ್ಯುನ್ಮಾನ ಮಾದ್ಯಮಗಳ ಛಾಯಾಗ್ರಾಹಕರ ಕೆಲಸ ಮೆಚ್ಚಲೇಬೇಕಾಗುತ್ತದೆ.ಹಾಗೆಯೇ ಅವರ ಜತೆ ನಿಂತು ವರದಿ ಮಾಡುತ್ತಿರುವ ಮಾದ್ಯಮ ಮಿತ್ರರು ಕೂಡ ಮೆಚ್ಚುಗೆಗೆ ಅರ್ಹರು. ಕನ್ನಡ ಫ್ಲ್ಯಾಶ್ ನ್ಯೂಸ್ ಇವತ್ತು ಯುದ್ಧಭೂಮಿಯಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಸುದ್ದಿಮಾದ್ಯಮಗಳ (news media)ಸಾಹಸತನ ಮೆಲುಕು ಹಾಕುವ ಪ್ರಯತ್ನ ಮಾಡ್ತಿದೆ.

ಯುದ್ಧ ಎಂದರೆ ಇವತ್ತಿನ ಕಾಲಘಟ್ಟದ ಪತ್ರಕರ್ತ(journalist)ರಿಗೆ ಏನೋ ಹೊಸ ಪದ ಕೇಳಿದಂತ ಅನುಭವ.. ಹೀಗಾಗುವುದು ಸಹಜ.ನೀವು ಈಗ ಲಭ್ಯವಿರುವ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧಭೂಮಿ(war field)ಯಲ್ಲಿ ಪತ್ರಕರ್ತರು ಎಂದು ಸರ್ಚ್ ಮಾಡಿದ್ರೆ ಸಿಗೋದು ಇತ್ತೀಚಿನ ವರ್ಷಗಳಲ್ಲಿ ನಡೆದ ಯುದ್ಧ ಭೂಮಿಯಲ್ಲಿ ಕೆಲಸ ಮಾಡಿದ ಪತ್ರಕರ್ತರ ವೀಡಿಯೋಗಳು.
ಆದರೆ ಕಾರ್ಗಿಲ್ ಯುದ್ಧದ ಸನ್ನಿವೇಶದಲ್ಲಿ ಎನ್ ಡಿಟಿವಿ(ndtv) ಯ ದಿಟ್ಟ ಪತ್ರಕರ್ತೆ ಬರ್ಖಾದತ್ತಾ(barkha dutt) ಯುದ್ಧಭೂಮಿಯಲ್ಲೇ ನಿಂತು ಮಾಡಿದ ರಿಪೋರ್ಟಿಂಗ್(war field reporting) ಇದೆಯೆಲ್ಲಾ ಅದು ಎಂಥವರ ಎದೆಯನ್ನೂ ಝಲ್ಲೆನ್ನಿಸುತ್ತದೆ( ಆಕೆಯನ್ನು ಸೈದ್ಧಾಂತಿಕವಾಗಿ ವಿರೋಧಿಸುವವರಿಗೂ ಈ ದೃಶ್ಯಗಳು ಮೆಚ್ಚುಗೆಯಾಗದೆ ಇರವು).ಯಾರಿಗಾದ್ರೂ ಪುರುಸೊತ್ತಿದ್ದರೆ ಯೂಟ್ಯೂಬ್ ಗೆ ಹೋಗಿ ಸರ್ಚ್ ಮಾಡಿದ್ರೆ ಆ ದೃಶ್ಯಗಳು ಸಿಗುತ್ವೆ.