ಕರ್ನಾಟಕದ ನಂಬರ್ 1 ಚಾನೆಲ್ ತೊರೆದು ಶೀಘ್ರವೇ ಸುವರ್ಣ ಬಳಗ ಸೇರಲಿರುವ ಸಭ್ಯ-ಸಂಭಾವಿತ ಪತ್ರಕರ್ತ..

ಬೆಂಗಳೂರು: ಸುವರ್ಣ ಸುದ್ದಿವಾಹಿನಿ(suvarna news channel) ಬದಲಾಗುತ್ತಿದೆ..ತನ್ನ ಹಳೆಯ ಸ್ವರೂಪ ಮತ್ತು ವಿನ್ಯಾಸವನ್ನು ರೂಪಾಂತರಿಸಿಕೊಳ್ಳುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿಬಂದಿದೆ. ಹಾಗೆಯೇ ಆಗಿದ್ದರೆ ನಿಜಕ್ಕೂ ಸಂತೋಷದ ಬೆಳವಣಿಗೆ.( ಆದರೆ ಕರ್ನಾಟಕದಲ್ಲಿ ಏಷಿಯಾ ನೆಟ್ ಸುವರ್ಣ ಮಾಡಿದಷ್ಟು ಬದಲಾವಣೆಗಳನ್ನು ಇನ್ನೊಂದು ನ್ಯೂಸ್ ಚಾನೆಲ್ ಮಾಡಲಿರಲಿಕ್ಕಿಲ್ಲ.. ಆದರೆ ಆ ಪ್ರಯತ್ನಗಳು ನಿರೀಕ್ಷೆ ತಲುಪದೇ ಹೋದದ್ದು ಮಾತ್ರ ದುರಾದೃಷ್ಟಕರ).ಈ ಎಲ್ಲಾ ಬದಲಾವಣೆ ಬಳಿಕವೂ ಸುವರ್ಣ ನ್ಯೂಸ್ ನ ಅದೃಷ್ಟ ಖುಲಾಯಿಸುತ್ತಾ..? ಕರ್ನಾಟಕದ ಪ್ರಜ್ಞಾವಂತ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದಾ..? ಇಳಿಮುಖಗೊಂಡಿರುವ ಅದರ ಟಿಆರ್ ಪಿ(trp-teli rating point) ಪುಟಿದೇಳುತ್ತಾ..? ಗೊತ್ತಿಲ್ಲ. ಏಷಿಯಾ ನೆಟ್ ಆಡಳಿತ ಮಾತ್ರ ಅದೇ ನಿರೀಕ್ಷೆಯಲ್ಲಿ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆಯಂತೆ.

ಸುವರ್ಣ ನ್ಯೂಸ್ ನಲ್ಲಿ ಬದಲಾವಣೆ ಪರ್ವ ಶುರುವಾಗಿದೆ.ಅದು ಅಂತಿಂಥ ಬದಲಾವಣೆಯಲ್ಲ.. ಅದು ಈವರೆಗೂ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಆಗಿರದಂಥ ಅಮೂಲಾಗ್ರ ಬದಲಾವಣೆ.ಈ ಬದಲಾವಣೆ ಕೆಲವು ಅಸಮರ್ಥರು-ಬಕೆಟ್-ಸಿಂಟೆಕ್ಸ್ ಗಿರಾಕಿಗಳು-ಬಿಳಿಯಾನೆಗಳಂತಾಗಿರುವವರ ಕೆಲಸಕ್ಕೇನೆ ಕೊಡಲಿಪೆಟ್ಟು ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.