advertise here

Search

IPS ಓಂ ಪ್ರಕಾಶ್ ಮರ್ಡರ್ ಮಿಸ್ಟರಿ..! ಇದು “ಪತ್ರಕರ್ತ” ಹೇಳಿದ ಇಂಟರೆಸ್ಟಿಂಗ್  ಸ್ಟೋರಿ..


ರಕ್ತದ ಮಡುವಿನಲ್ಲಿ ಅತ್ಯಂತ ಸಂಭಾವಿತ ಅಧಿಕಾರಿ ಓಂ ಪ್ರಕಾಶ್  ಪ್ರಾಣಬಿಕ್ಷೆಗೆ ಅಂಗಲಾಚುತ್ತಿದ್ದರೂ, ಆಸ್ತಿ ಮುಂದೆ  ಸಂಬಂಧಗಳನ್ನೇ ಧಿಕ್ಕರಿಸಿದ ಪತ್ನಿ-ಮಗಳಿಗೆ ಕರುಣೆ ಬರಲಿಲ್ವಾ..?!

ಬೆಂಗಳೂರು.: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್( 68) ಅವರ ಕೊಲೆ ನಡೆದು ಹೋಗಿದೆ.ಕೊಲೆ ಸುತ್ತ ಅನೇಕ ಅನುಮಾನಗಳು ಸುಳಿದಾಡುತ್ತಿವೆ.ಕೊಲೆಗೆ ತೀರ್ಥಹಳ್ಳಿ ಮೂಲದ ಹೆಣ್ಣಿನ ಜತೆಗಿನ ಸಹವಾಸ ಕಾರಣವಾಯ್ತಾ..? ಪತ್ನಿ-ಮಗಳ ಜತೆಗಿನ ಗಲಾಟೆ ಕಾರಣವಾಯ್ತಾ..? ಅತಿಯಾದ ಸಿಟ್ಟಿನಿಂದಲೇ ಸಾವು ತಂದುಕೊಂಡ್ರಾ..? ದಾರಿ ತಪ್ಪಿದ  ಮಗನ ಓಲೈಕೆಗಾಗಿ ಪತ್ನಿ-ಮಗಳನ್ನು ಎದುರಾಕಿಕೊಂಡಿದ್ದೇ ಕಾರಣವಾಯ್ತಾ..? ಸಹೋದರಿಗೆ ದೂರದ ದಾಂಡೇಲಿಯಲ್ಲಿ ಬೆಲೆ ಬಾಳುವ 5 ಎಕರೆ ಜಮೀನು ಖರೀದಿಸಿದ್ದೇ ಕಾರಣವಾಯ್ತಾ..? ಹೀಗೆ ನಾನಾ ರೀತಿಯ ಪ್ರಶ್ನೆಗಳು ಸುಳಿದಾಡುತ್ತಿವೆ. ಆದರೆ ಓಂಪ್ರಕಾಶ್ ಮರ್ಡರ್ ಯಾವೆಲ್ಲಾ ಕಾರಣಕ್ಕೆ ಆಗಿರಬಹುದೆನ್ನುವುದರ ಮಾಹಿತಿಯನ್ನು ಅವರೊಂದಿಗೆ ಒಡನಾಡಿದ ಪತ್ರಕರ್ತರೋರ್ವರು  ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ಹಂಚಿಕೊಂಡಿದ್ದಾರೆ.