ಯುದ್ಧದ ಸನ್ನಿವೇಶದಲ್ಲಿ ವರದಿ ಮಾಡಲು ಹಿಂದೇಟು ಹಾಕಿದ ಬಹುತೇಕ ರಾಷ್ಟ್ರವಾದಿ ಪತ್ರಕರ್ತರ ನಡುವೆ ಧೈರ್ಯಮಾಡಿ ಕಾರ್ಗಿಲ್ ಯುದ್ಧದ ನೆಲಕ್ಕೆ ನುಗ್ಗಿದ ದಿಟ್ಟ ಪತ್ರಕರ್ತೆ ಈ ಬರ್ಖಾದತ್) ಅಂದ್ಹಾಗೆ ಬರ್ಖಾ ದತ್ ಅವರೇ ಹೇಳಿಕೊಂಡಿರುವಂತೆ ಕಾರ್ಗಿಲ್(kargil war) ಯುದ್ಧದ ನೆಲಕ್ಕೆ ನುಗ್ಗಿ ರಿಪೋರ್ಟ್ ಮಾಡಿದ ಮೊದಲ ಮಹಿಳಾ ಪತ್ರಕರ್ತೆ(first women journlist) ಅವರೇನಲ್ವಂತೆ. ಹಿಂದೂಸ್ತಾನ್ ಟೈಮ್ಸ್ (hindustan times)ನಲ್ಲಿ ಕೆಲಸ ಮಾಡುತ್ತಿದ್ದ ಅವರ ತಾಯಿ ಪ್ರಭಾದತ್( prabha dutt), ಅದೆಷ್ಟೋ ವರ್ಷಗಳ ಮುನ್ನವೆ ಭಾರತ-ಪಾಕಿಸ್ತಾನ ಯುದ್ದದ ನೆಲಕ್ಕೆ ತೆರಳಿ ಯುದ್ಧದ ಪ್ರತ್ಯಕ್ಷ ವರದಿ ಮಾಡಿದ್ರಂತೆ.ಕಾರ್ಗಿಲ್ ಗೆ ಧೈರ್ಯವಾಗಿ ತೆರಳಲು ಸ್ಪೂರ್ತಿಯೇ ಅವರಂತೆ)


ಕಾರ್ಗಿಲ್ ಯುದ್ಧದ ನೆಲದಲ್ಲಿ ಶತೃ ರಾಷ್ಟ್ರ ಪಾಕಿಸ್ತಾನ, ಭಾರತದ ಮೇಲೆ ನಡೆಸುತ್ತಿದ್ದ ಶೆಲ್ ದಾಳಿ, ಅದಕ್ಕೆ ಪ್ರತ್ಯುತ್ತರವಾಗಿ ಭಾರತದ ಸೇನೆ ನೀಡುತ್ತಿದ್ದ ದಿಟ್ಟ ಉತ್ತರ ಎಲ್ಲವನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಿದ್ದ ಆ ದೃಶ್ಯಗಳು ಇವತ್ತಿಗೂ ಇತಿಹಾಸವೇ ಬಿಡಿ. ಗುಂಡಿನ ದಾಳಿ ನಡೆಯುತ್ತಿದ್ದ ಬಂಕ್ ಗಳ ಪಕ್ಕದಲ್ಲೇ ನಿಂತುಕೊಂಡು ಪ್ರತ್ಯಕ್ಷ ವರದಿ ನೀಡುತ್ತಿದ್ದ ಬರ್ಖಾ ದತ್ ಅವತ್ತಿಗೇ ಅಲ್ಲ, ಇವತ್ತಿಗೂ ಅಪ್ರತಿಮ ಧೈರ್ಯಶಾಲಿ, ಪರಾಕ್ರಮಿ ಹಾಗು ದಿಟ್ಟ ಪತ್ರಕರ್ತೆ ಎನಿಸಿಕೊಳ್ಳುತ್ತಾರೆ.ಈ ಕಾರಣದಿಂದ ಈ ಕಾಲಘಟ್ಟದಲ್ಲಿಯೂ ಭಾರತೀಯ ಪತ್ರಿಕೋದ್ಯಮದ ಹೆಮ್ಮೆಯಾಗಿ ಕಾಣಿಸ್ತಾರೆ ಎಂದರೂ ತಪ್ಪಾಗಲಿಕ್ಕಿಲ್ಲ.