ಹಾಗಾಗಿನೇ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆಯಂತೆ.ಬಹುತೇಕ ಸಿಬ್ಬಂದಿ ಇಂದೇನಾಗುತ್ತಪ್ಪಾ ಎನ್ನುವ ಅಳುಕಿನಲ್ಲೇ ಕೆಲಸ ಮಾಡುತ್ತಿದ್ದಾರಂತೆ.ಅವರಲ್ಲೆಲ್ಲಾ ಉತ್ಸಾಹ-ಆಸಕ್ತಿನೇ ಇಲ್ಲದಂತಾಗಿದೆಯಂತೆ.ಆದರೆ ಜೊಳ್ಳುಗಳನ್ನು ಕೇರಿ ಬಿಸಾಕುವ ಧಾವಂತದಲ್ಲಿ ಏಷಿಯಾನೆಟ್ ಆಡಳಿತ, ಆ ಜೊಳ್ಳುಗಳ ನಡುವೆ ಕೆಲವೊಂದು ಗಟ್ಟಿ ಕಾಳುಗಳನ್ನೂ ಬೇರ್ಪಡಿಸಿ ಬಿಡುತ್ತೋ ಎನ್ನುವ ಆತಂಕ ನಮ್ಮದು.ಏಕೆಂದರೆ ಆಯಕಟ್ಟಿನ ಸ್ಥಳದಲ್ಲಿ ಕುಳಿತುಕೊಂಡು “ರಾಜಕೀಯ” ಮಾಡುವ ಕೆಲವರನ್ನು ಫೈರ್ ಮಾಡುವ ಸನ್ನಿವೇಶದಲ್ಲಿ ಪಾಪ.! ಮ್ಯಾನೇಜ್ಮೆಂಟ್ ನೀಡುವ ಸಂಬಳಕ್ಕೆ ನೀಯತ್ತಾಗಿದ್ದುಕೊಂಡು ಕೆಲಸ ಮಾಡುತ್ತಿರುವ ಒಂದಷ್ಟು ಪ್ರಾಮಾಣಿಕ ಸಿಬ್ಬಂದಿಗೆ ತೊಂದರೆ ಆಗಬಾರದಲ್ವಾ..! ಎನ್ನುವುದಷ್ಟೇ ನಮ್ಮ ಕಾಳಜಿ.

ನ್ಯೂಸ್ ಚಾನೆಲ್ ಗಳ ಪೈಕಿ ಬಹುಷಃ ದಕ್ಷಿಣ ಭಾರತದಲ್ಲೇ ಅತೀ ವಿಶ್ವಾಸಾರ್ಹ ಹಾಗೂ ಬೃಹತ್ತಾದ ಸಂಸ್ಥೆ ಎನಿಸಿಕೊಳ್ಳುತ್ತೆ ಏಷಿಯಾನೆಟ್(asianet). ಕೇರಳಾ(kerala)ದಲ್ಲಿ ಜನಪ್ರಿಯವಾದ ಚಾನೆಲ್ ನ್ನು ಕರ್ನಾಟಕ ದಲ್ಲೂ ಬೆಳೆಸಬೇಕೆನ್ನುವ ಉಮೇದಿ ನಲ್ಲಿ ಉದ್ಯಮಿ ಹಾಗೂ ರಾಜಕಾರಣಿ ರಾಜೀವ್ ಚಂದ್ರಶೇಖರ್ ( rajiv chandrashekar)ಸಾಕಷ್ಟು ಕನಸುಗಳನ್ನಿಟ್ಟು ಸ್ಥಾಪಿಸಿದ ಸಂಸ್ಥೆ ಇದು.ಪಾಪ…! ಇದಕ್ಕಾಗಿ ಕೋಟಿಗಳಲ್ಲಿ ಹಣ ಸುರಿದ್ರು. ಟಿವಿ9 (tv 9 kannada)ನ್ನು ಹಿಂದಿಕ್ಕಬೇಕೆನ್ನುವುದೇ ಅವರ ಕನಸಾಗಿತ್ತು.ಆದರೆ ಅದು ಸಾಧ್ಯವಾಗಲಿಲ್ಲ… ಸಾಧ್ಯವಾಗಲಿಲ್ಲ ಎನ್ನುವುದಕ್ಕಿಂತ ಆಯಾ ಕಾಲಘಟ್ಟದಲ್ಲಿ ಚಾನೆಲ್ ಬೆಳೆಸುವ ಹೊಣೆ ಹೊತ್ತವರ ವೈಫಲ್ಯ-ಗುಂಪುಗಾರಿಕೆಯಿಂದ ಅದು ಸಾಧ್ಯವಾಗಲಿಲ್ಲವೇನೋ ಅನ್ನಿಸುತ್ತೆ.