ಓಂ ಪ್ರಕಾಶ್ ಪೊಲೀಸ್ ಮಹಾನಿರ್ದೇಶಕರಾಗಿದ್ದ ವೇಳೆ ಬರೆದ ಸುದ್ದಿಯೊಂದರ ಮೂಲಕ ಪರಿಚಯವಾಗಿದ್ದ ಆ ಪತ್ರಕರ್ತ ನಂತರ ಅವರಿಗೆ ಸಾಕಷ್ಟು ಆತ್ಮೀಯರಾದ್ರಂತೆ.,ಅವರಿಬ್ಬರ ನಡುವಿನ ಆತ್ಮೀಯತೆ ಎಷ್ಟು ಗಾಢವಾಗಿಬಿಟ್ಟಿತೆಂದ್ರೆ ತಮ್ಮ ಅನೇಕ ವೈಯುಕ್ತಿಕ ವಿಚಾರಗಳನ್ನೂ ಇವರೊಂದಿಗೆ ಹಂಚಿಕೊಳ್ಳುತ್ತಿದ್ದರಂತೆ. ಮಾದ್ಯಮಗಳಲ್ಲಿ ಕೇಳಿಬರುತ್ತಿರುವ ತೀರ್ಥಹಳ್ಳಿ ಮೂಲದ ಮಹಿಳೆಯೊಂದಿಗಿನ ಲಿಂಕ್ ವಿವಾದ ಬಗೆಹರಿಸಿದ್ದೂ ಇದೇ ಪತ್ರಕರ್ತ.ಯಾವುದೋ ವಿಷಮಗಳಿಗೆಯಲ್ಲಿ ಆ ಯುವತಿ ಹಾಗೂ ಇವರೊಂದಿಗೆ ಬೆಳೆದ ಸಂಬಂಧ ಬಿರುಕುಬಿಟ್ಟು ಆಕೆ 2 ಕೋಟಿ ಹಣ,ಆರ್ ಟಿ ನಗರದಲ್ಲಿ ಮನೆ ಬೇಕೆನ್ನುವುದರ ಡಿಮ್ಯಾಂಡ್ ಇಟ್ಟಾಗ ಅದುರಿ ಹೋಗಿದ್ದ ಓಂಪ್ರಕಾಶ್ ಅವರಿಗೆ ಧೈರ್ಯ ಹೇಳಿ ಕೊನೆಗೆ 70 ಲಕ್ಷಕ್ಕೆ ಸೆಟ್ಲ್ ಮೆಂಟ್ ಮಾಡಿ ಪ್ರಕರಣ ಸುಖಾಂತ್ಯಗೊಳಿಸಿದ್ದರಂತೆ.ಆದರೆ ಆ ನಂತರ ಆಕೆ ಯಾವತ್ತೂ ಇವರ ಸಂಪರ್ಕದಲ್ಲು ಇರಲಿಲ್ಲ..ತಂಟೆಗೂ ಬರಲಿಲ್ಲವಂತೆ.

ಓಂಪ್ರಕಾಶ್ ಅವರಿಗೆ ಮೊದಲಿಂದಲೂ ಸಹೋದರಿ ಮೇಲೆ ತುಸು ಪ್ರೀತಿ ಹೆಚ್ಚು.ಅದಕ್ಕಾಗಿಯೇ ದಾಂಡೇಲಿಯ  ಪ್ರೈಮ್ ಜಾಗದಲ್ಲಿ ಆಕೆಗೋಸ್ಕರ ಕೋಟ್ಯಾಂತರ ಬೆಲೆಯ ಆಸ್ತಿ ಮಾಡಿಕೊಟ್ಟಿದ್ದರಂತೆ. ತನ್ನನ್ನು ನಂಬಿ ಬಂದಿದ್ದ ಹೆಂಡತಿಗೂ ಅಷ್ಟೇ ಪ್ರಮಾಣದಲ್ಲಿ ಆಸ್ತಿ ಮಾಡಿದಿದ್ರೆ ಬಹುಷಃ ದಂಪತಿ ನಡುವೆ ಜಗಳ-ವಾಗ್ವಾದ-ಯುದ್ಧಗಳು ಶುರುವಾಗುತ್ತಿರಲಿಲ್ಲವೇನೋ..? ನನಗಿಂತ ನಿಮ್ಮ ತಂಗಿಗೇ ಆಸ್ತಿ ಹೆಚ್ಚಿಗೆ ಮಾಡಿದ್ದೀರ..ನಿಮಗೇಕೆ ನಾವು ಬೇಕು..ಈ ಕೂಡಲೇ ಆ ಆಸ್ತಿಯನ್ನು ನಮ್ಮ ಹೆಸರಿಗೆ ಬರೆಸಿಕೊಡಿ, ಇಲ್ಲವಾದ್ರೆ ಅದಕ್ಕಿಂತ ಹೆಚ್ಚಿನ ಆಸ್ತಿ ನಮಗು ಮಾಡಿಕೊಡಿ ಎಂದು ಡಿಮ್ಯಾಂಡ್ ಇಟ್ಟಿದ್ದರಂತೆ.ಆದ್ರೆ ಓಂಪ್ರಕಾಶ್ ಅವರಿಗೆ ಅದು ಸಾಧ್ಯವಾಗಿರಲಿಲ್ಲ..ಆಗ ಪತ್ನಿಗೆ ಸಾಥ್ ಕೊಟ್ಟಿದ್ದು ಇವರ ಮಗಳು.ಅವರಿಬ್ಬರು ಸೇರಿಕೊಂಡು ಪದೇ ಪದೇ ಅಪ್ಪನ ಮೇಲೆ ಸವಾರಿ ಮಾಡುತ್ತಿದ್ದರಂತೆ.ಅದರಿಂದ ರೋಸಿ ಹೋಗಿದ್ದ ಓಂಪ್ರಕಾಶ್ ಅವರು ಅನೇಕ ಆರೋಗ್ಯದ ಸಮಸ್ಯೆಗೂ ತುತ್ತಾಗಿದ್ದರಂತೆ.