ಕಾರ್ಗಿಲ್ ಯುದ್ಧ ಭೂಮಿಯಲ್ಲೇ ಪಾಪಿಸ್ತಾನವನ್ನು ಬಗ್ಗುಬಡಿಯುವ ಕೆಲಸದಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದ ಭಾರತೀಯ ಹೆಮ್ಮೆಯ ಸೈನಿಕರು ಹಾಗು ಅವರ ನಾಯಕರನ್ನು ಹುರಿದುಂಬಿಸುವ ಕೆಲಸವನ್ನು ಇದೇ ಬರ್ಖಾದತ್ ಮಾಡಿದ್ದು ವೀಡಿಯೋಗಳಲ್ಲಿ ಲಭ್ಯವಿದೆ,ಬರ್ಖಾ ಅವರು ಸಂದರ್ಶನ ಮಾಡುತ್ತಿದ್ದ ವೇಳೆ ಕಾರ್ಗಿಲ್ ವೀರ ವಿಕ್ರಮ್ ಬಾತ್ರಾ( kargil hero vikram baathra) “ಯೇ ದಿಲ್ ಮಾಂಗೇ ಮೋರ್( yeh dil maange more).”.ಎಂದು ಅಬ್ಬರಿಸಿದ್ದನ್ನು ಇವತ್ತಿಗೂ ಬರ್ಖಾ ಮರೆತಿಲ್ಲವಂತೆ.ಆದರೆ ಅದೇ ಬಾತ್ರಾ ಜೀವಂತವಾಗಿ ಮನೆಗೆ ತೆರಳಲಿಲ್ಲದ್ದರ ಬಗ್ಗೆ ಬರ್ಖಾ ಭಾವುಕರಾಗಿ ನೆನೆಯುತ್ತಾರೆ. ಅವರ ವೈಯುಕ್ತಿಕ ವಿಚಾರಗಳೇನೇ ಇರಲಿ,ಅವರ ಬಗ್ಗೆ ಆ ವೇಳೆ ಕೇಳಿಬಂದ ಆಪಾದೆನಗಳೇ ಇರಲಿ, ಅವರ ಸೈದ್ಧಾಂತಿಕ ನಿಲುವುಗಳೇನೇ ಇರಲಿ, ಭಾರತೀಯ ಎಂದು ಬಂದಾಗ ಬರ್ಖಾ ಅವರ ಕೆಲಸವನ್ನು ಇವತ್ತಿಗೆ ಮಾಡಿರುವ ಮತ್ತೋರ್ವ ವರದಿಗಾರರಿಲ್ಲ.( ಈಗಿನ ಪತ್ರಕರ್ತರಿಗೆ ರಕ್ಷಣಾತ್ಮಕವಾದ ವ್ಯವಸ್ಥೆಗಳಿವೆ-ಯುದ್ಧ ಭೂಮಿಯ ಹತ್ತಾರು ಕಿಲೋಮೀಟರ್ ದೂರದಲ್ಲಿ ನಿಂತು ವರದಿಗಾರಿಕೆ ಮಾಡುವುದು ಕೂಡ ವಾರ್ ರಿಪೋರ್ಟಿಂಗ್ ನ ಭಾಗವಾಗಿದೆ..ಅದು ತಪ್ಪೇನು ಅಲ್ಲ ಬಿಡಿ…ಏಕೆಂದರೆ ಕೆಲಸ ಬೇರೆ…ಜೀವ-ಜೀವನ ಬೇರೆ..)