ಚಾನೆಲ್ ನಡೆಸುತ್ತೇನೆಂದು ಬಂದವರು ತಮಗಿಷ್ಟ ಬಂದಂತೆ ಮಾಡಿದ ಪ್ರಯೋಗಗಳೇ ಚಾನೆಲ್ ಬೆಳವಣಿಗೆಗೆ ಮಾರಕವಾಯ್ತೆನ್ನುವ ಮಾತು ಮಾದ್ಯಮ ಲೋಕದಲ್ಲಿದೆ. ಸಧ್ಯ ಇದರ ಉಸ್ತುವಾರಿ ಹೊತ್ತವರದು ಅದೇ ಹಣೇಬರಹ ಎನ್ನಿಸುತ್ತೆ.ಆದರೆ ಒಂದು ಹಂತದವ ರೆಗೆ ಇದನ್ನೆಲ್ಲಾ ಸಹಿಸಿಕೊಂಡ ಮ್ಯಾನೇಜ್ಮೆಂಟ್ ಇನ್ಮುಂದೆ ಅದಕ್ಕೆ ಅವಕಾಶ ಕೊಡಬಾರದೆನ್ನುವ ಇರಾದೆಯಲ್ಲಿ ಕೊನೇ ಬದಲಾವಣೆ ಎನ್ನುವಂತೆ ಅಮೂಲಾಗ್ರ ಬದಲಾವಣೆಗೆ ಮುಂದಾಗಿದೆಯಂತೆ. ಕೇರಳಾದಿಂದ ಅನುಭವಿಗಳ ತಂಡವೊಂದನ್ನು ಕಳುಹಿಸಿಕೊಟ್ಟು ಅಧ್ಯಯನ ನಡೆಸಿದಾಗ ಚಾನೆಲ್ ನ ಬೆಳವಣಿಗೆ ಅಧೋಗತಿಗೆ ಇಳಿಯೊಕ್ಕೆ ಕಾರಣವೇನು ಎನ್ನುವುದರ ಸ್ಪಷ್ಟತೆ ಸಿಕ್ಕಿದೆಯಂತೆ. ಹಾಗಾಗಿನೇ ಸುವರ್ಣ ಮ್ಯಾನೇಜ್ಮೆಂಟ್ ಇದೇ ಮೊದಲಬಾರಿಗೆ ಹೊಸ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಲು ಬೇಕಾಗಿದ್ದಾರೆ ಎನ್ನುವ ಜಾಹಿರಾತು ಕೊಟ್ಟಿದೆ ಎನ್ನಿಸುತ್ತೆ.ಇದೇ ಅಮೂಲಾಗ್ರ ಬದಲಾವಣೆಯನ್ನು ಸೂಚಿಸುತ್ತೆ.

ಇದೆಲ್ಲಾ ಚಾನೆಲ್ ನ ಮ್ಯಾನೇಜ್ಮೆಂಟ್ ನಿರ್ದರಿಸಿದೆ ಎನ್ನಲಾದ ಬದಲಾವಣೆಗಳ ಬಗೆಗಿನ ವಿಚಾರ. ಸಧ್ಯ ಚಾನೆಲ್ ನ ಸುದ್ದಿ ವಿಭಾಗದ ಉಸ್ತುವಾರಿ ಹೊತ್ತಿರುವ ಅಜಿತ್ ಹನುಮಕ್ಕನವರ್ ಗೂ ಗೇಟ್ ಪಾಸ್ ಸಿಗುವ ಸಾಧ್ಯತೆಗಳ ಬಗ್ಗೆ ದಟ್ಟವಾಗಿ ಕೇಳಿಬರುತ್ತಿದೆ. ಇನ್ನೊಂದೆಡೆ ಅರ್ನಾಬ್ ಅವರ ಆಶಯ-ನಿರೀಕ್ಷೆಯಂತೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುವ ಎಲ್ಲಾ ಸಾಧ್ಯತೆಗಳಿದ್ದ ಹೊರತಾಗಿಯೂ ಕೆಲವರ ಗುಂಪುಗಾರಿಕೆ-ಅಸಮರ್ಥರ ಕಾರಣಕ್ಕೆ ಹತ್ತರಲ್ಲಿ ಹನ್ನೊಂದು ಎನ್ನುವಂತಾಗಿರುವ ರಿಪಬ್ಲಿಕ್ ಕನ್ನಡವನ್ನು ಮೇಲಕ್ಕೆತ್ತುವ ಪ್ರಯತ್ನಗಳು ನಡೆಯುತ್ತಿರುವುದು ಕೂಡ ಅಷ್ಟೇ ಸತ್ಯ.