ಹಾದಿ ತಪ್ಪಿದ ಮಗನ ಪರವಾಗಿ ಓಂಪ್ರಕಾಶ್ ಅವರು ನಿಲ್ಲದೆ ಹೋಗಿದಿದ್ರೆ ಪತ್ನಿ ಹಾಗು ಮಗಳ ಜತೆಗೆ ದ್ವೇಷ ಕಟ್ಟಿಕೊಳ್ಳುತ್ತಿರಲಿಲ್ಲ ಎನ್ನಿಸುತ್ತೆ. ತನ್ನ ತಂದೆಯ ಪವರ್ ನ್ನು ಎಷ್ಟ್ ಬೇಕೋ ಅಷ್ಟು ದುರುಪಯೋಗಪಡಿಸಿಕೊಂಡಿದ್ದ ಮಗ ಸಾಕಷ್ಟು ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ. ಎಷ್ಟೋ ವ್ಯವಹಾರಗಳಲ್ಲಿ ಹಣ ಹೂಡಿಸಿದ್ದ.ಅಪ್ಪ ಐಜಿ ಆಗಿದ್ದಾಗಲಂತೂ ಈತನ ರಂಪಾಟಗಳು ಸಾಕು ಸಾಕಾಗಿ ಹೋಗಿತ್ತಂತೆ.ಆದರೂ ಮಗನ ಮೇಲಿನ ಮಮಕಾರದಿಂದಲೇನೋ ಓಂಪ್ರಕಾಶ್ ಕೋಟ್ಯಾಂತರ ಸಾಲ ಮಾಡಿಬಿಟ್ಟಿದ್ರು.ಮಗನನ್ನು ಸರಿದಾರಿಗೆ ತರೊಕ್ಕೆ ಯತ್ನಿಸಿದ್ರೂ ಆತ ಕಂಟ್ರೋಲ್ ಗೇ ಬರಲಿಲ್ಲವಂತೆ.ಜತೆಗೆ ಅಪ್ಪನನ್ನು ಪುಸಲಾಯಿಸಿ ಸಾಕಷ್ಟು ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದನಂತೆ. ರಾಮನಗರದಲ್ಲಿ ಕ್ವಾರಿ ಮಾಡಿ ಕೈ ಸುಟ್ಟುಕೊಂಡಿದ್ದನಂತೆ.ಅದಕ್ಕೆ ಬಂಡವಾಳ ಹೂಡಿದ್ದ ಕೇರಳಾ ಮೂಲದ ಉದ್ಯಮಿ ಇವರ ವಿರುದ್ಧ 5 ಕೋಟಿ ಹಣ ಬರಬೇಕೆಂದು ಕೇರಳಾದಲ್ಲಿ ದಾವೆ ಕೂಡ ಹೂಡಿದ್ದನಂತೆ.

ALSO READ :  ಮಹತ್ವಾಕಾಂಕ್ಷಿ `ಕಾವೇರಿ 5ನೇ ಹಂತದ ಯೋಜನೆ' ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಾಂಸಾರಿಕವಾಗಿ ಓಂಪ್ರಕಾಶ್ ಅವರದು ಅತ್ಯಂತ ಡಿಸ್ಟರ್ಬ್ ಆದ ಕುಟುಂಬ.ಅವರು ನೆಮ್ಮದಿಯಿಂದ ಕಾಲ ಕಳೆದಿದ್ದೇ ಕಡಿಮೆಯಂತೆ.ಅಪ್ಪ ಮಗ ಒಂದಾದ್ರೆ ಅಪ್ಪ-ಮಗಳು ಒಂದಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದರಂತೆ.ಅದು ಎಷ್ಟು ವಿಕೋಪಕ್ಕೆ ಹೋಗುತ್ತಿತ್ತು ಎಂದರೆ ಕೈಗೆ ಕಾಲಿಗೆ ಸಿಕ್ಕ ವಸ್ತುಗಳಿಂದಲೇ ಹೊಡೆದಾಡಿಕೊಳ್ಳುತ್ತಿದ್ದರಂತೆ.ಅವರ ಮನೆಯಲ್ಲಿ ಎಲ್ಲರಿಗೂ ವಿಪರೀತ ಸಿಟ್ಟಂತೆ. ದ್ವೇಷ-ಅಸೂಯೆ-ಸಂಘರ್ಷ-ಕೊಲೆಗೆ ಕಾರಣವಾಗಿದ್ದೂ ಅದೇ ಸಿಟ್ಟಂತೆ.