ಯುದ್ಧಭೂಮಿಯಲ್ಲಿ ಜೀವಾಪಾಯವಾದರೆ ಚಾನೆಲ್ ಸಂಸ್ಥೆ(news channel)ಗಳು ಆ ಮಾದ್ಯಮ ಮಿತ್ರರ ವಿಷಯದಲ್ಲಿ ನಡೆದುಕೊಳ್ಳೋ ರೀತಿಯನ್ನೂ ನಾವು ಊಹಿಸಿಕೊಳ್ಳಬಹುದು).ಪಾಕಿಸ್ತಾನದ ಮೇಲೆ ಭಾರತ ಪ್ರಸ್ತುತ ನಡೆಸುತ್ತಿರುವ ದಾಳಿಯನ್ನು ಜನರತ್ತ ತಲುಪಿಸುತ್ತಿರುವ ನಮ್ಮ ಮಾದ್ಯಮಗಳ ವಿಷಯ ಬಂದಿದ್ರಿಂದ ಕಾರ್ಗಿಲ್ ಯುದ್ಧ ಹಾಗೂ ಆಗಿನ ವಾರ್ ರಿಪೋರ್ಟರ್ ಆಗಿ ದಾಖಲಾರ್ಹ ಕೆಲಸ ಮಾಡಿದ ಪತ್ರಕರ್ತೆ ಬರ್ಖಾದತ್ ಅವರ ವಿಷಯವನ್ನು ನೆನಪಿಸಿಕೊಳ್ಳಬೇಕಾಯಿತು ಅಷ್ಟೆ.ಯುದ್ಧದ ನೆಲದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ನಮ್ಮ ವರದಿಗಾರರು,ಯುದ್ಧ ಭೂಮಿಯ ಚಿತ್ರಣ,ಅದರಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಸೆರೆ ಹಿಡಿಯುವ ಕ್ಯಾಮೆರಾಮನ್ ಗಳ ಕೆಲಸವನ್ನು ಶ್ಲಾಘಿಸಬೇಕು. ಏಕೆಂದರೆ ಇಲ್ಲಿ ಕುಳಿತುಕೊಂಡು ವಿಶ್ಲೇಷಿಸಿದಷ್ಟು ಸಾಮಾನ್ಯ ಅಥವಾ ಸುಲಭವಾದ ಮಾತಲ್ಲ, ಯುದ್ಧಭೂಮಿಯ ಆಸುಪಾಸಿನಲ್ಲಿ ನಿಂತು ಕೆಲಸ ಮಾಡೋದು.ಹೆಮ್ಮೆಯ ಜತೆಗೆ ಕಾಡುವ ಜೀವಭಯ ಅದನ್ನು ಅನುಭವಿಸಿದವರಿಗೇನೇ ಗೊತ್ತು.ಹಾಗಾಗಿನೇ ಮಾದ್ಯಮ ಮಿತ್ರರನ್ನೂ ಕೂಡ ನಾವು ಯುದ್ಧಭೂಮಿಯ ಮಾದ್ಯಮ ಯೋಧರೆಂದು ಗೌರವದಿಂದ ಸಂಬೋಧಿಸಬೇಕಾಗುತ್ತದೆ.