ರಿಪಬ್ಲಿಕ್ (republic kannada)ಉದ್ದಾರಕ್ಕೆ ಅಲ್ಲಿನ ಮ್ಯಾನೇಜ್ಮೆಂಟ್ ಅಜಿತ್ ಹನುಮಕ್ಕನವರ್(ajith hanumakkanava) ಅವರಿಗಿಂತ ಒಳ್ಳೆಯ ಆಯ್ಕೆ ಇನ್ನೊಬ್ಬರಿಲ್ಲ ಎನ್ನುವ ಆಲೋಚನೆಯಲ್ಲಿ ರಾಷ್ಟ್ರವಾದಿ ಪತ್ರಕರ್ತ( ಪತ್ರಕರ್ತರೆಲ್ಲರೂ ರಾಷ್ಟ್ರವಾದಿಗಳೇ..ಹಾಗೆ ತನ್ನನ್ನು ಪ್ರೊಜೆಕ್ಟ್ ಮಾಡಿಕೊಳ್ಳುವುದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ಅನೇಕ ಹಿರಿಯ ಮಾದ್ಯಮಮಿತ್ರರೇ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಿ ವ್ಯಕ್ತಪಡಿಸಿದ್ದಾರೆ) ಅಜಿತ್ ಹನುಮಕ್ಕನವರ್ ಅವರನ್ನು ಫೈನಲ್ ಮಾಡಿದ್ದಾರೆ ಎನ್ನುವ ಮಾತಿದೆ.ಆದರೆ ಕೆಲವು ಬೇಡಿಕೆ- ಷರತ್ತುಗಳ ಮಾತುಗಳು ನಡೆಯುತ್ತಿದ್ದು ಅದು ಅಂತಿಮವಾದರೆ ಇದೇ 30ರೊಳಗೆ ಅಜಿತ್ ಸುವರ್ಣ ಬಳಗ ತೊರೆದು ರಿಪಬ್ಲಿಕ್ ಕನ್ನಡದ ಸಾರಥಿಯಾಗುವುದರಲ್ಲಿ ಅನುಮಾನವೇ ಇಲ್ಲವಂತೆ.
ಸುವರ್ಣ ಚಾನೆಲ್ ನಲ್ಲಿ ನಡೆಯುತ್ತಿದೆ ಎನ್ನಲಾದ ಬೆಳವಣಿಗಳಿಂದ ನಾವು ಸೇಫ್ ಎಂದುಕೊಂಡಿದ್ದ ಒಂದಷ್ಟು ಮಹಾನುಭಾವರಿಗೆ ಮ್ಯಾನೇಜ್ಮೆಂಟ್ ಈಗಾಗಲೇ ಖಡಕ್ ಎಚ್ಚರಿಕೆ ಕೊಟ್ಟಿದೆಯಂತೆ. ಈ ತಿಂಗಳ ಒಳಗೆ ಅವರಲ್ಲಿ ಕೆಲವರು ಚಾನೆಲ್ ನಿಂದ ಹೊರ ಬಿದ್ದರೂ ಆಶ್ಚರ್ಯವಿಲ್ಲ. ರಿಪೋರ್ಟಿಂಗ್ ಸೆಕ್ಷನ್ ಗೆ ಹೊಸ ಮುಖಗಳ ಸೇರ್ಪಡೆ ಆದರೂ ಆಶ್ಚರ್ಯವಿಲ್ಲವಂತೆ.ಹಾಗೆಯೇ ಬೇರೆ ಸೆಕ್ಷನ್ ಗಳಲ್ಲೂ ಭಾರೀ ಬದಲಾವಣೆ ಆಗುವ ಸಾಧ್ಯತೆಗಳನ್ನು ಸದ್ಯದ ಬೆಳವಣಿಗೆಗಳು ಪ್ರತಿಬಿಂಬಿಸುತ್ತಿವೆ.