ಮಗನಿಗೆ ಮತ್ತು ತಂಗಿಗೆ ಅಪಾರ ಮೊತ್ತದ ಆಸ್ತಿ ಮಾಡಿಕೊಟ್ಟಿದ್ದೇ ತಾಯಿ-ಮಗಳಿಗೆ ಕೊಲ್ಲುವಷ್ಟು ಕೋಪ ತಂದಿತ್ತಂತೆ. ಹಾದಿ ತಪ್ಪಿದ ಮಗ ಹಾಗೂ ದೂರದಲ್ಲಿರುವ ತಂಗಿಗೆ ಇಷ್ಟೊಂದು ಆಸ್ತಿ ಮಾಡಿಕೊಟ್ಟು ತಮ್ಮನ್ನು ಬರಿಗೈ ಮಾಡಿದ್ದಾರೆನ್ನುವ ಕೋಪಕ್ಕೆ ಇತ್ತೀಚೆಗೆ ಸಿಕ್ಕಾಪಟ್ಟೆ ಗಲಾಟೆಯಾಗುತ್ತಿತ್ತಂತೆ.ಅನೇಕ ಬಾರಿ ಹೊಯ್ಸಳ ಪೊಲೀಸರೇ ಮನೆಗೆ ಬಂದು ಸಮಾಧಾನ ಮಾಡಿ ಹೋಗುತ್ತಿದ್ದರಂತೆ.

ಆದರೆ ಭಾನುವಾರ ಮದ್ಯಾಹ್ನ ಅಮ್ಮ-ಮಗಳ ಸಮೇತ ಆರ್ಡರ್ ಮಾಡಿಸಿಕೊಂಡು ಊಟ ಮಾಡುತ್ತಿದ್ದಾಗಲೂ ಆಸ್ತಿ ವಿಚಾರಕ್ಕೆ ಮಾತು ಬೆಳೆದಿರಬಹುದೇನೋ..? ಓಂಪ್ರಕಾಶ್ ಅವರು ಕೂಡ ಎಂದಿನ ಲಹರಿಯಲ್ಲೇ ಮಾತನಾಡಿರಬಹುದು.ಆದ್ರೆ ಆ ವೇಳೆ ಅಮ್ಮ-ಮಗಳಿಗೆ ಏನಾಯ್ತೋ ಗೊತ್ತಿಲ್ಲ.ಹರಿತವಾದ ಚಾಕುವಿನಿಂದ 6 ಬಾರಿ ಸ್ಟ್ಯಾಬ್ ಮಾಡಿರಬಹುದು. ಸಿಟ್ಟು ಗಲಾಟೆಯಲ್ಲಿ ಮುಗಿಯಬಹುದೆಂದು ತಿಳಿದಿದ್ದ ಓಂಪ್ರಕಾಶ್ ಅವರಿಗೆ ಅದು ತನ್ನನ್ನು ಕೊಲೆ ಮಾಡುವಷ್ಟು ತಾರಕಕ್ಕೆ ಹೋಗಬಹುದೆನ್ನುವ ಸಣ್ಣ ಕಲ್ಪನೆಯೂ ಇರಲಿಲ್ಲ ಎನ್ನಿಸುತ್ತೆ.ಪಾಪ ಅವರು ಕೂಡ ಸಾಕಷ್ಟು ರೀತಿಯಲ್ಲಿ ತಮ್ಮನ್ನು ಉಳಿಸಿಕೊಳ್ಳೊಕ್ಕೆ ಪ್ರಯತ್ನಿಸಿರಬಹುದು.ಆದ್ರೆ ಅಮ್ಮ-ಮಗಳಿಬ್ಬರು ಸಿಟ್ಟಿನ ಆವೇಶದಲ್ಲಿ ತಾವೇನು ಮಾಡುತ್ತಿದ್ದೇವೆಂದು ಗೊತ್ತಾಗದೆ ಕೊಲೆ ಮಾಡಿರಬಹುದೇನೋ ಎನ್ನುತ್ತಾರೆ ಆ ಪತ್ರಕರ್ತ.

