advertise here

Search

ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ?

karnataka mla ipl ticket

“ಯುವಕರೇ ದೇಶದ ಶಕ್ತಿ”, “ಜನಸಾಮಾನ್ಯರೇ ನಮ್ಮ ದೇವರು” ಎನ್ನುವ ಮಾತುಗಳು ಕೇವಲ ಭಾಷಣದ ವೇದಿಕೆಗಳಿಗೆ ಸೀಮಿತವೇ? ರಾಜ್ಯದ ಜನತೆ ಕುಡಿಯುವ ನೀರು, ರಸ್ತೆ, ಮೂಲಭೂತ ಸೌಕರ್ಯಗಳಿಗಾಗಿ ಕಛೇರಿಗಳಿಗೆ ಅಲಿದು ತಮ್ಮ ಚಪ್ಪಲಿಗಳೆ ಸವೆಸುತ್ತಿದ್ದರೂ ಕ್ಯಾರೆ ಎನ್ನದ ಈ ಸರ್ಕಾರ, ಶಾಸಕರ ಮೋಜು-ಮಸ್ತಿಗೆ ಮಾತ್ರ ಒಂದೇ ದಿನದಲ್ಲಿ ಸ್ಪಂದಿಸುತ್ತಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಐಪಿಎಲ್ ಕ್ರಿಕೆಟ್: ಜನರಿಗೆ ‘ಬ್ಲಾಕ್’ ದಂಧೆ, ಶಾಸಕರಿಗೆ ‘ಫ್ರೀ’ ಟಿಕೆಟ್ ಭಾಗ್ಯ!

ಕಳೆದ ಎರಡು ದಿನಗಳಿಂದ ವಿಧಾನಸಭೆಯಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತದೋ ಇಲ್ಲವೋ ಎಂಬ ಆತಂಕದ ನಡುವೆ, ಶಾಸಕರು ಮಾತ್ರ ಐಪಿಎಲ್ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದು ವಿಪರ್ಯಾಸ. “ನಾವು ವಿಐಪಿಗಳು, ಸಾಮಾನ್ಯರಂತೆ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ” ಎಂದು ಹಪಹಪಿಸುತ್ತಿದ್ದ ಶಾಸಕರ ಬೇಡಿಕೆಗೆ ಮಣಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಸಭೆ ನಡೆಸಿ ತಲಾ 2 ಟಿಕೆಟ್ (1+1) ವ್ಯವಸ್ಥೆ ಮಾಡಿದ್ದಾರೆ.

ಜನಸಾಮಾನ್ಯರು ಒಂದು ಟಿಕೆಟ್‌ಗಾಗಿ ಹಗಲು ರಾತ್ರಿ ಪರದಾಡಿ, ಸಾವಿರಾರು ರೂಪಾಯಿ ತೆತ್ತು ‘ಬ್ಲಾಕ್’ನಲ್ಲಿ ಖರೀದಿಸುತ್ತಿದ್ದರೆ, ಜನಪ್ರತಿನಿಧಿಗಳಿಗೆ ಮಾತ್ರ ಒಂದೇ ಫೋನ್ ಕರೆಯಲ್ಲಿ ಕೆಲಸವಾಗಿದೆ. ಇಲ್ಲಿ ಪ್ರಶ್ನೆ ಏನೆಂದರೆ, ಜನರ ಕೆಲಸಕ್ಕಾಗಿ ಒಂದೇ ದಿನದಲ್ಲಿ ಇಂತಹ ಸ್ಪಂದನೆ ಈ ಸರ್ಕಾರದಿಂದ ಯಾಕೆ ಸಿಗುತ್ತಿಲ್ಲ?

ಯುವಕರ ಭವಿಷ್ಯದ ಜೊತೆ ಚೆಲ್ಲಾಟ: 3 ವರ್ಷವಾದರೂ ಇಲ್ಲ ಉದ್ಯೋಗದ ‘ಕಾಲ್‌ಫಾರ್ಮ್’

ಒಂದೆಡೆ ಶಾಸಕರ ಐಪಿಎಲ್ ಮೋಜು ಜೋರಾಗಿದ್ದರೆ, ಇನ್ನೊಂದೆಡೆ ನಾಳಿನ ಭಾರತದ ನಿರ್ಮಾತೃಗಳಾದ ಯುವಕರು ಬೀದಿಗೆ ಬಿದ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾಗುತ್ತಾ ಬಂದರೂ, ನಿರುದ್ಯೋಗಿ ಯುವಕರಿಗೆ ಆಶಾಕಿರಣವಾಗಬೇಕಿದ್ದ ಯಾವುದೇ ದೊಡ್ಡ ಮಟ್ಟದ ನೇಮಕಾತಿ ಅಧಿಸೂಚನೆಗಳು (Notification) ಹೊರಬಿದ್ದಿಲ್ಲ.