ಇನ್ನು ಚಾನೆಲ್ ನ್ನು ಉದ್ದಾರ ಮಾಡ್ರಪ್ಪಾ ಎಂದು “ಅವರೆಲ್ಲಾ” ಕೇಳಿದಷ್ಟು ಹಣ ಕೊಟ್ಟು, ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳದೆ ಕಾಲಕಾಲಕ್ಕೆ ಅವರ ಬೇಡಿಕೆಗಳನ್ನೆಲ್ಲಾ ಈಡೇರಿಸಿದ ಮ್ಯಾನೇಜ್ಮೆಂಟ್ ಅಮೂಲಾಗ್ರ ಬದಲಾವಣೆ ಅನಿವಾರ್ಯ ಎಂಬ ನಿರ್ದಾರಕ್ಕೆ ಬರುತ್ತೆ ಎಂದರೆ ಇಲ್ಲಿರುವವರು ಯಾವೆಲ್ಲಾ ರೀತಿ ಆಡಳಿತದ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎನ್ನುವುದರ ಅಂದಾಜು ದೊರೆಯುತ್ತದೆ.ಅಜಿತ್ ಹನುಮಕ್ಕನವರ್ ಅವರ ಸ್ಥಾನಪಲ್ಲಟದ ಮಾತು ಕೇಳಿಬರುತ್ತಿರುವಾಗಲೇ ಅವರ ಸ್ಥಾನ ತುಂಬುವವರು ಯಾರು..? ಮ್ಯಾನೇಜ್ಮೆಂಟ್ ಯಾರನ್ನು ಆ ಸ್ಥಾನದಲ್ಲಿ ತಂದು ಕೂರಿಸುವ ಚಿಂತನೆಯಲ್ಲಿದೆ.? ಯಾರೆಲ್ಲಾ ಪರಿಷ್ಕರಿಸಲ್ಪಟ್ಟ ತಂಡ ಸೇರಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಅಂದ್ಹಾಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿರುವ ಮಾಹಿತಿರುವ ಕೆಲವು ಮಾಹಿತಿಗಳ ಪ್ರಕಾರ, ಸಂಪೂರ್ಣ ಸುದ್ದಿ ವಿಭಾಗದ ಉಸ್ತುವಾರಿಯನ್ನು, ಒಂದು ಕಾಲಕ್ಕೆ ಅದೇ ಚಾನೆಲ್ ನಲ್ಲಿ ಕೆಲಸ ಮಾಡಿ, ಚಾನೆಲ್ ನ ಟಿಆರ್ ಪಿ ಹೆಚ್ಚುವುದಕ್ಕೆ ಕಾರಣವಾಗಿದ್ದ ಆ ಸಭ್ಯ-ಸಂಭಾವಿತ-ಶುದ್ಧಹಸ್ತದ ಪತ್ರಿಕಾಮಿತ್ರರಿಗೆ ವಹಿಸಲು ಸಿದ್ದತೆ ನಡೆದಿದೆಯಂತೆ. ಸಧ್ಯಕಕೆ ಕರ್ನಾಟಕದ ನಂಬರ್ ಒನ್ ಚಾನೆಲ್ ನ ಪ್ರಮುಖ ವಿಭಾಗವೊಂದನ್ನು ಅವರು ನೋಡಿಕೊಳ್ಳುತ್ತಿದ್ದಾರಂತೆ. ಮ್ಯಾನೇಜ್ಮೇಂಟೇ ಚರ್ಚ್ ಸ್ಟ್ರೀಟ್ ನಲ್ಲಿರುವ ಕಚೇರಿಯಲ್ಲಿ ಆ ವ್ಯಕ್ತಿ ಜತೆಗೆ ಮಾತುಕತೆ ನಡೆದಿದ್ದು ಅದೆಲ್ಲಾ ಅಂತಿಮ ಹಂತದಲ್ಲಿದೆಯಂತೆ.ಎಲ್ಲವೂ ನಿರೀಕ್ಷೆಯಂತಾದ್ರೆ ಅವರು ಕೆಲವೇ ದಿನಗಳಲ್ಲಿ ಸುವರ್ಣ ನ್ಯೂಸ್ ಬಳಗ ಸೇರುವುದಲ್ಲದೇ ಇಡೀ ಚಾನೆಲ್ ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಗಳಿವೆಯಂತೆ..
