advertise here

Search

BGS ಆಸ್ಪತ್ರೆಗೆ ಕೊಲೆ ಆರೋಪಿ ದರ್ಶನ್‌ ಅಡ್ಮಿಟ್ -ಎಡಗಾಲಿನ ಸ್ಪರ್ಷ ಕುಂಠಿತ, 2 ದಿನ‌ ಚಿಕಿತ್ಸೆ


ಕುಂಟುತ್ತಲೇ ಆಸ್ಪತ್ರೆಗೆ ಬಂದ ದರ್ಶನ್‌
ಕುಂಟುತ್ತಲೇ ಆಸ್ಪತ್ರೆಗೆ ಬಂದ ದರ್ಶನ್‌

ಬೆಂಗಳೂರು: 131 ದಿನಗಳ ಬಳಿಕ ಜೈಲ್‌ ನಿಂದ ಬಿಡುಗಡೆಯಾದರೂ ಅದೇಕೋ ನಟ ದರ್ಶನ್‌( ACTOR DARSHAN) ಗೆ ಚಾಲೆಂಜಸ್‌ ಗಳು ತಪ್ಪಿಲ್ಲ ಎನ್ನಿಸುತ್ತದೆ.ಜೈಲ್‌ ನಿಂದ ಬಿಡುಗಡೆಯಾಗಿ ಮಗ ವಿನೀಶ್‌ ( SON VINEESH) ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದನ್ನು ಬಿಟ್ಟರೆ ಕಾನೂನಿನ ಕುಣಿಕೆ ದರ್ಶನ್‌ ನೆಮ್ಮದಿಯಾಗಿ ಇರೊಕ್ಕೆ ಬಿಡ್ತಿಲ್ಲ ಎನ್ನಿಸುತ್ತದೆ.ದರ್ಶನ್‌ ಗೆ ಬೇಲ್‌ ಸಿಕ್ಕಿರುವುದನ್ನು ಸುಪ್ರಿಂ ಕೋರ್ಟ್‌ ನಲ್ಲಿ ಪ್ತಶ್ನಿಸಲು ಪೊಲೀಸ್‌ ಇಲಾಖೆ ನಿರ್ದರಿಸಿದೆ ಎನ್ನುವ ಸುದ್ದಿ ಪಸರ್‌ ಆಗುತ್ತಿದ್ದಂತೆ ದರ್ಶನ್‌ ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್‌ ಆಸ್ಪತ್ರೆ( BGS HOSPITAL IN KENGRI) ಗೆ ತಪಾಸಣೆಗೆಂದು ಬಂದಿದ್ದಾರೆ.

ಹಾಗೆ ನೋಡಿದ್ರೆ ಹಬ್ಬ ಮುಗಿಸಿಕೊಂಡು ದರ್ಶನ್‌ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗುತ್ತಾರೆನ್ನುವ ಮಾತುಗಳಿತ್ತು.ಆದರೆ ಕೋರ್ಟ್‌ ನಲ್ಲಿ ಬೇಲ್‌ ವಿರುದ್ಧ ಮೇಲ್ಮನವಿ ಸಲ್ಲಿಸೊಕ್ಕೆ  ಬೆಂಗಳೂರು ಪೊಲೀಸ್‌ ಆಯುಕ್ತ  ದಯಾನಂದ್‌ ತಯಾರಿ ನಡೆಸಿರುವ ವಿಚಾರ ಹೇಳುತ್ತಿದ್ದಂತೆ ದರ್ಶನ್‌ ಗೆ ನೆಲವೇ ಕುಸಿದಂತಾಗಿದೆ. ತಡಮಾಡಿದ್ರೆ ತೊಂದರೆ ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ಇವತ್ತೇ ತಪಾಸಣೆಗೆಂದು ಬಂದಿದ್ದಾರೆ.

ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆ
ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆ

ಅಗಾಧ ಪ್ರಮಾಣದ ಬೆನ್ನುನೋವಿಂದ ಬಳಲುತ್ತಿರುವ ದರ್ಶನ್‌ ಆಸ್ಪತ್ರೆಗೆ ನೋವಿನಿಂದಲೇ ಆಗಮಿಸಿದ್ದಾರೆ. ಕುಂಟುತ್ತಲೇ ಕಾರಿನಿಂದಲೇ ಇಳಿದು ತಮ್ಮ ಪತ್ನಿ ವಿಜಯಲಕ್ಷ್ಮಿ ಸಮೇತ ಒಳ ಹೋದರು.ಆಸ್ಪತ್ರೆಯಲ್ಲಿ ದರ್ಶನ್‌ ತಪಾಸಣೆಗೆ ಒಳಪಡಲಿದ್ದು ಅವರ ಆರೋಗ್ಯ ಸ್ಥಿತಿ ಏನಾಗಿದೆ ಎನ್ನುವುದನ್ನು ವೈದ್ಯರು ತಿಳಿಸಲಿದ್ದಾರೆ.