ಪೆಹಲ್ಗಾಮ್ಅಟ್ಯಾಕ್( pehalgam attack) ಆದ ಬೆನ್ನಲ್ಲೇ,ಅಂಥಾ ಆತಂಕದ ಪರಿಸ್ಥಿತಿಯಲ್ಲೂ ಕಾಶ್ಮೀರದ ಆ ಘಟನಾಸ್ಥಳಕ್ಕೆ ತೆರಳಿ ಸುದ್ದಿ ಮಾಡಲಾರಂಭಿಸಿದ್ರು ನಮ್ಮ ಮಾದ್ಯಮ ಸ್ನೇಹಿತರು.ಸಹಜವಾಗಿ ಇಂಥಾ ಸನ್ನಿವೇಶಗಳಲ್ಲಿ ನಮ್ಮ ರಾಷ್ಟ್ರೀಯ ಮಾದ್ಯಮ ಸ್ನೇಹಿತರು( national media friends) ಹಿಂದುಮುಂದೆ ನೋಡದೆ ನುಗ್ಗಿಬಿಡುತ್ತಾರೆ.ಈ ಬಾರಿ ಆದದ್ದು ಅದೇ..ಹಾಗೆಂದು ನಮ್ಮ ಕನ್ನಡದ ಟಿವಿ ಚಾನೆಲ್ ಮಿತ್ರರು ಅಲ್ಲಿಗೆ ಹೋಗಲಿಲ್ಲ ಎಂದೇನಲ್ಲ. ಪಬ್ಲಿಕ್ ಟಿವಿಯ ದೆಹಲಿ ವರದಿಗಾರ ಶಬ್ಬೀರ್( shabbir nidagundi) ಮತ್ತು ಸುವರ್ಣ ಟಿವಿಯ ದೆಹಲಿ ವರದಿಗಾರ ಮಂಜುನಾಥ್ ಅಲಿಯಾಸ್ ಡೆಲ್ಲಿ ಮಂಜು( suvarna news channel reporter manjunath) ದೆಹಲಿಯಿಂದಲೇ ಘಟನಾಸ್ಥಳಕ್ಕೆ ತೆರಳಿ ಮೊಕ್ಕಾಂ ಹೂಡಿದ್ದಾರೆ.ಇನ್ನು ರಿಪಬ್ಲಿಕ್ ಕನ್ನಡ ( republic kannada news channel) ವಾಹಿನಿಯ ವರದಿಗಾರ ಅಭಿಷೇಕ್ ವಿಜಯಕುಮಾರ್( abhishek vijayakumar) ,ಆಂಕರ್ ರಕ್ಷಿತ್ ( anchor ranjith ಕ್ಯಾಮೆರಾಮನ್ ಗಳಾದ ಲಕ್ಷ್ಮಿಪುತ್ರ, ಕೆಎಸ್ ಮಂಜುನಾಥ್, ಮಧು ಜೆಎಸ್( cameramans lakshmi puthra, manjunath, madhu j.s) ಮೂಲಕ ಕಾಶ್ಮೀರ ಘಟನೆಯಿಂದ ಹಿಡಿದು ಪಾಕಿಸ್ತಾನದ ಮೇಲಿನ ಭಾರತದ ಪ್ರತೀಕಾರದ ಘಟನೆಗಳನ್ನು ಎಳೆಎಳೆಯಾಗಿ ದೇಶದ ಮುಂದೆ ಇಡುತ್ತಿದ್ದಾರೆ.ಅವರ ಸಾಹಸ-ಧೈರ್ಯ ಹಾಗೂ ದೇಶಾಭಿಮಾನಕ್ಕೆ ಹ್ಯಾಟ್ಸಾಫ್.