ಸುವರ್ಣ ಬಳಗ ಸೇರಿ ಇಡೀ ಉಸ್ತುವಾರಿ ನೋಡಿಕೊಳ್ಳಲಿರುವ ಆ ಪತ್ರಕರ್ತಮಿತ್ರ ಯಾರು ಎನ್ನುವ ಪ್ರಶ್ನೆಗೆ ಉತ್ತರವೇ ವಿಲಾಸ್ ನಾಂದೋಡ್ಕರ್(vilas nandodkar).ಸುದ್ದಿ ಮಾದ್ಯಮವನ್ನು ತೀರಾ ಹತ್ತಿರದಿಂದ ನೋಡಿದವ ರಿಗೆ ವಿಲಾಸ್ ಹೆಸರು ಚಿರಪರಿಚಿತ. ಸಧ್ಯ ಅವರು ಟಿವಿ-9 ಸುದ್ದಿ ಸಂಸ್ಥೆಯಲ್ಲಿ ಇನ್ ಪುಟ್ ಮುಖ್ಯಸ್ಥ(inut head) ರಾಗಿ ಕೆಲಸ ಮಾಡುತ್ತಿದ್ದಾರೆ. ಟಿವಿ9 ಪರಿಣಾಮಕಾರಿ ಯಾಗಿ ಮೂಡಿಬರುತ್ತಿದೆ ಎನ್ನುವುದಾದ್ರೆ ಇದಕ್ಕೆ ಬಹುತೇಕ ವಿಲಾಸ್ ಅವರ ಪರಿಶ್ರಮ ಕಾರಣ ಎಂದರೂ ಅತಿಶಯವಿಲ್ಲ.ಇವರನ್ನು ಸುವರ್ಣ ನ್ಯೂಸ್ ನ ಹೊಸ ಟೀಮ್ ಗೆ ಕರೆತರುವ ಪ್ರಯತ್ನ ಬಹುತೇಕ ನಿರ್ಣಾಯಕ ಹಂತ ತಲುಪಿದೆ ಎನ್ನಲಾಗ್ತಿದೆ. ಒಂದಷ್ಟು ಔಪಚಾರಿಕ ಮಾತುಕತೆ ಬಾಕಿಯಿದ್ದು ಅದು ಕೂಡ ಪೂರ್ಣಗೊಳ್ಳುವ ಸಾಧ್ಯತೆಗಳಿವೆಯಂತೆ.ಮ್ಯಾನೇಜ್ಮೆಂಟ್ ಕೂಡ ಬಹುತೇಕ ವಿಲಾಸ್ ನಾಂದೋಡ್ಕರ್ ಅವರನ್ನೇ ಅಂತಿಮಗೊಳಿಸಿದೆ ಎನ್ನುವ ಮಾತು ಬಲವಾಗಿ ಕೇಳಿಬಂದಿದೆ.

ವಿಲಾಸ್ ಅವರೇ ಏಕೆ..? ಫೀಲ್ಡ್ ನಲ್ಲಿ ಸಾಕಷ್ಟು ಅನುಭವಿಗಳಿ ಲ್ಲವೇ..? ಅವರಿಗಿಂತ ಸಮರ್ಥರೆನ್ನುವವರು ಇಲ್ಲವೇ..? ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.ವಿಲಾಸ್ ಅವರನ್ನೇ ಮ್ಯಾನೇಜ್ಮೇಂಟ್ ಫೈನಲ್ ಮಾಡಲು ಕಾರಣ, ಒಂದೇ ಒಂದು ಕಳಂಕ ವಿಲಾಸ್ ಅವರ ವೃತ್ತಿ-ಹೆಸರಿನೊಂದಿಗೆ ಈವರೆಗೂ ಥಳಕು ಹಾಕ್ಕೊಂಡಿಲ್ಲ ಎನ್ನುವುದು.ವಿಲಾಸ್ ಅವರು ಸಾಕಷ್ಟು ಪತ್ರಕರ್ತರಿಗೆ ಗೊತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ, ಸಭ್ಯ-ಸಂಭಾವಿತ-ಯಾವುದೇ ವ್ಯಸನಗಳಿಲ್ಲದ ಶುದ್ಧಹಸ್ತ-ಅಪಾರ ಅನುಭವಿ ಎನ್ನುವುದು ಕೂಡ ಅಷ್ಟೇ ನಿಜ. ಮ್ಯಾನೇಜ್ಮೆಂಟ್ ಗೆ ಬೇಕಿದ್ದುದು ಇದೇ ಅನ್ನಿಸುತ್ತೆ.ಏಕೆಂದರೆ ವಿಲಾಸ್ ಅವರಲ್ಲಿರುವ ಸಾಕಷ್ಟು ಗುಣಗಳು ಮ್ಯಾನೇಜ್ಮೆಂಟ್ ಗೆ ಇಷ್ಟವಾಗಿರ ಬಹುದು. ಅಲ್ಲದೇ ಈ ಹಿಂದೆ ಸುವರ್ಣದಲ್ಲಿದ್ದಾಗ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆಯೂ ಮ್ಯಾನೇಜ್ಮೆಂಟ್ ಗೆ ಗೊತ್ತಿರುವುದ ರಿಂದ ಅವರ ಆಯ್ಕೆಯನ್ನು ಅನಾಯಾಸವಾಗಿ ಅಂತಿಮಗೊ ಳಿಸಿರಬ ಹುದೇನೋ.