ಆದರೆ ಇಲ್ಲಿ ಪ್ರಶ್ನೆ ಇರೋದು, ಕೊಲೆಯನ್ನು ಪತ್ನಿ ಒಬ್ಬಳೇ ಮಾಡಿದ್ರಾ…? ಅಥವಾ ಅದು ಮಗಳೊಂದಿಗೆ ಸೇರಿಕೊಂಡು ಮಾಡಿದ ಪಾತಕನಾ..? ಪತಿಯನ್ನು ಕೊಲ್ಲುವಾಗ ಅಮ್ಮನಿಗೆ ಸಾಥ್ ಕೊಡುವಷ್ಟು ಮಗಳು ನಿಷ್ಕರುಣಿಯಾಗಿದ್ದು ಯಾಕೆ..? ಅಮ್ಮನ ಜತೆ ಸೇರಿ ಆಕೆ ಕೂಡ ಚಾಕು ಹಾಕಿದ್ಲಾ..? ಹೆತ್ತ ಅಪ್ಪನನ್ನು ಕೊಲ್ಲುವಂಥ ಆಕ್ರೋಶ-ಅಸಮಾಧಾನ ಆಕೆಗೆ ಇದ್ದುದ್ದಾರೂ ಏಕೆ..? ಅದಕ್ಕೆ ಆಸ್ತಿ ಒಂದೇ ಕಾರಣ ವಾಗಿತ್ತಾ..? ರಕ್ತದ ಮಡುವಿನಲ್ಲಿ ಪ್ರಾಣ ಬಿಕ್ಷೆಗಾಗಿ ಅಂಗಲಾಚುತ್ತಿದ್ದ ಅಪ್ಪನ ಬಗ್ಗೆ ಆಕೆಗೆ ಕರುಣೆಯೇ ಬಾರಲಿಲ್ಲವೇ..? ಕೊಲೆ ಮಾಡಿ ಒದ್ದಾಡುವಾಗ ತನ್ನ ತಪ್ಪಿನ ಅರಿವಾಗಿ ಅಪ್ಪನನ್ನು ಉಳಿಸಿಕೊಳ್ಳೊಕ್ಕೆ ಅಟ್ಲೀಸ್ಟ್ ಅಂಬುಲೆನ್ಸ್ ಗಾದ್ರೂ ಕರೆ ಮಾಡಬಹುದಿತ್ತಲ್ಲವೇ.? ಸತ್ತ ನಂತರ ಸಾಕ್ಷ್ಯ ನಾಶಕ್ಕೆ ಏನಾದ್ರೂ ಪ್ರಯತ್ನ ನಡೆಯಿತಾ..?( ಏಕೆಂದ್ರೆ ಓಂ ಪ್ರಕಾಶ್ ಅವರ ಶವದ ಮೇಲೆ ಕಂಡುಬರುತ್ತಿರುವ ಅಂಶಗಳು ಸಾಕಷ್ಟು ಅನುಮಾನ ಮೂಡಿಸುತ್ತವೆ).ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.ಪೊಲೀಸರು ತನಿಖೆಯಲ್ಲಿ ಇದನ್ನು ಬಹಿರಂಗಪಡಿಸುತ್ತಾರೆ.

ಓಂಪ್ರಕಾಶ್ ಅವರಂಥ ಸಂಭಾವಿತ ಪೊಲೀಸ್ ಅಧಿಕಾರಿಯ ಸಾವು ಇಷ್ಟೊಂದು ಧಾರುಣವಾಗಿ ನಡೆದೋಗುತ್ತದೆ ಎನ್ನುವ ಊಹೆ ನಮಗೆ ಇರಲಿಲ್ಲ.ಯಾಕಂದ್ರೆ ಯಾರೊಬ್ಬರಿಗೂ ಕೆಟ್ಟದ್ದನ್ನು ಮಾಡೋದಿರಲಿ,ಆ ರೀತಿ ಅವರು  ಬಯಸಿದ್ದೂ ಇಲ್ಲ.ಆದರೆ ವೈಯುಕ್ತಿಕ ಬದುಕನ್ನು,ಸಂಬಂಧಗಳನ್ನು ಚೆನ್ನಾಗಿ ಕಾಪಾಡಿಕೊಂಡಿದ್ರೆ, ನಿಭಾಯಿಸಿದ್ರೆ ಇದೆಲ್ಲಾ ಆಗುತ್ತಿರಲಿಲ್ಲವೇನೋ..? ಪತಿ-ಮಗಳು ಸಹ ವ್ಯಕ್ತಿ-ಸಂಬಂಧಗಳಿಗಿಂತ ಆಸ್ತಿಯೇ ದೊಡ್ಡದು ಎನ್ನುವ ಭ್ರಮೆಗೆ ಸಿಲುಕಿ ಪಾತಕ ನಡೆಸಿದ್ದನ್ನು ಇತಿಹಾಸ ಮರೆಯೊಲ್ಲ ಎನ್ನಿಸುತ್ತೆ.


Political News

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

Scroll to Top