ALSO READ :  ಭಾರತ ಜಾತ್ಯತೀತ ರಾಷ್ಟ್ರ ಆಗಿರೋದು ಇಷ್ಟ ಇಲ್ವಾ?: ಸುಪ್ರೀಂಕೋರ್ಟ್ ಪ್ರಶ್ನೆ
ಪತ್ನಿ ವಿಜಯಲಕ್ಷ್ಮಿ ಜತೆ ಆಸ್ಪತ್ರೆಗೆ ಆಗಮಿಸಿದ ನಟ ದರ್ಶನ್
ಪತ್ನಿ ವಿಜಯಲಕ್ಷ್ಮಿ ಜತೆ ಆಸ್ಪತ್ರೆಗೆ ಆಗಮಿಸಿದ ನಟ ದರ್ಶನ್

ದರ್ಶನ್‌ ಗೆ ಚಿಕಿತ್ಸೆ ನೀಡುತ್ತಿರುವ  ವೈದ್ಯ ನವೀನ್ ಅಪ್ಪಾಜಿ ಗೌಡ ಅವರು, ದರ್ಶನ್ ಅಡ್ಮಿಟ್ ಆಗಿದ್ದಾರೆ.ಬೆನ್ನುನೋವು ಅಂತ ಅಡ್ಮಿಟ್ ಆಗಿದ್ದಾರೆ.ಕಾಲಿನ ನೋವು ಹೆಚ್ಚಾಗಿದೆ.ಎಲ್ಲ ರೀತಿ ಟೆಸ್ಟ್ ಮಾಡಬೇಕಿದೆ.ಸದ್ಯ ಎಡಗಾಲು ತುಂಬಾ ನೋವು. ಬೆನ್ನು ನೋವಿಗೆ ಪರೀಕ್ಷೆ ಮಾಡಬೇಕಿದೆ.48 ಗಂಟೆಗಳಲ್ಲಿ ವರದಿ ಬರಲಿದೆ. ಎಡಗಾಲು ಸ್ವರ್ಶ ಕಡಿಮೆಯಾಗಿದೆ ಎಂದರು.

ಬಿಜಿಎಸ್ ಆಸ್ಪತ್ರೆಯಲ್ಲಿ ನ್ಯೂರೋ ಸರ್ಜನ್ ಆಗಿರುವ ವೈದ್ಯ ನವೀನ್‌ ಅವರ ಪ್ರಕಾರ ರಕ್ತಪರೀಕ್ಷೆ MRI ಸ್ಕ್ಯಾನಿಂಗ್ ಸೇರಿ ಕೆಲ ಪರೀಕ್ಷೆ ನಡೆಸಲಾಗತ್ತೆ.ದರ್ಶನ್ ರಿಗೆ ಬೆನ್ನು ನೋವಿನ ಜೊತೆ ಕಾಲು ನೋವು ಇದೆಕಾಲು ನೋವಿನ ಜೊತೆಗೆ ಎಡಗಾಲಿನ ಸೆಳೆತ ಇದೆ.ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.ಮುಂದಿನ ಎರಡು ದಿನಗಳ ಕಾಲ ದರ್ಶನ್ ಆಸ್ಪತ್ರೆಯಲ್ಲಿ ಇರ್ತಾರೆ   ಎಂದಿದ್ದಾರೆ.

ದರ್ಶನ್‌ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆನ್ನುವ ಮಾತು ಕೇಳಿಬರುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಆಸ್ಪತ್ರೆ ಬಳಿ ಜಮಾಯಿಸಿ ಜೈ ಡಿ ಬಾಸ್‌ ಎನ್ನುವ ಘೋಷಣೆ ಕೂಗುತ್ತಿದ್ದಾರೆ.ಅಲ್ಲದೇ ದರ್ಶನ್‌ ಅವರ ಆರೋಗ್ಯದಲ್ಲಿ ಶೀಘ್ರ ಚೇತರಿಕೆ ಕಾಣಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ.


Political News

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Scroll to Top