ಸುದ್ದಿ ವಿಭಾಗದ ಉಸ್ತುವಾರಿ ಹೊಸದಿರಬಹುದೆನ್ನುವುದನ್ನು ಬಿಟ್ಟರೆ, ವಿಲಾಸ್ ಅವರು ಸುವರ್ಣ ಚಾನೆಲ್ ಗೆ ಹೊಸಬರೇನಲ್ಲ. ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುವಾಗ ಸಾಕಷ್ಟು ಉತ್ತಮವಾಗಿ ಕೆಲಸ ಮಾಡಿದ್ರು,ಆದರೆ ದುರಂತವೇನೆಂದರೆ ಅವರ ಕೆಲಸ ಅನೇಕರಲ್ಲಿ ಹೊಟ್ಟೆಕಿಚ್ಚು ಮೂಡಿಸಿತ್ತಂತೆ.ಹಾಗಾಗಿನೇ ಈಗ ಇರುವವರಲ್ಲೇ ಕೆಲವರು ಚಿತಾವಣೆ ಮಾಡಿ ಸಂಸ್ಥೆಯಿಂದ ಹೊರ ಹೋಗುವಂತೆ ಮಾಡಿದ್ದರಂತೆ.ಆ ನಂತರ ಟಿವಿ9 ಸೇರಿ ತಮ್ಮ ಕೆಪಾಸಿಟಿಯಿಂದಲೇ ಸುದ್ದಿ ವಿಭಾಗದ ಹೊಣೆಗಾರಿಕೆ ಹೊತ್ತುಕೊಂಡ ವಿಲಾಸ್ ಇವತ್ತು ಟಿವಿ9 ನ ಗುಣಮಟ್ಟ ಹೆಚ್ಚಿಸಿದ್ದಾರೆ.ಇವರ ಈ ಸಾಮರ್ಥ್ಯವೇ ಇವತ್ತು ಸುವರ್ಣ ನ್ಯೂಸ್ ಮುಖ್ಯಸ್ಥರಾಗುವ ಮಟ್ಟಕ್ಕೆ ಕೊಂಡೊಯ್ದಿದೆ..ಸಾಧನೆ ಎಂದ್ರೆ ಇದೇ ಅಲ್ಲವಾ..?!
ಕೊನೇ ಕ್ಷಣದ ಬದಲಾವಣೆ ಹೊರತುಪಡಿಸಿ ಎಲ್ಲವೂ ನಿರೀಕ್ಷೆಯಂತಾದ್ರೆ ಟಿವಿ9 ಸುದ್ದಿ ವಿಭಾಗದಲ್ಲಿಆಯಕಟ್ಟಿನ ಹುದ್ದೆ ನಿಭಾಯಿಸುತ್ತಿರುವ ವಿಲಾಸ್ ನಾಂದೋಡ್ಕರ್, ಹೊಸ ರೂಪ-ಹೊಸ ವಿನ್ಯಾಸ-ವಿಭಿನ್ನ ಆಯಾಮದಲ್ಲಿ ಸುದ್ದಿ ಪ್ರಸಾರ ಮಾಡಲು ಸನ್ನದ್ದವಾಗುತ್ತಿರುವ ಸುವರ್ಣ ನ್ಯೂಸ್ ನ ಹೊಸ ಸಾರಥಿಯಾಗಲಿದ್ದಾರೆ.ಅವರ ವಿರುದ್ಧ ಚಿತಾವಣೆ ನಡೆಸಿದ, ಷಡ್ಯಂತ್ರ ರೂಪಿಸಿದ, ಅವರಿಗೆ ಖೆಡ್ಡಾ ತೋಡಿದವರೆಲ್ಲಾ ವಿಲಾಸ್ ಅಧೀನದಲ್ಲಿ ಕೆಲಸ ಮಾಡಲೇಬೇಕಾಗುತ್ತದೆ. ಅದು ಸಹಜ ವೂ ಹೌದು.