ಯುದ್ಧಭೂಮಿಯ ಪ್ರದೇಶದಲ್ಲಿ ಅಲ್ಲಿ ನಡೆಯುತ್ತಿರುವ ದಾಳಿ-ಪ್ರತಿದಾಳಿಯ ಕ್ಷಣಕ್ಷಣದ ಮಾಹಿತಿಯನ್ನು ಅಪ್ಡೇಟ್ ಮಾಡುತ್ತಿರುವ ವರದಿಗಾರರ ಕೆಲಸ ಊಹೆ ಮಾಡಿದಷ್ಟು ಸಲೀಸಲ್ಲ. ಹೆಜ್ಜೆ ಹೆಜ್ಜೆಗೂ ಅಪಾಯ.. ಕ್ಷಣ ಕ್ಷಣಕ್ಕೂ ಆತಂಕ-ಭೀತಿ. ಯಾವ ಕ್ಷಣದಲ್ಲಿ ಏನಾದೀತೋ ಎನ್ನುವ ಭಯದಲ್ಲೇ ಕೆಲಸ ಮಾಡುವಂಥ ಸನ್ನಿವೇಶ ಅದು.ರಿಪೋರ್ಟಿಂಗ್ ಮಾಡುವ ಉತ್ಸಾಹ ಏನೇ ಇದ್ದರೂ ಆತಂಕದಲ್ಲೇ ಕೆಲಸ ಮಾಡಬೇಕಾದ ಸ್ಥಿತಿ.ಯುದ್ದಭೂಮಿಯಲ್ಲಿ ಆಗುತ್ತಿರುವ ಕ್ಷಣ ಕ್ಷಣದ ಅಪ್ಡೇಟ್ಸ್ ಗಳನ್ನು ಚಾಚೂತಪ್ಪದೆ ಕೊಡಬೇಕೆಂದು ಬೆಂಗಳೂರು ಅಥವಾ ದೆಹಲಿಯಂಥ ಮುಖ್ಯ ಕಚೇರಿಗಳ ಎಸಿ ಚೇಂಬರ್ ನಲ್ಲಿ ಕುಳಿತುಕೊಂಡು ಫರ್ಮಾನ್ ಹೊರಡಿಸುವವರಿಗೇನು ಗೊತ್ತು ಜೀವವನ್ನು ಕೈಲಿಡಿದು ಕೆಲಸ ಮಾಡುವವರ ಪರಿಸ್ತಿತಿ.ಇಂಥಾ ಸ್ತಿತಿಯಲ್ಲು ಎಕ್ಸ್ ಕ್ಲ್ಯೂಸಿವ್ ಬಯಸುವಂತವರ ಅಮಾನವೀಯತೆ ನಿಜಕ್ಕು ಖಂಡನಾರ್ಹ.ಅವರನ್ನೂ ಮನುಷ್ಯರಂತೆ ನೋಡಬೇಕೆನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಕಳಕಳಿ.

ಭಾರತ-ಪಾಕಿಸ್ತಾನದ ನಡುವಿನ ಪ್ರತಿಕಾರದ ಕಾರ್ಯಾಚರಣೆ ವರದಿಗಾರಿಕೆ ಮಾಡುತ್ತಿರುವ ನಮ್ಮ ಮಾದ್ಯಮಯೋಧರಿಗೆ ಸರಿಯಾದ ರೀತಿಯ ಊಟ ಹಾಗೂ ವಸತಿ ವ್ಯವಸ್ಥೆ ಸಿಗುತ್ತಿದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಅವರನ್ನು ಯುದ್ಧದ ಭೂಮಿಗೆ ಕಳುಹಿಸಿಕೊಟ್ಟ ಪ್ರೀತಿಪಾತ್ರರ ಮನಸಿನಲ್ಲಿ ಏನೆಲ್ಲಾ ಮನೋಯುದ್ದ ನಡೆಯುತ್ತಿರುಬಹುದು ಎಂಬುದನ್ನು ಊಹಿಸಿಕೊಂಡ್ರೂ ಸಂಕಟವಾಗುತ್ತದೆ. ರಾತ್ರಿ ವೇಳೆಯೂ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುವ ಆತಂಕವಿರುವುದಿಂದ ರಾತ್ರಿ ವೇಳೆಯೂ ನೆಮ್ಮದಿ ಯ ನಿದ್ರೆ ಸಿಗುತ್ತಿಲ್ಲವೇನೋ..? ಬೆಳಗ್ಗೆ ಕಣ್ಮುಚ್ಚೋಣ ಎಂದ್ರೆ ಮದ್ದುಗುಂಡುಗಳ ಸದ್ದು.ಯಾವ ಮೂಲೆ ಯಿಂದ ಯಾವ ಬಾಂಬ್-ಕ್ಷಿಪಣಿಗಳು ತೂರಿ ಬಂದಾವೋ ಎನ್ನುವ ಆತಂಕ..ಪಾಪ..