PLEASE ALLOW TO X’MAS MIDNIGHT HOLY MASS…”ಮಧ್ಯರಾತ್ರಿ” ಕ್ರಿಸ್ಮಸ್ ಆಚರಣೆಗೇಕೆ ನಿರ್ಬಂಧ,ಕಾಂಗ್ರೆಸ್ ಸರ್ಕಾರಕ್ಕೆ ಕ್ರೈಸ್ತರ ಪ್ರಶ್ನೆ:ಅವಕಾಶ ನೀಡದಿದ್ದರೆ ಉಗ್ರ ಪರಿಣಾಮ..!
ಕ್ರೈಸ್ತರ ಪ್ರಮುಖ ಹಬ್ಬವೇ ಕ್ರಿಸ್ಮಸ್..ಈ ಆಚರಣೆ ಶುರುವಾಗುವುದೇ ಮಧ್ಯರಾತ್ರಿಯಿಂದ..ಅದಕ್ಕೆ ಕಾರಣವೂ ಇದೆ.ಪ್ರಭು ಏಸುಕ್ರಿಸ್ತರ ಜನನವಾಗಿದ್ದೇ ಮಧ್ಯರಾತ್ರಿ.ಆದರೆ ದುರಂತ ನೋಡಿ ಕ್ರಿಸ್ಮಸ್ ಭಾರೀ ಸಂಭ್ರಮದಿಂದ ಆಚರಿಸಲ್ಪಡುವ ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಧ್ಯರಾತ್ರಿಯ ಸಂಭ್ರಮಕ್ಕೆ ಅವಕಾಶವೇ ಇಲ್ಲ..ಭದ್ರತೆಯ ನೆವವೊಡ್ಡಿ ಮಧ್ಯರಾತ್ರಿಯ ಆಚರಣೆಗೆ ನಿರ್ಬಂಧ ಹೇರಲಾಗುತ್ತಿದೆ.ಈ ಕೆಟ್ಟ ನಿರ್ಬಂಧದ ಸಂಪ್ರದಾಯವನ್ನು ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದ್ರೂ ತೆಗೆದುಹಾಕಲಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಿರಿಯ ಪತ್ರಕರ್ತರೂ ಆಗಿರುವ ಸಾಮಾಜಿಕ ಕಾರ್ಯಕರ್ತ ಆಲ್ವಿನ್ ಮೆಂಡೊನ್ಸಾ ಈ ಒಂದು ಮನವಿಯನ್ನು … Read more