ನಿಮಗೆ ಗೊತ್ತಿರಲಿ, ವಿಲಾಸ್ ಅವರ ಜತೆಗಿನ ಮಾತುಕತೆ ಸಫಲವಾಗುತ್ತಿದೆ ಎನ್ನುವುದನ್ನು ಕೇಳುತ್ತಲೇ ಅದನ್ನು ಅರಗಿಸಿಕೊಳ್ಳಲಾಗದ ಕೆಲವು ಅತೃಪ್ತರು,ಆ ಸ್ಥಾನಕ್ಕೆ ಅವರನ್ನು ಯಾವುದೇ ಕಾರಣಕ್ಕೂ ತಂದು ಕೂರಿಸಬಾರದೆನ್ನುವ ಮಟ್ಟದಲ್ಲಿ ಲಾಭಿ-ಪ್ರಯತ್ನ ಮಾಡು ತ್ತಿದ್ದಾರಂತೆ. ಹೊರಗಿನವರೇಕೆ, ನಮ್ಮೊಳಗೆ ಒಬ್ಬರನ್ನು ಪರಿಗಣಿಸಿ ಎಂದು ಅವಲತ್ತುಕೊಳ್ಳುತ್ತಿದ್ದಾರಂತೆ.ಒಬ್ಬರಿಗೆ ತಿಳಿಯದಂತೆ ಮತ್ತೊಬ್ಬರು ಮ್ಯಾನೇಜ್ಮೆಂಟ್ ಬಳಿ ಅಹವಾಲು ಸಲ್ಲಿಸುತ್ತಿದ್ದಾರೆನ್ನವ ಮಾತಿದೆ. ಏಕೆಂದರೆ ಒಳ ರಾಜಕೀಯ-ಗುಂಪುಗಾರಿಕೆಯನ್ನು ಯಾವತ್ತು ಸಹಿಸದ,ಹಾಗೆ ಮಾಡುವವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಕೇವಲ ಶ್ರಮ ಸಂಸ್ಜ್ರತಿಯಲ್ಲಿ ನಂಬಿಕೆ ಇಟ್ಟಿರುವ ಹಾಗೆಯೇ ಕೆಲಸಗಾರರನ್ನಷ್ಟೇ ನಂಬುವ, ಬೆಳೆಸುವ ,ಕೇವಲ ಕೆಲಸದ ಬಗ್ಗೆಯಷ್ಟೇ ನಂಬಿಕೆ ಇಟ್ಟಿರುವ ವಿಲಾಸ್ ಎಂಟ್ರಿ ಹೊಡೆದರೆ ತಮಗೆ ಉಳಿವಿಲ್ಲ..ತಮ್ಮ ಬೇಳೆ ಬೇಯುವುದಿಲ್ಲ..ತಮ್ಮ ದರ್ಬಾರ್ ನಡೆಯುವುದಿಲ್ಲ ಎನ್ನುವುದು ಅವರಿಗೂ ಗೊತ್ತಾಗಿರಬೇಕೇನೋ..ಅನ್ನಿಸುತ್ತೆ.. ಅದಕ್ಕೆಲ್ಲಾ ಮ್ಯಾನೇಜ್ಮೆಂಟ್ ಸೊಪ್ಪಾಕುವುದಿಲ್ಲ ಎನ್ನುವ ನಂಬಿಕೆ ನಮ್ಮದು.
ಅದೇನೇ ಆಗಲಿ, ಸುವರ್ಣ ನ್ಯೂಸ್ ನಲ್ಲಿ ನಡೆಯುತ್ತಿದೆ ಎನ್ನಲಾದ ಗೊಂದಲಗಳು ತಣ್ಣಗಾಗಲಿ, ಎಲ್ಲಾ ಆಯಾಮದಲ್ಲೂ ಉತ್ತಮ ಆಯ್ಕೆ ಎನಿಸಿರುವವರನ್ನೇ ಆಯ್ಕೆ ಮಾಡಲಿ,ವಿಲಾಸ್ ಅವರ ಹೆಸರನ್ನೇ ಅಂತಿಮಗೊಳಿಸಿದ್ರೆ ವಿಲಾಸ್ ನಾಂದೋಡ್ಕರ್ ಅವರಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ನಿಂದ ಮುಂಗಡ ಶುಭಾಷಯಗಳು.ಅವರ ಹಾದಿ ಸುಗಮವಾಗಿರಲಿ ಎನ್ನುವುದಷ್ಟೇ ನಮ್ಮ ಹಾರೈಕೆ-ಆಶಯ.