ಅಲ್ಲಿ ಕಾಲ ಕಳೆಯುತ್ತಿರುವ ನಮ್ಮ ಮಾದ್ಯಮಮಿತ್ರರ ಜೀವ-ಜೀವನಗಳ ಬಗ್ಗೆ ನೆನಪಿಸಿಕೊಂಡರೂ ಅಯ್ಯೋ ಎನಿಸುತ್ತೆ.ಆದರೂ ಅದನ್ನೆಲ್ಲಾ ಪಕ್ಕಕ್ಕಿಟ್ಟು ಪಾಕಿಸ್ತಾನದ ವಿರುದ್ದ ಭಾರತ ನಡೆಸುತ್ತಿರುವ ಕಾರ್ಯಾಚರಣೆ ವರದಿಗಾರಿಕೆಯನ್ನು ಕೆಚ್ಚೆದೆಯಿಂದಷ್ಟೇ ಅಲ್ಲಆತ್ಮಾಭಿಮಾನದಿಂದ ಮಾಡುತ್ತಿರುವ ನಮ್ಮ ಮಾದ್ಯಮ ಯೋಧರ ಕರ್ತವ್ಯನಿಷ್ಟೆಗೆ ಒಂದು ಸಲಾಮ್ ಹೇಳಲೇಬೇಕು..
ಇನ್ನೊಂದೆಡೆ ಪಾಕಿಸ್ತಾನ ವಿರುದ್ಧ ಭಾರತ ನಡೆಸುತ್ತಿರುವ ಕಾರ್ಯಾಚರಣೆ( ಅದು ಯುದ್ಧವಲ್ಲ) ಅದಕ್ಕೆ ಪ್ರತಿಯಾಗಿ ಪಾಕ್ ನಡೆಸುತ್ತಿರುವ ಅಪ್ರಚೋದಿತ ದಾಳಿ ಸಧ್ಯಕ್ಕೆ ಮುಗಿಯುವಂಗೆ ಕಾಣುತ್ತಿಲ್ಲ.ಪಾಪಿ ಪಾಕಿಸ್ತಾನವನ್ನು ಬಗ್ಗು ಬಡಿದು ನಮಗಾದ ನೋವು-ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆನ್ನುವ ಆಪರೇಷನ್ ಸಿಂಧೂರ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ಫಲಿತಾಂಶ ಪಡೆಯುತ್ತಿದೆ.ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಭಾರತದ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಪಾಕಿಸ್ತಾನದಂಥ ದಿವಾಳಿ ಮತ್ತು ವಿದ್ವಂಸಕ ಮನಸ್ತಿತಿಯನ್ನು ಬೆಂಬಲಿಸುವ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳಿ್ಗೆ ಎಚ್ಚರಿಕೆ ಕರೆಗಂಟೆಯಾಗಲಿ.
ಒಟ್ಟಿನಲ್ಲಿ ಪಾಕ್ ವಿರುದ್ಧದ ಕಾರ್ಯಾಚರಣೆ ಪದೇ ಪದೆ ತನ್ನ ಕಿಡಿಗೇಡಿತನದಿಂದ ಭಾರತದ ಆತ್ಮಾಭಿಮಾನವನ್ನು ಕೆಣಕುತ್ತಿದ್ದ ಪಾಪಿಸ್ತಾನದ ನಡಮುರಿದು ಮೂಲೆ ಗುಂಪಾಗುವಂತೆ ಮಾಡಿದೆ.ಪಾಕಿಸ್ತಾನ ಹಾಗೂ ಅದರ ಮನಸ್ತಿತಿಯನ್ನು ಬೆಂಬಲಿಸುವ ದೇಶಗಳಿಗೂ ಇದೇ ಗತಿ ಆಗುತ್ತೆ ಎನ್ನುವ ಮತ್ತೊಂದು ಎಚ್ಚರಿಕೆ ಸಂದೇಶವನ್ನು ಈ ಕಾರ್ಯಾಚರಣೆ ರವಾನಿಸಿದೆ.