ರಾಜ್ಯೋತ್ಸವದ ಹೊಸ್ತಿಲಲ್ಲೇ ಕನ್ನಡ ಸಾಹಿತ್ಯ ಪರಿಷತ್ ಗೆ ಮರ್ಮಾಘಾತ..! ಪರಿಷತ್ ನಿಂದ ಹೊರಬಿದ್ದ ಕನ್ನಡದ ಕಟ್ಟಾಳು ಜೆ.ಎಂ ರಾಜಶೇಖರ್..
ಬೆಂಗಳೂರು: ಕನ್ನಡ ನಾಡುನುಡಿಯ ಹಬ್ಬ ರಾಜ್ಯೋತ್ಸವ ಆಚರಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ.ಅಷ್ಟರಲ್ಲೇ ಕನ್ನಡ ನಾಡುನುಡಿಯ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ.ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರ ಧೋರಣೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಅವರ ನಿಲುವಿಗೆ ಬೇಸತ್ತು ಸಾಕಷ್ಟು ಕನ್ನಡದ ಕಟ್ಟಾಳುಗಳು ಹೊರಬರಲು ನಿರ್ದರಿಸಿದ್ದು ಇದರ ಮೊದಲ ಪ್ರಯತ್ನ ಎನ್ನುವಂತೆ ಕನ್ನಡದ ಕಟ್ಟಾಳು, ಕನ್ನಡಪರ ಹೊರಾಟಗಾರ, ಸಾಮಾಜಿಕ ಕಾರ್ಯಕರ್ತ,ಆರ್ ಟಿಐ ಗೆ ಕರ್ನಾಟಕದಲ್ಲಿ ನೆಲೆ-ಬೆಲೆ ದೊರಕಿಸಿಕೊಟ್ಟಿರುವ ಜೆ.ಎಂ.ರಾಜಶೇಖರ್ … Read more