ALSO READ :  “ಥಿಯೇಟರ್‌ಗೆ ಹೋಗಿ ಹಣ ವೇಸ್ಟ್ ಮಾಡಬೇಡಿ" - ರಣವೀರ್ ಸಿಂಗ್ ಸಿನಿಮಾ ವಿರುದ್ಧ ರಮ್ಯಾ ಗರಂ

ಶಾಸಕರಿಗೆ ವಿಐಪಿ ಸೀಟುಗಳನ್ನು ಕೊಡಿಸಲು ತೋರುವ ಆಸಕ್ತಿಯನ್ನು, ಅದೇ ವಿರೋಧ ಪಕ್ಷದವರ ಜೊತೆಗೂಡಿ ಉದ್ಯೋಗದ ಸಮಸ್ಯೆ ಬಗೆಹರಿಸಲು ಈ ಸರ್ಕಾರ ಯಾಕೆ ತೋರುತ್ತಿಲ್ಲ? ಐಪಿಎಲ್ ಟಿಕೆಟ್ ಪಡೆಯಲು ಇರುವ ‘ಹಕ್ಕು’ ಯುವಕರಿಗೆ ಉದ್ಯೋಗ ಕೇಳಲು ಇಲ್ಲವೇ?

ಇದನ್ನೂ ಓದಿ | “ಕ್ಯಾಮೆರಾಮನ್‌” ಗಳ ಸಾವೆಂದರೆ ಅಷ್ಟೊಂದು “ನಿಕೃಷ್ಟ”ನಾ..?! ಕನಿಷ್ಟ ಸೌಜನ್ಯಕ್ಕೂ “ಸಂತಾಪ-ಸಹಾನುಭೂತಿ” ಬೇಡ್ವಾ..!?

ರಾಜಕಾರಣಿಗಳ ಐಷಾರಾಮಿ ಜೀವನಕ್ಕೆ ಬೆಲೆ ಕೊಡುವ ಸರ್ಕಾರ, ತಂದೆ-ತಾಯಿಯನ್ನು ಬಿಟ್ಟು ಬಂದು ಬೀದಿಯಲ್ಲಿ ಓದುತ್ತಿರುವ ಬಡ ಅಭ್ಯರ್ಥಿಗಳ ಕಣ್ಣೀರಿಗೆ ಯಾವಾಗ ಬೆಲೆ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Political News

ಕರಾವಳಿಗೆ ಬಂತು ‘ಅನಿಲ’ ಸಂಜೀವಿನಿ: ಮಂಗಳೂರು ಬಂದರಿಗೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿ!

ಸಾರಿಗೆ ನೌಕರರಿಗೆ ‘ದ್ರೋಹ’ದ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಆನಂದ್!

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ರಷ್ಯಾದಿಂದ ‘ಡಬಲ್’ ತೈಲ ಆಮದು!

ಪಂಚ ಗ್ಯಾರಂಟಿ ಹೆಸರಲ್ಲಿ ಕೋಟಿ ಕೋಟಿ ಪೋಲು: ಇದು ಅನುಷ್ಠಾನವೋ ಅಥವಾ ಲೂಟಿಯೋ?

ದಾವಣಗೆರೆ ದಕ್ಷಿಣ ಉಪಸಮರ: ‘ಕೈ’ ಕೋಟೆಯಲ್ಲಿ ಬಂಡಾಯದ ಕಿಚ್ಚು! ಕಾಂಗ್ರೆಸ್‌ಗೆ ತಲೆನೋವು

ಕನ್ನಡಿಗರ ತೆರಿಗೆ ಕೇರಳ ಪಾಲು? ವಯನಾಡಿಗೆ 10 ಕೋಟಿ ನೀಡಿದ ಸಿದ್ದರಾಮಯ್ಯರಿಗೆ ‘ಕೇರಳ ಸಿಎಂ’ ಪಟ್ಟ ಕಟ್ಟಿದ ಆರ್. ಅಶೋಕ್!

ಉಪಸಮರದ ಅಖಾಡ ಸಿದ್ಧ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಕಮಲ-ಕೈ ಪಡೆಗಳ ಭರ್ಜರಿ ಶಕ್ತಿ ಪ್ರದರ್ಶನ!

ಪಶ್ಚಿಮ ಏಷ್ಯಾ ಯುದ್ಧದ ಭೀತಿ: ಸಂಸತ್‌ನಲ್ಲಿ ಪ್ರಧಾನಿ ಮೋದಿ ‘ಅಭಯ ಹಸ್ತ’; ಭಾರತದ ರಣತಂತ್ರವೇನು?

Scroll to Top