advertise here

Search

ಕೊಲೆ ಮಾಡಿ “ರಾಕ್ಷಸನ ಸಂಹಾರ”ವಾಗಿದೆ ಎಂದು ಮೆಸೇಜ್‌ ಮಾಡಿದ್ದ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಪತ್ನಿ..!


ಆಸ್ತಿ ವಿವಾದಕ್ಕೆ ಪತ್ನಿಯಿಂದಲೇ ಕೊಲೆಯಾದ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌

ಬೆಂಗಳೂರು: ಬೆಂಗಳೂರಿನಲ್ಲಿ ಹಿರಿಯ ಐಪಿಎಸ್‌  ಹಾಗೂ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಕೊಲೆಯಾಗಿದ್ದಾರೆ.ಎಚ್‌ ಎಸ್‌ ಆರ್‌ ಲೇ ಔಟ್‌ ನ ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಕೊಲೆಯಾಗಿರುವ ಓಂಪ್ರಕಾಶ್‌ ಅವರನ್ನು ಪತ್ನಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಈ ಹಿನ್ನಲೆಯಲ್ಲಿ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆಯಾಗಿದೆ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ದೃಢಪಟ್ಟಿದೆ.ತನ್ನ ತಂಗಿ ಹೆಸರಿಗೆ ದಾಂಡೇಲಿಯಲ್ಲಿ ಓಂಪ್ರಕಾಶ್‌ ಆಸ್ತಿ ಮಾಡಿದ್ದರು.ಇದೇ ವಿಚಾರದಲ್ಲಿ ದಂಪತಿ ನಡುವೆ ವಾಗ್ವಾದ ನಡೆಯುತ್ತಿತ್ತು.ಅದು ವಿಪರೀತಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆ ಮಾಡಿದ ಮೇಲೆ  ಪತ್ನಿ ಪಲ್ಲವಿ ಅವರು, ಮತ್ತೋರ್ವ ಐಪಿಎಸ್‌ ಅಧಿಕಾರಿಗೆ ಕೊನೆಗೂ, ರಾಕ್ಷಸನ ಸಂಹಾರವಾಗಿದೆ ಎನ್ನುವ ಲಹರಿಯಲ್ಲಿ  ಮೆಸೇಜ್‌ ರವಾನಿಸಿದ್ದರಂತೆ.ಇದನ್ನು ಪೊಲೀಸರ ಗಮನಕ್ಕೆ ಆ ಐಪಿಎಸ್‌ ತಂದಿದ್ದರು ಎನ್ನಲಾಗಿದೆ. ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.

ALSO READ :  ಸುವರ್ಣ ನ್ಯೂಸ್ ನಲ್ಲಿ ಬದಲಾವಣೆ ಪರ್ವ.?! ಬದಲಾಗುತ್ತಾ ಚಾನೆಲ್ ಹೆಸರು..! ಮೈಗಳ್ಳರಿಗೆಲ್ಲಾ ಗೇಟ್ ಪಾಸ್..!?

ಅಂದ್ಹಾಗೆ 68  ವರ್ಷ ವಯಸ್ಸಿದ ಓಂ‌ ಪ್ರಕಾಶ್,1981 ಬ್ಯಾಚ್ ನ ಐಪಿಎಸ್ ಅಧಿಕಾರಿ .2015 ರಲ್ಲಿ ರಾಜ್ಯದ ಡಿಜಿಐಜಿಪಿಯಾಗಿದ್ದ ಓಂ ಪ್ರಕಾಶ್. ರಾಜ್ಯದ 38 ನೇ ಡಿಜಿಐಜಿಪಿ ಕೂಡ. 2017 ರಲ್ಲಿ ನಿವೃತ್ತ ರಾಗಿದ್ದರು. ಅಂದ್ಹಾಗೆ ಓಂ ಪ್ರಕಾಶ್ ಮೂಲತಃ ಬಿಹಾರ ರಾಜ್ಯದ ಚಾರ್ಪನ್ ಜಿಲ್ಲೆಯವರು.

ಎಮ್ ಎಸ್ ಸಿ ಜಿಯೋಲಾಜಿಯಲ್ಲಿ ಪದವಿ ಪಡೆದಿದ್ದರು. ಡಿಜಿಐಜಿಪಿ ಯಾಗಿದ್ದ ವೇಳೆ ಮಹಿಳಾ ಭದ್ರತೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಕೌಂಟರ್ ಟೆರರಿಸಂ, ಮೂಲತ ಯೋಜನೆಗಳನ್ನ ರಾಜ್ಯದಲ್ಲಿ ಜಾರಿಮಾಡಿ  ಹೆಸರುವಾಸಿಯಾಗಿದ್ದರು.

ಪತ್ನಿಯಿಂದಲೇ ಆಸ್ತಿ ವಿಚಾರವಾಗಿ ಕೊಲೆ ಆಗಿರುವ ಓಂಪ್ರಕಾಶ್‌ ಅವರ ದುರ್ಮರಣದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.ಕೊಲೆಯಲ್ಲಿ ಪತ್ನಿ ಜತೆಗೆ ಬೇರೆ ಯಾರಾದರೂ ಶಾಮೀಲಾಗಿದ್ದರಾ ಎನ್ನುವುದರ ತನಿಖೆ ನಡೆಯುತ್ತಿದ್ದು ಸ್ಪೋಟಕ ಮಾಹಿತಿ ದೊರೆತಿದೆ ಎನ್ನಲಾಗಿದೆ.


Political News

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

Scroll to Top